ನಿವೃತ್ತ ಪೋಲಿಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಸಂತೆ ಉದ್ಘಾಟಿಸಲಿದ್ದಾರೆ. ನಿಶಾಂತ್ ಗುರವ್ ಗಾಂಧಿ ಭಜನೆ ನಡೆಸಿಕೊಡುವರು. ನೃತ್ಯ ಕಲಾವಿದೆ ಸುಹಾಸಿನಿ ಕೌಲಗಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅ. 3ರಂದು ಬೆಳಿಗ್ಗೆ 11ಕ್ಕೆ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’ ವಿಷಯ ಕುರಿತು ಚರ್ಚೆ ನಡೆಯಲಿದೆ. ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ‘ಮೆಟಫರ್ ರಾಚ’ದ ರವಿಕಿರಣ್, ಕಾಸ್ಕೋಮ್ ಸಂಸ್ಥೆಯ ಸ್ವಾಮಿನಾಥನ್ ವೈತಲಿಂಗಂ ಮತ್ತುವಸ್ತ್ರವಿನ್ಯಾಸಕಿ ಇಳಾ ದುಬೆ ಪಾಲ್ಗೊಳ್ಳುವರು. ಎರಡೂ ದಿನಗಳು ನೈಸರ್ಗಿಕವಾಗಿ ಬೆಳೆದ ಸೊಪ್ಪು– ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆ, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳ ಮಾರಾಟವಿರುತ್ತದೆ.