ಕಾರ್ಯಕ್ರಮದ ಅಂಗವಾಗಿ ದೇವಿದಾಸರ ‘ಕರ್ಣ ಭೇದನ’ (ತಾಳಮದ್ದಲೆ) ಕಥಾನಕ ಪ್ರದರ್ಶನಗೊಂಡಿತು. ಕೃಷ್ಣ ಹಾಗೂ ಮದ್ದಲೆ ವಾದಕರಾಗಿ ಕಲಾವಿದ ಪ್ರದೀಪ ಸಾಮಗ ಗಮನಸೆಳೆದರು. ಪತ್ರಕರ್ತ ಅಂಬರೀಷ್ ಭಟ್, ಕರ್ಣನ ಅಸಹಾಯಕತೆ, ಆತನ ಮಿತ್ರತ್ವದ ಮಹತ್ವ ಸಾರಿದರು. ಸೂರ್ಯ ಪಾತ್ರಧಾರಿ ವಿದ್ವಾನ್ ಎ.ಪಿ.ಪಾಠಕ್, ಚಂಡೆಯನ್ನು ನುಡಿಸುತ್ತಲೇ ಆ ಪಾತ್ರಕ್ಕೆ ಜೀವತುಂಬಿದರು. ಭಾಗವತಿಕೆ ಹಾಗೂ ಕುಂತಿ ಪಾತ್ರಧಾರಿಯಾಗಿ ಸುಬ್ರಾಯ ಹೆಬ್ಬಾರ ಅವರು ತಮ್ಮ ಗಾಯನ ಮತ್ತು ಮಮತೆಯ ಮಾತುಗಳಿಂದ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿದರು.