ಕಾವ್ಯ, ಕಥೆ–ಕಾದಂಬರಿ, ಸಂಕೀರ್ಣ, ಪ್ರಸ್ತಾವನೆ ಎಂದು ನಾಲ್ಕು ವಿಭಾಗಗಳಲ್ಲಿ ಕೃತಿಯನ್ನು ವಿಂಗಡಿಸಲಾಗಿದ್ದು ಒಟ್ಟು 62 ಮುನ್ನುಡಿಗಳಿವೆ. ಲೇಖಕಿಯರ ಕೃತಿಗಳಿಗೆ ಬರೆದ ಪ್ರಾಸ್ತಾವಿಕ ಮಾತುಗಳೇ ಹೆಚ್ಚು. ‘ನಮ್ಮ ಕಾಲದ ಒಂದು ಅತ್ಯುತ್ತಮ ಸಾಹಿತ್ಯಕ ಮತ್ತು ಬೌದ್ಧಿಕ ಮನಸ್ಸಿಗೆ ಸಾಕ್ಷಿಯಾಗಿರುವ ಇಲ್ಲಿನ ಮುನ್ನುಡಿಗಳು ಆಶಾದೇವಿಯವರ ವ್ಯಾಪಕ ವಿಚಾರಗಳ ವಿಕಾಸವನ್ನೂ ಅವರ ಸಂವೇದನೆಯ ಹರವನ್ನೂ ಮನವರಿಕೆ ಮಾಡಿಕೊಡುತ್ತವೆ’ ಎಂದು ಎಸ್.ದಿವಾಕರ್ ಕೃತಿಯ ಕುರಿತು ಬೆನ್ನುಡಿಯಲ್ಲಿ ಬರೆಯುತ್ತಾರೆ.