<p><em><strong>ಇರಿವ ಕೈದಿಂಗೆ ದಯೆ ಧರ್ಮದ ಮೊನೆಯುಂಟೆ?</strong></em></p>.<p><em><strong>ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ?</strong></em></p>.<p><em><strong>ಕೂಟವ ಕೂಡಿ ಸಮಯನೊಂದಲ್ಲಿ ಅಜಾತನ ಬಲ್ಲರೆ?</strong></em></p>.<p><em><strong>ಎನಗೆ ನಿಮ್ಮೊಳಗಿನ್ನೇತರ ಮಾತು?</strong></em></p>.<p><em><strong>ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು</strong></em></p>.<p><em><strong>ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಮಾಣು</strong></em></p>.<p>ಮುದ್ದಣ್ಣ ಎಂಬ ಪೂರ್ವನಾಮದ ಘಟ್ಟಿವಾಳಯ್ಯನ ವಚನವಿದು. 146 ವಚನಗಳನ್ನು ರಚಿಸಿರುವ ಈತನ ವ್ಯಕ್ತಿತ್ವದ ಹಿರಿಮೆಯ ಕುರಿತು ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮುಂತಾದವರು ಗುಣಗಾನ ಮಾಡಿದ್ದಾರೆ.</p>.<p>ನಡೆ, ನುಡಿ, ಅನುಭಾವ, ಆಚರಣೆ, ಅಭಿವ್ಯಕ್ತಿ – ಈ ಎಲ್ಲವುಗಳಲ್ಲೂ ಒಂದು ಗಟ್ಟಿಯಾದ ನಿಲುವನ್ನು ಸಾಧಿಸಿದ ಘಟ್ಟಿವಾಳಯ್ಯ ಶಿವಾನುಭವವನ್ನು ಸಾರುತ್ತ ನರ್ತನ ಕಾಯಕ ಮಾಡುತ್ತಿದ್ದ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನ್ನುವುದು ಘಟ್ಟಿವಾಳಯ್ಯನ ಅಂಕಿತ ನಾಮ. ಕೇಳುವುದಕ್ಕೆ ವಿಚಿತ್ರವಾಗಿರುವ ಈ ಅಂಕಿತವು ತನ್ನ ನಕಾರಾತ್ಮಕ ನೆಲೆಯಲ್ಲಿಯೇ ಸಕಾರಾತ್ಮಕ ಅಪೇಕ್ಷೆಯನ್ನು ಪ್ರತಿಪಾದಿಸುತ್ತದೆ. ಪ್ರಸ್ತುತ ವಚನದಲ್ಲಿ ನಿರ್ಮಲ ಹೃದಯಗಳ ಹುಡುಕಾಟದ ಬಯಕೆ ವ್ಯಕ್ತವಾಗುತ್ತದೆ.</p>.