ಆನರ್ತನಂ ‘ಗ್ರೀಷ್ಮ ಗೀತಂ’ ಮೂಲಕ ಆರಂಭಗೊಳ್ಳಲಿದೆ. ಕಾಳಿದಾಸನ ‘ಋತುಸಂಹಾರ’ ಆಧರಿಸಿ ಬೇಸಿಗೆಯ ಋತುವಿನ ಕುರಿತ ಕಾವ್ಯಾತ್ಮಕ ಒಡಿಸ್ಸಿ ನೃತ್ಯ ಇದಾಗಿದೆ. ಗ್ರೀಷ್ಮ ಗೀತಂ ಬೇಸಿಗೆಯ ಋತುವಿನ ಪ್ರಖರ, ಹೊಳಪುಳ್ಳ ಹಾಗೂ ವರ್ಣರಂಜಿತ ಬಣ್ಣಗಳನ್ನು ಅನಾವರಣಗೊಳಿಸುತ್ತದೆ. ನಂತರದಲ್ಲಿ ಶರ್ಮಿಳಾ ಮುಖರ್ಜಿ ಅವರ ಏಕವ್ಯಕ್ತಿ ಅಭಿನಯ ‘ಕೈಕೇಯಿ’ ಪ್ರದರ್ಶನಗೊಳ್ಳಲಿದೆ. ರಾಮಾಯಣದ ಅತ್ಯಂತ ದುಷ್ಟ ಪಾತ್ರವನ್ನು ಸಕಾರಾತ್ಮಕವಾಗಿ ತೋರಿಸುವ ಪ್ರಯತ್ನವೇ ಕೈಕೇಯಿ. ಕೈಕೇಯಿಯನ್ನು ಒಬ್ಬ ಪ್ರೀತಿಯ ಪತ್ನಿಯಾಗಿ, ವಾತ್ಸಲ್ಯಭರಿತ ತಾಯಿಯಾಗಿ, ಕರ್ತವ್ಯನಿಷ್ಠ ರಾಣಿಯಾಗಿ ಹಾಗೂ ವೀರ ಹೋರಾಟಗಾರ್ತಿಯಾಗಿ ತೋರಿಸುವ ಮೂಲಕ ಆಕೆಯ ಸಾಂಪ್ರದಾಯಿಕ ಚಿತ್ರಣವನ್ನು ಮರುಪರಿಶೀಲಿಸುವ ಪ್ರಯತ್ನ ಮಾಡಲಾಗುತ್ತದೆ.