<p>ಅಲ್ಲಮಪ್ರಭು, ಬಸವಣ್ಣನಿಂದ ಹಿಡಿದು ಅನೇಕ ವಚನಕಾರರು ವಚನ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಂತಹ ಪ್ರಮುಖ 60 ವಚನಕಾರರ ವಚನಗಳ ವಿಶ್ಲೇಷಣೆಯನ್ನು ಒಳಗೊಂಡಿದೆ ಈ ‘ವಚನಬೋಧಿ’ ಕೃತಿ.</p>.<p>‘ಲೇಖಕರು ಆಯ್ದ ವಚನಗಳನ್ನು ತಿಳಿಯಾದ ಕನ್ನಡದಲ್ಲಿ ವ್ಯಾಖ್ಯಾನಿಸಿದ್ದಾರೆ.ವಿದ್ಯಾರ್ಥಿಗಳಿಗೆ, ವಚನಾಸಕ್ತರಿಗೆ ಉಪಯುಕ್ತವಾಗಿದೆ. ವಚನ ವೈವಿಧ್ಯ, ವಿಚಾರಗಳ ವಿಸ್ತಾರವು ಓದುಗರ ಗಮನಕ್ಕೆ ಬರುವಂತೆ ಕೃತಿ ರೂಪುಗೊಂಡಿದೆ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಹೇಳಿದ್ದಾರೆ.</p>.<p>ದೇವರದಾಸಿಮಯ್ಯ, ಅಲ್ಲಮ, ಬಸವಣ್ಣ, ಸಿದ್ಧರಾಮಯ್ಯ, ಸಕಲೇಶ ಮಾದರಸ, ಅಂಬಿಗರ ಚೌಡಯ್ಯ, ಉರಿಲಿಂಗದೇವನಿಂದ ಹಿಡಿದು ಮಸಣಮ್ಮ, ಕಾಳವ್ವೆ, ಗುಡ್ಡವ್ವೆ ತನಕ ಪ್ರಮುಖ ವಚನಕಾರರ ಜನಪ್ರಿಯ ವಚನಗಳ ವಿಶ್ಲೇಷಣೆ ಕೃತಿಯಲ್ಲಿದೆ. ಉದಾಹರಣೆಗೆ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?...’ ಎಂಬ ಬಸವಣ್ಣನವರ ಜನಪ್ರಿಯ ವಚನದ ಸಂಪೂರ್ಣ ಅರ್ಥವನ್ನು ಲೇಖಕರು ವಿವರಿಸಿದ್ದಾರೆ. 60 ಬರಹಗಳನ್ನು ಹೊಂದಿರುವ ಕೃತಿಯಲ್ಲಿ ವಚನಗಳ ಜೊತೆಗೆ ವಚನಕಾರರ ಕುರಿತ ಕಿರುಪರಿಚಯವೂ ಇದೆ.</p>.<p><strong>ವಚನಬೋಧಿ </strong></p><p><strong>ಲೇ:ಶಿವಕುಮಾರ್ </strong></p><p><strong>ಪ್ರ: ಅಕ್ಕ ಐ.ಎ.ಎಸ್ ಅಕಾಡೆಮಿ</strong></p><p><strong>ಸಂ:9560863287 </strong></p><p><strong>ಪು: 432</strong></p><p><strong> ಬೆ: 450</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಲ್ಲಮಪ್ರಭು, ಬಸವಣ್ಣನಿಂದ ಹಿಡಿದು ಅನೇಕ ವಚನಕಾರರು ವಚನ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಂತಹ ಪ್ರಮುಖ 60 ವಚನಕಾರರ ವಚನಗಳ ವಿಶ್ಲೇಷಣೆಯನ್ನು ಒಳಗೊಂಡಿದೆ ಈ ‘ವಚನಬೋಧಿ’ ಕೃತಿ.</p>.<p>‘ಲೇಖಕರು ಆಯ್ದ ವಚನಗಳನ್ನು ತಿಳಿಯಾದ ಕನ್ನಡದಲ್ಲಿ ವ್ಯಾಖ್ಯಾನಿಸಿದ್ದಾರೆ.ವಿದ್ಯಾರ್ಥಿಗಳಿಗೆ, ವಚನಾಸಕ್ತರಿಗೆ ಉಪಯುಕ್ತವಾಗಿದೆ. ವಚನ ವೈವಿಧ್ಯ, ವಿಚಾರಗಳ ವಿಸ್ತಾರವು ಓದುಗರ ಗಮನಕ್ಕೆ ಬರುವಂತೆ ಕೃತಿ ರೂಪುಗೊಂಡಿದೆ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ಪ್ರೊ.ಕಾಳೇಗೌಡ ನಾಗವಾರ ಅವರು ಹೇಳಿದ್ದಾರೆ.</p>.<p>ದೇವರದಾಸಿಮಯ್ಯ, ಅಲ್ಲಮ, ಬಸವಣ್ಣ, ಸಿದ್ಧರಾಮಯ್ಯ, ಸಕಲೇಶ ಮಾದರಸ, ಅಂಬಿಗರ ಚೌಡಯ್ಯ, ಉರಿಲಿಂಗದೇವನಿಂದ ಹಿಡಿದು ಮಸಣಮ್ಮ, ಕಾಳವ್ವೆ, ಗುಡ್ಡವ್ವೆ ತನಕ ಪ್ರಮುಖ ವಚನಕಾರರ ಜನಪ್ರಿಯ ವಚನಗಳ ವಿಶ್ಲೇಷಣೆ ಕೃತಿಯಲ್ಲಿದೆ. ಉದಾಹರಣೆಗೆ: ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?...’ ಎಂಬ ಬಸವಣ್ಣನವರ ಜನಪ್ರಿಯ ವಚನದ ಸಂಪೂರ್ಣ ಅರ್ಥವನ್ನು ಲೇಖಕರು ವಿವರಿಸಿದ್ದಾರೆ. 60 ಬರಹಗಳನ್ನು ಹೊಂದಿರುವ ಕೃತಿಯಲ್ಲಿ ವಚನಗಳ ಜೊತೆಗೆ ವಚನಕಾರರ ಕುರಿತ ಕಿರುಪರಿಚಯವೂ ಇದೆ.</p>.<p><strong>ವಚನಬೋಧಿ </strong></p><p><strong>ಲೇ:ಶಿವಕುಮಾರ್ </strong></p><p><strong>ಪ್ರ: ಅಕ್ಕ ಐ.ಎ.ಎಸ್ ಅಕಾಡೆಮಿ</strong></p><p><strong>ಸಂ:9560863287 </strong></p><p><strong>ಪು: 432</strong></p><p><strong> ಬೆ: 450</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>