ಕೊನೆಯಲ್ಲಿ ಹೇಳಬೇಕಾದ್ದನ್ನು ನೇರವಾಗಿ ಹೇಳದೆ ಸೂಚ್ಯವಾಗಿ ಧ್ವನಿಸುವ ಗುಣ ಮತ್ತು ಕ್ರಮವನ್ನು ಕಥೆಗಾರ್ತಿ ಕಾಯ್ದುಕೊಂಡಿದ್ದಾರೆ.ಈ ಗಟ್ಟಿತನವೇ ಎಲ್ಲ ಕಥೆಗಳಲ್ಲಿಯೂ ಢಾಳಾಗಿಯೂ ಕಾಣಿಸುತ್ತವೆ ಮತ್ತು ಓದುಗರನ್ನು ಕಾಡುತ್ತವೆ. ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ, ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಸುತ್ತಾ ಸುಖ ನೀಡುವ ಕಥೆಗಳು ಇವು ಎಂದರೆ ಉತ್ಪ್ರೇಕ್ಷೆ ಎನಿಸದರು.