<p> ಮುಂಬೈ (ಪಿಟಿಐ): ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆಯ ಕಾರ್ಯಕರ್ತರು ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಸಲುವಾಗಿ ಅಣ್ಣಾ ಹಜಾರೆ ತಂಡದ ಸದಸ್ಯರು `ಅಣ್ಣಾ ಎಸ್ಎಂಎಸ್ ಕಾರ್ಡ್~ ಎಂಬ ಆಂದೋಲವನ್ನು ಆರಂಭಿಸಿದ್ದಾರೆ.<br /> <br /> ಈ ಮೂಲಕ ಸಾರ್ವಜನಿಕರಿಗೆ ತಮ್ಮ ಸಂಘಟನೆ ನಡೆಸುವ ಚಳುವಳಿಗಳ ಕುರಿತು ಪ್ರತಿದಿನ ಮಾಹಿತಿ ನೀಡಲು ಅಣ್ಣಾ ತಂಡದ ಸದಸ್ಯರು ಮುಂದಾಗಿದ್ದಾರೆ. <br /> <br /> `ನಾವು ಒಂದು ಕೋಟಿ ಕಾರ್ಡ್ಗಳನ್ನು ಸಂಗ್ರಹಿಸಿದ್ದೇವೆ. ಪ್ರತಿ ಕಾರ್ಡ್ ಬೆಲೆ ರೂ 20. `ಭಷ್ಟಾಚಾರ ವಿರುದ್ಧದ ಭಾರತ ಚಳವಳಿ~ ಕಾರ್ಯಕರ್ತರು ಈ ಕಾರ್ಡ್ನ್ನು ಜನರಿಗೆ ತಲುಪಿಸುತ್ತಾರೆ~ ಎಂದು ಹಜಾರೆ ಸಹವರ್ತಿ ದತ್ತಾ ಅವಾರಿ ಅವರು ರಾಳೇಗಣ ಸಿದ್ದಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.<br /> <br /> ಕಾರ್ಡ್ ಹೊಂದಿರುವವರಿಗೆ ಪ್ರತಿದಿನ `ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆ~ಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ~ ಎಂದು ಅವರು ವಿವರಿಸಿದರು.<br /> <br /> `ಕಾರ್ಡ್ ಪಡೆದವರು ಅದರೊಳಗಿರುವ ಕ್ರಮ ಸಂಖ್ಯೆಯನ್ನು 9223334545ಗೆ ಎಸ್ಎಂಎಸ್ ಮಾಡಬೇಕು. ಆಗ ಅವರ ಹೆಸರು ನೋಂದಣಿಯಾಗುತ್ತದೆ. ನೋಂದಾಯಿತ ವ್ಯಕ್ತಿಗಳಿಗೆ ಅಣ್ಣಾ ಚಳವಳಿ ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳ ವಿವರವನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಳುಹಿಸಲಾಗುತ್ತದೆ~ ಎಂದು ಅವರು ಮಾಹಿತಿ ನೀಡಿದರು.<br /> <br /> `ಪ್ರಸ್ತುತ ಕಾರ್ಡ್ಗಳನ್ನು ದೆಹಲಿ ಮತ್ತು ಚೆನ್ನೈಗೆ ಕಳುಹಿಸಲಾಗಿದೆ. ಅಲ್ಲಿಂದ ದೇಶದ ವಿವಿಧ ರಾಜ್ಯಗಳಿಗೆ ವಿತರಿಸಲಾಗುತ್ತದೆ. ಈ ಕಾರ್ಡ್ ಮಾರಾಟ ಅಥವಾ ವಿತರಣೆಯಿಂದ ನಾವು ಯಾವುದೇ ಲಾಭ ಗಳಿಸುತ್ತಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಮುಂಬೈ (ಪಿಟಿಐ): ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆಯ ಕಾರ್ಯಕರ್ತರು ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಸಲುವಾಗಿ ಅಣ್ಣಾ ಹಜಾರೆ ತಂಡದ ಸದಸ್ಯರು `ಅಣ್ಣಾ ಎಸ್ಎಂಎಸ್ ಕಾರ್ಡ್~ ಎಂಬ ಆಂದೋಲವನ್ನು ಆರಂಭಿಸಿದ್ದಾರೆ.<br /> <br /> ಈ ಮೂಲಕ ಸಾರ್ವಜನಿಕರಿಗೆ ತಮ್ಮ ಸಂಘಟನೆ ನಡೆಸುವ ಚಳುವಳಿಗಳ ಕುರಿತು ಪ್ರತಿದಿನ ಮಾಹಿತಿ ನೀಡಲು ಅಣ್ಣಾ ತಂಡದ ಸದಸ್ಯರು ಮುಂದಾಗಿದ್ದಾರೆ. <br /> <br /> `ನಾವು ಒಂದು ಕೋಟಿ ಕಾರ್ಡ್ಗಳನ್ನು ಸಂಗ್ರಹಿಸಿದ್ದೇವೆ. ಪ್ರತಿ ಕಾರ್ಡ್ ಬೆಲೆ ರೂ 20. `ಭಷ್ಟಾಚಾರ ವಿರುದ್ಧದ ಭಾರತ ಚಳವಳಿ~ ಕಾರ್ಯಕರ್ತರು ಈ ಕಾರ್ಡ್ನ್ನು ಜನರಿಗೆ ತಲುಪಿಸುತ್ತಾರೆ~ ಎಂದು ಹಜಾರೆ ಸಹವರ್ತಿ ದತ್ತಾ ಅವಾರಿ ಅವರು ರಾಳೇಗಣ ಸಿದ್ದಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.<br /> <br /> ಕಾರ್ಡ್ ಹೊಂದಿರುವವರಿಗೆ ಪ್ರತಿದಿನ `ಭ್ರಷ್ಟಾಚಾರ ವಿರೋಧಿ ಚಳವಳಿ ಸಂಘಟನೆ~ಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ~ ಎಂದು ಅವರು ವಿವರಿಸಿದರು.<br /> <br /> `ಕಾರ್ಡ್ ಪಡೆದವರು ಅದರೊಳಗಿರುವ ಕ್ರಮ ಸಂಖ್ಯೆಯನ್ನು 9223334545ಗೆ ಎಸ್ಎಂಎಸ್ ಮಾಡಬೇಕು. ಆಗ ಅವರ ಹೆಸರು ನೋಂದಣಿಯಾಗುತ್ತದೆ. ನೋಂದಾಯಿತ ವ್ಯಕ್ತಿಗಳಿಗೆ ಅಣ್ಣಾ ಚಳವಳಿ ವರ್ಷಪೂರ್ತಿ ನಡೆಸುವ ಕಾರ್ಯಕ್ರಮಗಳ ವಿವರವನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಳುಹಿಸಲಾಗುತ್ತದೆ~ ಎಂದು ಅವರು ಮಾಹಿತಿ ನೀಡಿದರು.<br /> <br /> `ಪ್ರಸ್ತುತ ಕಾರ್ಡ್ಗಳನ್ನು ದೆಹಲಿ ಮತ್ತು ಚೆನ್ನೈಗೆ ಕಳುಹಿಸಲಾಗಿದೆ. ಅಲ್ಲಿಂದ ದೇಶದ ವಿವಿಧ ರಾಜ್ಯಗಳಿಗೆ ವಿತರಿಸಲಾಗುತ್ತದೆ. ಈ ಕಾರ್ಡ್ ಮಾರಾಟ ಅಥವಾ ವಿತರಣೆಯಿಂದ ನಾವು ಯಾವುದೇ ಲಾಭ ಗಳಿಸುತ್ತಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>