<p>ಕೈದು ಎಂದರೆ ಕತ್ತಿ. ಅದರ ಗುಣ ಇರಿಯುವುದು. ಅದಕ್ಕೆ ದಯೆ-ಧರ್ಮಗಳ ಪರಿಚಯವಿರುವುದಿಲ್ಲ. ನಿರ್ದಯತೆಯೇ ಅದರ ಜೀವಾಳ. ಕಾಳೋರಗ ಎಂದರೆ ಕೃಷ್ಣಸರ್ಪ. ಅದರ ದವಡೆಯಲ್ಲಿ ಘೋರ ವಿಷ ತುಂಬಿಕೊಂಡಿರುತ್ತದೆ. ಹಾವಿನ ಹಲ್ಲಿನಲ್ಲಿ ಅಮೃತ ಸಿಗಲು ಸಾಧ್ಯವಿದೆಯೆ? ಅಜಾತ ಎಂದರೆ ಶಿವ. ಕೂಟವ ಕೂಡಿ ಎಂದರೆ ಸಹವಾಸ ಮಾಡಿ ಅಂತ. ಈ ವಚನದ ಮಟ್ಟಿಗೆ ಇದು ದುಷ್ಟರ ಸಂಗಾತವನ್ನು ಸೂಚಿಸುತ್ತದೆ. ಕೆಟ್ಟವರ ಒಡನಾಡಿ ವೇಳೆಯನ್ನು ವ್ಯರ್ಥಗೊಳಿಸಿದರೆ ಶಿವನು ಸಿಗುವುದಿಲ್ಲ. ಸಮಯನೊಂದಲ್ಲಿ ಎಂಬ ಶಬ್ದವನ್ನು ಎಷ್ಟು ಸುಂದರವಾಗಿ ಬಳಸಿದ್ದಾರೆ.</p>.<p>ಅಕಾರಣಗಳಲ್ಲಿ ತೊಡಗಿಕೊಂಡರೆ ಮನುಷ್ಯನ ಆಯುಷ್ಯದ ಅಮೂಲ್ಯ ವೇಳೆ ನಷ್ಟವಾಗುತ್ತದೆ. ಇಂತಹ ಹಾನಿಯಾದಾಗ ಸಮಯ ಅಪವ್ಯಯವಾಗುತ್ತದೆ. ಈ ಕುರಿತು ಘಟ್ಟಿವಾಳಯ್ಯನಿಗೆ ತುಂಬಾ ಕೋಪವಿದೆ. ಆದ್ದರಿಂದ ಆತ ನಿಮ್ಮೊಳಗಿನ್ನೇತರ ಮಾತು ಎಂದು ಬೈಯುತ್ತಾನೆ. ಅಂತರಂಗ-ಬಹಿರಂಗಗಳಲ್ಲಿ ಅಂತರವಿರುವವರನ್ನು ವೇಷಧಾರಿಗಳೆಂದು ಜರೆಯುತ್ತಾನೆ. ದ್ವಂದ್ವ ನಡವಳಿಕೆಯ ವೇಷಧಾರಿಗಳು ಶಿವನ ಕೂಟ, ಎಂದರೆ ಶರಣರ ಒಡನಾಟಕ್ಕೆ ಅರ್ಹರಲ್ಲ. ಅವರನ್ನು ಹೊರಗಿಡಬೇಕು ಎಂಬುದು ಆತನ ಅಭಿಮತ.</p>.<p>ಉತ್ತಮ ಬದುಕಿಗಾಗಿ ಹೇಗೆ ಉತ್ತಮರ ಒಡನಾಟ ಅತ್ಯವಶ್ಯವೋ ಹಾಗೆ ದುಷ್ಟರನ್ನು, ಕಪಟಿಗಳನ್ನು ದೂರವಿಡುವುದು ಅವಶ್ಯ. ಕೆಡಕನ್ನುಂಟು ಮಾಡುವ ಗುಣವಿರುವವರಿಂದ ಒಳಿತನ್ನು ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಹೇಗೆ ಆಯುಧದ ತುದಿಯಲ್ಲಿ ದಯೆಗೆ ಜಾಗವಿಲ್ಲವೋ, ಹಾವಿನ ಹಲ್ಲಿನಲ್ಲಿ ಅಮೃತವಿರಲಾರದೋ – ಹಾಗೆಯೇ ದುಷ್ಟರು ಒಳಿತನ್ನು ಮಾಡಲಾರರು. ಆದ್ದರಿಂದಲೇ ಅವರ ಸಹವಾಸ ಮಾಡಿದರೆ ಪರಮಾತ್ಮ ಸಿಗಲು ಸಾಧ್ಯವಿಲ್ಲ ಎನ್ನುವುದು ಘಟ್ಟಿವಾಳಯ್ಯನ ವಚನದಲ್ಲಿ ವ್ಯಕ್ತವಾಗಿರುವ ಭಾವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಇರಿವ ಕೈದಿಂಗೆ ದಯೆ ಧರ್ಮದ ಮೊನೆಯುಂಟೆ?