<p><strong>ಇಂಗ್ಲಿಷ್:</strong> ಅರುಂಧತಿ ಸುಬ್ರಮಣಿಯಂ</p><p><strong>ಕನ್ನಡಕ್ಕೆ</strong>: ಪ್ರತಿಭಾ ನಂದಕುಮಾರ್</p>.<p><em>ಬೇಕಿದೆ ಜೈವಿಕವಾಗಿ ಕರಗುವ ಕವಿ</em></p><p><em>ಯಾವುದೋ ಸ್ಥಳದಲ್ಲಿ ಲಾವಾದಂತೆ ಹರಿಯುವ<br>ಮೌನದಲ್ಲಿ ಮುಳುಗೆದ್ದ ಕವಿ.</em></p><p><em>ಆದರೆ ಇಲ್ಲಿ<br>ಈ ಪ್ರಕ್ಷುಬ್ಧ ಮಾರುಕಟ್ಟೆಯಲ್ಲಿ<br>ಪ್ರೀತಿಸುವುದೇ ಒಂದು ಸವಾಲು,<br>ಇಂಥವರನ್ನು:</em></p><p><em>ಮಿಂಚುವವರು, ವಟಗುಟ್ಟುವವರು<br>ಮಾಂತ್ರಿಕ ಹಸಿರು ಕಣ್ಣುಗಳುಳ್ಳವರು<br>ಸುಕ್ಕುಸುಕ್ಕಾಗಿರುವವರು</em></p><p><em>ಅತೀ ಅಲರ್ಜಿಯವರು, ಕೊಳೆತು ಗೊಬ್ಬರವಾಗಬಲ್ಲವರು<br>ಪಾಲಿನಿಸಿಯಂ ಪಿಂಕು ಸಕ್ಕರೆಯಿಂದ ಮಾಡಿದವರು<br>ಮರುಬಳಕೆಯಾಗುವವರು</em></p><p><em>ರಾಜನ ಪರಿಚಿತರು, ರಾಣಿಯ ಪರಿಚಿತರು<br>ತಲೆಯೊಳಗೆ ಸರ್ಪ ಮಂಥನ ಮಾಡುತ್ತಿರುವವವರು<br>ಗ್ಲಾಮರಸ್ಸಾಗಿರುವವರು, ಕಾಲ ಮುಗಿದವರು</em></p><p><em>ಮರ್ಕಬಾ ಮಂಡಲಗಳ ಸವಾರಿ ಮಾಡುವ ದೇವತೆಗಳ<br>ಬಾಲ ಹಿಡಿದು ಹೊರಟವರು, ಬೂಸು ನಿವಾರಕರು<br>ಫಾರ್ಮಾಲ್ಡಿಹೈಡ್ ಕವಿಗಳು</em></p><p><em>ಬಿದ್ದವರು, ಮರೆಗುಳಿಗಳು,<br>ಹಸಿದ ಕಣ್ಣವರು ಎಲ್ಲರ,<br>ಎಲ್ಲರ ಮೇಲಾಡುತ್ತಿರಲಿ ನಿಮ್ಮ ನೋಟಗಳು.</em></p><p><em>ನೀವೂ ಆ ಹಾದಿ ಸಾಗಿ ಬಂದವರಲ್ಲವೇ?</em></p><p><em>ನಂಬಿಕೆ ಮತ್ತು ಭೀತಿಗಳ ನಡುವೆ<br>ತೂಗಾಡುತ್ತಾ ಕಾವೇರುತ್ತಾ<br>ಅಲೆಗಳ ಸವಾರಿ ಮಾಡುವುದನ್ನು ಕಲಿಯುತ್ತಾ?</em></p><p><em>ಗೊತ್ತು ನಿಮಗೆ ಅನುಮಾನಿಸುವವರು<br>ಕುದಿಯುವವರೂ ಗೊತ್ತು.<br>ಗೊತ್ತು, ಎಷ್ಟು ಸುಲಭ ಮರೆಯುವುದು<br>ಆ ಏದುಸಿರು, ಏದುಸಿರಿನ ಉಬ್ಬಸದ ದಿನಗಳನ್ನು.</em></p><p><em>ಆಮೇಲೆ, ಹೌದು, ನಿಮಗೆ ಗೊತ್ತು ಈ ವಿಪರ್ಯಾಸ<br>ತಮ್ಮದೇ ಸ್ವರ್ಣಲೇಪಿತ ಕೀರ್ತಿಗೆ ಬದ್ಧರಾಗಿರುವವರಿಗೆ,<br>ಒಂದು ಪೊಳ್ಳು ಕಾರಣಕ್ಕೆ ಸಿಕ್ಕಿಬಿದ್ದವರಿಗೆ</em></p><p><em>ಕೂಡಾ ಗೊತ್ತು, ಒಮ್ಮೊಮ್ಮೆ,<br>ಹೇಗೆ ಹಾಡಬೇಕು ಪದಗಳಲ್ಲಿ<br>ಮತ್ತು ಕೆಲವೊಮ್ಮೆ, ತೀರಾ ಅಪರೂಪಕ್ಕೊಮ್ಮೆ,<br>ಹೇಗೆ ಸುಡಬೇಕು ಮೌನದಲ್ಲಿ ಎಂದು.