<p>1857ರ ಸ್ವಾತಂತ್ರ್ಯ ಸಂಗ್ರಾಮ. ಅದರಲ್ಲಿ ಥಟ್ಟನೇ ನೆನಪಾಗುವ ಹೆಸರು ಯೋಧ ಮಂಗಲ್ ಪಾಂಡೆ. ಉತ್ತರ ಭಾರತದಲ್ಲಿ ಈ ಸಂಗ್ರಾಮ ತಾರಕಕ್ಕೇರಿತು. ಆದರೆ, ಸೂಕ್ಷ್ಮವಾಗಿ ಇತಿಹಾಸ ಕೆದಕಿದಾಗ ಅಂತಹದ್ದೇ ಸಂಗ್ರಾಮದ ಪ್ರಯತ್ನ ಅದೇ ಕಾಲಘಟ್ಟದಲ್ಲಿ (1858) ನಮ್ಮ ನಾಡಿನ ಸುರಪುರ ಸಂಸ್ಥಾನದ ನೇತೃತ್ವದಲ್ಲಿ ನಡೆದಿತ್ತು.</p>.<p>ಆಗ, ಕೊಲ್ಲಾಪುರ, ಸೊಲ್ಲಾಪುರ, ಸಿಂದಗಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಂಸ್ಥಾನಗಳ ರಾಜರು, ಸೇನಾನಿಗಳು ಸುರಪುರದ ಸಂಸ್ಥಾನದವರು ಜೊತೆಗೂಡಿ ಮಹಾಸಂಗ್ರಾಮಕ್ಕೆ ನಾಂದಿ ಹಾಡಿದ್ದರೆ, ಬ್ರಿಟಿಷರನ್ನು ಇಲ್ಲಿಂದ ಓಡಿಸಲು ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ಹಾಗಾಗಿದ್ದರೆ, ಸ್ವಾತಂತ್ರ್ಯ ಚಳವಳಿಯ ಹಾದಿಯಲ್ಲಿ ಸುರಪುರ ಸಂಸ್ಥಾನದ ಪಾತ್ರ ಇನ್ನಷ್ಟು ಮಹತ್ವದಿಂದ ಕೂಡಿರುತಿತ್ತು.</p>.<p>ಹೌದು! ಯಾದಗಿರಿ ಜಿಲ್ಲೆಯ ಸುರಪುರ ಸಂಸ್ಥಾನ ಸ್ವಾತಂತ್ರ್ಯ ಚಳವಳಿಯಲ್ಲಿ ಅಂಥ ಮಹತ್ವದ ಪಾತ್ರ ವಹಿಸಿದೆ. ಈಗಲೂ ಸುರಪುರಕ್ಕೆ ಭೇಟಿ ನೀಡಿದರೆ ಸ್ವಾತಂತ್ರ್ಯ ಹೋರಾಟ-ಸಾಹಸದ ಅನೇಕ ಕುರುಹುಗಳು ಅಲ್ಲಲ್ಲಿ ಕಾಣುತ್ತವೆ. ಹಲವು ಐತಿಹಾಸಿಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿರುವ ನಾಯಕ ಸಂಸ್ಥಾನದ ಹಳೆಯ ದರ್ಬಾರ್ (ಅರಮನೆ), ಹೊಸ ಅರಮನೆ, ಆಗಿನ ಶಸ್ತ್ರಾಸ್ತ್ರಗಳಿವೆ. ಅಂದು ಸಂಸ್ಥಾನದವರು ಬಳಸಿರುವ ವಸ್ತುಗಳು ಆ ಕಾಲದ ಒಂದೊಂದು ಕಥೆಯನ್ನು ಸಾರುತ್ತವೆ.</p>.<p>ಹೈದರಾಬಾದ್-ಕರ್ನಾಟಕ ಪ್ರದೇಶದ ವಲಯ ಕೇಂದ್ರ ಕಲಬುರ್ಗಿಯಿಂದ 109 ಕಿ.ಮೀ. ದೂರದ ಸುರಪುರ ಅಲ್ಲಿನ ರಾಜ ಪರಂಪರೆ, ಜನರ ಸಾಹಸ, ಬೆಟ್ಟಗುಡ್ಡಗಳು ಕಥೆ ಎಲ್ಲವೂ ಹೊಸ ವಿಷಯಗಳನ್ನು ತೆರೆದಿಡುತ್ತವೆ.</p>.