<p>ಮಡಿಕೇರಿ: ಅಡಿಕೆ ಪುನಃಶ್ಚೇತನದಡಿ ಪ್ರತಿ ಎಕರೆಗೆ ರೂ6,000 ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 700 ಜನ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದ್ದು, ಇನ್ನುಳಿದ ರೈತರಿಗೆ ಮಾರ್ಚ್ 15ರೊಳಗೆ ಸಹಾಯಧನ ನೀಡಲಾಗು ವುದು ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.<br /> <br /> ಸಂಪಾಜೆಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪಯಶ್ವಿನಿ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಸಹಾಯಧನ ಕೋರಿ ಸಂಪಾಜೆ ಗ್ರಾ.ಪಂ.ನಿಂದ 150 ಅರ್ಜಿ, ಚೆಂಬು ಗ್ರಾ.ಪಂ.ನಿಂದ 600 ಅರ್ಜಿ, ಪೆರಾಜೆ ಗ್ರಾ.ಪಂ.ನಿಂದ 175 ಒಟ್ಟು 1,025 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಹೇಳಿದರು.<br /> <br /> ಅಡಿಕೆಗೆ ತಗುಲಿರುವ ಹಳದಿ ರೋಗಕ್ಕೆ ಇದುವರೆಗೆ ಯಾವುದೇ ಮದ್ದು ಕಂಡುಹಿಡಿಯಲಾಗಿಲ್ಲ. ಹಳದಿ ರೋಗ ನಿವಾರಣೆಯಾಗುತ್ತಿಲ್ಲವೆಂದು ರೈತರು ಕಂಗಾ ಲಾಗದೆ ಪರ್ಯಾಯ ಬೆಳೆಗಳಾದ ಬಾಳೆ, ತೆಂಗು ಬೆಳೆದ ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಹೇಳಿದರು. <br /> <br /> ಚೆಂಬು, ಪೆರಾಜೆ, ಸಂಪಾಜೆ ವ್ಯಾಪ್ತಿಯಲ್ಲಿ ಸಣ್ಣನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗುತ್ತಿದೆ. ಸಮುದಾಯ ಭವನ ಹಾಗೂ ರುದ್ರಭೂಮಿಗೆ ಆಗ್ರಹಿಸುತ್ತಿರುವ ಪಂಚಾಯಿತಿಗಳು ಜಾಗವನ್ನು ಗುರುತಿಸಿ, ವರದಿಯನ್ನು ನೀಡಿದರೆ ಅವುಗಳನ್ನು ಮಂಜೂರು ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು. <br /> <br /> ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆಗೂಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಇದುವರೆಗೆ 400 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದೇವೆ. ಇದರ ಸದುಪಯೋಗವಾಗಲಿ ಎಂದು ಹಾರೈಸಿದರು. <br /> <br /> <strong>ನಾಗರಹೊಳೆ ಕಾಳ್ಗಿಚ್ಚು:</strong> ನಾಗರಹೊಳೆ ಅರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗುವ ಸಂಭವ ಕುರಿತು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೆ, ಆದರೆ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದ ಪರಿಣಾಮವಾಗಿ ಇಂದು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿದೆ ಎಂದು ಅವರು ವಿಷಾದಿಸಿದರು. <br /> <br /> ಕಡಮಕಲ್ ರಸ್ತೆ ಮುಂಚೆಯಿಂದಲೇ ಇತ್ತು. ಅಲ್ಲಿನ ಗಿರಿಜನರ ಬೇಡಿಕೆಯಂತೆ ನಾವು ಇದನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರಯತ್ನಿಸಿದ್ದೇವು. ಅದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಿದರು ಎಂದು ಅವರು ಹೇಳಿದರು.<br /> <br /> ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವವರು ಗಿರಿಜನರ ಜೊತೆ ವಾಸವಿದ್ದು ತೋರಿಸಲಿ ಎಂದು ಸವಾಲು ಹಾಕಿದರು.<br /> <br /> <strong>ನಾನೇಕೆ ರಾಜೀನಾಮೆ ನೀಡಲಿ?</strong><br /> ಇತ್ತೀಚೆಗೆ ಪ್ರತಿಯೊಂದು ಮಾತಿಗೂ ವಿರೋಧ ಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ. ನನ್ನ ಕ್ಷೇತ್ರದ ಜನರ ಆಶೀರ್ವಾದ ಇದ್ದರೆ ಪೂರ್ಣಾವಧಿಯವರೆಗೆ ಸ್ಪೀಕರ್ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದರು. <br /> <br /> ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಬಾಲಚಂದ್ರ ಕಳಗಿ ಸ್ವಾಗತಿಸಿದರು. ಜಿ.ಪಂ. ಸದಸ್ಯರಾದ ಬಬ್ಬೀರ ಸರಸ್ವತಿ, ಎಸ್.ಎನ್. ರಾಜಾರಾವ್, ತಾ.ಪಂ ಸದಸ್ಯೆ ಪಿ.