ತಿರುಮಲಾರ್ಯನ ಅಪ್ರತಿಮ ಚರಿತೆ, ತಿರುಮಲಾರ್ಯನ ಚಿಕದೇವರಾಯ ವಂಶಾವಳಿ, ತಿರುಮಲಾರ್ಯನ ಚಿಕದೇವರಾಯನ ವಿಜಯ ಮತ್ತು ತಿರುಮಲಾರ್ಯನ ಶಾಸನಗಳ ಬಗ್ಗೆಯೂ ಈ ಕೃತಿಯು ಬೆಳಕು ಚೆಲ್ಲುತ್ತದೆ. ಪುಸ್ತಕದ ಮುನ್ನಡಿಯಲ್ಲಿಯೇ ಲೇಖಕರು ಕನ್ನಡ ಸಾಹಿತ್ಯದಲ್ಲಿ ಭಾಷಾಂತರ ಅಪರೂಪದ ಸ್ಥಾನ ಪಡೆದುಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ‘ಭಾಷಾಂತರ– ಕೆಲವು ವಿಚಾರಗಳು’ ಲೇಖನದಲ್ಲಿ ಮುಕ್ಕಾಲು ಪಾಲು ಅನುವಾದಗಳು ಮೂಲವನ್ನು ಪ್ರತಿಬಿಂಬಿಸಲು ವಿಫಲವಾಗಿರುವ ಬಗ್ಗೆ ಹೇಳಿದ್ದಾರೆ. ಹ್ಯಾಮ್ಲೆಟ್ ಮತ್ತು ರಕ್ತಾಕ್ಷಿ ನಾಟಕಗಳಲ್ಲಿ ಬರುವ ಕೆಲವು ಸಮಾನ ಸಂಗತಿಗಳ ಬಗ್ಗೆಯೂ ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.