ಬರಗಾಲದ ದಿನಗಳಲ್ಲಿ ನೀರಿನ ಆಶ್ರಯವನ್ನರಸಿ ಗುಳೆ ಹೊರಟ ಜೀತದಾಳುಗಳ ತಂಡವೊಂದು ಶೋಷಕ ವರ್ಗದ ಕೈಸೆರೆಯಾಗಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿ, ಕೊನೆಗೆ ಕಾಡು ಪಾಲಾಗುತ್ತದೆ. ಪಾಳೆಗಾರಿಕೆಯ ಕ್ರೌರ್ಯದ ರುದ್ರನರ್ತನವು ಮನುಷ್ಯನಬಡತನ, ಅನರಕ್ಷತೆ, ಅಸಹಾಯಕತೆಯನ್ನು ಅಣಕಿಸುತ್ತದೆ. ಜೀವ ಮತ್ತು ಜೀವನ ಉಳಿಸಿಕೊಳ್ಳಲು ರಾತ್ರೋರಾತ್ರಿ ಜಾಗ ಖಾಲಿ ಮಾಡುವ ಅಲೆಮಾರಿ ಜನರ ಬವಣೆ ವಾಸ್ತವ ಜಗತ್ತಿಗೆ ಹತ್ತಿರವಾಗಿದೆ. ಈ ವಲಸಿಗರಿಗೆಊರು ಸೇರುವ ದಾರಿಯೂ ಸಿಗದೆ, ಕುಡಿಯಲು ಗುಟುಕು ನೀರು ಸಿಗದೆ, ಆಹಾರವೂ ಸಿಗದೆಕಾಡಿನಲ್ಲಿಒಬ್ಬೊಬ್ಬರೇಧಾರುಣವಾಗಿ ಜೀವ ಕಳೆದುಕೊಳ್ಳುವುದು ಹೃದಯ ಹಿಂಡುತ್ತದೆ.