<p>‘ಕಿತ್ತೂರು’ ಎಂಬ ಹೆಸರು ಕೇಳಿದಾಕ್ಷಣ ಹಲವು ಘಟನೆಗಳ ಸ್ಮೃತಿ ಹಾದುಹೋಗುತ್ತದೆ. ಸ್ವಾತಂತ್ರ್ಯದ ಹೊಸಕಲ್ಪನೆ ಸೃಷ್ಟಿಸಿದ ಭೂಮಿ ಎಂದು ಕರೆಯಲಾಗುವ ಕಿತ್ತೂರಿನ ಚಿತ್ರಸಂಪುಟವೇ ಈ ಕೃತಿ. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇದು ರಚನೆಯಾಗಿದೆ.</p>.<p>ಚನ್ನಮ್ಮನ ಕುರಿತು ಸಾಹಿತ್ಯರೂಪದ ಹಲವು ಕೃತಿಗಳ ಪಟ್ಟಿಗೆ ಹೊಸ ಮಾದರಿಯ ಸೇರ್ಪಡೆ ಈ ಕೃತಿ. ಕಿತ್ತೂರು ಸಂಸ್ಥಾನದ ಚಾರಿತ್ರಿಕ ದೃಶ್ಯ ವಿವರಗಳ ಭಂಡಾರವಿದು. ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಮೆಲುಕು ಹಾಕುತ್ತಾ, ಆ ಭೂಮಿಯನ್ನು ಆಳಿದ ವ್ಯಕ್ತಿಗಳು, ಅವರ ಶೌರ್ಯ, ಪರಾಕ್ರಮಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಾ, ಚನ್ನಮ್ಮನ ಜೀವನಗಾಥೆಯನ್ನು ಚಿತ್ರಗಳ ಮೂಲಕ ಇಲ್ಲಿ ಹರಡಿದ್ದಾರೆ ಲೇಖಕರು.</p>.<p>ಚಿತ್ರಗಳಿಗೇ ಇಲ್ಲಿ ಆದ್ಯತೆ. ಚಿತ್ರಸಂಪುಟದ ಕೆಲ ಪುಟಗಳಲ್ಲಿ ಕ್ಯೂಆರ್ ಕೋಡ್ಗಳನ್ನೂ ನೀಡಲಾಗಿದ್ದು, ಇದನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ, ಲೇಖಕರು ಉಲ್ಲೇಖಿಸುವ ವಿಷಯದ ವಿಡಿಯೊಗಳು ಲಭ್ಯವಾಗುತ್ತವೆ. ಉದಾಹರಣೆಗೆ: ಕಿತ್ತೂರು ಅರಮನೆಯ ವಿವರಣೆಯನ್ನೊಳಗೊಂಡ ಅಧ್ಯಾಯದಲ್ಲಿ ನೀಡಿರುವ ಕ್ಯೂಆರ್ಕೋಡ್ನಲ್ಲಿ ಅರಮನೆಯ ವಿಡಿಯೊ ವಿವರಣೆ ಇದೆ. ಜೊತೆಗೆ ನಕ್ಷೆಯ ಸಹಿತ ಅರಮನೆಯ ವಿವರಣೆ ನೀಡಿರುವುದು ಮಾಹಿತಿ ಗ್ರಹಿಕೆಗೆ ಅನುಕೂಲಕರವಾಗಿದೆ. ಕಿತ್ತೂರಿಗೆ ಇಲ್ಲಿಯವರೆಗೂ ಭೇಟಿ ನೀಡದೇ ಇರುವವರಿಗೆ ಈ ಕೃತಿ ಒಂದು ರೀತಿಯಲ್ಲಿ ‘ಗೈಡ್’. ಶಿವಶಂಕರ ಬಣಗಾರ ಅವರ ಚಿತ್ರಗಳೇ ಈ ಕೃತಿಯ ಜೀವಾಳ. </p>.<p>ವೀರ ಸೌದಾಮಿನಿ ಕಿತ್ತೂರು ರಾಣಿ ಚೆನ್ನಮ್ಮ </p><p>ಲೇ: ಸಂತೋಷ ಹಾನಗಲ್ಲ </p><p>ಪ್ರ: ರಾಜಗುರು ಅಧ್ಯಯನ ಸಂಸ್ಥೆ ಕಲ್ಮಠ </p><p>ಸಂ: 9535725499 </p><p>ಪುಟ: 372 </p><p>ದರ: 999 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕಿತ್ತೂರು’ ಎಂಬ ಹೆಸರು ಕೇಳಿದಾಕ್ಷಣ ಹಲವು ಘಟನೆಗಳ ಸ್ಮೃತಿ ಹಾದುಹೋಗುತ್ತದೆ. ಸ್ವಾತಂತ್ರ್ಯದ ಹೊಸಕಲ್ಪನೆ ಸೃಷ್ಟಿಸಿದ ಭೂಮಿ ಎಂದು ಕರೆಯಲಾಗುವ ಕಿತ್ತೂರಿನ ಚಿತ್ರಸಂಪುಟವೇ ಈ ಕೃತಿ. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇದು ರಚನೆಯಾಗಿದೆ.</p>.<p>ಚನ್ನಮ್ಮನ ಕುರಿತು ಸಾಹಿತ್ಯರೂಪದ ಹಲವು ಕೃತಿಗಳ ಪಟ್ಟಿಗೆ ಹೊಸ ಮಾದರಿಯ ಸೇರ್ಪಡೆ ಈ ಕೃತಿ. ಕಿತ್ತೂರು ಸಂಸ್ಥಾನದ ಚಾರಿತ್ರಿಕ ದೃಶ್ಯ ವಿವರಗಳ ಭಂಡಾರವಿದು. ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಮೆಲುಕು ಹಾಕುತ್ತಾ, ಆ ಭೂಮಿಯನ್ನು ಆಳಿದ ವ್ಯಕ್ತಿಗಳು, ಅವರ ಶೌರ್ಯ, ಪರಾಕ್ರಮಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಾ, ಚನ್ನಮ್ಮನ ಜೀವನಗಾಥೆಯನ್ನು ಚಿತ್ರಗಳ ಮೂಲಕ ಇಲ್ಲಿ ಹರಡಿದ್ದಾರೆ ಲೇಖಕರು.</p>.<p>ಚಿತ್ರಗಳಿಗೇ ಇಲ್ಲಿ ಆದ್ಯತೆ. ಚಿತ್ರಸಂಪುಟದ ಕೆಲ ಪುಟಗಳಲ್ಲಿ ಕ್ಯೂಆರ್ ಕೋಡ್ಗಳನ್ನೂ ನೀಡಲಾಗಿದ್ದು, ಇದನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ, ಲೇಖಕರು ಉಲ್ಲೇಖಿಸುವ ವಿಷಯದ ವಿಡಿಯೊಗಳು ಲಭ್ಯವಾಗುತ್ತವೆ. ಉದಾಹರಣೆಗೆ: ಕಿತ್ತೂರು ಅರಮನೆಯ ವಿವರಣೆಯನ್ನೊಳಗೊಂಡ ಅಧ್ಯಾಯದಲ್ಲಿ ನೀಡಿರುವ ಕ್ಯೂಆರ್ಕೋಡ್ನಲ್ಲಿ ಅರಮನೆಯ ವಿಡಿಯೊ ವಿವರಣೆ ಇದೆ. ಜೊತೆಗೆ ನಕ್ಷೆಯ ಸಹಿತ ಅರಮನೆಯ ವಿವರಣೆ ನೀಡಿರುವುದು ಮಾಹಿತಿ ಗ್ರಹಿಕೆಗೆ ಅನುಕೂಲಕರವಾಗಿದೆ. ಕಿತ್ತೂರಿಗೆ ಇಲ್ಲಿಯವರೆಗೂ ಭೇಟಿ ನೀಡದೇ ಇರುವವರಿಗೆ ಈ ಕೃತಿ ಒಂದು ರೀತಿಯಲ್ಲಿ ‘ಗೈಡ್’. ಶಿವಶಂಕರ ಬಣಗಾರ ಅವರ ಚಿತ್ರಗಳೇ ಈ ಕೃತಿಯ ಜೀವಾಳ. </p>.<p>ವೀರ ಸೌದಾಮಿನಿ ಕಿತ್ತೂರು ರಾಣಿ ಚೆನ್ನಮ್ಮ </p><p>ಲೇ: ಸಂತೋಷ ಹಾನಗಲ್ಲ </p><p>ಪ್ರ: ರಾಜಗುರು ಅಧ್ಯಯನ ಸಂಸ್ಥೆ ಕಲ್ಮಠ </p><p>ಸಂ: 9535725499 </p><p>ಪುಟ: 372 </p><p>ದರ: 999 </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>