<h2>ಕೋರೆದಿಂಗಳ್</h2>.<p>ಕೋರೆದಿಂಗಳ್ (ನಾ). ವಕ್ರಚಂದ್ರ; ಬಾಲಚಂದ್ರ</p>.<p>ರಾಮಚಂದ್ರನು ಶಿವಸಹಿತ ಶಕ್ತ್ಯಾಯುಧವನ್ನು ಬಿಡಲು ಕುಂಭಕರ್ಣನ ತಲೆಗೆ ತಾಗಿ, ಅವನ ಶಿರ ಭೂಮಿಗೆ ಉರುಳುತ್ತದೆ. ಆಗ ಕುಂಭಕರ್ಣನಿಗೆ ಆದ ಅನುಭವವನ್ನು ಕವಿ ಹೀಗೆ ಬಣ್ಣಿಸಿದ್ದಾರೆ.</p>.<p>ತಿರೆನುಗ್ಗಿತಾಗಸಕೆ, ತತ್ತರಿಸಿ</p>.<p>ರವಿಯಬಿಂಬಂ ತಾಗಿದುದು ಶಶಿಯ ಬಿಂಬಕ್ಕೆ.</p>.<p>ತುಂಬಿದುದು ವರ್ಣವರ್ಣ ವಿಚಿತ್ರಮೊರ್ ಜ್ಯೋತಿ</p>.<p>ಭುವನಾಂಡಮಂ ನಾದಮಯ ವಾಯುಮಂಡಲಂ</p>.<p>ನಕ್ಷತ್ರ ವೃಷ್ಟಿಮಯ ಮಾದತ್ತು, ಹಬ್ಬಿದುವು</p>.<p>ಹೊಗೆ ಬೆಂಕೆಗಳ್, ನೀಲಿಗೆಂಪುಗಳ್, ಸೂರ್ಯ ಬಿಂಬಂ</p>.<p>ಬಡಿದ ರಭಸಕೆ ಮುರಿದ ರಭಸಕೆ ಮುರಿದ ಕೋಡಿನ ಕೋರೆದಿಂಗಳ್</p>.<p>ತಿವಿಯೆ, ಸೀಳಿದು, ಪಡವಿ ಪುಡಿವೋಯ್ತು.</p>.<p>ಕವಿ ಮೇಲಿನ ಕಲ್ಪನಾ ಚಿತ್ರದಲ್ಲಿ ವಿಶ್ವದ ಅಲ್ಲೋಲ ಕಲ್ಲೋಲವನ್ನು ಕಡೆದಿಟ್ಟಿದ್ದಾರೆ. ಸೂಯಬಿಂಬ ಬಡಿದ ರಭಸಕ್ಕೆ ವಕ್ರಚಂದ್ರನ ಕೋಡುಮುರಿಯಿತು! ಅದು ತಿವಿದಾಗ ಭೂಮಿ ಪುಡಿಯಾಯಿತು! ಕುಂಭಕರ್ಣನ ವಧೆ ಅಸಾಧಾರಣವಾದುದು. ಆ ಮಹಾಶರೀರ ಕೆಡೆದುಬಿದ್ದಾಗ ಉಂಟಾದ ಭಯಂಕರತೆಯ ತೀವ್ರತೆಗೆ ಪ್ರತಿಮೆಯಾಗಿ ಕೋರೆದಿಂಗಳು, ಅದರ ಕೋಡು, ಅದು ಭೂಮಿಯನ್ನು ತಿವಿದದ್ದು ಒಂದು ಅತಿಶಯ ಘೋರ ಕ್ರಿಯೆ ಕಣ್ಮುಂದೆ ಸುಳಿಯುವಂತೆ ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಕೋರೆದಿಂಗಳ್</h2>.<p>ಕೋರೆದಿಂಗಳ್ (ನಾ). ವಕ್ರಚಂದ್ರ; ಬಾಲಚಂದ್ರ</p>.<p>ರಾಮಚಂದ್ರನು ಶಿವಸಹಿತ ಶಕ್ತ್ಯಾಯುಧವನ್ನು ಬಿಡಲು ಕುಂಭಕರ್ಣನ ತಲೆಗೆ ತಾಗಿ, ಅವನ ಶಿರ ಭೂಮಿಗೆ ಉರುಳುತ್ತದೆ. ಆಗ ಕುಂಭಕರ್ಣನಿಗೆ ಆದ ಅನುಭವವನ್ನು ಕವಿ ಹೀಗೆ ಬಣ್ಣಿಸಿದ್ದಾರೆ.</p>.<p>ತಿರೆನುಗ್ಗಿತಾಗಸಕೆ, ತತ್ತರಿಸಿ</p>.<p>ರವಿಯಬಿಂಬಂ ತಾಗಿದುದು ಶಶಿಯ ಬಿಂಬಕ್ಕೆ.</p>.<p>ತುಂಬಿದುದು ವರ್ಣವರ್ಣ ವಿಚಿತ್ರಮೊರ್ ಜ್ಯೋತಿ</p>.<p>ಭುವನಾಂಡಮಂ ನಾದಮಯ ವಾಯುಮಂಡಲಂ</p>.<p>ನಕ್ಷತ್ರ ವೃಷ್ಟಿಮಯ ಮಾದತ್ತು, ಹಬ್ಬಿದುವು</p>.<p>ಹೊಗೆ ಬೆಂಕೆಗಳ್, ನೀಲಿಗೆಂಪುಗಳ್, ಸೂರ್ಯ ಬಿಂಬಂ</p>.<p>ಬಡಿದ ರಭಸಕೆ ಮುರಿದ ರಭಸಕೆ ಮುರಿದ ಕೋಡಿನ ಕೋರೆದಿಂಗಳ್</p>.<p>ತಿವಿಯೆ, ಸೀಳಿದು, ಪಡವಿ ಪುಡಿವೋಯ್ತು.</p>.<p>ಕವಿ ಮೇಲಿನ ಕಲ್ಪನಾ ಚಿತ್ರದಲ್ಲಿ ವಿಶ್ವದ ಅಲ್ಲೋಲ ಕಲ್ಲೋಲವನ್ನು ಕಡೆದಿಟ್ಟಿದ್ದಾರೆ. ಸೂಯಬಿಂಬ ಬಡಿದ ರಭಸಕ್ಕೆ ವಕ್ರಚಂದ್ರನ ಕೋಡುಮುರಿಯಿತು! ಅದು ತಿವಿದಾಗ ಭೂಮಿ ಪುಡಿಯಾಯಿತು! ಕುಂಭಕರ್ಣನ ವಧೆ ಅಸಾಧಾರಣವಾದುದು. ಆ ಮಹಾಶರೀರ ಕೆಡೆದುಬಿದ್ದಾಗ ಉಂಟಾದ ಭಯಂಕರತೆಯ ತೀವ್ರತೆಗೆ ಪ್ರತಿಮೆಯಾಗಿ ಕೋರೆದಿಂಗಳು, ಅದರ ಕೋಡು, ಅದು ಭೂಮಿಯನ್ನು ತಿವಿದದ್ದು ಒಂದು ಅತಿಶಯ ಘೋರ ಕ್ರಿಯೆ ಕಣ್ಮುಂದೆ ಸುಳಿಯುವಂತೆ ಮಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>