<p class="Briefhead"><strong>ಔರಂಗಜೇಬನನ್ನು ಮಣಿಸಿದವರು</strong><br />ಈ ನಾಯಕ ಸಂಸ್ಥಾನದ ಅರಸರ ವೀರಗಾಥೆ ಒಂದೆರಡಲ್ಲ. ಎಲ್ಲಾ ಸಂಸ್ಥಾನಗಳನ್ನು ವಶಪಡಿಸಿಕೊಂಡು ಇಡೀ ಭಾರತದ ಸಾಮ್ರಾಟನಾಗುವ ಕನಸು ಹೊತ್ತು ಬಂದ ದೊರೆ ಔರಂಗಜೇಬ್ನನ್ನೇ ಈ ಸಂಸ್ಥಾನದ ಅರಸರು 1705ರಲ್ಲಿ ಮಣಿಸಿದರು. ಶತ್ರು ಪಾಳಯದಲ್ಲಿ ಸಿಕ್ಕಿ ಬೀಳಬಾರದು ಮತ್ತು ಬಾಜಿಯೂ ಗೆಲ್ಲಬೇಕೆಂದು ಮೊಂಡುಗೈ ರಾಜಾ ವೆಂಕಟಪ್ಪ ನಾಯಕ (1747-1752) ತನ್ನ ಕೈಯನ್ನೇ ಕತ್ತರಿಸಿಕೊಂಡರು. ನಂತರ ಕೃತಕ ಕಬ್ಬಿಣದ ಕೈ ಅಳವಡಿಸಿಕೊಂಡು ಆಳ್ವಿಕೆ ನಡೆಸಿದರು. ಸಂಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ಬರುವ ಸುಳಿವು ಸಿಕ್ಕಾಗ ರಾಣಿ ಈಶ್ವರಮ್ಮ(1813–1853) 8 ವರ್ಷದ ತನ್ನ ಪುತ್ರ ನಾಲ್ವಡಿ ವೆಂಕಟಪ್ಪ ನಾಯಕನನ್ನು ಪಟ್ಟಕ್ಕೇರಿಸಿ ಆಳ್ವಿಕೆ ನಡೆಸಿದರು.</p>.<p>1656 ರಿಂದ 1858ರವರಗಿನ ಅವಧಿಯು ಸುರಪುರ ನಾಯಕ ಸಂಸ್ಥಾನದವರ ಪಾಲಿಗೆ ಸುವರ್ಣ ಕಾಲಘಟ್ಟ. ಆ ಕಾಲವನ್ನು ಈಗಲೂ ಇಲ್ಲಿನ ಜನರು ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ. ಬದುಕನ್ನು ಕಟ್ಟಿಕೊಳ್ಳಲು ಭೂಮಿ ಸೇರಿದಂತೆ ಸಂಪತ್ತನ್ನು ದಾನವಾಗಿ ನೀಡಿದ್ದನ್ನು ಜನರು ಸ್ಮರಿಸುತ್ತಾರೆ. ಸಂಸ್ಥಾನದ ಆಳ್ವಿಕೆಗೆ ಅರಮನೆ ಹಾಗೂ ಅದರ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟು, ಶಾಲೆ ಮತ್ತು ಕಟ್ಟಡಗಳೇ ಅದಕ್ಕೆ ಸಾಕ್ಷಿ.</p>.<p class="Briefhead"><strong>ಸ್ಮಾರಕವಾಗುವತ್ತ ಅರಮನೆ...</strong><br />ಸುರಪುರ ನಾಯಕ ಸಂಸ್ಥಾನದ ಹೊಸ ಅರಮನೆಯು ಸುಮಾರು 200 ವರ್ಷಗಳಷ್ಟು ಹಳೆಯದು. ರಾಣಿ ಈಶ್ವರಮ್ಮ ಮತ್ತು ಅವರ ಪುತ್ರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿ (ಸಂಸ್ಥಾನದ ಆಡಳಿತಾಧಿಕಾರಿ) ಫಿಲಿಪ್ ಮೆಡೋಸ್ ಟೇಲರ್ ಈ ಸುಂದರ ಅರಮನೆ ಕಟ್ಟಿಸಿದರು.