ಚನ್ನಮ್ಮನ ಕುರಿತು ಸಾಹಿತ್ಯರೂಪದ ಹಲವು ಕೃತಿಗಳ ಪಟ್ಟಿಗೆ ಹೊಸ ಮಾದರಿಯ ಸೇರ್ಪಡೆ ಈ ಕೃತಿ. ಕಿತ್ತೂರು ಸಂಸ್ಥಾನದ ಚಾರಿತ್ರಿಕ ದೃಶ್ಯ ವಿವರಗಳ ಭಂಡಾರವಿದು. ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಮೆಲುಕು ಹಾಕುತ್ತಾ, ಆ ಭೂಮಿಯನ್ನು ಆಳಿದ ವ್ಯಕ್ತಿಗಳು, ಅವರ ಶೌರ್ಯ, ಪರಾಕ್ರಮಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಾ, ಚನ್ನಮ್ಮನ ಜೀವನಗಾಥೆಯನ್ನು ಚಿತ್ರಗಳ ಮೂಲಕ ಇಲ್ಲಿ ಹರಡಿದ್ದಾರೆ ಲೇಖಕರು.