ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಈಗ ಪ್ರತಿ ವರ್ಷ ರಾಜ್ಯದ ಹೊರಗಿನ ಸರಾಸರಿ ಹತ್ತು ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಚನ ಸಾಹಿತ್ಯ ಪಠ್ಯವಾಗುತ್ತಿದೆ. ವಿದೇಶಗಳಲ್ಲಿ ಬೇರೆ ಭಾಷೆಗಳಲ್ಲಿ ವಚನ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಿ, ಕೇಳುತ್ತಿದ್ದಾರೆ. ಈಗ ಕನ್ನಡ ಸಾಹಿತ್ಯ ಅನುಕರಣೆಗೆ ಸೀಮಿತವಾಗಿಲ್ಲ. ಸಾಹಿತಿಗಳ ಆಲೋಚನಾ ಕ್ರಮವೂ ಬದಲಾಗಿದೆ’ ಎಂದರು.