<p><strong>ಬೆಂಗಳೂರು: </strong>ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ...<br /> ಹೈಕೋರ್ಟ್ ಆವರಣದಲ್ಲಿ ದಶಕಗಳ ಕಾಲ ಒಂದೇ ಜಾಗದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಸಾವಿರಾರು ಪಾರಿವಾಳಗಳ ಸ್ಥಿತಿ ಇದು!<br /> <br /> ನ್ಯಾಯಾಲಯದಲ್ಲಿ ಇಲಿಗಳ ಕಾಟ ಹೆಚ್ಚಾಗಿರುವ ಕಾರಣ ನೀಡಿ, ಈ ಶಾಂತಿದೂತರನ್ನು ಓಡಿಸಲಾಗಿದೆ.<br /> `ಪಕ್ಷಿ ಪ್ರಿಯರು ಪಾರಿವಾಳಗಳಿಗೆ ಹಾಕುವ ಕಾಳುಗಳಿಂದ ಇಲಿಗಳ ಸಂಖ್ಯೆ ಹೆಚ್ಚಾಗಿವೆ. ಈ ಇಲಿಗಳು ನ್ಯಾಯಾಲಯದಲ್ಲಿ ದಾಖಲೆಗಳು ಇಡುವ ಕೊಠಡಿಗಳಿಗೆ ಲಗ್ಗೆ ಇಟ್ಟು ದಾಖಲೆಗಳೆಲ್ಲ ನಾಶವಾಗುತ್ತಿವೆ~ ಎಂಬ ಫಲಕ ಇಲ್ಲಿ ನೇತು ಹಾಕಲಾಗಿದೆ. `ಬಾಲಭವನದ ಮುಂಭಾಗದ ಬಂಡೆ ಹತ್ತಿರದ ಪ್ರದೇಶ ಹಾಗೂ ಸಿದ್ಧಲಿಂಗಯ್ಯ ವೃತ್ತದ ಎಡಭಾಗದ ಪ್ರದೇಶಗಳಲ್ಲಿ ಮಾತ್ರ ಆಹಾರ ಹಾಕಿ~ ಎಂದು ಅದರಲ್ಲಿ ತಿಳಿಸಲಾಗಿದೆ.<br /> <br /> ಈ ಫಲಕ ಹಾಕಿ ನಾಲ್ಕು ತಿಂಗಳುಗಳೇ ಕಳೆದಿವೆ. ಅಂತೂ- ಇಂತೂ ಈ ಜಾಗದಿಂದ ಪಾರಿವಾಳಗಳನ್ನು ಓಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಕೂಡ. ಹೈಕೋರ್ಟ್, ಕಬ್ಬನ್ ಪಾರ್ಕ್, ವಿಧಾನಸೌಧ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಭೇಟಿ ನೀಡುವವರ ಕಣ್ಮನ ತಣಿಸುತ್ತಿದ್ದ ಈ ಶಾಂತಿದೂತರು ಈಗ ಹೈಕೋರ್ಟ್ ಆವರಣದಲ್ಲಿ ಇತಿಹಾಸ ಮಾತ್ರ. `ಪಾರಿವಾಳಗಳು ಎಲ್ಲಿಗೆ ಹೋದವೋ ಗೊತ್ತಿಲ್ಲ. ಆದರೆ, ದುರದೃಷ್ಟಕರ ಎಂದರೆ ಇಲಿಗಳ ಕಾಟ ಮಾತ್ರ ತಪ್ಪಲಿಲ್ಲ~ ಎನ್ನುತ್ತಿದ್ದಾರೆ ಹೈಕೋರ್ಟ್ ಸಿಬ್ಬಂದಿ.