<p>ಜಬೀವುಲ್ಲಾ ಎಂ. ಅಸದ್ ಮೊಳಕಾಲ್ಮುರು </p>.<p>ಕವಿ,<br />ಯುದ್ಧದ ಕರಾಳ ದೃಶ್ಯಗಳನ್ನು ನೋಡಿದನು <br />ಮಡಿದವರನ್ನು, ಬಲಿಯಾಗುತ್ತಿರುವರನ್ನು ಅಮಾಯಕರನ್ನು ಕಂಡು ಮರುಗಿದನು</p>.<p><br />ಬದುಕುಳಿದವರ ಯಾತನೆ, ಯಾಚನೆ, <br />ನಿಟ್ಟುಸಿರು, ನೋವು <br />ಎಲ್ಲವನ್ನೂ ಅನುಭವಿಸುವವನಂತೆ <br />ತಾನೆ ಖುದ್ದು ನರಳಿದನು</p>.<p><br />ಲೋಕ ಕಾಣಲಾಗದ್ದನ್ನು <br />ಮತ್ತು ಕೇಳಲಾಗದ್ದನ್ನೂ <br />ತನ್ನ ಅರಿವಿನ ಒಳಗಣ್ಣು ತೆರೆದು<br />ಓದುಗರ ಮನ ಕಲಕುವಂತೆ<br />ಹೃದಯ ಹಿಂಡುವಂತೆ<br />ಯುದ್ಧದ ಭೀಕರತೆಯನ್ನು <br />ಅದರ ರೌದ್ರತೆಯನ್ನು <br />ಕಣ್ಣಿಗೆ ಕಟ್ಟುವಂತೆ ವರ್ಣಿಸಿ <br />ಕವಿ ಕವಿತೆ ಬರೆದನು</p>.<p><br />ರಸ್ತೆಗಳ ಮೇಲೆ, ಮನೆಗಳ ಒಳಗೆ <br />ಮಕ್ಕಳಾಡುವ ಬಯಲಲ್ಲಿ<br />ವೃದ್ಧರು ಓಡಾಡುವ ಉದ್ಯಾನಗಳಲ್ಲಿ<br />ಶಾಲೆ, ಆಲಯ ಎಲ್ಲೆಡೆಯಲ್ಲಿ<br />ರಕ್ತದ ಹೂಗಳು ಅರಳಿದ್ದನ್ನು<br />ನೋವಿನ ದುಂಬಿಗಳ ಝೇಂಕರಿಸಿದ್ದನ್ನು<br />ದುಃಖದ ಮೋಡಗಳು ಆವರಿಸಿದ್ದನ್ನು<br />ಭಯದ ಕತ್ತಲು ಕವಿದಿದ್ದನ್ನು<br />ಬರೆದನು ಎಲ್ಲವನ್ನು</p>.<p><br />ಸತ್ತವರ, ಗಾಯಗೊಂಡವರ <br />ಬದುಕುಳಿದವರ <br />ಇರುವ ವಾಸ್ತವವನ್ನು<br />ಭರವಸೆಯಿಲ್ಲದ ನಾಳೆಗಳ <br />ಮಕ್ಕಳ, ದೇಶದ ಭವಿಷ್ಯವನ್ನು</p>.<p><br />ಕಳೆದುಕೊಳ್ಳುತ್ತಿರುವ<br />ಎಲ್ಲರನ್ನು ಕೊಲ್ಲುತ್ತಿರುವ<br />ಅಸಹಾಯಕತೆಯನ್ನು<br />ಹತ್ತಿಕ್ಕಲಾರದ<br />ವ್ಯವಸ್ಥೆಯ ಕ್ರೂರತೆಯನ್ನು <br />ಮನ ಮುಟ್ಟುವಂತೆ<br />ಹೃದಗಳ ತಟ್ಟುವಂತೆ<br />ಕವಿ ಕವಿತೆ ಕಟ್ಟಿದನು</p>.<p><br />ಎಲ್ಲರೂ ಓದಿದರು<br />ನೊಂದವರ ನೋವಿಗೆ ಮಿಡಿದರು<br />ಸತ್ತವರ ನೆನೆದು ಕಂಬನಿ ಸುರಿಸಿದರು<br />ದೇವರಲ್ಲಿ ಪ್ರಾರ್ಥಿಸಿ ಸುಮ್ಮನಾದರು</p>.<p><br />ಕವಿತೆ ಗೀಚಿದ ಕವಿಯನ್ನು<br />ಭೇಷ್ ಎಂದು ಬೆನ್ನುತಟ್ಟಿದರು<br />ಶಹಬ್ಬಾಸ್ ಎಂದು ಅಲಂಗಿಸಿಕೊಂಡರು<br />ವಾಹ್... ವಾಹ್... ಎಂದು <br />ಗುಣಗಾನ ಮಾಡಿದರು</p>.<p><br />ಆದರೆ ಯುದ್ಧದ ಹೆಸರಿನಲ್ಲಿ<br />ಆಕ್ರಮಣ ಜರುಗುತ್ತಲೇ ಇತ್ತು<br />ಶಾಂತಿಯ ಮಂತ್ರ <br />ಜಪಿಸುತ್ತ ಪಾರಿವಾಳ ಮಾತ್ರ<br />ಪಂಜರದಲ್ಲೆ ಉಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಬೀವುಲ್ಲಾ ಎಂ. ಅಸದ್ ಮೊಳಕಾಲ್ಮುರು </p>.<p>ಕವಿ,<br />ಯುದ್ಧದ ಕರಾಳ ದೃಶ್ಯಗಳನ್ನು ನೋಡಿದನು <br />ಮಡಿದವರನ್ನು, ಬಲಿಯಾಗುತ್ತಿರುವರನ್ನು ಅಮಾಯಕರನ್ನು ಕಂಡು ಮರುಗಿದನು</p>.<p><br />ಬದುಕುಳಿದವರ ಯಾತನೆ, ಯಾಚನೆ, <br />ನಿಟ್ಟುಸಿರು, ನೋವು <br />ಎಲ್ಲವನ್ನೂ ಅನುಭವಿಸುವವನಂತೆ <br />ತಾನೆ ಖುದ್ದು ನರಳಿದನು</p>.<p><br />ಲೋಕ ಕಾಣಲಾಗದ್ದನ್ನು <br />ಮತ್ತು ಕೇಳಲಾಗದ್ದನ್ನೂ <br />ತನ್ನ ಅರಿವಿನ ಒಳಗಣ್ಣು ತೆರೆದು<br />ಓದುಗರ ಮನ ಕಲಕುವಂತೆ<br />ಹೃದಯ ಹಿಂಡುವಂತೆ<br />ಯುದ್ಧದ ಭೀಕರತೆಯನ್ನು <br />ಅದರ ರೌದ್ರತೆಯನ್ನು <br />ಕಣ್ಣಿಗೆ ಕಟ್ಟುವಂತೆ ವರ್ಣಿಸಿ <br />ಕವಿ ಕವಿತೆ ಬರೆದನು</p>.<p><br />ರಸ್ತೆಗಳ ಮೇಲೆ, ಮನೆಗಳ ಒಳಗೆ <br />ಮಕ್ಕಳಾಡುವ ಬಯಲಲ್ಲಿ<br />ವೃದ್ಧರು ಓಡಾಡುವ ಉದ್ಯಾನಗಳಲ್ಲಿ<br />ಶಾಲೆ, ಆಲಯ ಎಲ್ಲೆಡೆಯಲ್ಲಿ<br />ರಕ್ತದ ಹೂಗಳು ಅರಳಿದ್ದನ್ನು<br />ನೋವಿನ ದುಂಬಿಗಳ ಝೇಂಕರಿಸಿದ್ದನ್ನು<br />ದುಃಖದ ಮೋಡಗಳು ಆವರಿಸಿದ್ದನ್ನು<br />ಭಯದ ಕತ್ತಲು ಕವಿದಿದ್ದನ್ನು<br />ಬರೆದನು ಎಲ್ಲವನ್ನು</p>.<p><br />ಸತ್ತವರ, ಗಾಯಗೊಂಡವರ <br />ಬದುಕುಳಿದವರ <br />ಇರುವ ವಾಸ್ತವವನ್ನು<br />ಭರವಸೆಯಿಲ್ಲದ ನಾಳೆಗಳ <br />ಮಕ್ಕಳ, ದೇಶದ ಭವಿಷ್ಯವನ್ನು</p>.<p><br />ಕಳೆದುಕೊಳ್ಳುತ್ತಿರುವ<br />ಎಲ್ಲರನ್ನು ಕೊಲ್ಲುತ್ತಿರುವ<br />ಅಸಹಾಯಕತೆಯನ್ನು<br />ಹತ್ತಿಕ್ಕಲಾರದ<br />ವ್ಯವಸ್ಥೆಯ ಕ್ರೂರತೆಯನ್ನು <br />ಮನ ಮುಟ್ಟುವಂತೆ<br />ಹೃದಗಳ ತಟ್ಟುವಂತೆ<br />ಕವಿ ಕವಿತೆ ಕಟ್ಟಿದನು</p>.<p><br />ಎಲ್ಲರೂ ಓದಿದರು<br />ನೊಂದವರ ನೋವಿಗೆ ಮಿಡಿದರು<br />ಸತ್ತವರ ನೆನೆದು ಕಂಬನಿ ಸುರಿಸಿದರು<br />ದೇವರಲ್ಲಿ ಪ್ರಾರ್ಥಿಸಿ ಸುಮ್ಮನಾದರು</p>.<p><br />ಕವಿತೆ ಗೀಚಿದ ಕವಿಯನ್ನು<br />ಭೇಷ್ ಎಂದು ಬೆನ್ನುತಟ್ಟಿದರು<br />ಶಹಬ್ಬಾಸ್ ಎಂದು ಅಲಂಗಿಸಿಕೊಂಡರು<br />ವಾಹ್... ವಾಹ್... ಎಂದು <br />ಗುಣಗಾನ ಮಾಡಿದರು</p>.<p><br />ಆದರೆ ಯುದ್ಧದ ಹೆಸರಿನಲ್ಲಿ<br />ಆಕ್ರಮಣ ಜರುಗುತ್ತಲೇ ಇತ್ತು<br />ಶಾಂತಿಯ ಮಂತ್ರ <br />ಜಪಿಸುತ್ತ ಪಾರಿವಾಳ ಮಾತ್ರ<br />ಪಂಜರದಲ್ಲೆ ಉಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>