ಮಂದಿರ ಮಸೀದಿ, ಚರ್ಚುಗಳ ಮೇಲೊಂದು/ ಆಶ್ಚರ್ಯದ ಆನಂದಾಶ್ರಮ ನಿರ್ಮಿಸೋಣ/ ಸರ್ವಧರ್ಮದಾಶ್ರಮಧಾಮವದು... ಎಂಬಲ್ಲಿಗೆ ಇಡೀ ಸಂಕಲನದ ಆಶಯ ವ್ಯಕ್ತವಾಗುತ್ತದೆ. ಸೌಹಾರ್ದ, ಸಾಮರಸ್ಯ ಮತ್ತು ಸಮಬಾಳು ಕವನದ ಸಾಲುಗಳಲ್ಲಿನ ಸಂದೇಶ. ಹಣ–ಹೆಣಗಳ ರಾಶಿಗೆ ಹಣದ ಪೂಜೆ... (ಕವನ: ಎಂದು ಮುಕ್ತಿ ಭಾರತಕ್ಕೆ) ಎನ್ನುವಲ್ಲಿ ವಿಷಾದ, ಸಾತ್ವಿಕ ಆಕ್ರೋಶವಿದೆ. ಇಂಥದ್ದೇ ಇನ್ನೊಂದು ಸಾಲಿನಲ್ಲಿ ‘ನರಭಕ್ಷಕ, ಗಿರಿ ಭಕ್ಷಕ, ಗಿಡ ಭಕ್ಷಕ... ಯಾರಿಲ್ಲ ಇಲ್ಲಿ’ ಎನ್ನುವ ಮೂಲಕ ರಾಜಕಾರಣಿಗಳನ್ನು ಚುಚ್ಚಿದ್ದಾರೆ.