</p>.<p>ಮೂರು ಅಂತಸ್ತಿನ ಈ ಅರಮನೆಯಲ್ಲಿ ವಿನ್ಯಾಸಕ್ಕೆ ಅನುಸಾರ ವಿಶಾಲ ಕೋಣೆಗಳನ್ನು ನಿರ್ಮಿಸಲಾಗಿದೆ. ಅರಸರ ಆರಾಧ್ಯದೈವ ವೆಂಕಟೇಶ್ವರ ದೇವರ ದರ್ಶನ ಅರಮನೆಯಿಂದಲೇ ಲಭ್ಯವಾಗುವಂತೆ ಮಾಡಲಾಗಿದೆ. ಅರಮನೆಯಲ್ಲಿ ಇದ್ದುಕೊಂಡೇ ಕಿಂಡಿ ಮುಖಾಂತರ ದೇವರ ದರ್ಶನ ಮಾಡಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರಿಗೆ ಘೋಷಾ ಪದ್ಧತಿ ಇರುವ ಕಾರಣದಿಂದಲೂ ಈ ಕ್ರಮ ಕೈಗೊಳ್ಳಲಾಗಿದೆಯಂತೆ.</p>.<p>ನಾಲ್ವಡಿ ವೆಂಕಟಪ್ಪನಾಯಕರ ವ್ಯಕ್ತಿತ್ವದ ಜತೆಗೆ ಸ್ವಾತಂತ್ರ್ಯ ಚಳವಳಿಯ ರೂಪುರೇಷೆ ಸಿದ್ಧಗೊಂಡಿದ್ದೇ ಈ ಅರಮನೆಯಲ್ಲಿ. ಕೆಲ ವರ್ಷಗಳ ಹಿಂದೆ ಸಂಸ್ಥಾನದ ಮೇಲಿನ ಅಭಿಮಾನದಿಂದ ತಾತಾ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಪುತ್ರ ರಾಜಾ ಕೃಷ್ಣಪ್ಪ ನಾಯಕ ಅವರು ಪಾಳು ಬಿದ್ದ ಅರಮನೆಯನ್ನು ಪುನಃ ನವೀಕರಿಸಿದರು. ಸುಮಾರು ₹ 40 ಲಕ್ಷದವರೆಗೆ ಖರ್ಚು ಮಾಡಿ, ಅರಮನೆ ಸುಂದರಗೊಳಿಸಿದರು.</p>.<p>‘ನಾವು ಯಾರೂ ಈ ಅರಮನೆಯಲ್ಲಿ ವಾಸಿಸುವುದಿಲ್ಲ. ಆದರೆ, ಈ ಅರಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸ್ಮಾರಕವಾಗಿಸುವ ಉದ್ದೇಶವಿದೆ. ಸುರಪುರ ನಾಯಕ ಸಂಸ್ಥಾನದ ಸಾಹಸಗಾಥೆ ಜನರಿಗೆ ತಿಳಿಪಡಿಸುವ ಇರಾದೆಯೂ ಇದೆ’ ಎಂದು ರಾಜಾ ಕೃಷ್ಣಪ್ಪ ನಾಯಕ ಹೇಳುತ್ತಾರೆ.</p>.<p>‘ಸಂಸ್ಥಾನದ ಹಳೆಯ ದರ್ಬಾರ್ನಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲೆಯನ್ನು ತೆರವುಗೊಳಿಸಿ ದರ್ಬಾರನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ವಸ್ತು ಸಂಗ್ರಹಾಲಯ ನಿರ್ಮಿಸುವ ಗುರಿಯಿದೆ. ಸಂಸ್ಥಾನದ ಇತಿಹಾಸಗಾಥೆಯ ಮಾಹಿತಿ ಜನರಿಗೆ ಒದಗಿಸುವ ಉದ್ದೇಶವಿದೆ’ ಎಂದು ಇತಿಹಾಸ ಸಂಶೋಧಕರಾದ ಭಾಸ್ಕರರಾವ್ ಮುಡಬೂಳ ಹೇಳುತ್ತಾರೆ.