<p>ವಾಣಿಜ್ಯ ಬೆಳೆ ಅಡಿಕೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ ಏನು ಅನ್ನುವುದರ ಬಗ್ಗೆ ವಿಸ್ತಾರವಾಗಿ ಚರ್ಚಿಸಿದೆ ಈ ಕೃತಿ. ಇದು ಕೇವಲ ಆಕರ ಗ್ರಂಥಗಳ ಉಲ್ಲೇಖಿತ ಕೃತಿ ಅಲ್ಲ. ಬದಲಾಗಿ ಸ್ವತಃ ಅಡಿಕೆ ಬೆಳೆಗಾರರಾಗಿ, ವ್ಯಾಪಾರಿಯಾಗಿ, ಇದೇ ಕ್ಷೇತ್ರದ ಅಧ್ಯಯನ, ವಿಚಾರ ವಿನಿಮಯಕ್ಕಾಗಿ ಜಗತ್ತು ಸುತ್ತಿ ಬರೆದ ಅನುಭವದ ಬುತ್ತಿ. </p>.<p>ಬೆಳೆಗಾರರ, ಪ್ರಮುಖ ರೈತರ, ಸಂಶೋಧಕರ ವಿಚಾರ ವಿನಿಮಯದ ಸಂಗತಿಗಳು ಇಲ್ಲಿವೆ. ಅಡಿಕೆಯ ಮೌಲ್ಯವರ್ಧನೆ ಬಗ್ಗೆ ಚರ್ಚೆ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಆಗಬೇಕಾದ ಪ್ರಗತಿ, ಆಮದು– ರಫ್ತು ನೀತಿಯಲ್ಲಾಗಬೇಕಾದ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು, ವಿವರಣೆ, ಸಲಹೆಗಳು ಇಲ್ಲಿವೆ. ಅಡಿಕೆ ಬೆಳೆ ಕುರಿತು ಪ್ರಮುಖ ಮಾರುಕಟ್ಟೆಗಳ ವರ್ಷವಾರು ದರಪಟ್ಟಿ, ರಾಜ್ಯದಲ್ಲಿರುವ ಅಡಿಕೆ ಬೆಳೆಯ ವಿಸ್ತೀರ್ಣವಾರು ವಿವರ, ಬೆಳೆಗೆ ತಗಲುವ ರೋಗಗಳ ಮಾಹಿತಿಗಳನ್ನು ಕೃತಿ ಹೊಂದಿದೆ.</p>.<p>ಲೇಖಕರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅಡಿಕೆ ಕೃಷಿಯ ಬಗ್ಗೆ ಬರೆದ ಮೊದಲ ಸಂಶೋಧನಾ ಪ್ರಬಂಧ ಇದಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಸಿಕ್ಕಿದೆ. ಅಡಿಕೆ ಕೃಷಿ ಆಸಕ್ತರಿಗೆ ಅನುಕೂಲವಾಗಬಲ್ಲ ಕೃತಿ ಇದಾಗಿದೆ. ಕೃತಿಯ ಕೊನೆಯಲ್ಲಿ ಕೃಷಿ ಕ್ಷೇತ್ರದ ಕುರಿತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಇಂದಿಗೂ ಪ್ರಸ್ತುತ.</p>.<p class="rtecenter">***</p>.<p class="rtecenter"><strong>ಕೃತಿ:</strong> ಕರ್ನಾಟಕದಲ್ಲಿ ಅಡಿಕೆ ಕೃಷಿ<br /><strong>ಲೇ: </strong>ಡಾ.ಕಡಿದಾಳ್ ಗೋಪಾಲ್<br /><strong>ಪ್ರ: </strong>ಸಹ್ಯಾದ್ರಿ ಪ್ರಕಾಶನ, ಶಿವಮೊಗ್ಗ<br />ಸಂ. 9845537070</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಣಿಜ್ಯ ಬೆಳೆ ಅಡಿಕೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ ಏನು ಅನ್ನುವುದರ ಬಗ್ಗೆ ವಿಸ್ತಾರವಾಗಿ ಚರ್ಚಿಸಿದೆ ಈ ಕೃತಿ. ಇದು ಕೇವಲ ಆಕರ ಗ್ರಂಥಗಳ ಉಲ್ಲೇಖಿತ ಕೃತಿ ಅಲ್ಲ. ಬದಲಾಗಿ ಸ್ವತಃ ಅಡಿಕೆ ಬೆಳೆಗಾರರಾಗಿ, ವ್ಯಾಪಾರಿಯಾಗಿ, ಇದೇ ಕ್ಷೇತ್ರದ ಅಧ್ಯಯನ, ವಿಚಾರ ವಿನಿಮಯಕ್ಕಾಗಿ ಜಗತ್ತು ಸುತ್ತಿ ಬರೆದ ಅನುಭವದ ಬುತ್ತಿ. </p>.<p>ಬೆಳೆಗಾರರ, ಪ್ರಮುಖ ರೈತರ, ಸಂಶೋಧಕರ ವಿಚಾರ ವಿನಿಮಯದ ಸಂಗತಿಗಳು ಇಲ್ಲಿವೆ. ಅಡಿಕೆಯ ಮೌಲ್ಯವರ್ಧನೆ ಬಗ್ಗೆ ಚರ್ಚೆ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಆಗಬೇಕಾದ ಪ್ರಗತಿ, ಆಮದು– ರಫ್ತು ನೀತಿಯಲ್ಲಾಗಬೇಕಾದ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು, ವಿವರಣೆ, ಸಲಹೆಗಳು ಇಲ್ಲಿವೆ. ಅಡಿಕೆ ಬೆಳೆ ಕುರಿತು ಪ್ರಮುಖ ಮಾರುಕಟ್ಟೆಗಳ ವರ್ಷವಾರು ದರಪಟ್ಟಿ, ರಾಜ್ಯದಲ್ಲಿರುವ ಅಡಿಕೆ ಬೆಳೆಯ ವಿಸ್ತೀರ್ಣವಾರು ವಿವರ, ಬೆಳೆಗೆ ತಗಲುವ ರೋಗಗಳ ಮಾಹಿತಿಗಳನ್ನು ಕೃತಿ ಹೊಂದಿದೆ.</p>.<p>ಲೇಖಕರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅಡಿಕೆ ಕೃಷಿಯ ಬಗ್ಗೆ ಬರೆದ ಮೊದಲ ಸಂಶೋಧನಾ ಪ್ರಬಂಧ ಇದಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಸಿಕ್ಕಿದೆ. ಅಡಿಕೆ ಕೃಷಿ ಆಸಕ್ತರಿಗೆ ಅನುಕೂಲವಾಗಬಲ್ಲ ಕೃತಿ ಇದಾಗಿದೆ. ಕೃತಿಯ ಕೊನೆಯಲ್ಲಿ ಕೃಷಿ ಕ್ಷೇತ್ರದ ಕುರಿತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಇಂದಿಗೂ ಪ್ರಸ್ತುತ.</p>.<p class="rtecenter">***</p>.<p class="rtecenter"><strong>ಕೃತಿ:</strong> ಕರ್ನಾಟಕದಲ್ಲಿ ಅಡಿಕೆ ಕೃಷಿ<br /><strong>ಲೇ: </strong>ಡಾ.ಕಡಿದಾಳ್ ಗೋಪಾಲ್<br /><strong>ಪ್ರ: </strong>ಸಹ್ಯಾದ್ರಿ ಪ್ರಕಾಶನ, ಶಿವಮೊಗ್ಗ<br />ಸಂ. 9845537070</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>