<p>ಬಸವಕಲ್ಯಾಣ: ಇಲ್ಲಿನ ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿ ಹುದ್ದೆ ಖಾಲಿಯಿದೆ. ಆಯುಕ್ತರ ಹುದ್ದೆಗೆ ಪ್ರಭಾರಿ ನೇಮಿಸಲಾಗಿದೆ. ಹಣವಿಲ್ಲದೆ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.<br /> <br /> ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರು ನಿವೃತ್ತಿಯ ನಂತರ ಈ ಸ್ಥಾನ ಖಾಲಿಯಿದೆ. ಮಂಡಳಿ ಆಯುಕ್ತರಾಗಿದ್ದ ಕಾಶಿನಾಥ ಗೋಕಳೆ ಅವರ ಆಕಸ್ಮಿಕ ನಿಧನವಾಗಿ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಆಗುತ್ತಿದ್ದು ಅಂದಿನಿಂದ ಆಯುಕ್ತರ ಹುದ್ದೆಯ ಪ್ರಭಾರ ಸಹ ಬೇರೆಯವರಿಗೆ ವಹಿಸಲಾಗಿದೆ. ಹೀಗಾಗಿ ಕಾಮಗಾರಿಗಳು ಕುಂಟುತ್ತ ಸಾಗಿವೆ.<br /> <br /> ಹಾಗೆ ನೋಡಿದರೆ, ಡಾ.ಎಸ್.ಎಂ.ಜಾಮದಾರ ಅವರನ್ನೇ ವಿಶೇಷಾಧಿಕಾರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂಬುದು ಇಲ್ಲಿನ ಪ್ರಮುಖರ ಆಗ್ರಹವಾಗಿದೆ. ಇಲ್ಲಿನ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಸಹ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡರು ಈ ಬಗ್ಗೆ ನಿರಾಸಕ್ತಿ ತೋರಿದ್ದರಿಂದ ನೇಮಕಾತಿಗೆ ವಿಳಂಬ ಆಗಿದೆ ಎನ್ನಲಾಗುತ್ತಿದೆ.<br /> <br /> ಆದರೆ ಈಗ ಮುಖ್ಯಮಂತ್ರಿ ಬದಲಾಗಿದ್ದಾರೆ. ಡಾ.ಜಾಮದಾರ ಅವರು ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರಿಗೂ ಬೇಕಾದವರಾಗಿದ್ದಾರೆ. ಆದ್ದರಿಂದ ಶೀಘ್ರ ಅವರನ್ನು ಈ ಸ್ಥಾನದಲ್ಲಿ ಮುಂದುವರೆಸುವ ನಿರ್ಣಯ ತೆಗೆದುಕೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.<br /> <br /> ಮುಖ್ಯವೆಂದರೆ, ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕುಗಳು ಸಹ ಇವೆ. ಅಲ್ಲದೆ ಅದೇ ಸ್ಥಾನದಲ್ಲಿ ಜಾಮದಾರ ಅವರನ್ನು ಮುಂದುವರೆಸಿದರೂ ಮೊದಲಿನಷ್ಟು ಅಧಿಕಾರ ಇರುವುದಿಲ್ಲ. ಆದ್ದರಿಂದ ಜಾಮದಾರ ಅವರಿಗೂ ಈ ಬಗ್ಗೆ ಆಸಕ್ತಿ ಇಲ್ಲ ಎನ್ನಲಾಗುತ್ತಿದೆ. ಆದಾಗ್ಯೂ ಸರ್ಕಾರ ಅವರನ್ನೇ ಮುಂದುವರೆಸುತ್ತದೋ ಅಥವಾ ಹೊಸಬರ ನೇಮಕ ಮಾಡುತ್ತದೋ ಕಾದು ನೋಡಬೇಕಾಗಿದೆ.<br /> <br /> ಒಂದುವೇಳೆ ಜಾಮದಾರ ಬೇಡವೆಂದರೆ ಆ ಸ್ಥಾನಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ಮೊದಲು ಬೀದರ ಜಿಲ್ಲಾಧಿಕಾರಿ ಆಗಿದ್ದ ಹರ್ಷಗುಪ್ತಾ ಅವರನ್ನು ನೇಮಿಸಬೇಕು ಎಂಬುದು ಕೆಲವರ ಬೇಡಿಕೆಯಾಗಿದೆ.<br /> <br /> ಏನಿದ್ದರೂ ವಿಶೇಷಾಧಿಕಾರಿ ಹುದ್ದೆಗೆ ಶೀಘ್ರ ನೇಮಕಾತಿ ಮಾಡಬೇಕು. ಆಯುಕ್ತರ ಹುದ್ದೆಗೂ ಅಧಿಕಾರಿಯನ್ನು ನೇಮಿಸಬೇಕು. ಹಣದ ಕೊರತೆಯಿಂದ ಕಾಮಗಾರಿಗಳು ಕುಂಟುತ್ತ ಸಾಗಿವೆ. ಆದ್ದರಿಂದ ಮಂಡಳಿಗೆ ಅನುದಾನ ಒದಗಿಸಬೇಕು ಎಂದು ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಜಗದೀಶ ಶೆಟ್ಟರ್ ಅವರಿಗೆ ನಾಗರಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಇಲ್ಲಿನ ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷಾಧಿಕಾರಿ ಹುದ್ದೆ ಖಾಲಿಯಿದೆ. ಆಯುಕ್ತರ ಹುದ್ದೆಗೆ ಪ್ರಭಾರಿ ನೇಮಿಸಲಾಗಿದೆ. ಹಣವಿಲ್ಲದೆ ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿರುವುದು ಜನರಲ್ಲಿ ಬೇಸರ ಮೂಡಿಸಿದೆ.