<p>ಭಾರತದಲ್ಲಿ ಅನೇಕ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳು ನಿಯಮಿತವಾಗಿ ನಡೆಯುತ್ತವೆ. ಗ್ವಾಲಿಯರ್ನ `ಹರಿದಾಸ ಸಂಗೀತ ಸಮ್ಮೇಳನ~, ಪುಣೆಯಲ್ಲಿ ಜರುಗುವ `ಸವಾಯಿಗಂಧರ್ವ ಸಂಗೀತ ಸಮ್ಮೇಳನ~ ಹೀಗೆ ಅವುಗಳನ್ನು ಪಟ್ಟಿ ಮಾಡಬಹುದು. ಇವುಗಳಲ್ಲಿ ಹಾಡಿ ಸಂಗೀತಲೋಕದಲ್ಲಿ ತಮ್ಮ ಅಸ್ತಿತ್ವ - ವರ್ಚಸ್ಸುಗಳನ್ನು ಬೆಳೆಸಿಕೊಳ್ಳಲು ಸಂಗೀತಗಾರರು ಕಾತರಿಸುತ್ತಾರೆ.<br /> <br /> ಕರ್ನಾಟಕದ ಕುಂದಗೋಳದಲ್ಲಿ ಸವಾಯಿಗಂಧರ್ವರ ಪುಣ್ಯತಿಥಿಯಂದು ನಡೆಯುವ ಸಂಗೀತೋತ್ಸವವೂ ಸಮ್ಮೇಳನದ ಸ್ವರೂಪದ್ದೇ ಆಗಿದೆ. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಕಲಾವಿದರು ಆಗಮಿಸಿ ತಮ್ಮ ಸಂಗೀತ ಸೇವೆ ಸಲ್ಲಿಸುತ್ತಾರೆ. <br /> <br /> ಇದನ್ನು ಆಯೋಜಿಸುತ್ತಿದ್ದ ಡಾ.ಗಂಗೂಬಾಯಿ ಹಾನಗಲ್ಲರ ಆಶೀರ್ವಾದ ಪಡೆಯಲು ಹಾಗೂ ಅವರ ಗುರುಗಳಾದ ಸವಾಯಿ ಗಂಧರ್ವರ ಕೃಪೆಗೆ ಪಾತ್ರರಾಗಲು ಉದಯೋನ್ಮುಖ ಕಲಾವಿದರ ದಂಡೇ ಕುಂದಗೋಳಕ್ಕೆ ಆಗಮಿಸುತ್ತಿತ್ತು. ಈಗಲೂ ಗುರುಶಿಷ್ಯೆಯ ನೆನಪಿನಲ್ಲೇ ಸಹೃದಯರ ದೊಡ್ಡ ದಂಡು ಕುಂದಗೋಳದಲ್ಲಿ ನೆರೆಯುತ್ತದೆ. <br /> <br /> ಗಂಗೂಬಾಯಿ ಹಾನಗಲ್ಲರು ಅನೇಕ ಸಂಗೀತ ಸಮ್ಮೇಳನಗಳಲ್ಲಿ ಪ್ರಮುಖ ಗಾಯಕಿಯಾಗಿ ಹಾಡಿದ್ದಾರೆ. ಆದರೆ ಆ ಹಂತಕ್ಕೇರಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅನೇಕ ಸಲ ಇವರನ್ನು ಸಂಘಟಕರು ಉಪೇಕ್ಷಿಸಿದ ಪ್ರಸಂಗಗಳೂ ಉಂಟು. ಆಗೆಲ್ಲ ಗಂಗೂಬಾಯಿ ತಮ್ಮ ಸಂಗೀತದಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಅಂಥದೊಂದು ರಸನಿಮಿಷ ಇಲ್ಲಿದೆ.<br /> <br /> 1940ರ ದಶಕ. ಗಯಾದಲ್ಲಿ ರಾಷ್ಟ್ರಮಟ್ಟದ ಸಂಗೀತ ಸಮ್ಮೇಳನ. ಅದಕ್ಕೆ ಕುಮಾರಗಂಧರ್ವರಾದಿಯಾಗಿ ಅನೇಕ ಪ್ರಖ್ಯಾತ ಗಾಯಕರು ಆಮಂತ್ರಿತರು. <br /> <br /> ಗಂಗೂಬಾಯಿ ಹಾನಗಲ್ಲರೂ ಮೊದಲ ಸಲ ಆಮಂತ್ರಿತರಾದರು. ಆ ಸಲ ಉಸ್ತಾದ್ ಫೈಯಾಜ್ಖಾನ್, ಪಂ.