</p>.<p><strong>ತಿರುಪತಿಯೊಂದಿಗೆ ನಂಟು...</strong><br />ಸುರಪುರ ನಾಯಕ ಸಂಸ್ಥಾನಕ್ಕೂ ಮತ್ತು ತಿರುಮಲ ತಿರುಪತಿ ದೇವರಿಗೂ ಗಾಢ ನಂಟಿದೆ. ‘ಸುರಪುರದ ಅರಸರು ತಿರುಪತಿ ದರ್ಶನಕ್ಕಾಗಿ ಬರುವುದು ಬೇಡ’ ಎಂದು ಅರಸರಿಗೆ ಕನಸಿನಲ್ಲಿ ವೆಂಕಟೇಶ್ವರ ಆದೇಶಿಸಿದ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ರಾಜಾ ಪೀತಾಂಬರ ಬಹಿರಿ ಪಿಡ್ಡನಾಯಕ (1687-1727) ಸುರಪುರದಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಿದರು. ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುವ ವೇಳೆ ಮತ್ತು ರಥ ಎಳೆಯುವಾಗ ಸುರಪುರಂ ಎಂದು ಕೂಗುವ ಸಂಪ್ರದಾಯವಿದೆ. ಆರತಿ ತಟ್ಟೆಯನ್ನು ತೆಗೆದುಕೊಂಡು ರಥವನ್ನೇರಿ ಮಂಗಳಾರತಿ ಮಾಡಿದ ನಂತರವಷ್ಟೇ ವೆಂಕಟೇಶ್ವರನ ರಥ ಎಳೆಯಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1857ರ ಸ್ವಾತಂತ್ರ್ಯ ಸಂಗ್ರಾಮ. ಅದರಲ್ಲಿ ಥಟ್ಟನೇ ನೆನಪಾಗುವ ಹೆಸರು ಯೋಧ ಮಂಗಲ್ ಪಾಂಡೆ. ಉತ್ತರ ಭಾರತದಲ್ಲಿ ಈ ಸಂಗ್ರಾಮ ತಾರಕಕ್ಕೇರಿತು. ಆದರೆ, ಸೂಕ್ಷ್ಮವಾಗಿ ಇತಿಹಾಸ ಕೆದಕಿದಾಗ ಅಂತಹದ್ದೇ ಸಂಗ್ರಾಮದ ಪ್ರಯತ್ನ ಅದೇ ಕಾಲಘಟ್ಟದಲ್ಲಿ (1858) ನಮ್ಮ ನಾಡಿನ ಸುರಪುರ ಸಂಸ್ಥಾನದ ನೇತೃತ್ವದಲ್ಲಿ ನಡೆದಿತ್ತು.</p>.<p>ಆಗ, ಕೊಲ್ಲಾಪುರ, ಸೊಲ್ಲಾಪುರ, ಸಿಂದಗಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ಸಂಸ್ಥಾನಗಳ ರಾಜರು, ಸೇನಾನಿಗಳು ಸುರಪುರದ ಸಂಸ್ಥಾನದವರು ಜೊತೆಗೂಡಿ ಮಹಾಸಂಗ್ರಾಮಕ್ಕೆ ನಾಂದಿ ಹಾಡಿದ್ದರೆ, ಬ್ರಿಟಿಷರನ್ನು ಇಲ್ಲಿಂದ ಓಡಿಸಲು ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ. ಹಾಗಾಗಿದ್ದರೆ, ಸ್ವಾತಂತ್ರ್ಯ ಚಳವಳಿಯ ಹಾದಿಯಲ್ಲಿ ಸುರಪುರ ಸಂಸ್ಥಾನದ ಪಾತ್ರ ಇನ್ನಷ್ಟು ಮಹತ್ವದಿಂದ ಕೂಡಿರುತಿತ್ತು.