<p><strong>ಬೆಂಗಳೂರು: </strong>`ಕೇವಲ ಭೂತಕಾಲದ ವೈಭವದಲ್ಲಿಯೇ ಮುಳುಗದೇ ಪ್ರಸ್ತುತ ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ನಗರದಲ್ಲಿ ಶನಿವಾರ ಸಪ್ನ ಬುಕ್ ಹೌಸ್ ಆಯೋಜಿಸಿದ್ದ `ಆಧಾರ್~ ಯೋಜನೆಯ ಮುಖ್ಯಸ್ಥ ನಂದನ್ ನಿಲೇಕಣಿ ಅವರ `ಇಮ್ಯಾಜಿನಿಂಗ್ ಇಂಡಿಯಾ~ ಕೃತಿಯ ಕನ್ನಡಾನುವಾದ `ಬಿಂಬ ಭಾರತ~ ಪುಸ್ತಕದ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.<br /> <br /> `ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಜ್ಞಾನಗಳಿದ್ದರೂ ನಾವು ಕೇವಲ ಹಳತನ್ನೇ ನೆಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಅತಿ ವೇಗದ ಬೆಳವಣಿಗೆಯ ಆಧುನಿಕ ಜಗತ್ತಿನ ಓಟಕ್ಕೆ ನಮ್ಮನ್ನೂ ಸಜ್ಜುಗೊಳಿಸಿಕೊಳ್ಳಬೇಕಿದೆ. ನಮ್ಮ ಜ್ಞಾನ ಹಾಗೂ ಚಿಂತನೆಗಳ ವಿಸ್ತಾರಕ್ಕಾಗಿ ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅನಿವಾರ್ಯ ಎಂಬುದನ್ನು `ಬಿಂಬ ಭಾರತ~ ಕೃತಿ ಎತ್ತಿ ತೋರುತ್ತದೆ~ ಎಂದು ಅವರು ನುಡಿದರು.<br /> <br /> `ಗ್ರಾಮೀಣ ಭಾರತದಲ್ಲಿನ ಶೇಕಡಾ 60 ರಷ್ಟು ಜನಸಂಖ್ಯೆಯಿಂದ ಒಟ್ಟು ಉತ್ಪಾದನೆಯ ಬೆಳವಣಿಗೆ ಪ್ರಮಾಣ ಕೇವಲ ಶೇಕಡಾ 6 ರಷ್ಟಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಒಟ್ಟೂ ನಿವ್ವಳ ಉತ್ಪಾದನೆಯ ಪ್ರಮಾಣದಲ್ಲಿ ಅಸಮಾನತೆ ಉಂಟಾಗಿದೆ. ಇದನ್ನು ನಿವಾರಿಸಿಕೊಳ್ಳಲು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆರ್ಥಿಕ ಒಳನೋಟಗಳನ್ನು ಕೊಡುವ ನಂದನ್ ನಿಲೇಕಣಿ ಅವರ ದೃಷ್ಟಿಕೋನ ಮಹತ್ವದ್ದು~ ಎಂದು ಅವರು ಅಭಿಪ್ರಾಯ ಪಟ್ಟರು.<br /> <br /> ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, `ಭಾರತದ ಸಮಸ್ಯೆಗಳೆಂದು ತಿಳಿದಿರುವ ಜನಸಂಖ್ಯಾ ಸ್ಪೋಟ, ಉದ್ಯಮಗಳ ಅತಿಯಾದ ಬೆಳವಣಿಗೆ, ಇಂಗ್ಲಿಷ್ ಭಾಷೆ ಹಾಗೂ ನಗರೀಕರಣಗಳನ್ನು ನಿಲೇಕಣಿ ಅವರು ದೇಶಕ್ಕೆ ಆಗುವ ಲಾಭದ ದೃಷ್ಟಿಯಿಂದ ನೋಡುವ ಕ್ರಮ ಹೊಸತಾದುದು. ಜ್ಞಾನದ ವಿಸ್ತಾರಕ್ಕಾಗಿ ಈ ನೆಲದ ಸಂಸ್ಕೃತಿಯೊಂದಿಗೇ ಹೊಸ ನೋಟಗಳನ್ನು ರೂಪಿಸಿರುವ ಪುಸ್ತಕದ ಚಿಂತನೆಗಳೊಂದಿಗೆ ಹಲವು ವಿರೋಧಾಭಾಸಗಳೂ ಉಳಿದುಕೊಳ್ಳುತ್ತವೆ. <br /> <br /> ಭವಿಷ್ಯದ ಭಾರತದ ಬಗ್ಗೆ ಚಿಂತಿಸುವ ಕೃತಿ ಪ್ರಾದೇಶಿಕ ಭಾಷೆಗಳ ಉಳಿವು ಹಾಗೂ ಅಭಿವೃದ್ಧಿಯಿಂದಾಗಿ ದೇಶ ಏನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಉತ್ತರ ನೀಡುವುದಿಲ್ಲ. ಬಹುಶಃ ಇದು ಕೃತಿಯ ಚಿಂತನೆಯ ಮಿತಿ~ ಎಂದು ಅವರು ಹೇಳಿದರು.