<p>ಇಂದು....<br /> ನಾನು ಪಾಠಮಾಡುತ್ತಿದ್ದೇನೆ<br /> ಅಂದು, ಕಲಿಯಲು ಬಂದ ಪಾಠ<br /> ಮಲೆತು ನಿಂತಿದೆ ಕಣ್ಣಲ್ಲಿ</p>.<p>ಕೆಂಪು ಜರಿ ಅಂಚಿನ ಬಿಳಿ ರೇಷ್ಮೆಯ<br /> ಗರಿಗರಿ ಸೀರೆ ಉಟ್ಟು, ನವಿಲ ಮೇಲೆ<br /> ನಾಟ್ಯ ಭಂಗಿಯಲಿ ವೀಣೆ ಮೀಟುತ್ತಿರುವ<br /> ಶಾರದೆ! ಮುಂದೆ ಭಕ್ತಿಭಾವದಲಿ<br /> ಮಂಡಿಯೂರಿ ಕಣ್ಮುಚ್ಚಿ ಕೈಮುಗಿದು<br /> ಶತಪಥ ಗಲ್ಲ ಬಡಿದುಕೊಳ್ಳುತ್ತ<br /> ಲಕ್ಷ್ಮಿಯ ಅಭಯ ಹಸ್ತದಿಂದ<br /> ಗಲಗಲ ಉದುರುವ ನಾಣ್ಯದಂತೆ<br /> ಉದರದಿಂದೆದ್ದು ಅಧರದಿಂದ ಉಲಿವ<br /> ಅಕ್ಷರಗಳಿಗಾಗಿ ಅರಳುಗಣ್ಣಲಿ ಕಾಯ್ದು...</p>.<p>ಅಂದು, ನನ್ನೊಂದಿಗೆ ಬಂದು<br /> ಉದುರುವ ಅಕ್ಷರಗಳನ್ನು ಎದೆಯ<br /> ಪದಕವಾಗಿಸಬೇಕೆಂದು ತಲೆಯ ಕಿರೀಟ<br /> ವಾಗಿಸಬೇಕೆಂದು ಕಾಯ್ದವರು ಅಸಂಖ್ಯ<br /> ಹಂಗೇ ಕುಂತಿದ್ದಾರೆ ಇನ್ನೂ ಅದೇ ಭಾವಭಂಗಿ<br /> ಯಾರ ಆಜ್ಞೆಯೋ ಮೀರುವಂತಿಲ್ಲ</p>.<p>ಅವರ ಹಿಂದೆಯೇ ನನ್ನ ಮಕ್ಕಳು<br /> ಕಟೆದ ಶಿಲ್ಪಗಳಾಗಿದ್ದಾರೆ<br /> ನವಿಲ ಹಾಸಿನ ಮೇಲೆ ಶಾರದೆ<br /> ವನವನವ ಅಲೆದು ನಂದನವನವಾಗಿಸದೆ<br /> ಯಾವ ಹಾಡ ಹಾಡುತ್ತಿದ್ದಾಳೆ<br /> ಗಾಜಿನ ಮನೆಯಲ್ಲಿ...<br /> ಏಕೆ ಒಸರುತ್ತಿದೆಯೋ ಬೆರಳುಗಳಿಂದ ರಕ್ತ<br /> ನನ್ನ ಕಣ್ಣೀರಲಿ ಬೆರೆತು</p>.<p>ನಾನು ಹುಟ್ಟಿದ ಮಣ್ಣಿನಲಿ ನಾನೊಂದು ಇತಿಹಾಸ<br /> ಕಳೆದ ಚರಿತ್ರೆಯ ಹೊಸ ಬೆಳಗು<br /> ಗೋಡೆಗಳಿರದ ನಾಳೆಗಳಲಿ ಅನುರಣಿಸುವುದು ಅಕ್ಷರ<br /> ವೇಮುಲ - ಕನ್ಹಯ್ಯ ಕುಮಾರರು<br /> ಅವಳು ಮೀಟುವ ತಂತಿಯ ನವನಿನಾದಗಳು<br /> ಶಾರದೆ ಎಂದರೆ... ದೇಶವೆಂದರೆ<br /> ನಮಗೆ ಬರೀ ಸಂಕೇತಗಳಲ್ಲ<br /> ಬದುಕು...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದು....