ಗುರುವಾರ, 28 ಆಗಸ್ಟ್ 2025
×
ADVERTISEMENT
ADVERTISEMENT

ವಿದ್ಯಾರ್ಥಿಗಳ ಯಕ್ಷೋತ್ಸವ ನಿರಂತರ ಯಾನ

Published : 5 ಏಪ್ರಿಲ್ 2025, 23:30 IST
Last Updated : 5 ಏಪ್ರಿಲ್ 2025, 23:30 IST
ಫಾಲೋ ಮಾಡಿ
Comments
ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಮೂರು ದಶಕಗಳಿಂದ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ’ ನಡೆಯುತ್ತಿದೆ. ಶೈಕ್ಷಣಿಕ ಒತ್ತಡದ ನಡುವೆ ಭಾವಗಳಲ್ಲಿ ಲೀನವಾಗಿ ರಸದೀಪ್ತಿ ಸೂಸಲು ನೆರವಾಗುವ ಈ ಸ್ಪರ್ಧೆ ವಿದ್ಯಾರ್ಥಿಗಳ ಕಲೋತ್ಸಾಹ ಬಿಂಬಿಸುವ ಕನ್ನಡಿಯೂ ಅನೇಕರಿಗೆ ಕಲಾಕ್ಷೇತ್ರದಲ್ಲಿ ಬೆಳೆಯಲು ಹೊಸದಾರಿಯೂ ಆಗಿದೆ.
‘ಯಕ್ಷೋತ್ಸವ’ದಲ್ಲಿ ನಿಟ್ಟೆ ಎನ್‌ಎಂಎಎಂ ಕಾಲೇಜು ವಿದ್ಯಾರ್ಥಿಗಳ ‘ತರಣಿಸೇನ ಕಾಳಗ’ದ ಭಾಗ    ಚಿತ್ರ ಫಕ್ರುದ್ದೀನ್ ಎಚ್
‘ಯಕ್ಷೋತ್ಸವ’ದಲ್ಲಿ ನಿಟ್ಟೆ ಎನ್‌ಎಂಎಎಂ ಕಾಲೇಜು ವಿದ್ಯಾರ್ಥಿಗಳ ‘ತರಣಿಸೇನ ಕಾಳಗ’ದ ಭಾಗ    ಚಿತ್ರ ಫಕ್ರುದ್ದೀನ್ ಎಚ್
ಯಕ್ಷೋತ್ಸವದಲ್ಲಿ ವಿವೇಕಾನಂದ ಕಾಲೇಜು ಪ್ರಸ್ತುತಪಡಿಸಿದ ಸುದರ್ಶನ ವಿಜಯ ಪ್ರಸಂಗದ ಪಾತ್ರ
ಯಕ್ಷೋತ್ಸವದಲ್ಲಿ ವಿವೇಕಾನಂದ ಕಾಲೇಜು ಪ್ರಸ್ತುತಪಡಿಸಿದ ಸುದರ್ಶನ ವಿಜಯ ಪ್ರಸಂಗದ ಪಾತ್ರ
ಯಕ್ಷೋತ್ಸವದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕೃಷ್ಣಾರ್ಜುನ ಕಲಾಪದ ಅರ್ಜುನ
ಯಕ್ಷೋತ್ಸವದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕೃಷ್ಣಾರ್ಜುನ ಕಲಾಪದ ಅರ್ಜುನ
ಯಕ್ಷೋತ್ಸವದಲ್ಲಿ ಬಂಟಕಲ್‌ನ ಶ್ರೀ ಮಧ್ವವಾದಿರಾಜ ತಾಂತ್ರಿಕ ಸಂಸ್ಥೆಯ ಪ್ರಸ್ತುತಪಡಿಸಿದ ಸುದರ್ಶನ ವಿಜಯ ಪ್ರಸಂಗದ ಧೂತ
ಯಕ್ಷೋತ್ಸವದಲ್ಲಿ ಬಂಟಕಲ್‌ನ ಶ್ರೀ ಮಧ್ವವಾದಿರಾಜ ತಾಂತ್ರಿಕ ಸಂಸ್ಥೆಯ ಪ್ರಸ್ತುತಪಡಿಸಿದ ಸುದರ್ಶನ ವಿಜಯ ಪ್ರಸಂಗದ ಧೂತ