</strong></em></p>.<p><em><strong>ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ?</strong></em></p>.<p><em><strong>ಕೂಟವ ಕೂಡಿ ಸಮಯನೊಂದಲ್ಲಿ ಅಜಾತನ ಬಲ್ಲರೆ?</strong></em></p>.<p><em><strong>ಎನಗೆ ನಿಮ್ಮೊಳಗಿನ್ನೇತರ ಮಾತು?</strong></em></p>.<p><em><strong>ವೇಷಧಾರಿಗಳೆಲ್ಲ ನಿಮ್ಮ ಕೂಟಕ್ಕೆ ಹೊರಗು</strong></em></p>.<p><em><strong>ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಮಾಣು</strong></em></p>.<p>ಮುದ್ದಣ್ಣ ಎಂಬ ಪೂರ್ವನಾಮದ ಘಟ್ಟಿವಾಳಯ್ಯನ ವಚನವಿದು. 146 ವಚನಗಳನ್ನು ರಚಿಸಿರುವ ಈತನ ವ್ಯಕ್ತಿತ್ವದ ಹಿರಿಮೆಯ ಕುರಿತು ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ ಮುಂತಾದವರು ಗುಣಗಾನ ಮಾಡಿದ್ದಾರೆ.</p>.<p>ನಡೆ, ನುಡಿ, ಅನುಭಾವ, ಆಚರಣೆ, ಅಭಿವ್ಯಕ್ತಿ – ಈ ಎಲ್ಲವುಗಳಲ್ಲೂ ಒಂದು ಗಟ್ಟಿಯಾದ ನಿಲುವನ್ನು ಸಾಧಿಸಿದ ಘಟ್ಟಿವಾಳಯ್ಯ ಶಿವಾನುಭವವನ್ನು ಸಾರುತ್ತ ನರ್ತನ ಕಾಯಕ ಮಾಡುತ್ತಿದ್ದ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನ್ನುವುದು ಘಟ್ಟಿವಾಳಯ್ಯನ ಅಂಕಿತ ನಾಮ. ಕೇಳುವುದಕ್ಕೆ ವಿಚಿತ್ರವಾಗಿರುವ ಈ ಅಂಕಿತವು ತನ್ನ ನಕಾರಾತ್ಮಕ ನೆಲೆಯಲ್ಲಿಯೇ ಸಕಾರಾತ್ಮಕ ಅಪೇಕ್ಷೆಯನ್ನು ಪ್ರತಿಪಾದಿಸುತ್ತದೆ. ಪ್ರಸ್ತುತ ವಚನದಲ್ಲಿ ನಿರ್ಮಲ ಹೃದಯಗಳ ಹುಡುಕಾಟದ ಬಯಕೆ ವ್ಯಕ್ತವಾಗುತ್ತದೆ.</p>.