<br /> <br /> <strong>ಬೆಟ್ಟದ ಮೇಲೊಂದು ಮನೆಯ ಮಾಡಿ:</strong> ಹೀಗೆಂದು ಹೇಳಿದವರು ಹೈಕೋರ್ಟ್ನಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸದಲ್ಲಿರುವ ಹಿರಿಯ ಸಿಬ್ಬಂದಿ. ಇಲಿಗಳ ಕಾಟದ ಬಗ್ಗೆ `ಪ್ರಜಾವಾಣಿ~ ಮಾತನಾಡಿಸಿದಾಗ ಅವರು ಹೇಳಿದ್ದು ಇದು. `ಹೈಕೋರ್ಟ್ ಇರುವುದು ಕಬ್ಬನ್ ಉದ್ಯಾನದ ಒಳಗಡೆ. ಪಕ್ಕದಲ್ಲಿ ಉದ್ಯಾನವಿದ್ದರೆ ಇಲಿಗಳು, ಹಾವು, ಚೇಳು ಎಲ್ಲವೂ ಮಾಮೂಲೇ ಅಲ್ಲವೆ, ಪಾಪದ ಪಕ್ಷಿಗಳು ಏನು ಮಾಡಿವೆ. ಇಲಿ ಮಾತ್ರವಲ್ಲದೇ ಹಾವುಗಳ ಕಾಟ ಕೂಡ ಇಲ್ಲಿ ಇದ್ದದ್ದೇ. <br /> <br /> ಕಡತಗಳ ಮಧ್ಯೆ ಸೇರಿ ಸಾಕಷ್ಟು ಬಾರಿ ನಮ್ಮನ್ನೆಲ್ಲ ಹಾವುಗಳು ಬೆಚ್ಚಿ ಬೀಳಿಸಿವೆ. ತಳಮಹಡಿಯಲ್ಲಿ ಇರುವ ಕೆಲವು ಕೊಠಡಿಗಳ ಸಿಬ್ಬಂದಿಯಂತೂ ಭಯದ ವಾತಾವರಣದಲ್ಲಿಯೇ ಇರುವಂತಾಗಿದೆ. ಚಿಕ್ಕ ಶಬ್ದ ಬಂದರೂ ಹಾವು ಬಂತೆಂದು ಹೆದರುವ ಪರಿಸ್ಥಿತಿ ಇದೆ~ ಎನ್ನುತ್ತಾರೆ ಅವರು.<br /> <br /> ಅದಕ್ಕೆ ದನಿಗೂಡಿಸಿದ ಇನ್ನೊಬ್ಬ ಸಿಬ್ಬಂದಿ, `ಇಲ್ಲಿ 5-6 ದಶಕಗಳ ಕಡತಗಳು ಇವೆ. ಎಲ್ಲವೂ ಕಂಪ್ಯೂಟರೀಕರಣಗೊಂಡಿಲ್ಲ. ಇದರಿಂದಾಗಿ ದೂಳಿನ ಅಲರ್ಜಿಯಿಂದ ರೋಗ-ರುಜಿನಗಳಿಗೆ ನಾವೇ ತುತ್ತಾಗುವ ಸಾಧ್ಯತೆ ಇದೆ. ಈ ಪರಿಯ ದೂಳು ಇದ್ದರೆ ಇಲಿಗಳು ಬರದೇ ಇರುತ್ತವೆಯೇ~ ಎಂದು ಪ್ರಶ್ನಿಸಿದರು.<br /> <br /> `ನ್ಯಾಯಾಲಯದ ದಾಖಲೆಗಳು ಇರುವ ಸುಮಾರು 500- 600 ಮೀಟರ್ ದೂರದಲ್ಲಿ ಈ ಪಾರಿವಾಳಗಳು ವಾಸವಾಗಿದ್ದವು. ಪಕ್ಷಿಗಳಿಗೆ ಹಾಕುವ ಕಾಳಿನಿಂದಲೇ ಇಲಿಗಳು ಬರತ್ತವೆ ಎನ್ನುವ ವಾದ ಸರಿಯಲ್ಲ~ ಎನ್ನುವುದು ಅವರ ಅನಿಸಿಕೆ.<br /> <br /> ಪಾರಿವಾಳಗಳನ್ನು ಓಡಿಸಲು ಬಳಸಲಾದ ಕ್ರಮದ ಬಗ್ಗೆಯೂ ಭದ್ರತಾ ಸಿಬ್ಬಂದಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ಇವುಗಳನ್ನು ಓಡಿಸಲು ವ್ಯಕ್ತಿಯೊಬ್ಬರು ದಿನವೂ ಬರುತ್ತಿದ್ದರು. <br /> <br /> ಡಬ್ಬವೊಂದನ್ನು ಬಡಿದು, ಹಕ್ಕಿಗಳನ್ನು ಬೆದರಿಸಿ ಅಲ್ಲಿಂದ ಓಡಿಸುತ್ತಿದ್ದರು. ಹೈಕೋರ್ಟ್ ಎದುರು ನಡೆಯುತ್ತಿರುವ ಮೆಟ್ರೊ ಕಾಮಗಾರಿಯ ಶಬ್ದಕ್ಕೆ ಬೆದರಿದ್ದ ಈ ಪಕ್ಷಿಗಳು, ಆ ಶಬ್ದಕ್ಕೆ ಕಷ್ಟಪಟ್ಟು ಹೊಂದಿಕೊಂಡಿದ್ದವು. ಆದರೆ ಅದಕ್ಕಿಂತಲೂ ಕರ್ಕಶವಾಗಿದ್ದ ಈ ಶಬ್ದಕ್ಕೆ ಬೆದರಿ ಓಡಿ ಹೋದವು~ ಎಂದರು.