</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಗ್ಲಿಷ್:</strong> ಅರುಂಧತಿ ಸುಬ್ರಮಣಿಯಂ</p><p><strong>ಕನ್ನಡಕ್ಕೆ</strong>: ಪ್ರತಿಭಾ ನಂದಕುಮಾರ್</p>.<p><em>ಬೇಕಿದೆ ಜೈವಿಕವಾಗಿ ಕರಗುವ ಕವಿ</em></p><p><em>ಯಾವುದೋ ಸ್ಥಳದಲ್ಲಿ ಲಾವಾದಂತೆ ಹರಿಯುವ<br>ಮೌನದಲ್ಲಿ ಮುಳುಗೆದ್ದ ಕವಿ.</em></p><p><em>ಆದರೆ ಇಲ್ಲಿ<br>ಈ ಪ್ರಕ್ಷುಬ್ಧ ಮಾರುಕಟ್ಟೆಯಲ್ಲಿ<br>ಪ್ರೀತಿಸುವುದೇ ಒಂದು ಸವಾಲು,<br>ಇಂಥವರನ್ನು:</em></p><p><em>ಮಿಂಚುವವರು, ವಟಗುಟ್ಟುವವರು<br>ಮಾಂತ್ರಿಕ ಹಸಿರು ಕಣ್ಣುಗಳುಳ್ಳವರು<br>ಸುಕ್ಕುಸುಕ್ಕಾಗಿರುವವರು</em></p><p><em>ಅತೀ ಅಲರ್ಜಿಯವರು, ಕೊಳೆತು ಗೊಬ್ಬರವಾಗಬಲ್ಲವರು<br>ಪಾಲಿನಿಸಿಯಂ ಪಿಂಕು ಸಕ್ಕರೆಯಿಂದ ಮಾಡಿದವರು<br>ಮರುಬಳಕೆಯಾಗುವವರು</em></p><p><em>ರಾಜನ ಪರಿಚಿತರು, ರಾಣಿಯ ಪರಿಚಿತರು<br>ತಲೆಯೊಳಗೆ ಸರ್ಪ ಮಂಥನ ಮಾಡುತ್ತಿರುವವವರು<br>ಗ್ಲಾಮರಸ್ಸಾಗಿರುವವರು, ಕಾಲ ಮುಗಿದವರು</em></p><p><em>ಮರ್ಕಬಾ ಮಂಡಲಗಳ ಸವಾರಿ ಮಾಡುವ ದೇವತೆಗಳ<br>ಬಾಲ ಹಿಡಿದು ಹೊರಟವರು, ಬೂಸು ನಿವಾರಕರು<br>ಫಾರ್ಮಾಲ್ಡಿಹೈಡ್ ಕವಿಗಳು</em></p><p><em>ಬಿದ್ದವರು, ಮರೆಗುಳಿಗಳು,<br>ಹಸಿದ ಕಣ್ಣವರು ಎಲ್ಲರ,<br>ಎಲ್ಲರ ಮೇಲಾಡುತ್ತಿರಲಿ ನಿಮ್ಮ ನೋಟಗಳು.</em></p><p><em>ನೀವೂ ಆ ಹಾದಿ ಸಾಗಿ ಬಂದವರಲ್ಲವೇ?</em></p><p><em>ನಂಬಿಕೆ ಮತ್ತು ಭೀತಿಗಳ ನಡುವೆ<br>ತೂಗಾಡುತ್ತಾ ಕಾವೇರುತ್ತಾ<br>ಅಲೆಗಳ ಸವಾರಿ ಮಾಡುವುದನ್ನು ಕಲಿಯುತ್ತಾ?</em></p><p><em>ಗೊತ್ತು ನಿಮಗೆ ಅನುಮಾನಿಸುವವರು<br>ಕುದಿಯುವವರೂ ಗೊತ್ತು.<br>ಗೊತ್ತು, ಎಷ್ಟು ಸುಲಭ ಮರೆಯುವುದು<br>ಆ ಏದುಸಿರು, ಏದುಸಿರಿನ ಉಬ್ಬಸದ ದಿನಗಳನ್ನು.</em></p><p><em>ಆಮೇಲೆ, ಹೌದು, ನಿಮಗೆ ಗೊತ್ತು ಈ ವಿಪರ್ಯಾಸ<br>ತಮ್ಮದೇ ಸ್ವರ್ಣಲೇಪಿತ ಕೀರ್ತಿಗೆ ಬದ್ಧರಾಗಿರುವವರಿಗೆ,<br>ಒಂದು ಪೊಳ್ಳು ಕಾರಣಕ್ಕೆ ಸಿಕ್ಕಿಬಿದ್ದವರಿಗೆ</em></p><p><em>ಕೂಡಾ ಗೊತ್ತು, ಒಮ್ಮೊಮ್ಮೆ,<br>ಹೇಗೆ ಹಾಡಬೇಕು ಪದಗಳಲ್ಲಿ<br>ಮತ್ತು ಕೆಲವೊಮ್ಮೆ, ತೀರಾ ಅಪರೂಪಕ್ಕೊಮ್ಮೆ,<br>ಹೇಗೆ ಸುಡಬೇಕು ಮೌನದಲ್ಲಿ ಎಂದು.</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>