ನಾನು ಪದ್ಯಗಳನ್ನು ಬರೆಯುವುದು ಗೊತ್ತಾಗಿ, ನಿಸಾರ್ ಅವರೇ ನನ್ನನ್ನು ತಮ್ಮ ಬಳಿ ಕರೆಸಿಕೊಂಡು ಪ್ರೋತ್ಸಾಹಿಸಿದ್ದರು. ನಮ್ಮ ಸಂಬಂಧ ನಿಕಟವಾಗಲು ಅದೇ ಕಾರಣ. ಅವರಿಲ್ಲದ ನಂತರವೂ ಸಂಬಂಧ ಹಾಗೇ ಇರುತ್ತದೆ. ನವ್ಯದ ವಿಜೃಂಭಣೆಯ ಕಾಲದಲ್ಲಿ ನಿಸಾರ್ ಬರೆಯಲು ಆರಂಭಿಸಿದರು. ಆದರೆ, ನವ್ಯದ ಸಂವಹನಶೀಲತೆ ಕಡಿಮೆ ಇತ್ತು. ಆಗ ನಿಸಾರ್ ಅವರು ವಿಮರ್ಶಕರಿಗೂ ಓದುಗರಿಗೂ ಪ್ರಿಯವಾಗುವ ಸುವರ್ಣ ಮಧ್ಯಮ ಮಾರ್ಗ ಹುಡುಕಿಕೊಂಡರು.