<p><strong>ಬೆಂಗಳೂರು: </strong>ನಗರದಲ್ಲಿ ಹಾಕಲಾದ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ)ಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಒಂಬತ್ತು ದೂರಸಂಪರ್ಕ ಸಂಸ್ಥೆಗಳು ಸೋಮವಾರ ಬಿಬಿಎಂಪಿಗೆ ಒಪ್ಪಿಗೆ ಪತ್ರ ನೀಡಿವೆ.<br /> <br /> ಏರ್ಟೆಲ್, ಏರ್ಸೆಲ್, ಸ್ಪೈಸ್, ಐಡಿಯಾ, ವೊಡಾಫೋನ್, ರಿಲ ಯನ್ಸ್ ಆರ್ಜಿಐಎಲ್, ರಿಲ ಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್, ಟಾಟಾ ಟೆಲಿ ಸರ್ವೀಸ್, ಟಾಟಾ ಕಮ್ಯುನಿಕೇಷನ್ಸ್ ಮತ್ತು ಸ್ಟೆರ್ಲೈಟ್ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹ ಣಾಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು.<br /> <br /> ಈ ಒಂಬತ್ತು ಸಂಸ್ಥೆಗಳಲ್ಲದೆ ಇನ್ನೂ ನಾಲ್ಕು ಕಂಪೆನಿಗಳಿಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗಿಂತ ಕಡಿಮೆ ಶ್ರೇಣಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.<br /> <br /> ಅವರೂ ಒಪ್ಪಿಗೆ ಪತ್ರ ನೀಡಲು ಸಿದ್ಧವಿದ್ದರೂ ಮೇಲಧಿಕಾರಿ ಗಳಿಂದಲೇ ಪತ್ರ ತರಬೇಕು ಎಂದು ಅವರಿಗೆ ಸೂಚಿಸಲಾಯಿತು.<br /> ಬಿಬಿಎಂಪಿ ಒಎಫ್ಸಿ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿದ್ದ ಪಾಲಿಕೆ ಸದಸ್ಯ ಎನ್.ಆರ್. ರಮೇಶ್, ‘ಈಗಾಗಲೇ ಒಂಬತ್ತು ಸಂಸ್ಥೆಗಳು ಒಪ್ಪಿಗೆ ಪತ್ರ ನೀಡಿವೆ. ಮಿಕ್ಕ ಸಂಸ್ಥೆಗಳೂ ಒಪ್ಪಿಗೆ ಪತ್ರ ನೀಡಲು ಮುಂದೆ ಬಂದಿವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದಲ್ಲಿ ಹಾಕಲಾದ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ)ಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಒಂಬತ್ತು ದೂರಸಂಪರ್ಕ ಸಂಸ್ಥೆಗಳು ಸೋಮವಾರ ಬಿಬಿಎಂಪಿಗೆ ಒಪ್ಪಿಗೆ ಪತ್ರ ನೀಡಿವೆ.<br /> <br /> ಏರ್ಟೆಲ್, ಏರ್ಸೆಲ್, ಸ್ಪೈಸ್, ಐಡಿಯಾ, ವೊಡಾಫೋನ್, ರಿಲ ಯನ್ಸ್ ಆರ್ಜಿಐಎಲ್, ರಿಲ ಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್, ಟಾಟಾ ಟೆಲಿ ಸರ್ವೀಸ್, ಟಾಟಾ ಕಮ್ಯುನಿಕೇಷನ್ಸ್ ಮತ್ತು ಸ್ಟೆರ್ಲೈಟ್ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹ ಣಾಧಿಕಾರಿಗಳು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು.<br /> <br /> ಈ ಒಂಬತ್ತು ಸಂಸ್ಥೆಗಳಲ್ಲದೆ ಇನ್ನೂ ನಾಲ್ಕು ಕಂಪೆನಿಗಳಿಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗಿಂತ ಕಡಿಮೆ ಶ್ರೇಣಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.<br /> <br /> ಅವರೂ ಒಪ್ಪಿಗೆ ಪತ್ರ ನೀಡಲು ಸಿದ್ಧವಿದ್ದರೂ ಮೇಲಧಿಕಾರಿ ಗಳಿಂದಲೇ ಪತ್ರ ತರಬೇಕು ಎಂದು ಅವರಿಗೆ ಸೂಚಿಸಲಾಯಿತು.<br /> ಬಿಬಿಎಂಪಿ ಒಎಫ್ಸಿ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿದ್ದ ಪಾಲಿಕೆ ಸದಸ್ಯ ಎನ್.ಆರ್. ರಮೇಶ್, ‘ಈಗಾಗಲೇ ಒಂಬತ್ತು ಸಂಸ್ಥೆಗಳು ಒಪ್ಪಿಗೆ ಪತ್ರ ನೀಡಿವೆ. ಮಿಕ್ಕ ಸಂಸ್ಥೆಗಳೂ ಒಪ್ಪಿಗೆ ಪತ್ರ ನೀಡಲು ಮುಂದೆ ಬಂದಿವೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>