</p>.<p>ಹೌದು! ಯಾದಗಿರಿ ಜಿಲ್ಲೆಯ ಸುರಪುರ ಸಂಸ್ಥಾನ ಸ್ವಾತಂತ್ರ್ಯ ಚಳವಳಿಯಲ್ಲಿ ಅಂಥ ಮಹತ್ವದ ಪಾತ್ರ ವಹಿಸಿದೆ. ಈಗಲೂ ಸುರಪುರಕ್ಕೆ ಭೇಟಿ ನೀಡಿದರೆ ಸ್ವಾತಂತ್ರ್ಯ ಹೋರಾಟ-ಸಾಹಸದ ಅನೇಕ ಕುರುಹುಗಳು ಅಲ್ಲಲ್ಲಿ ಕಾಣುತ್ತವೆ. ಹಲವು ಐತಿಹಾಸಿಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿರುವ ನಾಯಕ ಸಂಸ್ಥಾನದ ಹಳೆಯ ದರ್ಬಾರ್ (ಅರಮನೆ), ಹೊಸ ಅರಮನೆ, ಆಗಿನ ಶಸ್ತ್ರಾಸ್ತ್ರಗಳಿವೆ. ಅಂದು ಸಂಸ್ಥಾನದವರು ಬಳಸಿರುವ ವಸ್ತುಗಳು ಆ ಕಾಲದ ಒಂದೊಂದು ಕಥೆಯನ್ನು ಸಾರುತ್ತವೆ.</p>.<p>ಹೈದರಾಬಾದ್-ಕರ್ನಾಟಕ ಪ್ರದೇಶದ ವಲಯ ಕೇಂದ್ರ ಕಲಬುರ್ಗಿಯಿಂದ 109 ಕಿ.ಮೀ. ದೂರದ ಸುರಪುರ ಅಲ್ಲಿನ ರಾಜ ಪರಂಪರೆ, ಜನರ ಸಾಹಸ, ಬೆಟ್ಟಗುಡ್ಡಗಳು ಕಥೆ ಎಲ್ಲವೂ ಹೊಸ ವಿಷಯಗಳನ್ನು ತೆರೆದಿಡುತ್ತವೆ.</p>.<p class="Briefhead"><strong>ಔರಂಗಜೇಬನನ್ನು ಮಣಿಸಿದವರು</strong><br />ಈ ನಾಯಕ ಸಂಸ್ಥಾನದ ಅರಸರ ವೀರಗಾಥೆ ಒಂದೆರಡಲ್ಲ. ಎಲ್ಲಾ ಸಂಸ್ಥಾನಗಳನ್ನು ವಶಪಡಿಸಿಕೊಂಡು ಇಡೀ ಭಾರತದ ಸಾಮ್ರಾಟನಾಗುವ ಕನಸು ಹೊತ್ತು ಬಂದ ದೊರೆ ಔರಂಗಜೇಬ್ನನ್ನೇ ಈ ಸಂಸ್ಥಾನದ ಅರಸರು 1705ರಲ್ಲಿ ಮಣಿಸಿದರು. ಶತ್ರು ಪಾಳಯದಲ್ಲಿ ಸಿಕ್ಕಿ ಬೀಳಬಾರದು ಮತ್ತು ಬಾಜಿಯೂ ಗೆಲ್ಲಬೇಕೆಂದು ಮೊಂಡುಗೈ ರಾಜಾ ವೆಂಕಟಪ್ಪ ನಾಯಕ (1747-1752) ತನ್ನ ಕೈಯನ್ನೇ ಕತ್ತರಿಸಿಕೊಂಡರು. ನಂತರ ಕೃತಕ ಕಬ್ಬಿಣದ ಕೈ ಅಳವಡಿಸಿಕೊಂಡು ಆಳ್ವಿಕೆ ನಡೆಸಿದರು. ಸಂಸ್ಥಾನದ ಅಸ್ತಿತ್ವಕ್ಕೆ ಧಕ್ಕೆ ಬರುವ ಸುಳಿವು ಸಿಕ್ಕಾಗ ರಾಣಿ ಈಶ್ವರಮ್ಮ(1813–1853) 8 ವರ್ಷದ ತನ್ನ ಪುತ್ರ ನಾಲ್ವಡಿ ವೆಂಕಟಪ್ಪ ನಾಯಕನನ್ನು ಪಟ್ಟಕ್ಕೇರಿಸಿ ಆಳ್ವಿಕೆ ನಡೆಸಿದರು.</p>.