<p><strong>ನವದೆಹಲಿ (ಪಿಟಿಐ): </strong>2011-12ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ 20 ಲಕ್ಷ ಟನ್ ಹೆಚ್ಚುವರಿ ಉತ್ಪಾದನೆಯಾಗಿದೆ.<br /> <br /> ಅಕ್ಕಿ ಮತ್ತು ಗೋಧಿ ಬಂಪರ್ ಉತ್ಪಾದನೆಯಾಗಿದ್ದು, ದೇಶದ ಒಟ್ಟಾರೆ ಆಹಾರಧಾನ್ಯ ಉತ್ಪಾದನೆ 252.56 ದಶಲಕ್ಷ ಟನ್ ಆಗಿದೆ. ಅಕ್ಕಿಯ ಉತ್ಪಾದನೆ 102.75 ದಶಲಕ್ಷ ಟನ್ನಿಂದ 103.41ದಶಲಕ್ಷ ಟನ್ಗೆ ಏರಿದೆ. ಗೋಧಿ ಉತ್ಪಾದನೆಯು 88.31 ದಶಲಕ್ಷ ಟನ್ನಿಂದ 90.23 ದಶಲಕ್ಷ ಟನ್ಗೆ ಏರಿದೆ.<br /> <br /> `ಏಕದಳ ಧಾನ್ಯ, ಬೇಳೆಕಾಳುಗಳ ಉತ್ಪಾದನೆ ಸ್ವಲ್ಪ ಇಳಿಮುಖವಾಗಿದೆ. ದೇಶದ ಒಟ್ಟಾರೆ ಆಹಾರಧಾನ್ಯ ಸಂಗ್ರಹ ತುಂಬಾ ತೃಪ್ತಿಕರವಾಗಿದ್ದು, ಇದಕ್ಕಾಗಿ ನಾನು ರೈತರನ್ನು ಅಭಿನಂದಿಸುತ್ತೇನೆ~ ಎಂದು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.<br /> <br /> ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಈಗ ದೇಶದಲ್ಲಿ ಆಹಾರಧಾನ್ಯ ಸಂಗ್ರಹಿಸಿ ಇಡುವುದೇ ದೊಡ್ಡ ಸಮಸ್ಯೆಯಾಗಿದೆ. ಆಹಾರಧಾನ್ಯಗಳು ಹಾಳಾಗದಂತೆ ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>2011-12ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ 20 ಲಕ್ಷ ಟನ್ ಹೆಚ್ಚುವರಿ ಉತ್ಪಾದನೆಯಾಗಿದೆ.<br /> <br /> ಅಕ್ಕಿ ಮತ್ತು ಗೋಧಿ ಬಂಪರ್ ಉತ್ಪಾದನೆಯಾಗಿದ್ದು, ದೇಶದ ಒಟ್ಟಾರೆ ಆಹಾರಧಾನ್ಯ ಉತ್ಪಾದನೆ 252.56 ದಶಲಕ್ಷ ಟನ್ ಆಗಿದೆ. ಅಕ್ಕಿಯ ಉತ್ಪಾದನೆ 102.75 ದಶಲಕ್ಷ ಟನ್ನಿಂದ 103.41ದಶಲಕ್ಷ ಟನ್ಗೆ ಏರಿದೆ. ಗೋಧಿ ಉತ್ಪಾದನೆಯು 88.31 ದಶಲಕ್ಷ ಟನ್ನಿಂದ 90.23 ದಶಲಕ್ಷ ಟನ್ಗೆ ಏರಿದೆ.<br /> <br /> `ಏಕದಳ ಧಾನ್ಯ, ಬೇಳೆಕಾಳುಗಳ ಉತ್ಪಾದನೆ ಸ್ವಲ್ಪ ಇಳಿಮುಖವಾಗಿದೆ. ದೇಶದ ಒಟ್ಟಾರೆ ಆಹಾರಧಾನ್ಯ ಸಂಗ್ರಹ ತುಂಬಾ ತೃಪ್ತಿಕರವಾಗಿದ್ದು, ಇದಕ್ಕಾಗಿ ನಾನು ರೈತರನ್ನು ಅಭಿನಂದಿಸುತ್ತೇನೆ~ ಎಂದು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.<br /> <br /> ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಈಗ ದೇಶದಲ್ಲಿ ಆಹಾರಧಾನ್ಯ ಸಂಗ್ರಹಿಸಿ ಇಡುವುದೇ ದೊಡ್ಡ ಸಮಸ್ಯೆಯಾಗಿದೆ. ಆಹಾರಧಾನ್ಯಗಳು ಹಾಳಾಗದಂತೆ ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>