<p>ಕೈದು ಎಂದರೆ ಕತ್ತಿ. ಅದರ ಗುಣ ಇರಿಯುವುದು. ಅದಕ್ಕೆ ದಯೆ-ಧರ್ಮಗಳ ಪರಿಚಯವಿರುವುದಿಲ್ಲ. ನಿರ್ದಯತೆಯೇ ಅದರ ಜೀವಾಳ. ಕಾಳೋರಗ ಎಂದರೆ ಕೃಷ್ಣಸರ್ಪ. ಅದರ ದವಡೆಯಲ್ಲಿ ಘೋರ ವಿಷ ತುಂಬಿಕೊಂಡಿರುತ್ತದೆ. ಹಾವಿನ ಹಲ್ಲಿನಲ್ಲಿ ಅಮೃತ ಸಿಗಲು ಸಾಧ್ಯವಿದೆಯೆ? ಅಜಾತ ಎಂದರೆ ಶಿವ. ಕೂಟವ ಕೂಡಿ ಎಂದರೆ ಸಹವಾಸ ಮಾಡಿ ಅಂತ. ಈ ವಚನದ ಮಟ್ಟಿಗೆ ಇದು ದುಷ್ಟರ ಸಂಗಾತವನ್ನು ಸೂಚಿಸುತ್ತದೆ. ಕೆಟ್ಟವರ ಒಡನಾಡಿ ವೇಳೆಯನ್ನು ವ್ಯರ್ಥಗೊಳಿಸಿದರೆ ಶಿವನು ಸಿಗುವುದಿಲ್ಲ. ಸಮಯನೊಂದಲ್ಲಿ ಎಂಬ ಶಬ್ದವನ್ನು ಎಷ್ಟು ಸುಂದರವಾಗಿ ಬಳಸಿದ್ದಾರೆ.</p>.<p>ಅಕಾರಣಗಳಲ್ಲಿ ತೊಡಗಿಕೊಂಡರೆ ಮನುಷ್ಯನ ಆಯುಷ್ಯದ ಅಮೂಲ್ಯ ವೇಳೆ ನಷ್ಟವಾಗುತ್ತದೆ. ಇಂತಹ ಹಾನಿಯಾದಾಗ ಸಮಯ ಅಪವ್ಯಯವಾಗುತ್ತದೆ. ಈ ಕುರಿತು ಘಟ್ಟಿವಾಳಯ್ಯನಿಗೆ ತುಂಬಾ ಕೋಪವಿದೆ. ಆದ್ದರಿಂದ ಆತ ನಿಮ್ಮೊಳಗಿನ್ನೇತರ ಮಾತು ಎಂದು ಬೈಯುತ್ತಾನೆ. ಅಂತರಂಗ-ಬಹಿರಂಗಗಳಲ್ಲಿ ಅಂತರವಿರುವವರನ್ನು ವೇಷಧಾರಿಗಳೆಂದು ಜರೆಯುತ್ತಾನೆ. ದ್ವಂದ್ವ ನಡವಳಿಕೆಯ ವೇಷಧಾರಿಗಳು ಶಿವನ ಕೂಟ, ಎಂದರೆ ಶರಣರ ಒಡನಾಟಕ್ಕೆ ಅರ್ಹರಲ್ಲ. ಅವರನ್ನು ಹೊರಗಿಡಬೇಕು ಎಂಬುದು ಆತನ ಅಭಿಮತ.</p>.<p>ಉತ್ತಮ ಬದುಕಿಗಾಗಿ ಹೇಗೆ ಉತ್ತಮರ ಒಡನಾಟ ಅತ್ಯವಶ್ಯವೋ ಹಾಗೆ ದುಷ್ಟರನ್ನು, ಕಪಟಿಗಳನ್ನು ದೂರವಿಡುವುದು ಅವಶ್ಯ. ಕೆಡಕನ್ನುಂಟು ಮಾಡುವ ಗುಣವಿರುವವರಿಂದ ಒಳಿತನ್ನು ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಹೇಗೆ ಆಯುಧದ ತುದಿಯಲ್ಲಿ ದಯೆಗೆ ಜಾಗವಿಲ್ಲವೋ, ಹಾವಿನ ಹಲ್ಲಿನಲ್ಲಿ ಅಮೃತವಿರಲಾರದೋ – ಹಾಗೆಯೇ ದುಷ್ಟರು ಒಳಿತನ್ನು ಮಾಡಲಾರರು. ಆದ್ದರಿಂದಲೇ ಅವರ ಸಹವಾಸ ಮಾಡಿದರೆ ಪರಮಾತ್ಮ ಸಿಗಲು ಸಾಧ್ಯವಿಲ್ಲ ಎನ್ನುವುದು ಘಟ್ಟಿವಾಳಯ್ಯನ ವಚನದಲ್ಲಿ ವ್ಯಕ್ತವಾಗಿರುವ ಭಾವ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>