<p>1656 ರಿಂದ 1858ರವರಗಿನ ಅವಧಿಯು ಸುರಪುರ ನಾಯಕ ಸಂಸ್ಥಾನದವರ ಪಾಲಿಗೆ ಸುವರ್ಣ ಕಾಲಘಟ್ಟ. ಆ ಕಾಲವನ್ನು ಈಗಲೂ ಇಲ್ಲಿನ ಜನರು ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ. ಬದುಕನ್ನು ಕಟ್ಟಿಕೊಳ್ಳಲು ಭೂಮಿ ಸೇರಿದಂತೆ ಸಂಪತ್ತನ್ನು ದಾನವಾಗಿ ನೀಡಿದ್ದನ್ನು ಜನರು ಸ್ಮರಿಸುತ್ತಾರೆ. ಸಂಸ್ಥಾನದ ಆಳ್ವಿಕೆಗೆ ಅರಮನೆ ಹಾಗೂ ಅದರ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟು, ಶಾಲೆ ಮತ್ತು ಕಟ್ಟಡಗಳೇ ಅದಕ್ಕೆ ಸಾಕ್ಷಿ.</p>.<p class="Briefhead"><strong>ಸ್ಮಾರಕವಾಗುವತ್ತ ಅರಮನೆ...</strong><br />ಸುರಪುರ ನಾಯಕ ಸಂಸ್ಥಾನದ ಹೊಸ ಅರಮನೆಯು ಸುಮಾರು 200 ವರ್ಷಗಳಷ್ಟು ಹಳೆಯದು. ರಾಣಿ ಈಶ್ವರಮ್ಮ ಮತ್ತು ಅವರ ಪುತ್ರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿ (ಸಂಸ್ಥಾನದ ಆಡಳಿತಾಧಿಕಾರಿ) ಫಿಲಿಪ್ ಮೆಡೋಸ್ ಟೇಲರ್ ಈ ಸುಂದರ ಅರಮನೆ ಕಟ್ಟಿಸಿದರು.</p>.<p>ಮೂರು ಅಂತಸ್ತಿನ ಈ ಅರಮನೆಯಲ್ಲಿ ವಿನ್ಯಾಸಕ್ಕೆ ಅನುಸಾರ ವಿಶಾಲ ಕೋಣೆಗಳನ್ನು ನಿರ್ಮಿಸಲಾಗಿದೆ. ಅರಸರ ಆರಾಧ್ಯದೈವ ವೆಂಕಟೇಶ್ವರ ದೇವರ ದರ್ಶನ ಅರಮನೆಯಿಂದಲೇ ಲಭ್ಯವಾಗುವಂತೆ ಮಾಡಲಾಗಿದೆ. ಅರಮನೆಯಲ್ಲಿ ಇದ್ದುಕೊಂಡೇ ಕಿಂಡಿ ಮುಖಾಂತರ ದೇವರ ದರ್ಶನ ಮಾಡಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರಿಗೆ ಘೋಷಾ ಪದ್ಧತಿ ಇರುವ ಕಾರಣದಿಂದಲೂ ಈ ಕ್ರಮ ಕೈಗೊಳ್ಳಲಾಗಿದೆಯಂತೆ.</p>.<p>ನಾಲ್ವಡಿ ವೆಂಕಟಪ್ಪನಾಯಕರ ವ್ಯಕ್ತಿತ್ವದ ಜತೆಗೆ ಸ್ವಾತಂತ್ರ್ಯ ಚಳವಳಿಯ ರೂಪುರೇಷೆ ಸಿದ್ಧಗೊಂಡಿದ್ದೇ ಈ ಅರಮನೆಯಲ್ಲಿ. ಕೆಲ ವರ್ಷಗಳ ಹಿಂದೆ ಸಂಸ್ಥಾನದ ಮೇಲಿನ ಅಭಿಮಾನದಿಂದ ತಾತಾ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಪುತ್ರ ರಾಜಾ ಕೃಷ್ಣಪ್ಪ ನಾಯಕ ಅವರು ಪಾಳು ಬಿದ್ದ ಅರಮನೆಯನ್ನು ಪುನಃ ನವೀಕರಿಸಿದರು. ಸುಮಾರು ₹ 40 ಲಕ್ಷದವರೆಗೆ ಖರ್ಚು ಮಾಡಿ, ಅರಮನೆ ಸುಂದರಗೊಳಿಸಿದರು.