<br /> ನಾನು ಪಾಠಮಾಡುತ್ತಿದ್ದೇನೆ<br /> ಅಂದು, ಕಲಿಯಲು ಬಂದ ಪಾಠ<br /> ಮಲೆತು ನಿಂತಿದೆ ಕಣ್ಣಲ್ಲಿ</p>.<p>ಕೆಂಪು ಜರಿ ಅಂಚಿನ ಬಿಳಿ ರೇಷ್ಮೆಯ<br /> ಗರಿಗರಿ ಸೀರೆ ಉಟ್ಟು, ನವಿಲ ಮೇಲೆ<br /> ನಾಟ್ಯ ಭಂಗಿಯಲಿ ವೀಣೆ ಮೀಟುತ್ತಿರುವ<br /> ಶಾರದೆ! ಮುಂದೆ ಭಕ್ತಿಭಾವದಲಿ<br /> ಮಂಡಿಯೂರಿ ಕಣ್ಮುಚ್ಚಿ ಕೈಮುಗಿದು<br /> ಶತಪಥ ಗಲ್ಲ ಬಡಿದುಕೊಳ್ಳುತ್ತ<br /> ಲಕ್ಷ್ಮಿಯ ಅಭಯ ಹಸ್ತದಿಂದ<br /> ಗಲಗಲ ಉದುರುವ ನಾಣ್ಯದಂತೆ<br /> ಉದರದಿಂದೆದ್ದು ಅಧರದಿಂದ ಉಲಿವ<br /> ಅಕ್ಷರಗಳಿಗಾಗಿ ಅರಳುಗಣ್ಣಲಿ ಕಾಯ್ದು...</p>.<p>ಅಂದು, ನನ್ನೊಂದಿಗೆ ಬಂದು<br /> ಉದುರುವ ಅಕ್ಷರಗಳನ್ನು ಎದೆಯ<br /> ಪದಕವಾಗಿಸಬೇಕೆಂದು ತಲೆಯ ಕಿರೀಟ<br /> ವಾಗಿಸಬೇಕೆಂದು ಕಾಯ್ದವರು ಅಸಂಖ್ಯ<br /> ಹಂಗೇ ಕುಂತಿದ್ದಾರೆ ಇನ್ನೂ ಅದೇ ಭಾವಭಂಗಿ<br /> ಯಾರ ಆಜ್ಞೆಯೋ ಮೀರುವಂತಿಲ್ಲ</p>.<p>ಅವರ ಹಿಂದೆಯೇ ನನ್ನ ಮಕ್ಕಳು<br /> ಕಟೆದ ಶಿಲ್ಪಗಳಾಗಿದ್ದಾರೆ<br /> ನವಿಲ ಹಾಸಿನ ಮೇಲೆ ಶಾರದೆ<br /> ವನವನವ ಅಲೆದು ನಂದನವನವಾಗಿಸದೆ<br /> ಯಾವ ಹಾಡ ಹಾಡುತ್ತಿದ್ದಾಳೆ<br /> ಗಾಜಿನ ಮನೆಯಲ್ಲಿ...<br /> ಏಕೆ ಒಸರುತ್ತಿದೆಯೋ ಬೆರಳುಗಳಿಂದ ರಕ್ತ<br /> ನನ್ನ ಕಣ್ಣೀರಲಿ ಬೆರೆತು</p>.<p>ನಾನು ಹುಟ್ಟಿದ ಮಣ್ಣಿನಲಿ ನಾನೊಂದು ಇತಿಹಾಸ<br /> ಕಳೆದ ಚರಿತ್ರೆಯ ಹೊಸ ಬೆಳಗು<br /> ಗೋಡೆಗಳಿರದ ನಾಳೆಗಳಲಿ ಅನುರಣಿಸುವುದು ಅಕ್ಷರ<br /> ವೇಮುಲ - ಕನ್ಹಯ್ಯ ಕುಮಾರರು<br /> ಅವಳು ಮೀಟುವ ತಂತಿಯ ನವನಿನಾದಗಳು<br /> ಶಾರದೆ ಎಂದರೆ... ದೇಶವೆಂದರೆ<br /> ನಮಗೆ ಬರೀ ಸಂಕೇತಗಳಲ್ಲ<br /> ಬದುಕು...</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>