<blockquote>ಅಕ್ಷಿಪಕ್ಷಿ</blockquote>.<p>ಅಕ್ಷಿಪಕ್ಷಿ (ನಾ). ಕಣ್ಣ ಹಕ್ಕಿ</p><p>ಕುವೆಂಪು ಅವರು ರಾಮನು ಹರಧನುಸ್ಸಿನ ಬಳಿ ನಿಂತು ತನ್ನ ಒಲವಿನ ಮೀನಾಕ್ಷಿಯ ಕಡೆ ‘ಕಣ್ಣ ಪಕ್ಷಿ’ಯನ್ನು ಅಟ್ಟಿ ನೋಡಿದನು ಎಂದು ಚಿತ್ರಿಸಿದ್ದಾರೆ. ನೋಟದ ಹಾರುವಿಕೆಯ ಸಮರ್ಥ ಪ್ರತಿಮೆ ಅದು.</p><p><em>‘ಶಂಕರ ಚರಣ ಪಂಕಜಕೆ</em></p><p><em>ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ...</em></p><p><em>ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ</em></p><p><em>ಕೋಮಳ ಕಟಾಕ್ಷದಿಂದೀಕ್ಷಿಸಿ.’</em> </p>.<blockquote>ನಿದ್ದೆನೈವೇದ್ಯ</blockquote>.<p>ದೇವರಿಗೆ ಹಣ್ಣು, ಕಾಯಿ ಮೊದಲಾದುವುಗಳನ್ನು ಅರ್ಪಿಸುವುದು ನೈವೇದ್ಯ. ರಾಮನು ಹರಧನುಸ್ಸನ್ನು ಹೆದೆ ಏರಿಸುವ ದಿನದ ರಾತ್ರಿಯಲ್ಲಿ ಸೀತೆಯು ರಾಮನ ಬಲಕ್ಕೆ ತನ್ನ ಪ್ರೇಮಬಲವನ್ನು ನೀಡಲೆಂದು ವ್ರತಧಾರಿಯಾದಳು. ಆ ರಾತ್ರಿ ತನ್ನ ಹೃದಯ ಕಮಲದಿಂದ ಗಿರಿಜೇಶನನ್ನು ಪೂಜಿಸಿ ‘ನಿದ್ದೆ ನೈವೇದ್ಯ’ವನ್ನು ಸಮರ್ಪಣೆ ಮಾಡಿದಳು. ಕುವೆಂಪು ಅವರು ಸೀತೆಯು ಮಾಡಿದ ಧ್ಯಾನಪೂರ್ಣ ಜಾಗರಣೆಯನ್ನು ‘ನಿದ್ದೆ ನೈವೇದ್ಯ’ ನುಡಿಯಿಂದ ಬಣ್ಣಿಸಿದ್ದಾರೆ.</p><p><em>‘ಹೃತ್ಪದ್ಮದಿಂದೆ ಭೂಜಾತೆ ಗಿರಿಜೇಶನಂ</em></p><p><em>ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ</em></p><p><em>ನೀಡಿ.’</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಅಕ್ಷಿಪಕ್ಷಿ</blockquote>.<p>ಅಕ್ಷಿಪಕ್ಷಿ (ನಾ). ಕಣ್ಣ ಹಕ್ಕಿ</p><p>ಕುವೆಂಪು ಅವರು ರಾಮನು ಹರಧನುಸ್ಸಿನ ಬಳಿ ನಿಂತು ತನ್ನ ಒಲವಿನ ಮೀನಾಕ್ಷಿಯ ಕಡೆ ‘ಕಣ್ಣ ಪಕ್ಷಿ’ಯನ್ನು ಅಟ್ಟಿ ನೋಡಿದನು ಎಂದು ಚಿತ್ರಿಸಿದ್ದಾರೆ. ನೋಟದ ಹಾರುವಿಕೆಯ ಸಮರ್ಥ ಪ್ರತಿಮೆ ಅದು.</p><p><em>‘ಶಂಕರ ಚರಣ ಪಂಕಜಕೆ</em></p><p><em>ಬಗೆಯ ಪೂಜೆಯ ಸಲಿಸುತಕ್ಷಿಪಕ್ಷಿಯನಟ್ಟಿ...</em></p><p><em>ತನ್ನ ಮೀನಾಕ್ಷಿಯಂ ಮೈಥಿಲಿಯನೊಯ್ಯನೆಯೆ</em></p><p><em>ಕೋಮಳ ಕಟಾಕ್ಷದಿಂದೀಕ್ಷಿಸಿ.’</em> </p>.<blockquote>ನಿದ್ದೆನೈವೇದ್ಯ</blockquote>.<p>ದೇವರಿಗೆ ಹಣ್ಣು, ಕಾಯಿ ಮೊದಲಾದುವುಗಳನ್ನು ಅರ್ಪಿಸುವುದು ನೈವೇದ್ಯ. ರಾಮನು ಹರಧನುಸ್ಸನ್ನು ಹೆದೆ ಏರಿಸುವ ದಿನದ ರಾತ್ರಿಯಲ್ಲಿ ಸೀತೆಯು ರಾಮನ ಬಲಕ್ಕೆ ತನ್ನ ಪ್ರೇಮಬಲವನ್ನು ನೀಡಲೆಂದು ವ್ರತಧಾರಿಯಾದಳು. ಆ ರಾತ್ರಿ ತನ್ನ ಹೃದಯ ಕಮಲದಿಂದ ಗಿರಿಜೇಶನನ್ನು ಪೂಜಿಸಿ ‘ನಿದ್ದೆ ನೈವೇದ್ಯ’ವನ್ನು ಸಮರ್ಪಣೆ ಮಾಡಿದಳು. ಕುವೆಂಪು ಅವರು ಸೀತೆಯು ಮಾಡಿದ ಧ್ಯಾನಪೂರ್ಣ ಜಾಗರಣೆಯನ್ನು ‘ನಿದ್ದೆ ನೈವೇದ್ಯ’ ನುಡಿಯಿಂದ ಬಣ್ಣಿಸಿದ್ದಾರೆ.</p><p><em>‘ಹೃತ್ಪದ್ಮದಿಂದೆ ಭೂಜಾತೆ ಗಿರಿಜೇಶನಂ</em></p><p><em>ಪೂಜಿಸಿದಳಾ ರಾತ್ರಿ, ನಿದ್ದೆ ನೈವೇದ್ಯಮಂ</em></p><p><em>ನೀಡಿ.’</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>