</p>.<p>‘ನಾವು ಯಾರೂ ಈ ಅರಮನೆಯಲ್ಲಿ ವಾಸಿಸುವುದಿಲ್ಲ. ಆದರೆ, ಈ ಅರಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಸ್ಮಾರಕವಾಗಿಸುವ ಉದ್ದೇಶವಿದೆ. ಸುರಪುರ ನಾಯಕ ಸಂಸ್ಥಾನದ ಸಾಹಸಗಾಥೆ ಜನರಿಗೆ ತಿಳಿಪಡಿಸುವ ಇರಾದೆಯೂ ಇದೆ’ ಎಂದು ರಾಜಾ ಕೃಷ್ಣಪ್ಪ ನಾಯಕ ಹೇಳುತ್ತಾರೆ.</p>.<p>‘ಸಂಸ್ಥಾನದ ಹಳೆಯ ದರ್ಬಾರ್ನಲ್ಲಿ ಶಾಲೆ ನಡೆಸಲಾಗುತ್ತಿದೆ. ಶಾಲೆಯನ್ನು ತೆರವುಗೊಳಿಸಿ ದರ್ಬಾರನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ವಸ್ತು ಸಂಗ್ರಹಾಲಯ ನಿರ್ಮಿಸುವ ಗುರಿಯಿದೆ. ಸಂಸ್ಥಾನದ ಇತಿಹಾಸಗಾಥೆಯ ಮಾಹಿತಿ ಜನರಿಗೆ ಒದಗಿಸುವ ಉದ್ದೇಶವಿದೆ’ ಎಂದು ಇತಿಹಾಸ ಸಂಶೋಧಕರಾದ ಭಾಸ್ಕರರಾವ್ ಮುಡಬೂಳ ಹೇಳುತ್ತಾರೆ.</p>.<p><strong>ತಿರುಪತಿಯೊಂದಿಗೆ ನಂಟು...</strong><br />ಸುರಪುರ ನಾಯಕ ಸಂಸ್ಥಾನಕ್ಕೂ ಮತ್ತು ತಿರುಮಲ ತಿರುಪತಿ ದೇವರಿಗೂ ಗಾಢ ನಂಟಿದೆ. ‘ಸುರಪುರದ ಅರಸರು ತಿರುಪತಿ ದರ್ಶನಕ್ಕಾಗಿ ಬರುವುದು ಬೇಡ’ ಎಂದು ಅರಸರಿಗೆ ಕನಸಿನಲ್ಲಿ ವೆಂಕಟೇಶ್ವರ ಆದೇಶಿಸಿದ ಎಂಬ ಪ್ರತೀತಿ ಇದೆ. ಈ ಕಾರಣಕ್ಕೆ ರಾಜಾ ಪೀತಾಂಬರ ಬಹಿರಿ ಪಿಡ್ಡನಾಯಕ (1687-1727) ಸುರಪುರದಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಿಸಿದರು. ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುವ ವೇಳೆ ಮತ್ತು ರಥ ಎಳೆಯುವಾಗ ಸುರಪುರಂ ಎಂದು ಕೂಗುವ ಸಂಪ್ರದಾಯವಿದೆ. ಆರತಿ ತಟ್ಟೆಯನ್ನು ತೆಗೆದುಕೊಂಡು ರಥವನ್ನೇರಿ ಮಂಗಳಾರತಿ ಮಾಡಿದ ನಂತರವಷ್ಟೇ ವೆಂಕಟೇಶ್ವರನ ರಥ ಎಳೆಯಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>