<br /> <br /> ಶಿಕ್ಷಣ ತಜ್ಞ ಹಾಗೂ ಪುಸ್ತಕದ ಅನುವಾದಕ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, `ಎಡ-ಬಲ ಎಂಬ ಪಂಥಗಳಿಂದ ಮುಕ್ತವಾದ ಚಿಂತನೆಗಳ ಕೃತಿ ಇದು. ಇಲ್ಲಿನ ಹೊಸ ಚಿಂತನೆಗಳನ್ನು ಕನ್ನಡಕ್ಕೂ ತರಬೇಕೆಂಬ ತುಡಿತ ಹೆಚ್ಚಾದ್ದರಿಂದ ಕೃತಿಯ ಅನುವಾದಕ್ಕೆ ತೊಡಗಿದೆ. ಕೃತಿಯಲ್ಲಿನ ಚಿಂತನೆಗಳ ಹೊಸ ನೋಟ ಅಭಿವೃದ್ಧಿಯ ಈವರೆಗಿನ ವ್ಯಾಖ್ಯಾನಗಳನ್ನೇ ಮುರಿಯುವಂತಿದೆ~ ಎಂದರು.<br /> <br /> ಮೂಲ ಕೃತಿಯ ಕರ್ತೃ ನಂದನ್ ನಿಲೇಕಣಿ ಮಾತನಾಡಿ, `ಪ್ರತಿ ಎರಡು ವರ್ಷಗಳಿಗೊಮ್ಮೆ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಜಾಗತಿಕ ಬೆಳವಣಿಗೆಗೆ ಅನುಗುಣವಾಗಿ ಭಾರತವೂ ಬೆಳವಣಿಗೆ ಸಾಧಿಸಬೇಕಾದುದು ಅಗತ್ಯ~ ಎಂದರು.<br /> <br /> ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಕೇವಲ ಭೂತಕಾಲದ ವೈಭವದಲ್ಲಿಯೇ ಮುಳುಗದೇ ಪ್ರಸ್ತುತ ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ನಗರದಲ್ಲಿ ಶನಿವಾರ ಸಪ್ನ ಬುಕ್ ಹೌಸ್ ಆಯೋಜಿಸಿದ್ದ `ಆಧಾರ್~ ಯೋಜನೆಯ ಮುಖ್ಯಸ್ಥ ನಂದನ್ ನಿಲೇಕಣಿ ಅವರ `ಇಮ್ಯಾಜಿನಿಂಗ್ ಇಂಡಿಯಾ~ ಕೃತಿಯ ಕನ್ನಡಾನುವಾದ `ಬಿಂಬ ಭಾರತ~ ಪುಸ್ತಕದ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.<br /> <br /> `ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಜ್ಞಾನಗಳಿದ್ದರೂ ನಾವು ಕೇವಲ ಹಳತನ್ನೇ ನೆಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಅತಿ ವೇಗದ ಬೆಳವಣಿಗೆಯ ಆಧುನಿಕ ಜಗತ್ತಿನ ಓಟಕ್ಕೆ ನಮ್ಮನ್ನೂ ಸಜ್ಜುಗೊಳಿಸಿಕೊಳ್ಳಬೇಕಿದೆ. ನಮ್ಮ ಜ್ಞಾನ ಹಾಗೂ ಚಿಂತನೆಗಳ ವಿಸ್ತಾರಕ್ಕಾಗಿ ನಾವು ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದು ಅನಿವಾರ್ಯ ಎಂಬುದನ್ನು `ಬಿಂಬ ಭಾರತ~ ಕೃತಿ ಎತ್ತಿ ತೋರುತ್ತದೆ~ ಎಂದು ಅವರು ನುಡಿದರು.