<p>ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈಭವದಲ್ಲಿ ಸಿದ್ದಿ ಜನಾಂಗದ ಕೊಡುಗೆ ಅಪಾರ. ಜಿಲ್ಲೆಯ ಮುಂಡಗೋಡ, ಅಂಕೋಲಾ, ಯಲ್ಲಾಪುರ, ಹಳಿಯಾಳ, ಜೊಯಿಡಾಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಯೂರಿವೆ. ಇವರು ತಲೆತಲಾಂತರದಿಂದ ಸಾಂಸ್ಕೃತಿಕ ಕಲೆಗಳ ಒಲವು ಬೆಳೆಸಿಕೊಂಡು ಬಂದಿದ್ದು, ತಾವು ನೆಲೆಯೂರಿರುವ ನೆಲ, ಪ್ರಕೃತಿಯನ್ನು ಅಪ್ಪಿಕೊಂಡಿದ್ದಾರೆ. ಜನಪದ ಸೊಗಡಿನ ಹಾಡು, ನೃತ್ಯಗಳೇ ಇವರನ್ನು ಒಂದುಗೂಡಿಸಿವೆ. ಅನೇಕರು ತಮ್ಮ ವಿಭಿನ್ನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಜಗದಗಲಕ್ಕೆ ಪಸರಿಸುವ ಕನಸು ಹೊತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>