<p>ಅಂಬೇಡ್ಕರ್ ಬರಹ ಮತ್ತು ಅವರ ಕುರಿತ ಬೇರೆ ಬೇರೆ ಲೇಖಕರು ರೂಪಿಸಿದ ಬರಹಗಳನ್ನೇ ಮೂಲ ಆಕರವನ್ನಾಗಿ ಇಟ್ಟುಕೊಂಡು ಈ ಕೃತಿಯನ್ನು ಎಂ.ವೆಂಕಟಸ್ವಾಮಿ ರಚಿಸಿದ್ದಾರೆ. ‘ಕೋಮುಭಾವನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಅಪಾಯ’ ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಈ ಸಂಗತಿ ದಾಖಲಿಸುವ ಲೇಖಕರು, ಭ್ರಾತೃತ್ವ ನೆಲೆಯ ಭಾರತೀಯ ರಾಷ್ಟ್ರೀಯತೆ ಬಾಬಾಸಾಹೇಬರ ಕನಸಾಗಿತ್ತು ಎನ್ನುವ ವಿವರವನ್ನು ಇಲ್ಲಿ ನೀಡುತ್ತಾರೆ.</p>.<p>ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ವಿವರದಿಂದ ಆರಂಭವಾಗುವ ಈ ಕೃತಿ ಅವರ ಜೀವನದಲ್ಲಿ ಸಂಭವಿಸುವ ಮಹತ್ವದ ಕೆಲವು ಘಟನೆಗಳನ್ನು ದಾಖಲಿಸುತ್ತದೆ. ಆ ಮೂಲಕ ಅಂಬೇಡ್ಕರ್ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ. </p>.<p>ಜೈ ಭೀಮ್ ಕೃತಿ ‘ಚೌಡಾರ್ ಕೆರೆಯ ನೀರಿನ ಸ್ಪರ್ಶ’, ‘ಸೈಮನ್ ಕಮಿಷನ್ ಮುಂದೆ ವಿಷಯ ಮಂಡನೆ’, ‘ದುಂಡುಮೇಜಿನ ಸಮ್ಮೇಳನಗಳು’, ‘ ಗಾಂಧೀಜಿ ನಿರಶನ ಮತ್ತು ಪೂನಾ ಒಡಂಬಡಿಕೆ’, ಭಾರತೀಯ ಸಾಂವಿಧಾನಿಕ ಕರಡು ರಚನಾ ಸಭೆ ಮತ್ತು ಚರ್ಚೆಗಳು’, ‘ ಭಾರತ ಪಾಕಿಸ್ತಾನ ವಿಭಜನೆ ಮತ್ತು ಗಾಂಧಿ ಹತ್ಯೆ’, ‘ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂತಿಮ ದಿನಗಳು’– ಹೀಗೆ 25 ಅಧ್ಯಾಯಗಳನ್ನು ಒಳಗೊಂಡಿದೆ.</p>.<p>ಅಂಬೇಡ್ಕರ್ ಅವರ ವೃತ್ತಿ ಬದುಕಿನ ಅಡ್ಡಿ ಆತಂಕಗಳ ನಡುವೆ ಉನ್ನತ ವ್ಯಾಸಂಗದ ಸಾಧನೆಯನ್ನು ಪ್ರಸ್ತಾಪಿಸುತ್ತಾರೆ. ಕಾರ್ಮಿಕ ಪಕ್ಷದ ಸ್ಥಾಪನೆ, ಪತ್ರಿಕೆಗಳ ಸಂಪಾದನೆ, ಸಾಮಾಜಿಕ ಚಳವಳಿ, ಹೋರಾಟವೂ ಸೇರಿದಂತೆ ಸಕ್ರಿಯ ರಾಜಕಾರಣದ ಮುಖವನ್ನೂ ಲೇಖಕ ನಿರೂಪಿಸಿದ್ದಾರೆ.</p>.<p><strong>ಜೈ ಭೀಮ್: ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ </strong></p><p><strong>ಲೇ: ಎಂ. ವೆಂಕಟಸ್ವಾಮಿ </strong></p><p><strong>ಪ್ರ: ನವ ಕರ್ನಾಟಕ ಪಬ್ಲಿಕೇಷನ್ಸ್ </strong></p><p><strong> ಸಂ: 080–22161900</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಬೇಡ್ಕರ್ ಬರಹ ಮತ್ತು ಅವರ ಕುರಿತ ಬೇರೆ ಬೇರೆ ಲೇಖಕರು ರೂಪಿಸಿದ ಬರಹಗಳನ್ನೇ ಮೂಲ ಆಕರವನ್ನಾಗಿ ಇಟ್ಟುಕೊಂಡು ಈ ಕೃತಿಯನ್ನು ಎಂ.ವೆಂಕಟಸ್ವಾಮಿ ರಚಿಸಿದ್ದಾರೆ. ‘ಕೋಮುಭಾವನೆಗಳು ರಾಷ್ಟ್ರೀಯ ಭಾವೈಕ್ಯತೆಗೆ ಅಪಾಯ’ ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಈ ಸಂಗತಿ ದಾಖಲಿಸುವ ಲೇಖಕರು, ಭ್ರಾತೃತ್ವ ನೆಲೆಯ ಭಾರತೀಯ ರಾಷ್ಟ್ರೀಯತೆ ಬಾಬಾಸಾಹೇಬರ ಕನಸಾಗಿತ್ತು ಎನ್ನುವ ವಿವರವನ್ನು ಇಲ್ಲಿ ನೀಡುತ್ತಾರೆ.</p>.<p>ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸದ ವಿವರದಿಂದ ಆರಂಭವಾಗುವ ಈ ಕೃತಿ ಅವರ ಜೀವನದಲ್ಲಿ ಸಂಭವಿಸುವ ಮಹತ್ವದ ಕೆಲವು ಘಟನೆಗಳನ್ನು ದಾಖಲಿಸುತ್ತದೆ. ಆ ಮೂಲಕ ಅಂಬೇಡ್ಕರ್ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ. </p>.<p>ಜೈ ಭೀಮ್ ಕೃತಿ ‘ಚೌಡಾರ್ ಕೆರೆಯ ನೀರಿನ ಸ್ಪರ್ಶ’, ‘ಸೈಮನ್ ಕಮಿಷನ್ ಮುಂದೆ ವಿಷಯ ಮಂಡನೆ’, ‘ದುಂಡುಮೇಜಿನ ಸಮ್ಮೇಳನಗಳು’, ‘ ಗಾಂಧೀಜಿ ನಿರಶನ ಮತ್ತು ಪೂನಾ ಒಡಂಬಡಿಕೆ’, ಭಾರತೀಯ ಸಾಂವಿಧಾನಿಕ ಕರಡು ರಚನಾ ಸಭೆ ಮತ್ತು ಚರ್ಚೆಗಳು’, ‘ ಭಾರತ ಪಾಕಿಸ್ತಾನ ವಿಭಜನೆ ಮತ್ತು ಗಾಂಧಿ ಹತ್ಯೆ’, ‘ವೃದ್ಧಾಪ್ಯ, ಅನಾರೋಗ್ಯ ಮತ್ತು ಅಂತಿಮ ದಿನಗಳು’– ಹೀಗೆ 25 ಅಧ್ಯಾಯಗಳನ್ನು ಒಳಗೊಂಡಿದೆ.</p>.<p>ಅಂಬೇಡ್ಕರ್ ಅವರ ವೃತ್ತಿ ಬದುಕಿನ ಅಡ್ಡಿ ಆತಂಕಗಳ ನಡುವೆ ಉನ್ನತ ವ್ಯಾಸಂಗದ ಸಾಧನೆಯನ್ನು ಪ್ರಸ್ತಾಪಿಸುತ್ತಾರೆ. ಕಾರ್ಮಿಕ ಪಕ್ಷದ ಸ್ಥಾಪನೆ, ಪತ್ರಿಕೆಗಳ ಸಂಪಾದನೆ, ಸಾಮಾಜಿಕ ಚಳವಳಿ, ಹೋರಾಟವೂ ಸೇರಿದಂತೆ ಸಕ್ರಿಯ ರಾಜಕಾರಣದ ಮುಖವನ್ನೂ ಲೇಖಕ ನಿರೂಪಿಸಿದ್ದಾರೆ.</p>.<p><strong>ಜೈ ಭೀಮ್: ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ </strong></p><p><strong>ಲೇ: ಎಂ. ವೆಂಕಟಸ್ವಾಮಿ </strong></p><p><strong>ಪ್ರ: ನವ ಕರ್ನಾಟಕ ಪಬ್ಲಿಕೇಷನ್ಸ್ </strong></p><p><strong> ಸಂ: 080–22161900</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>