<br /> <br /> `ಭದ್ರತೆ ದೃಷ್ಟಿಯಿಂದ ಹೈಕೋರ್ಟ್ ಒಳಗೆ ವಾಹನಗಳನ್ನು ಬಿಡುತ್ತಿಲ್ಲ. ಕಬ್ಬನ್ ಉದ್ಯಾನದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯೂ ಪಾರಿವಾಳಗಳು ಸ್ವಚ್ಛಂದವಾಗಿ ಹಾರಾಡುವಂತಿಲ್ಲ. ಅಲ್ಲಿಂದಲೂ ಅವುಗಳನ್ನು ಓಡಿಸಿದರೆ, ಅವು ಎಲ್ಲಿಗೆ ಹೋಗಬೇಕು~ ಎನ್ನುವುದು ಪಕ್ಷಿ ಪ್ರಿಯ ಪೊಲೀಸ್ ಸಿಬ್ಬಂದಿಯೊಬ್ಬರ ಪ್ರಶ್ನೆ.<br /> <br /> <strong>ಪರಿಸರವಾದಿಗಳು ಹೇಳುವುದೇನು?: </strong>ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರವಾದಿ ಸುರೇಶ್ ಹೆಬ್ಳೀಕರ್, `ಯಾವುದೇ ಪಕ್ಷಿ ಕೆಲ ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದರೆ, ಆ ಸ್ಥಳಕ್ಕೆ ಅವು ಹೊಂದಿಕೊಂಡು ಬಿಡುತ್ತವೆ. ಅವುಗಳ ಜಾಗವನ್ನು ಬದಲಿಸಿದರೆ ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಅವುಗಳಿಗೆ ಬಹಳ ಕಷ್ಟ. ಪಾರಿವಾಳಗಳನ್ನು ಓಡಿಸುವ ಬದಲು, ಇಲಿಗಳನ್ನು ಓಡಿಸುವ ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು. ಹೈಕೋರ್ಟ್ ಸಮೀಪ ಬೀದಿ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ತಿನಿಸುಗಳಿಗೆ ಇಲಿಗಳು ಆಕರ್ಷಿತವಾಗುವ ಸಾಧ್ಯತೆಗಳಿವೆ~ ಎಂದು ಅಭಿಪ್ರಾಯ ಪಟ್ಟರು.<br /> <br /> ಪರಿಸರವಾದಿಗಳ ಸಂಘಟನೆಯ ಲಿಯೋ ಸಲ್ಡಾನಾ ಹೇಳುವಂತೆ, `ಇಲಿಗಳಿಗೂ, ಪಾರಿವಾಳಗಳಿಗೂ ಯಾವುದೇ ಸಂಬಂಧವಿಲ್ಲ. ದೂಳು ತುಂಬಿರುವ ಕೊಠಡಿಗಳಲ್ಲಿ ಇಲಿಗಳು ಬರುವುದು ಸಹಜ. ಇಲಿಗಳ ನೆಪವೊಡ್ಡಿ ಪಾರಿವಾಳಗಳನ್ನು ಓಡಿಸುವುದು ಸರಿಯಲ್ಲ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ...<br /> ಹೈಕೋರ್ಟ್ ಆವರಣದಲ್ಲಿ ದಶಕಗಳ ಕಾಲ ಒಂದೇ ಜಾಗದಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದ ಸಾವಿರಾರು ಪಾರಿವಾಳಗಳ ಸ್ಥಿತಿ ಇದು!<br /> <br /> ನ್ಯಾಯಾಲಯದಲ್ಲಿ ಇಲಿಗಳ ಕಾಟ ಹೆಚ್ಚಾಗಿರುವ ಕಾರಣ ನೀಡಿ, ಈ ಶಾಂತಿದೂತರನ್ನು ಓಡಿಸಲಾಗಿದೆ.<br /> `ಪಕ್ಷಿ ಪ್ರಿಯರು ಪಾರಿವಾಳಗಳಿಗೆ ಹಾಕುವ ಕಾಳುಗಳಿಂದ ಇಲಿಗಳ ಸಂಖ್ಯೆ ಹೆಚ್ಚಾಗಿವೆ. ಈ ಇಲಿಗಳು ನ್ಯಾಯಾಲಯದಲ್ಲಿ ದಾಖಲೆಗಳು ಇಡುವ ಕೊಠಡಿಗಳಿಗೆ ಲಗ್ಗೆ ಇಟ್ಟು ದಾಖಲೆಗಳೆಲ್ಲ ನಾಶವಾಗುತ್ತಿವೆ~ ಎಂಬ ಫಲಕ ಇಲ್ಲಿ ನೇತು ಹಾಕಲಾಗಿದೆ. `ಬಾಲಭವನದ ಮುಂಭಾಗದ ಬಂಡೆ ಹತ್ತಿರದ ಪ್ರದೇಶ ಹಾಗೂ ಸಿದ್ಧಲಿಂಗಯ್ಯ ವೃತ್ತದ ಎಡಭಾಗದ ಪ್ರದೇಶಗಳಲ್ಲಿ ಮಾತ್ರ ಆಹಾರ ಹಾಕಿ~ ಎಂದು ಅದರಲ್ಲಿ ತಿಳಿಸಲಾಗಿದೆ.<br /> <br /> ಈ ಫಲಕ ಹಾಕಿ ನಾಲ್ಕು ತಿಂಗಳುಗಳೇ ಕಳೆದಿವೆ. ಅಂತೂ- ಇಂತೂ ಈ ಜಾಗದಿಂದ ಪಾರಿವಾಳಗಳನ್ನು ಓಡಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಕೂಡ. ಹೈಕೋರ್ಟ್, ಕಬ್ಬನ್ ಪಾರ್ಕ್, ವಿಧಾನಸೌಧ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಭೇಟಿ ನೀಡುವವರ ಕಣ್ಮನ ತಣಿಸುತ್ತಿದ್ದ ಈ ಶಾಂತಿದೂತರು ಈಗ ಹೈಕೋರ್ಟ್ ಆವರಣದಲ್ಲಿ ಇತಿಹಾಸ ಮಾತ್ರ. `ಪಾರಿವಾಳಗಳು ಎಲ್ಲಿಗೆ ಹೋದವೋ ಗೊತ್ತಿಲ್ಲ. ಆದರೆ, ದುರದೃಷ್ಟಕರ ಎಂದರೆ ಇಲಿಗಳ ಕಾಟ ಮಾತ್ರ ತಪ್ಪಲಿಲ್ಲ~ ಎನ್ನುತ್ತಿದ್ದಾರೆ ಹೈಕೋರ್ಟ್ ಸಿಬ್ಬಂದಿ.<br /> <br /> <strong>ಬೆಟ್ಟದ ಮೇಲೊಂದು ಮನೆಯ ಮಾಡಿ:</strong> ಹೀಗೆಂದು ಹೇಳಿದವರು ಹೈಕೋರ್ಟ್ನಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸದಲ್ಲಿರುವ ಹಿರಿಯ ಸಿಬ್ಬಂದಿ. ಇಲಿಗಳ ಕಾಟದ ಬಗ್ಗೆ `ಪ್ರಜಾವಾಣಿ~ ಮಾತನಾಡಿಸಿದಾಗ ಅವರು ಹೇಳಿದ್ದು ಇದು. `ಹೈಕೋರ್ಟ್ ಇರುವುದು ಕಬ್ಬನ್ ಉದ್ಯಾನದ ಒಳಗಡೆ. ಪಕ್ಕದಲ್ಲಿ ಉದ್ಯಾನವಿದ್ದರೆ ಇಲಿಗಳು, ಹಾವು, ಚೇಳು ಎಲ್ಲವೂ ಮಾಮೂಲೇ ಅಲ್ಲವೆ, ಪಾಪದ ಪಕ್ಷಿಗಳು ಏನು ಮಾಡಿವೆ. ಇಲಿ ಮಾತ್ರವಲ್ಲದೇ ಹಾವುಗಳ ಕಾಟ ಕೂಡ ಇಲ್ಲಿ ಇದ್ದದ್ದೇ. <br /> <br /> ಕಡತಗಳ ಮಧ್ಯೆ ಸೇರಿ ಸಾಕಷ್ಟು ಬಾರಿ ನಮ್ಮನ್ನೆಲ್ಲ ಹಾವುಗಳು ಬೆಚ್ಚಿ ಬೀಳಿಸಿವೆ. ತಳಮಹಡಿಯಲ್ಲಿ ಇರುವ ಕೆಲವು ಕೊಠಡಿಗಳ ಸಿಬ್ಬಂದಿಯಂತೂ ಭಯದ ವಾತಾವರಣದಲ್ಲಿಯೇ ಇರುವಂತಾಗಿದೆ. ಚಿಕ್ಕ ಶಬ್ದ ಬಂದರೂ ಹಾವು ಬಂತೆಂದು ಹೆದರುವ ಪರಿಸ್ಥಿತಿ ಇದೆ~ ಎನ್ನುತ್ತಾರೆ ಅವರು.<br /> <br /> ಅದಕ್ಕೆ ದನಿಗೂಡಿಸಿದ ಇನ್ನೊಬ್ಬ ಸಿಬ್ಬಂದಿ, `ಇಲ್ಲಿ 5-6 ದಶಕಗಳ ಕಡತಗಳು ಇವೆ. ಎಲ್ಲವೂ ಕಂಪ್ಯೂಟರೀಕರಣಗೊಂಡಿಲ್ಲ. ಇದರಿಂದಾಗಿ ದೂಳಿನ ಅಲರ್ಜಿಯಿಂದ ರೋಗ-ರುಜಿನಗಳಿಗೆ ನಾವೇ ತುತ್ತಾಗುವ ಸಾಧ್ಯತೆ ಇದೆ. ಈ ಪರಿಯ ದೂಳು ಇದ್ದರೆ ಇಲಿಗಳು ಬರದೇ ಇರುತ್ತವೆಯೇ~ ಎಂದು ಪ್ರಶ್ನಿಸಿದರು.<br /> <br /> `ನ್ಯಾಯಾಲಯದ ದಾಖಲೆಗಳು ಇರುವ ಸುಮಾರು 500- 600 ಮೀಟರ್ ದೂರದಲ್ಲಿ ಈ ಪಾರಿವಾಳಗಳು ವಾಸವಾಗಿದ್ದವು. ಪಕ್ಷಿಗಳಿಗೆ ಹಾಕುವ ಕಾಳಿನಿಂದಲೇ ಇಲಿಗಳು ಬರತ್ತವೆ ಎನ್ನುವ ವಾದ ಸರಿಯಲ್ಲ~ ಎನ್ನುವುದು ಅವರ ಅನಿಸಿಕೆ.<br /> <br /> ಪಾರಿವಾಳಗಳನ್ನು ಓಡಿಸಲು ಬಳಸಲಾದ ಕ್ರಮದ ಬಗ್ಗೆಯೂ ಭದ್ರತಾ ಸಿಬ್ಬಂದಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ಇವುಗಳನ್ನು ಓಡಿಸಲು ವ್ಯಕ್ತಿಯೊಬ್ಬರು ದಿನವೂ ಬರುತ್ತಿದ್ದರು. <br /> <br /> ಡಬ್ಬವೊಂದನ್ನು ಬಡಿದು, ಹಕ್ಕಿಗಳನ್ನು ಬೆದರಿಸಿ ಅಲ್ಲಿಂದ ಓಡಿಸುತ್ತಿದ್ದರು. ಹೈಕೋರ್ಟ್ ಎದುರು ನಡೆಯುತ್ತಿರುವ ಮೆಟ್ರೊ ಕಾಮಗಾರಿಯ ಶಬ್ದಕ್ಕೆ ಬೆದರಿದ್ದ ಈ ಪಕ್ಷಿಗಳು, ಆ ಶಬ್ದಕ್ಕೆ ಕಷ್ಟಪಟ್ಟು ಹೊಂದಿಕೊಂಡಿದ್ದವು. ಆದರೆ ಅದಕ್ಕಿಂತಲೂ ಕರ್ಕಶವಾಗಿದ್ದ ಈ ಶಬ್ದಕ್ಕೆ ಬೆದರಿ ಓಡಿ ಹೋದವು~ ಎಂದರು.