<br /> <br /> `ಗ್ರಾಮೀಣ ಭಾರತದಲ್ಲಿನ ಶೇಕಡಾ 60 ರಷ್ಟು ಜನಸಂಖ್ಯೆಯಿಂದ ಒಟ್ಟು ಉತ್ಪಾದನೆಯ ಬೆಳವಣಿಗೆ ಪ್ರಮಾಣ ಕೇವಲ ಶೇಕಡಾ 6 ರಷ್ಟಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಒಟ್ಟೂ ನಿವ್ವಳ ಉತ್ಪಾದನೆಯ ಪ್ರಮಾಣದಲ್ಲಿ ಅಸಮಾನತೆ ಉಂಟಾಗಿದೆ. ಇದನ್ನು ನಿವಾರಿಸಿಕೊಳ್ಳಲು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆರ್ಥಿಕ ಒಳನೋಟಗಳನ್ನು ಕೊಡುವ ನಂದನ್ ನಿಲೇಕಣಿ ಅವರ ದೃಷ್ಟಿಕೋನ ಮಹತ್ವದ್ದು~ ಎಂದು ಅವರು ಅಭಿಪ್ರಾಯ ಪಟ್ಟರು.<br /> <br /> ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, `ಭಾರತದ ಸಮಸ್ಯೆಗಳೆಂದು ತಿಳಿದಿರುವ ಜನಸಂಖ್ಯಾ ಸ್ಪೋಟ, ಉದ್ಯಮಗಳ ಅತಿಯಾದ ಬೆಳವಣಿಗೆ, ಇಂಗ್ಲಿಷ್ ಭಾಷೆ ಹಾಗೂ ನಗರೀಕರಣಗಳನ್ನು ನಿಲೇಕಣಿ ಅವರು ದೇಶಕ್ಕೆ ಆಗುವ ಲಾಭದ ದೃಷ್ಟಿಯಿಂದ ನೋಡುವ ಕ್ರಮ ಹೊಸತಾದುದು. ಜ್ಞಾನದ ವಿಸ್ತಾರಕ್ಕಾಗಿ ಈ ನೆಲದ ಸಂಸ್ಕೃತಿಯೊಂದಿಗೇ ಹೊಸ ನೋಟಗಳನ್ನು ರೂಪಿಸಿರುವ ಪುಸ್ತಕದ ಚಿಂತನೆಗಳೊಂದಿಗೆ ಹಲವು ವಿರೋಧಾಭಾಸಗಳೂ ಉಳಿದುಕೊಳ್ಳುತ್ತವೆ. <br /> <br /> ಭವಿಷ್ಯದ ಭಾರತದ ಬಗ್ಗೆ ಚಿಂತಿಸುವ ಕೃತಿ ಪ್ರಾದೇಶಿಕ ಭಾಷೆಗಳ ಉಳಿವು ಹಾಗೂ ಅಭಿವೃದ್ಧಿಯಿಂದಾಗಿ ದೇಶ ಏನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಉತ್ತರ ನೀಡುವುದಿಲ್ಲ. ಬಹುಶಃ ಇದು ಕೃತಿಯ ಚಿಂತನೆಯ ಮಿತಿ~ ಎಂದು ಅವರು ಹೇಳಿದರು.<br /> <br /> ಶಿಕ್ಷಣ ತಜ್ಞ ಹಾಗೂ ಪುಸ್ತಕದ ಅನುವಾದಕ ಪ್ರೊ.ಕೆ.ಈ.ರಾಧಾಕೃಷ್ಣ ಮಾತನಾಡಿ, `ಎಡ-ಬಲ ಎಂಬ ಪಂಥಗಳಿಂದ ಮುಕ್ತವಾದ ಚಿಂತನೆಗಳ ಕೃತಿ ಇದು. ಇಲ್ಲಿನ ಹೊಸ ಚಿಂತನೆಗಳನ್ನು ಕನ್ನಡಕ್ಕೂ ತರಬೇಕೆಂಬ ತುಡಿತ ಹೆಚ್ಚಾದ್ದರಿಂದ ಕೃತಿಯ ಅನುವಾದಕ್ಕೆ ತೊಡಗಿದೆ. ಕೃತಿಯಲ್ಲಿನ ಚಿಂತನೆಗಳ ಹೊಸ ನೋಟ ಅಭಿವೃದ್ಧಿಯ ಈವರೆಗಿನ ವ್ಯಾಖ್ಯಾನಗಳನ್ನೇ ಮುರಿಯುವಂತಿದೆ~ ಎಂದರು.<br /> <br /> ಮೂಲ ಕೃತಿಯ ಕರ್ತೃ ನಂದನ್ ನಿಲೇಕಣಿ ಮಾತನಾಡಿ, `ಪ್ರತಿ ಎರಡು ವರ್ಷಗಳಿಗೊಮ್ಮೆ ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಜಾಗತಿಕ ಬೆಳವಣಿಗೆಗೆ ಅನುಗುಣವಾಗಿ ಭಾರತವೂ ಬೆಳವಣಿಗೆ ಸಾಧಿಸಬೇಕಾದುದು ಅಗತ್ಯ~ ಎಂದರು.<br /> <br /> ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>