ಓಂಕಾರನಾಥ ಠಾಕೂರ, ದಿಲೀಪ ಚಂದ್ರವೇದಿ, ಉಸ್ತಾದ್ ಬಡೇಗುಲಾಮ್ ಅಲೀಖಾನ್ ಮೊದಲಾದವರೂ ಹಾಡುವವರ ಪಟ್ಟಿಯಲ್ಲಿದ್ದರು. <br /> <br /> ಸಂಘಟಕರು ಗಂಗೂಬಾಯಿ ಅವರಿಗೆ ಕೇವಲ ಹದಿನೈದು ನಿಮಿಷಗಳ ಅವಕಾಶವನ್ನು ಒದಗಿಸಿದರು. ದೂರದ ಕರ್ನಾಟಕದಿಂದ ಗಯಾದವರೆಗೂ ಬಂದು ಹದಿನೈದು ನಿಮಿಷ ಹಾಡುವುದೆ? ಹದಿನೈದು ನಿಮಿಷಗಳಲ್ಲಿ ಏನು ಹಾಡುವುದು? ಈ ಅಪಮಾನ ಪ್ರತಿಭಟಿಸಿ ಹಾಡುವುದಿಲ್ಲವೆಂದು ಹೇಳಿಬಿಡಲೆ?- ಹೀಗೆಲ್ಲ ಗಂಗೂಬಾಯಿ ಯೋಚಿಸಿರಬಹುದು. ಅವರ ತಳಮಳ ಗಮನಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಹೇಳಿದರು- `ಹದಿನೈದೇ ನಿಮಿಷದಲ್ಲಿ ನೀನು ಏನೆಂದು ತೋರಿಸಿ ಬಿಡು. ಇವರಿಗೆಲ್ಲ ನೀನಾರೆಂದು ತಿಳಿಯಲಿ~.<br /> <br /> ಗಂಗೂಬಾಯಿ ಧೈರ್ಯದಿಂದ ವೇದಿಕೆಯನ್ನೇರಿದರು. ವ್ಹಿ.ಜಿ.ಜೋಗ್ ಪಿಟೀಲು ಸಾಥಿ ನೀಡುವುದಾಗಿ ಹುರಿದುಂಬಿಸಿದರು. ಬಸಂತರಾಗದ ಪಿಯಾಸಂಗ ಚೀಜನ್ನು ಎತ್ತರದ ಸ್ವರದಲ್ಲಿ ಹಾಡಿ ಗಂಗೂಬಾಯಿ ರಂಜಿಸಿದರು. ಸಹೃದಯರು ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದರು. <br /> <br /> ಮರುದಿನ, ಚಹಾವಿರಾಮ ವೇಳೆಯಲ್ಲಿ ಬಡೇಗುಲಾಮಖಾನರಾದಿಯಾಗಿ ಎಲ್ಲರೂ ಗಂಗೂಬಾಯಿಯವರು ಪೂರ್ಣಪ್ರಮಾಣದ ಹಾಡುಗಾರಿಕೆ ಪ್ರಸ್ತುತಪಡಿಸಬೇಕೆಂದು ಒತ್ತಾಯಿಸತೊಡಗಿದರು. ಹಾಡುವ ಮನಸ್ಸಿಲ್ಲದಿದ್ದರೂ, ಹಿರಿಯರ ಆಗ್ರಹಕ್ಕೆ ಮಣಿದು ಗಂಗೂಬಾಯಿ ಮನಸೋಕ್ತ ಶುದ್ಧಕಲ್ಯಾಣ ಹಾಡಿದರು. ಎಲ್ಲರೂ ಅಹುದಹುದೆಂದು ತಲೆದೂಗಿದರು! ಬಡೇಗುಲಾಮ್ ಅಲಿಖಾನ್ ಹೇಳಿದರು- `ಬೇಟಿ, ತುಮ್ ಭೀ ಗಾವೋ, ಹಮ್ ಭೀ ಗಾಯೇಂಗೆ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತದಲ್ಲಿ ಅನೇಕ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳು ನಿಯಮಿತವಾಗಿ ನಡೆಯುತ್ತವೆ. ಗ್ವಾಲಿಯರ್ನ `ಹರಿದಾಸ ಸಂಗೀತ ಸಮ್ಮೇಳನ~, ಪುಣೆಯಲ್ಲಿ ಜರುಗುವ `ಸವಾಯಿಗಂಧರ್ವ ಸಂಗೀತ ಸಮ್ಮೇಳನ~ ಹೀಗೆ ಅವುಗಳನ್ನು ಪಟ್ಟಿ ಮಾಡಬಹುದು. ಇವುಗಳಲ್ಲಿ ಹಾಡಿ ಸಂಗೀತಲೋಕದಲ್ಲಿ ತಮ್ಮ ಅಸ್ತಿತ್ವ - ವರ್ಚಸ್ಸುಗಳನ್ನು ಬೆಳೆಸಿಕೊಳ್ಳಲು ಸಂಗೀತಗಾರರು ಕಾತರಿಸುತ್ತಾರೆ.<br /> <br /> ಕರ್ನಾಟಕದ ಕುಂದಗೋಳದಲ್ಲಿ ಸವಾಯಿಗಂಧರ್ವರ ಪುಣ್ಯತಿಥಿಯಂದು ನಡೆಯುವ ಸಂಗೀತೋತ್ಸವವೂ ಸಮ್ಮೇಳನದ ಸ್ವರೂಪದ್ದೇ ಆಗಿದೆ. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಕಲಾವಿದರು ಆಗಮಿಸಿ ತಮ್ಮ ಸಂಗೀತ ಸೇವೆ ಸಲ್ಲಿಸುತ್ತಾರೆ. <br /> <br /> ಇದನ್ನು ಆಯೋಜಿಸುತ್ತಿದ್ದ ಡಾ.ಗಂಗೂಬಾಯಿ ಹಾನಗಲ್ಲರ ಆಶೀರ್ವಾದ ಪಡೆಯಲು ಹಾಗೂ ಅವರ ಗುರುಗಳಾದ ಸವಾಯಿ ಗಂಧರ್ವರ ಕೃಪೆಗೆ ಪಾತ್ರರಾಗಲು ಉದಯೋನ್ಮುಖ ಕಲಾವಿದರ ದಂಡೇ ಕುಂದಗೋಳಕ್ಕೆ ಆಗಮಿಸುತ್ತಿತ್ತು. ಈಗಲೂ ಗುರುಶಿಷ್ಯೆಯ ನೆನಪಿನಲ್ಲೇ ಸಹೃದಯರ ದೊಡ್ಡ ದಂಡು ಕುಂದಗೋಳದಲ್ಲಿ ನೆರೆಯುತ್ತದೆ. <br /> <br /> ಗಂಗೂಬಾಯಿ ಹಾನಗಲ್ಲರು ಅನೇಕ ಸಂಗೀತ ಸಮ್ಮೇಳನಗಳಲ್ಲಿ ಪ್ರಮುಖ ಗಾಯಕಿಯಾಗಿ ಹಾಡಿದ್ದಾರೆ. ಆದರೆ ಆ ಹಂತಕ್ಕೇರಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅನೇಕ ಸಲ ಇವರನ್ನು ಸಂಘಟಕರು ಉಪೇಕ್ಷಿಸಿದ ಪ್ರಸಂಗಗಳೂ ಉಂಟು. ಆಗೆಲ್ಲ ಗಂಗೂಬಾಯಿ ತಮ್ಮ ಸಂಗೀತದಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಅಂಥದೊಂದು ರಸನಿಮಿಷ ಇಲ್ಲಿದೆ.<br /> <br /> 1940ರ ದಶಕ. ಗಯಾದಲ್ಲಿ ರಾಷ್ಟ್ರಮಟ್ಟದ ಸಂಗೀತ ಸಮ್ಮೇಳನ. ಅದಕ್ಕೆ ಕುಮಾರಗಂಧರ್ವರಾದಿಯಾಗಿ ಅನೇಕ ಪ್ರಖ್ಯಾತ ಗಾಯಕರು ಆಮಂತ್ರಿತರು. <br /> <br /> ಗಂಗೂಬಾಯಿ ಹಾನಗಲ್ಲರೂ ಮೊದಲ ಸಲ ಆಮಂತ್ರಿತರಾದರು. ಆ ಸಲ ಉಸ್ತಾದ್ ಫೈಯಾಜ್ಖಾನ್, ಪಂ.