<p><strong>ಶಹಾಪುರ: </strong>ಹಸಿದ ಒಡಲಿಗೆ ತುತ್ತು ಅನ್ನವೇ ಆಧಾರ. ಅನ್ನದ ಮೇಲೆ ಅನಾದರ ಬೇಡ ಎಂದು ಎಂದು ಸಿವಿಲ್ (ಹಿರಿಯ ಶ್ರೇಣಿ) ಕೋರ್ಟ್ ನ್ಯಾಯಾಧೀಶ ಕಾರಬಾರಿ ರವೀಂದ್ರ ಹೇಳಿದರು.<br /> <br /> ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಅನಾವಶ್ಯಕವಾಗಿ ಆಹಾರವನ್ನು ಪೋಲು ಮಾಡುವುದರಿಂದ ಪರಿಸರದ ಹಾನಿಯ ಜೊತೆಗೆ ಆಹಾರದ ಅಭಾವ ಉಂಟಾಗುವುದು. ವಿಶ್ವ ಪರಿಸರ ದಿನಾಚರಣೆಯನ್ನು ಪ್ರಸಕ್ತ ವರ್ಷ `ಆಹಾರ ನಿಯಂತ್ರಿಸುವ ದಿನ' ಎಂದು ಆಚರಿಸಿದರೂ ತಪ್ಪಲ್ಲ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಸರ್ಕಾರ ಬಡವರಿಗೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿಯನ್ನು ವಿತರಿಸುವುದು ಸ್ವಾಗತಾರ್ಹ. ಅದು ಕಳಪೆ ಮಟ್ಟದ್ದಾಗಿರಬಾರದು ಎಂದರು.<br /> <br /> ಪ್ರತಿ ದಿನವು ನಾವು ಪರಿಸರ ದಿನಾಚರಣೆ ಆಚರಿಸುವುದು ಅಗತ್ಯವಾಗಿದೆ. ಪ್ಲಾಸ್ಟಿಕ್ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಲಿದೆ.<br /> <br /> ಇದರಿಂದ ಬಚಾವಾಗಬೇಕಾದರೆ ಪರಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು ಎಂದ ಅವರು ಸಲಹೆ ನೀಡಿದರು.<br /> ನ್ಯಾಯಾಧೀಶ ವೈ.ಕೆ.ಬೇನಾಳ ಮಾತನಾಡಿ, ಕೇವಲ ಪರಿಸರದ ದಿನಾಚರಣೆಯಂದು ಸಸಿ ನೆಟ್ಟರೆ ಸಾಲದು ಅದನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಸಿರು ನಮ್ಮ ಮುಂದಿನ ಭರವಸೆಯ ಬೆಳಕು ಹಾಗೂ ನೆಮ್ಮದಿಯ ಜೀವನದ ಸಂಕೇತವಾಗಿದೆ ಎಂದರು.<br /> <br /> ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಂ, ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ ಮಹೇಂದ್ರಕರ್, ಹಿರಿಯ ವಕೀಲರಾದ ವೆಂಕಣ್ಣಗೌಡ ಹಾಲಬಾವಿ ಇದ್ದರು.<br /> <br /> ಪರಿಸರದ ಬಗ್ಗೆ ವಿಶೇಷ ಉಪನ್ಯಾಸವನ್ನು ವಕೀಲರಾದ ಭಾಸ್ಕರರಾವ ಮುಡಬೂಳ, ಸಾಲೋಮನ್ ಆಲ್ಫ್ರೇಡ್ ನೀಡಿದರು. ಎಂ.ಎನ್. ಪೂಜಾರಿ ನಿರೂಪಿಸಿದರು. ಭೀಮಣ್ಣಗೌಡ ಪ್ರಾರ್ಥನೆ ಹಾಡಿದರು. ಎಸ್.ಎಂ.