<br /> <br /> ಮಂಡಳಿ ವಿಶೇಷಾಧಿಕಾರಿಯಾಗಿದ್ದ ಡಾ.ಎಸ್.ಎಂ.ಜಾಮದಾರ ಅವರು ನಿವೃತ್ತಿಯ ನಂತರ ಈ ಸ್ಥಾನ ಖಾಲಿಯಿದೆ. ಮಂಡಳಿ ಆಯುಕ್ತರಾಗಿದ್ದ ಕಾಶಿನಾಥ ಗೋಕಳೆ ಅವರ ಆಕಸ್ಮಿಕ ನಿಧನವಾಗಿ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಆಗುತ್ತಿದ್ದು ಅಂದಿನಿಂದ ಆಯುಕ್ತರ ಹುದ್ದೆಯ ಪ್ರಭಾರ ಸಹ ಬೇರೆಯವರಿಗೆ ವಹಿಸಲಾಗಿದೆ. ಹೀಗಾಗಿ ಕಾಮಗಾರಿಗಳು ಕುಂಟುತ್ತ ಸಾಗಿವೆ.<br /> <br /> ಹಾಗೆ ನೋಡಿದರೆ, ಡಾ.ಎಸ್.ಎಂ.ಜಾಮದಾರ ಅವರನ್ನೇ ವಿಶೇಷಾಧಿಕಾರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂಬುದು ಇಲ್ಲಿನ ಪ್ರಮುಖರ ಆಗ್ರಹವಾಗಿದೆ. ಇಲ್ಲಿನ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಸಹ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದ ಗೌಡರು ಈ ಬಗ್ಗೆ ನಿರಾಸಕ್ತಿ ತೋರಿದ್ದರಿಂದ ನೇಮಕಾತಿಗೆ ವಿಳಂಬ ಆಗಿದೆ ಎನ್ನಲಾಗುತ್ತಿದೆ.<br /> <br /> ಆದರೆ ಈಗ ಮುಖ್ಯಮಂತ್ರಿ ಬದಲಾಗಿದ್ದಾರೆ. ಡಾ.ಜಾಮದಾರ ಅವರು ನೂತನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಆಪ್ತರಾಗಿದ್ದಾರೆ. ಅಲ್ಲದೆ ಯಡಿಯೂರಪ್ಪ ಅವರಿಗೂ ಬೇಕಾದವರಾಗಿದ್ದಾರೆ. ಆದ್ದರಿಂದ ಶೀಘ್ರ ಅವರನ್ನು ಈ ಸ್ಥಾನದಲ್ಲಿ ಮುಂದುವರೆಸುವ ನಿರ್ಣಯ ತೆಗೆದುಕೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.<br /> <br /> ಮುಖ್ಯವೆಂದರೆ, ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕುಗಳು ಸಹ ಇವೆ. ಅಲ್ಲದೆ ಅದೇ ಸ್ಥಾನದಲ್ಲಿ ಜಾಮದಾರ ಅವರನ್ನು ಮುಂದುವರೆಸಿದರೂ ಮೊದಲಿನಷ್ಟು ಅಧಿಕಾರ ಇರುವುದಿಲ್ಲ. ಆದ್ದರಿಂದ ಜಾಮದಾರ ಅವರಿಗೂ ಈ ಬಗ್ಗೆ ಆಸಕ್ತಿ ಇಲ್ಲ ಎನ್ನಲಾಗುತ್ತಿದೆ. ಆದಾಗ್ಯೂ ಸರ್ಕಾರ ಅವರನ್ನೇ ಮುಂದುವರೆಸುತ್ತದೋ ಅಥವಾ ಹೊಸಬರ ನೇಮಕ ಮಾಡುತ್ತದೋ ಕಾದು ನೋಡಬೇಕಾಗಿದೆ.<br /> <br /> ಒಂದುವೇಳೆ ಜಾಮದಾರ ಬೇಡವೆಂದರೆ ಆ ಸ್ಥಾನಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ಮೊದಲು ಬೀದರ ಜಿಲ್ಲಾಧಿಕಾರಿ ಆಗಿದ್ದ ಹರ್ಷಗುಪ್ತಾ ಅವರನ್ನು ನೇಮಿಸಬೇಕು ಎಂಬುದು ಕೆಲವರ ಬೇಡಿಕೆಯಾಗಿದೆ.<br /> <br /> ಏನಿದ್ದರೂ ವಿಶೇಷಾಧಿಕಾರಿ ಹುದ್ದೆಗೆ ಶೀಘ್ರ ನೇಮಕಾತಿ ಮಾಡಬೇಕು. ಆಯುಕ್ತರ ಹುದ್ದೆಗೂ ಅಧಿಕಾರಿಯನ್ನು ನೇಮಿಸಬೇಕು. ಹಣದ ಕೊರತೆಯಿಂದ ಕಾಮಗಾರಿಗಳು ಕುಂಟುತ್ತ ಸಾಗಿವೆ. ಆದ್ದರಿಂದ ಮಂಡಳಿಗೆ ಅನುದಾನ ಒದಗಿಸಬೇಕು ಎಂದು ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಜಗದೀಶ ಶೆಟ್ಟರ್ ಅವರಿಗೆ ನಾಗರಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>