ಓಂಕಾರನಾಥ ಠಾಕೂರ, ದಿಲೀಪ ಚಂದ್ರವೇದಿ, ಉಸ್ತಾದ್ ಬಡೇಗುಲಾಮ್ ಅಲೀಖಾನ್ ಮೊದಲಾದವರೂ ಹಾಡುವವರ ಪಟ್ಟಿಯಲ್ಲಿದ್ದರು. <br /> <br /> ಸಂಘಟಕರು ಗಂಗೂಬಾಯಿ ಅವರಿಗೆ ಕೇವಲ ಹದಿನೈದು ನಿಮಿಷಗಳ ಅವಕಾಶವನ್ನು ಒದಗಿಸಿದರು. ದೂರದ ಕರ್ನಾಟಕದಿಂದ ಗಯಾದವರೆಗೂ ಬಂದು ಹದಿನೈದು ನಿಮಿಷ ಹಾಡುವುದೆ? ಹದಿನೈದು ನಿಮಿಷಗಳಲ್ಲಿ ಏನು ಹಾಡುವುದು? ಈ ಅಪಮಾನ ಪ್ರತಿಭಟಿಸಿ ಹಾಡುವುದಿಲ್ಲವೆಂದು ಹೇಳಿಬಿಡಲೆ?- ಹೀಗೆಲ್ಲ ಗಂಗೂಬಾಯಿ ಯೋಚಿಸಿರಬಹುದು. ಅವರ ತಳಮಳ ಗಮನಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಹೇಳಿದರು- `ಹದಿನೈದೇ ನಿಮಿಷದಲ್ಲಿ ನೀನು ಏನೆಂದು ತೋರಿಸಿ ಬಿಡು. ಇವರಿಗೆಲ್ಲ ನೀನಾರೆಂದು ತಿಳಿಯಲಿ~.<br /> <br /> ಗಂಗೂಬಾಯಿ ಧೈರ್ಯದಿಂದ ವೇದಿಕೆಯನ್ನೇರಿದರು. ವ್ಹಿ.ಜಿ.ಜೋಗ್ ಪಿಟೀಲು ಸಾಥಿ ನೀಡುವುದಾಗಿ ಹುರಿದುಂಬಿಸಿದರು. ಬಸಂತರಾಗದ ಪಿಯಾಸಂಗ ಚೀಜನ್ನು ಎತ್ತರದ ಸ್ವರದಲ್ಲಿ ಹಾಡಿ ಗಂಗೂಬಾಯಿ ರಂಜಿಸಿದರು. ಸಹೃದಯರು ಕಿವಿಗಡಚಿಕ್ಕುವ ಚಪ್ಪಾಳೆ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದರು. <br /> <br /> ಮರುದಿನ, ಚಹಾವಿರಾಮ ವೇಳೆಯಲ್ಲಿ ಬಡೇಗುಲಾಮಖಾನರಾದಿಯಾಗಿ ಎಲ್ಲರೂ ಗಂಗೂಬಾಯಿಯವರು ಪೂರ್ಣಪ್ರಮಾಣದ ಹಾಡುಗಾರಿಕೆ ಪ್ರಸ್ತುತಪಡಿಸಬೇಕೆಂದು ಒತ್ತಾಯಿಸತೊಡಗಿದರು. ಹಾಡುವ ಮನಸ್ಸಿಲ್ಲದಿದ್ದರೂ, ಹಿರಿಯರ ಆಗ್ರಹಕ್ಕೆ ಮಣಿದು ಗಂಗೂಬಾಯಿ ಮನಸೋಕ್ತ ಶುದ್ಧಕಲ್ಯಾಣ ಹಾಡಿದರು. ಎಲ್ಲರೂ ಅಹುದಹುದೆಂದು ತಲೆದೂಗಿದರು! ಬಡೇಗುಲಾಮ್ ಅಲಿಖಾನ್ ಹೇಳಿದರು- `ಬೇಟಿ, ತುಮ್ ಭೀ ಗಾವೋ, ಹಮ್ ಭೀ ಗಾಯೇಂಗೆ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>