<br /> <br /> `ಭದ್ರತೆ ದೃಷ್ಟಿಯಿಂದ ಹೈಕೋರ್ಟ್ ಒಳಗೆ ವಾಹನಗಳನ್ನು ಬಿಡುತ್ತಿಲ್ಲ. ಕಬ್ಬನ್ ಉದ್ಯಾನದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಯೂ ಪಾರಿವಾಳಗಳು ಸ್ವಚ್ಛಂದವಾಗಿ ಹಾರಾಡುವಂತಿಲ್ಲ. ಅಲ್ಲಿಂದಲೂ ಅವುಗಳನ್ನು ಓಡಿಸಿದರೆ, ಅವು ಎಲ್ಲಿಗೆ ಹೋಗಬೇಕು~ ಎನ್ನುವುದು ಪಕ್ಷಿ ಪ್ರಿಯ ಪೊಲೀಸ್ ಸಿಬ್ಬಂದಿಯೊಬ್ಬರ ಪ್ರಶ್ನೆ.<br /> <br /> <strong>ಪರಿಸರವಾದಿಗಳು ಹೇಳುವುದೇನು?: </strong>ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಿಸರವಾದಿ ಸುರೇಶ್ ಹೆಬ್ಳೀಕರ್, `ಯಾವುದೇ ಪಕ್ಷಿ ಕೆಲ ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದರೆ, ಆ ಸ್ಥಳಕ್ಕೆ ಅವು ಹೊಂದಿಕೊಂಡು ಬಿಡುತ್ತವೆ. ಅವುಗಳ ಜಾಗವನ್ನು ಬದಲಿಸಿದರೆ ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಅವುಗಳಿಗೆ ಬಹಳ ಕಷ್ಟ. ಪಾರಿವಾಳಗಳನ್ನು ಓಡಿಸುವ ಬದಲು, ಇಲಿಗಳನ್ನು ಓಡಿಸುವ ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು. ಹೈಕೋರ್ಟ್ ಸಮೀಪ ಬೀದಿ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ತಿನಿಸುಗಳಿಗೆ ಇಲಿಗಳು ಆಕರ್ಷಿತವಾಗುವ ಸಾಧ್ಯತೆಗಳಿವೆ~ ಎಂದು ಅಭಿಪ್ರಾಯ ಪಟ್ಟರು.<br /> <br /> ಪರಿಸರವಾದಿಗಳ ಸಂಘಟನೆಯ ಲಿಯೋ ಸಲ್ಡಾನಾ ಹೇಳುವಂತೆ, `ಇಲಿಗಳಿಗೂ, ಪಾರಿವಾಳಗಳಿಗೂ ಯಾವುದೇ ಸಂಬಂಧವಿಲ್ಲ. ದೂಳು ತುಂಬಿರುವ ಕೊಠಡಿಗಳಲ್ಲಿ ಇಲಿಗಳು ಬರುವುದು ಸಹಜ. ಇಲಿಗಳ ನೆಪವೊಡ್ಡಿ ಪಾರಿವಾಳಗಳನ್ನು ಓಡಿಸುವುದು ಸರಿಯಲ್ಲ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>