<blockquote>ಕೆಂಗೊಡಲಿ </blockquote>.<p>ಕೆಂಗೊಡಲಿ (ನಾ). (ರಕ್ತದಿಂದ) ಕೆಂಪಾದ ಕೊಡಲಿ.ರಾಮ ಸೀತೆ ಮತ್ತು ಅವನ ಸಹೋದರರು ವಿವಾಹವಾದ ಕನ್ನೆಯರೊಡನೆ ದೊಡ್ಡ ಮೆರವಣಿಗೆಯಲ್ಲಿ ರಾಜಮಾರ್ಗದಲ್ಲಿ ಸಾಗುತ್ತಿದ್ದರು. ಆಗ ಅವರ ಎದುರು ಪರಶುರಾಮ ಬಂದನು. ಅವನ ಭಯಂಕರತೆಯನ್ನು ಕುವೆಂಪು ಅವರು ‘ಕೆಂಗೊಡಲಿ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:</p><p>‘ಭೀಷ್ಮತೆವೆತ್ತು</p><p>ರಂಜಿಸಿತು ಹೆಗಲಿನೊಳ್ ಕೆಂಗೊಡಲಿ.’ </p>.<blockquote><strong>ಕೌಟವಿ</strong> </blockquote>.<p>ಕೌಟವಿ (ನಾ). (ಆಲಂ). ಬರಿದಾಗು; ಶೂನ್ಯವಾಗು.</p><p>ಸೀತೆಯನ್ನು ಹುಡುಕಲು ಹೊರಟ ಸಂಶೊಧನಾ ಕೋವಿದರಾದ ವಾನರರು - ಸೂರ್ಯನ ಕಿರಣಗಳ ಜೊತೆಗೂಡಿ, ಕಣ್ಣಿಗೆ ಕಾಡು ಬರಿದಾಗುವಂತೆ ತಡವಿದರು- ಎಂಬ ಚಿತ್ರಣದಲ್ಲಿ ‘ಕೌಟವಿ’ ಪದವನ್ನು ಆಲಂಕಾರಿಕವಾಗಿ ಹೀಗೆ ಪ್ರಯೋಗಿಸಿದ್ದಾರೆ:</p><p>‘ಆ ಕೀಶ</p><p>ಸಂಶೋಧನಾ ಕೋವಿದರ್! ತಡವಿದರಹಸ್ಪತಿಯ</p><p>ಕದಿರಾಳ್ಗಳಂ ಕೂಡಿ ಪಗಲನೆತ್ತೆತ್ತಲುಂ,</p><p>ಕೌಟವಿಯಾಗೆ ಕಣ್ಗಟವಿ’ </p>.<blockquote><strong>ಮರುಸರೋವರ</strong></blockquote>.<p>ಮರುಸರೋವರ (ನಾ). ಬಿಸಿಲುಗುದುರೆ; ಮರೀಚಿಕೆ</p><p>ಸುಗ್ರೀವನಿಗೆ ಮಹಾವಾನರ ಮೈಂದನು ತನ್ನ ಪಡೆಯು ಮರಳುಗಾಡಿನಲ್ಲಿ ಸಿಕ್ಕು ತೊಳಲಾಡಿದ್ದನ್ನು ಹೇಳುವನು. ಅದು ಅವರಿಗೆ ಅಲ್ಲಿ ಉಂಟುಮಾಡಿದ ಬಿಸಿಲುಗುದುರೆಯನ್ನು ಕುವೆಂಪು ‘ಮರುಸರೋವರ’ ಎಂದು ಕರೆದು ಹೀಗೆ ಬಣ್ಣಿಸಿದ್ದಾರೆ:</p><p>‘ಕಣ್ ಮೋಹಿಸಿತು ಮನೋಹರಂ ಮರುಸರೋವರಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಕೆಂಗೊಡಲಿ </blockquote>.<p>ಕೆಂಗೊಡಲಿ (ನಾ). (ರಕ್ತದಿಂದ) ಕೆಂಪಾದ ಕೊಡಲಿ.ರಾಮ ಸೀತೆ ಮತ್ತು ಅವನ ಸಹೋದರರು ವಿವಾಹವಾದ ಕನ್ನೆಯರೊಡನೆ ದೊಡ್ಡ ಮೆರವಣಿಗೆಯಲ್ಲಿ ರಾಜಮಾರ್ಗದಲ್ಲಿ ಸಾಗುತ್ತಿದ್ದರು. ಆಗ ಅವರ ಎದುರು ಪರಶುರಾಮ ಬಂದನು. ಅವನ ಭಯಂಕರತೆಯನ್ನು ಕುವೆಂಪು ಅವರು ‘ಕೆಂಗೊಡಲಿ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:</p><p>‘ಭೀಷ್ಮತೆವೆತ್ತು</p><p>ರಂಜಿಸಿತು ಹೆಗಲಿನೊಳ್ ಕೆಂಗೊಡಲಿ.’ </p>.<blockquote><strong>ಕೌಟವಿ</strong> </blockquote>.<p>ಕೌಟವಿ (ನಾ). (ಆಲಂ). ಬರಿದಾಗು; ಶೂನ್ಯವಾಗು.</p><p>ಸೀತೆಯನ್ನು ಹುಡುಕಲು ಹೊರಟ ಸಂಶೊಧನಾ ಕೋವಿದರಾದ ವಾನರರು - ಸೂರ್ಯನ ಕಿರಣಗಳ ಜೊತೆಗೂಡಿ, ಕಣ್ಣಿಗೆ ಕಾಡು ಬರಿದಾಗುವಂತೆ ತಡವಿದರು- ಎಂಬ ಚಿತ್ರಣದಲ್ಲಿ ‘ಕೌಟವಿ’ ಪದವನ್ನು ಆಲಂಕಾರಿಕವಾಗಿ ಹೀಗೆ ಪ್ರಯೋಗಿಸಿದ್ದಾರೆ:</p><p>‘ಆ ಕೀಶ</p><p>ಸಂಶೋಧನಾ ಕೋವಿದರ್! ತಡವಿದರಹಸ್ಪತಿಯ</p><p>ಕದಿರಾಳ್ಗಳಂ ಕೂಡಿ ಪಗಲನೆತ್ತೆತ್ತಲುಂ,</p><p>ಕೌಟವಿಯಾಗೆ ಕಣ್ಗಟವಿ’ </p>.<blockquote><strong>ಮರುಸರೋವರ</strong></blockquote>.<p>ಮರುಸರೋವರ (ನಾ). ಬಿಸಿಲುಗುದುರೆ; ಮರೀಚಿಕೆ</p><p>ಸುಗ್ರೀವನಿಗೆ ಮಹಾವಾನರ ಮೈಂದನು ತನ್ನ ಪಡೆಯು ಮರಳುಗಾಡಿನಲ್ಲಿ ಸಿಕ್ಕು ತೊಳಲಾಡಿದ್ದನ್ನು ಹೇಳುವನು. ಅದು ಅವರಿಗೆ ಅಲ್ಲಿ ಉಂಟುಮಾಡಿದ ಬಿಸಿಲುಗುದುರೆಯನ್ನು ಕುವೆಂಪು ‘ಮರುಸರೋವರ’ ಎಂದು ಕರೆದು ಹೀಗೆ ಬಣ್ಣಿಸಿದ್ದಾರೆ:</p><p>‘ಕಣ್ ಮೋಹಿಸಿತು ಮನೋಹರಂ ಮರುಸರೋವರಂ’ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>