ಸಜ್ಜನ ಸ್ವಾಗತಿಸಿದರು. ಹಾಜಿಬಾಬ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ: </strong>ಹಸಿದ ಒಡಲಿಗೆ ತುತ್ತು ಅನ್ನವೇ ಆಧಾರ. ಅನ್ನದ ಮೇಲೆ ಅನಾದರ ಬೇಡ ಎಂದು ಎಂದು ಸಿವಿಲ್ (ಹಿರಿಯ ಶ್ರೇಣಿ) ಕೋರ್ಟ್ ನ್ಯಾಯಾಧೀಶ ಕಾರಬಾರಿ ರವೀಂದ್ರ ಹೇಳಿದರು.<br /> <br /> ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಅನಾವಶ್ಯಕವಾಗಿ ಆಹಾರವನ್ನು ಪೋಲು ಮಾಡುವುದರಿಂದ ಪರಿಸರದ ಹಾನಿಯ ಜೊತೆಗೆ ಆಹಾರದ ಅಭಾವ ಉಂಟಾಗುವುದು. ವಿಶ್ವ ಪರಿಸರ ದಿನಾಚರಣೆಯನ್ನು ಪ್ರಸಕ್ತ ವರ್ಷ `ಆಹಾರ ನಿಯಂತ್ರಿಸುವ ದಿನ' ಎಂದು ಆಚರಿಸಿದರೂ ತಪ್ಪಲ್ಲ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಸರ್ಕಾರ ಬಡವರಿಗೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿಯನ್ನು ವಿತರಿಸುವುದು ಸ್ವಾಗತಾರ್ಹ. ಅದು ಕಳಪೆ ಮಟ್ಟದ್ದಾಗಿರಬಾರದು ಎಂದರು.<br /> <br /> ಪ್ರತಿ ದಿನವು ನಾವು ಪರಿಸರ ದಿನಾಚರಣೆ ಆಚರಿಸುವುದು ಅಗತ್ಯವಾಗಿದೆ. ಪ್ಲಾಸ್ಟಿಕ್ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಲಿದೆ.<br /> <br /> ಇದರಿಂದ ಬಚಾವಾಗಬೇಕಾದರೆ ಪರಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು ಎಂದ ಅವರು ಸಲಹೆ ನೀಡಿದರು.<br /> ನ್ಯಾಯಾಧೀಶ ವೈ.ಕೆ.ಬೇನಾಳ ಮಾತನಾಡಿ, ಕೇವಲ ಪರಿಸರದ ದಿನಾಚರಣೆಯಂದು ಸಸಿ ನೆಟ್ಟರೆ ಸಾಲದು ಅದನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಸಿರು ನಮ್ಮ ಮುಂದಿನ ಭರವಸೆಯ ಬೆಳಕು ಹಾಗೂ ನೆಮ್ಮದಿಯ ಜೀವನದ ಸಂಕೇತವಾಗಿದೆ ಎಂದರು.<br /> <br /> ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಂ, ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ ಮಹೇಂದ್ರಕರ್, ಹಿರಿಯ ವಕೀಲರಾದ ವೆಂಕಣ್ಣಗೌಡ ಹಾಲಬಾವಿ ಇದ್ದರು.<br /> <br /> ಪರಿಸರದ ಬಗ್ಗೆ ವಿಶೇಷ ಉಪನ್ಯಾಸವನ್ನು ವಕೀಲರಾದ ಭಾಸ್ಕರರಾವ ಮುಡಬೂಳ, ಸಾಲೋಮನ್ ಆಲ್ಫ್ರೇಡ್ ನೀಡಿದರು. ಎಂ.ಎನ್. ಪೂಜಾರಿ ನಿರೂಪಿಸಿದರು. ಭೀಮಣ್ಣಗೌಡ ಪ್ರಾರ್ಥನೆ ಹಾಡಿದರು. ಎಸ್.ಎಂ.ಸಜ್ಜನ ಸ್ವಾಗತಿಸಿದರು. ಹಾಜಿಬಾಬ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>