ಎಂ. ಯಶೋಧ ಮೋನಪ್ಪ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ತಿರುಮಲ್ಲೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಅಡಿಕೆ ಪುನಃಶ್ಚೇತನದಡಿ ಪ್ರತಿ ಎಕರೆಗೆ ರೂ6,000 ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 700 ಜನ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದ್ದು, ಇನ್ನುಳಿದ ರೈತರಿಗೆ ಮಾರ್ಚ್ 15ರೊಳಗೆ ಸಹಾಯಧನ ನೀಡಲಾಗು ವುದು ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.<br /> <br /> ಸಂಪಾಜೆಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪಯಶ್ವಿನಿ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಸಹಾಯಧನ ಕೋರಿ ಸಂಪಾಜೆ ಗ್ರಾ.ಪಂ.ನಿಂದ 150 ಅರ್ಜಿ, ಚೆಂಬು ಗ್ರಾ.ಪಂ.ನಿಂದ 600 ಅರ್ಜಿ, ಪೆರಾಜೆ ಗ್ರಾ.ಪಂ.ನಿಂದ 175 ಒಟ್ಟು 1,025 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಹೇಳಿದರು.<br /> <br /> ಅಡಿಕೆಗೆ ತಗುಲಿರುವ ಹಳದಿ ರೋಗಕ್ಕೆ ಇದುವರೆಗೆ ಯಾವುದೇ ಮದ್ದು ಕಂಡುಹಿಡಿಯಲಾಗಿಲ್ಲ. ಹಳದಿ ರೋಗ ನಿವಾರಣೆಯಾಗುತ್ತಿಲ್ಲವೆಂದು ರೈತರು ಕಂಗಾ ಲಾಗದೆ ಪರ್ಯಾಯ ಬೆಳೆಗಳಾದ ಬಾಳೆ, ತೆಂಗು ಬೆಳೆದ ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಹೇಳಿದರು. <br /> <br /> ಚೆಂಬು, ಪೆರಾಜೆ, ಸಂಪಾಜೆ ವ್ಯಾಪ್ತಿಯಲ್ಲಿ ಸಣ್ಣನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗುತ್ತಿದೆ. ಸಮುದಾಯ ಭವನ ಹಾಗೂ ರುದ್ರಭೂಮಿಗೆ ಆಗ್ರಹಿಸುತ್ತಿರುವ ಪಂಚಾಯಿತಿಗಳು ಜಾಗವನ್ನು ಗುರುತಿಸಿ, ವರದಿಯನ್ನು ನೀಡಿದರೆ ಅವುಗಳನ್ನು ಮಂಜೂರು ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು. <br /> <br /> ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆಗೂಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಇದುವರೆಗೆ 400 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದೇವೆ. ಇದರ ಸದುಪಯೋಗವಾಗಲಿ ಎಂದು ಹಾರೈಸಿದರು. <br /> <br /> <strong>ನಾಗರಹೊಳೆ ಕಾಳ್ಗಿಚ್ಚು:</strong> ನಾಗರಹೊಳೆ ಅರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗುವ ಸಂಭವ ಕುರಿತು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೆ, ಆದರೆ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದ ಪರಿಣಾಮವಾಗಿ ಇಂದು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿದೆ ಎಂದು ಅವರು ವಿಷಾದಿಸಿದರು. <br /> <br /> ಕಡಮಕಲ್ ರಸ್ತೆ ಮುಂಚೆಯಿಂದಲೇ ಇತ್ತು. ಅಲ್ಲಿನ ಗಿರಿಜನರ ಬೇಡಿಕೆಯಂತೆ ನಾವು ಇದನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರಯತ್ನಿಸಿದ್ದೇವು. ಅದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಿದರು ಎಂದು ಅವರು ಹೇಳಿದರು.<br /> <br /> ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವವರು ಗಿರಿಜನರ ಜೊತೆ ವಾಸವಿದ್ದು ತೋರಿಸಲಿ ಎಂದು ಸವಾಲು ಹಾಕಿದರು.<br /> <br /> <strong>ನಾನೇಕೆ ರಾಜೀನಾಮೆ ನೀಡಲಿ?</strong><br /> ಇತ್ತೀಚೆಗೆ ಪ್ರತಿಯೊಂದು ಮಾತಿಗೂ ವಿರೋಧ ಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ. ನನ್ನ ಕ್ಷೇತ್ರದ ಜನರ ಆಶೀರ್ವಾದ ಇದ್ದರೆ ಪೂರ್ಣಾವಧಿಯವರೆಗೆ ಸ್ಪೀಕರ್ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದರು. <br /> <br /> ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಬಾಲಚಂದ್ರ ಕಳಗಿ ಸ್ವಾಗತಿಸಿದರು. ಜಿ.ಪಂ. ಸದಸ್ಯರಾದ ಬಬ್ಬೀರ ಸರಸ್ವತಿ, ಎಸ್.ಎನ್. ರಾಜಾರಾವ್, ತಾ.ಪಂ ಸದಸ್ಯೆ ಪಿ.ಎಂ. ಯಶೋಧ ಮೋನಪ್ಪ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ತಿರುಮಲ್ಲೇಶ್ವರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>