<p>ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯದ ಮೇಲೆ ಗಾಯಕ ರವಿ ಮೂರೂರು ಅವರು ರಂಗ ಸಂಗೀತ, ಸುಗಮ ಸಂಗೀತ ಕಟ್ಟುವ ಕೆಲಸ ಮಾಡುತ್ತಿದ್ದಾರೆ.</p>.<p>ರವಿ ಅವರು ಆರಂಭದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಎಂ.ಪಿ.ಹೆಗಡೆ ಪಡಿಗೆರೆ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದರು. ನಂತರ ರಾಜು ಅನಂತಸ್ವಾಮಿ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿದರು. ಆಮೇಲೆ ಗಾನಗಾರುಡಿಗ ಸಿ.ಅಶ್ವತ್ಥ್ ಅವರ ಶಿಷ್ಯನಾಗಿ ಹಾಡುತ್ತಾ ಸಾಗಿದರು.</p>.<p>ಅಶ್ವತ್ಥ್ ಅವರ ‘ಕನ್ನಡವೇ ಸತ್ಯ’ ಸುಗಮ ಸಂಗೀತ ಸರಣಿಯಲ್ಲಿ 7 ವರ್ಷ ಪ್ರಮುಖ ಗಾಯಕರಾಗಿ ಹಾಡಿದರು. 2009, ಡಿಸೆಂಬರ್ 29ರಂದು ಮುಂಜಾನೆ ರವಿ ಮೂರೂರು ‘ಟಿಫನ್ ಬಕ್ಸ್’ ಸಂಗೀತ ಕಾರ್ಯಕ್ರಮದಲ್ಲಿ ‘ಹೇಳಿ ಹೋಗು ಕಾರಣ’ ಗೀತೆ ಹಾಡುವಾಗ ಗುರು ಅಶ್ವಥ್ ಸಾವಿನ ಸುದ್ದಿ ಬಂತು. ಆ ಕುರಿತ ಹಿತಾನುಭವ ಈ ವಿಡಿಯೊದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>