ಯಕ್ಷೋತ್ಸವದಲ್ಲಿ ಮಂಗಳೂರು ವಿವಿ ಕಾಲೇಜು ಪ್ರಸ್ತುತಪಡಿಸಿದ ನರಕಾಸುರ ಮೋಕ್ಷ ಪ್ರಸಂಗದಲ್ಲಿ ಕೃಷ್ಣ
ಯಕ್ಷೋತ್ಸವದಲ್ಲಿ ಮಂಗಳೂರು ವಿವಿ ಕಾಲೇಜು ಪ್ರಸ್ತುತಪಡಿಸಿದ ನರಕಾಸುರ ಮೋಕ್ಷ ಪ್ರಸಂಗದಲ್ಲಿ ಕೃಷ್ಣ
ಯಕ್ಷಗಾನ ಮೇಳಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ನಾನು ಮರೋಳಿ ಶ್ರೀ ಸೂರ್ಯನಾರಾಯಣ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯೆ. ಅದರ ಮೂಲಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತೇನೆ. ಯಕ್ಷೋತ್ಸವವದಲ್ಲಿ ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ಸಾರ್ವಜನಿಕವಾಗಿ ವೇಷ ಹಾಕಿ ಕುಣಿಯಲು ಈ ಸ್ಪರ್ಧೆ ನನಗೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.
-ರಶ್ಮಿತಾ ಮರೋಳಿ, ರಾಮನ ಪಾತ್ರ ಮಾಡಿದ ಎಲ್‌ಎಲ್‌ಎಂ ವಿದ್ಯಾರ್ಥಿನಿ
ದಶಕದಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದೇನೆ. ಚೆಂಡೆ ಮದ್ದಲೆ ವಾದನದ ಜೊತೆಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಯಕ್ಷೋತ್ಸವದಲ್ಲಿ ಸಾಂಘಿಕವಾದ ಪ್ರಯತ್ನದ ಮೇಲೆಯೂ ಗಮನ ಇರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡಬೇಕಾಗುತ್ತದೆ.
-ಅಜೇಯ ಸುಬ್ರಹ್ಮಣ್ಯ, ಮೂಡುಬಿದಿರೆ ಇಂದ್ರಜಿತು ಪಾತ್ರ ನಿರ್ವಹಿಸಿದ ವಿದ್ಯಾರ್ಥಿ
ಇಲ್ಲಿ ಹೆಣ್ಣುಮಕ್ಕಳು ಹೆಚ್ಚು ಭಾಗವಹಿಸುತ್ತಿರುವುದು ವಿಶೇಷ. ವಿವಿಧ ಕಾರಣಗಳಿಂದ ಹೆಣ್ಣುಮಕ್ಕಳಿಗೆ ಮೇಳಗಳಲ್ಲಿ ಪಾತ್ರ ಮಾಡಲು ಅವಕಾಶ ಇಲ್ಲ. ಆದ್ದರಿಂದ ಸಾರ್ವಜನಿಕವಾಗಿ ಅವರ ಪ್ರತಿಭೆ ಬೆಳಗುವುದಿಲ್ಲ. ಯಕ್ಷೋತ್ಸವ ಅವರಿಗೆ ಉತ್ತಮ ವೇದಿಕೆ. ಕರಾವಳಿಯ ವಿಶಿಷ್ಟ ಕಲೆಯನ್ನು ಉಳಿಸಲು ಯಕ್ಷೋತ್ಸವವೂ ನೆರವಾಗುತ್ತಿದೆ ಎಂಬುದು ಖುಷಿಯ ವಿಷಯ.
-ಪುಷ್ಪರಾಜ್‌, ಯಕ್ಷೋತ್ಸವದ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT