<p><em><strong>ಶಿವಕುಮಾರ ಸ್ವಾಮೀಜಿ ಬಗ್ಗೆ ಕವಿ ಡಾ.ಸಿದ್ಧಯ್ಯ ಪುರಾಣಿಕ ಅವರ ಕವನ ‘ಅಲ್ಪತನಕಳಿವಿಲ್ಲಿ’</strong></em></p>.<p class="rtecenter">–––</p>.<p>ಕವಿಸಯಮವೆನ್ನುವಿಯ ಸುರನದಿಯ? ಬಾ, ನೋಡು</p>.<p>ಸಿದ್ಧಗಂಗೆಯ ಯೋಗಿವರನ ನಡೆಯ|</p>.<p>ಕಲ್ಪನೆಯು ಎನ್ನುವಿಯ ಸುಧೆಯನ್ನು? ಬಾ, ಕೇಳು</p>.<p>ಶಿವಯೋಗಿ ಪುಂಗವನ ಸವಸಿರಿಯ ನುಡಿಯ|</p>.<p>ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,</p>.<p>ಸರ್ವರನ್ನು ಪ್ರೀತಿಸುವ ದಿವ್ಯಹೃದಯ|</p>.<p>ಗುರಿಯು ಸಕಲರ ಉದಯ, ವರವು ಸರ್ವರಿಗಭಯ.</p>.<p>ಶ್ರೀಮಠವು ಎಲ್ಲರಿಗೆ ನಿತ್ಯಾಶ್ರಯ|</p>.<p>ಏನೆಂಬೆ ಶಿವಕುಮಾರನ ಮೋಡಿ, ಗಾರುಡವ?</p>.<p>ಬರಿಗೈಯೆ ಬೊಕ್ಕಸವು, ನಿಧಿ ನಿಧಾನ!</p>.<p>ಲಕ್ಷ ಕರ ತೆಗೆದರೂ ತುಂಬಿರುವ ಜೋಳಿಗೆಯು</p>.<p>ಕೈಕೊಳುತಲಿದೆ ಪಂಚಪರಷುಗಳ ನಮನ|</p>.<p>ಧರ್ಮದೇರಿಗೆ ಶರಣದರ್ಶನದ ಕಟ್ಟೆಯಿದೆ</p>.<p>ಸಕಲ ಸದ್ಗತಿಯೆಂಬ ಸೋಪಾನವುಂಟು</p>.<p>ವಿದ್ಯೆಕಲೆಗಳ ಜಲದಿ ಅಧ್ಯಾತ್ಮದರವಿಂದ</p>.<p>ಶ್ರೀಮಠದ ಸರಸಿಯಲ್ಲಿ ಸೈಪು ನೂರೆಂಟು|</p>.<p>ಅಲ್ಪತನಕಳಿವಿಲ್ಲಿ| ಜಲ್ಪತನಕಡೆಯೆಲ್ಲಿ?</p>.<p>ಅತ್ಯುಚ್ಚ ಅನುಭಾವಿ ನೆಲೆಸಿರುವನಿಲ್ಲಿ</p>.<p>ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು,</p>.<p>ನಾಡಿನಾಚೆಗು ಶಿವದ ಬೆಳಕು ಚೆಲ್ಲಿ|</p>.<p><em><strong>–ಡಾ. ಸಿದ್ಧಯ್ಯ ಪುರಾಣಿಕ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><em><strong>ಶಿವಕುಮಾರ ಸ್ವಾಮೀಜಿ ಬಗ್ಗೆ ಕವಿ ಡಾ.ಸಿದ್ಧಯ್ಯ ಪುರಾಣಿಕ ಅವರ ಕವನ ‘ಅಲ್ಪತನಕಳಿವಿಲ್ಲಿ’</strong></em></p>.<p class="rtecenter">–––</p>.<p>ಕವಿಸಯಮವೆನ್ನುವಿಯ ಸುರನದಿಯ? ಬಾ, ನೋಡು</p>.<p>ಸಿದ್ಧಗಂಗೆಯ ಯೋಗಿವರನ ನಡೆಯ|</p>.<p>ಕಲ್ಪನೆಯು ಎನ್ನುವಿಯ ಸುಧೆಯನ್ನು? ಬಾ, ಕೇಳು</p>.<p>ಶಿವಯೋಗಿ ಪುಂಗವನ ಸವಸಿರಿಯ ನುಡಿಯ|</p>.<p>ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,</p>.<p>ಸರ್ವರನ್ನು ಪ್ರೀತಿಸುವ ದಿವ್ಯಹೃದಯ|</p>.<p>ಗುರಿಯು ಸಕಲರ ಉದಯ, ವರವು ಸರ್ವರಿಗಭಯ.</p>.<p>ಶ್ರೀಮಠವು ಎಲ್ಲರಿಗೆ ನಿತ್ಯಾಶ್ರಯ|</p>.<p>ಏನೆಂಬೆ ಶಿವಕುಮಾರನ ಮೋಡಿ, ಗಾರುಡವ?</p>.<p>ಬರಿಗೈಯೆ ಬೊಕ್ಕಸವು, ನಿಧಿ ನಿಧಾನ!</p>.<p>ಲಕ್ಷ ಕರ ತೆಗೆದರೂ ತುಂಬಿರುವ ಜೋಳಿಗೆಯು</p>.<p>ಕೈಕೊಳುತಲಿದೆ ಪಂಚಪರಷುಗಳ ನಮನ|</p>.<p>ಧರ್ಮದೇರಿಗೆ ಶರಣದರ್ಶನದ ಕಟ್ಟೆಯಿದೆ</p>.<p>ಸಕಲ ಸದ್ಗತಿಯೆಂಬ ಸೋಪಾನವುಂಟು</p>.<p>ವಿದ್ಯೆಕಲೆಗಳ ಜಲದಿ ಅಧ್ಯಾತ್ಮದರವಿಂದ</p>.<p>ಶ್ರೀಮಠದ ಸರಸಿಯಲ್ಲಿ ಸೈಪು ನೂರೆಂಟು|</p>.<p>ಅಲ್ಪತನಕಳಿವಿಲ್ಲಿ| ಜಲ್ಪತನಕಡೆಯೆಲ್ಲಿ?</p>.<p>ಅತ್ಯುಚ್ಚ ಅನುಭಾವಿ ನೆಲೆಸಿರುವನಿಲ್ಲಿ</p>.<p>ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು,</p>.<p>ನಾಡಿನಾಚೆಗು ಶಿವದ ಬೆಳಕು ಚೆಲ್ಲಿ|</p>.<p><em><strong>–ಡಾ. ಸಿದ್ಧಯ್ಯ ಪುರಾಣಿಕ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>