ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತಿದ್ದ ವಿದೇಶಾಂಗ ನೀತಿಗಳನ್ನು ವಿವರವಾಗಿ ಈ ಕೃತಿಯಲ್ಲಿ ಹೇಳಲಾಗಿದೆ. ಬಾಂಗ್ಲಾದೇಶ ವಿಮೋಚನೆಯು ದೇಶದ ದಿಸೆಯನ್ನೇ ಬದಲಿಸಿದ ಕಾಲಘಟ್ಟ, ಶ್ರೀಲಂಕಾದಲ್ಲಿರುವ ತಮಿಳರಿಗೆ ನೆರವಾಗುವ ಭಾರತದ ಉದ್ದೇಶದಿಂದ 1200 ಯೋಧರು ಹುತಾತ್ಮರಾಗುವುದರ ಜತೆಗೆ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಹತ್ಯೆಯೂ ನಡೆದ ಪರಿ,ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಇತ್ಯಾದಿಗಳು ವಿದೇಶಾಂಗ ನೀತಿ ಕುರಿತ ಮಾಹಿತಿ ನೀಡುತ್ತದೆ. ಈ ಕೃತಿ ಅಧ್ಯಯನಶೀಲರಿಗೆ ನೆರವಾಗಬಲ್ಲದು.