ಜಾತಿ, ಲಿಂಗತಾರತಮ್ಯ, ಬಾಲ್ಯವಿವಾಹ, ಮೌಢ್ಯ ಮತ್ತು ಕೋಮು ವಿಷಯಗಳನ್ನು ಕಥಾ ಹಂದರದಲ್ಲಿ ಬಲು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ವ್ಯಂಗ್ಯ ಮತ್ತು ವಿಡಂಬನೆಯಲ್ಲಿಯೇ ಬಾಲ್ಯವಿವಾಹದ ಕತೆ ಓದುಗರಿಗೆ ನಗಿಸುತ್ತಲೇ ಬಾಲ್ಯವಿವಾಹದ ಪರಿಣಾಮವನ್ನು ಹೇಳುತ್ತದೆ. ಚಾಕ್ಲೆಟ್ ಕತೆಯಲ್ಲಿ ಪ್ರೀತಿ ಪ್ರೇಮ, ಕೋಮು ಗಲಭೆಯಾಗಿ ಬದಲಾಗುವ ವಿಷಯವನ್ನು ನಾಜೂಕಾಗಿ ಹೆಣೆಯಲಾಗಿದೆ. ಕುಂಟಕಾಗಿ, ಉಡ, ಮುಂತಾದ ಕತೆಗಳು ವಿಶಿಷ್ಟ ನಿರೂಪಣೆಯಿಂದಾಗಿ ಗಮನಸೆಳೆಯುತ್ತವೆ. ರೊಟ್ಟಿ ಬೆಂಡಿಕಾಯಿ ಚಟ್ನಿ ನಗರೀಕರಣದ ಬದುಕು ಒಂಟಿಯಾಗಿಸುವ ಪರಿಯನ್ನು ಬಿಚ್ಚಿಡುತ್ತ ಹೋಗುತ್ತದೆ. ಅಜ್ಜ ಮೊಮ್ಮಗನ ವಾತ್ಸಲ್ಯದ ಈ ಕತೆ ಬಹುತೇಕವಾಗಿ ಉದ್ಯೋಗವರಸಿ ಬೆಂಗಳೂರು ಸೇರಿದವರೊಂದಿಗೆ ಕನೆಕ್ಟ್ ಆಗುತ್ತದೆ. ಒಂಬತ್ತು ಕತೆಗಳು ಒಂಬತ್ತು ವೈವಿಧ್ಯಮಯವ ವಿಷಯವನ್ನು ಹೆಣೆಯಲಾಗಿದೆ. ಬಳ್ಳಾರಿ ಸೀಮೆಯ ಭಾಷೆ ಓದುಗರ ಓಘವನ್ನು ಎಲ್ಲಿಯೂ ಕಡಿಮೆ ಮಾಡದು.