ಸಾವಯವ ಕೃಷಿ, ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಶಾಶ್ವತ ಕೃಷಿ, ಜೀವಚೈತನ್ಯ ಕೃಷಿ ಹೀಗೆ ಹಲವು ಕವಲುಗಳಲ್ಲಿ ಈ ಅಭಿಯಾನ ಬೆಳೆಯುತ್ತಿರುವಾಗ ಅವರು ಅವೆಲ್ಲವುಗಳ ಸಾರದ ಜತೆಗೆ ಪಾರಂಪರಿಕ ಕೃಷಿಯ ಸತ್ವವನ್ನೂ ಅರಗಿಸಿಕೊಂಡು, ಆರೋಗ್ಯಪೂರ್ಣ ಫಸಲು ಬೆಳೆಯುವ ವಿಧಾನವನ್ನು ರೈತ ಸಮುದಾಯದೊಂದಿಗೆ ಸದಾ ಹಂಚಿಕೊಳ್ಳುತ್ತಿದ್ದರು. ಆಸಕ್ತರ ಪಾಲಿಗೆ ಅವರ ತೋಟ ಒಂದು ವಿಶಿಷ್ಟ ತರಬೇತಿ ಕೇಂದ್ರವಾಗಿ ರೂಪುಗೊಂಡಿತ್ತು.