ಆದರೆ ಸಜ್ಜನಿಕೆ ಎನ್ನುವುದು ಯಾರ ದಿಟವಾದ ಸ್ವಭಾವವೋ ಅವರು ಎಂಥ ಸಮಯದಲ್ಲೂ ಒಂದೇ ರೀತಿಯಲ್ಲಿ ಇರುತ್ತಾರೆ. ಅವರಿಗೆ ಬಡತನವಿರಲಿ, ಸಿರಿತನವಿರಲಿ; ಅಧಿಕಾರದಲ್ಲಿರಲಿ, ಏಕಾಂತದಲ್ಲಿರಲಿ; ಆರೋಗ್ಯವಾಗಿರಲಿ, ಅನಾರೋಗ್ಯದಲ್ಲಿರಲಿ – ಅವರ ಅಂತಃಸತ್ವ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ. ಸಿರಿ ಬಂದಾಗ ಅವರು ಕುಗ್ಗುವುದೂ ಇಲ್ಲ, ಸಿರಿ ಹೋದಾಗ ಹಿಗ್ಗುವುದೂ ಇಲ್ಲ. ಪ್ರೀತಿ, ಆತ್ಮೀಯತೆ, ಸಹನೆ, ಸಹಾನುಭೂತಿ, ಕರುಣೆ, ಮಾನವೀಯ ಮೌಲ್ಯ – ಇವು ಹೀಗೆ ಬಂದು ಹಾಗೆ ಹೋಗುವಂಥ ಗುಣಗಳು ಅಲ್ಲ. ಇವು ನಮ್ಮಲ್ಲಿ ನಿಜವಾಗಿಯೂ ಮನೆ ಮಾಡಿದ್ದರೆ, ಹೊರಗಿನ ಏರುಪೇರುಗಳು ಅವನ್ನು ಏನೂ ಬದಲಿಸಲಾರವು.