<p>ಹಾಸನ: `ಅತಿಯಾದ ಭಾವನಾತ್ಮಕತೆಯೇ ಅನೇಕ ಬಾರಿ ಮಹಿಳೆಗೆ ಸಮಸ್ಯೆ ಉಂಟುಮಾಡುತ್ತದೆ. ಮನೆಯಿಂದ ಹೊರಗೆ ಬಂದು ದುಡಿಯುವ ಮಹಿಳೆ, ಮನೆಯೊಳಗೆ ಹೋಗುತ್ತಿದ್ದಂತೆ ಗೃಹಿಣಿಯಾಗಿ ಎಲ್ಲರ ಬೇಕು ಬೇಡಗಳನ್ನೂ ವಿಚಾರಿಸಿಕೊಳ್ಳಬೇಕು. ಈ ಒತ್ತಡದಲ್ಲಿ ತನ್ನ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಕೊರಗಬೇಕಾಗುತ್ತದೆ~ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ನುಡಿದರು.<br /> <br /> ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ `ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಹಿಂದಿನ ದಿನಗಳಿಗೆ ಹೋಲಿಸಿದರೆ ಮಹಿಳೆಯರ ಸ್ಥಿತಿ ಸುಧಾರಣೆಯಾಗಿದೆ. ಆದರೆ ಪೂರ್ತಿಯಾಗಿ ಬದಲಾಗಿಲ್ಲ. ಸಾಮಾನ್ಯ ಮಹಿಳೆ ಈಗಲೂ ಅತಿ ಕಷ್ಟದ ಬದುಕನ್ನೇ ನಡೆಸುತ್ತಿದ್ದಾಳೆ. ಹಲವು ಸಾಮಾಜಿಕ ಕಟ್ಟುಪಾಡುಗಳಿಗೆ ಆಕೆ ಒಳಗಾಗುತ್ತಿದ್ದಾಳೆ. ಅನೇಕ ಸಂದರ್ಭಗಳಲ್ಲಿ ಮಹಿಳೆಯ `ಅಹಂ~ನಿಂದಲೂ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಗಳನ್ನು ನಿವಾರಿಸಲು ಕೇವಲ ಮಹಿಳೆಯಿಂದ ಅಥವಾ ಪುರುಷರಿಂದ ಸಾಧ್ಯವಿಲ್ಲ. ಇಡೀ ಸಮುದಾಯ ಸೇರಿ ಪರಸ್ಪರರನ್ನು ಗೌರವಿಸಬೇಕು ಎಂದು ಮೋಟಮ್ಮ ನುಡಿದರು.<br /> <br /> ಗ್ರಾಮೀಣ ಮಹಿಳೆಯರೂ ಶೋಕಿ ಜೀವನಕ್ಕೆ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೋಟಮ್ಮ, `ಮಹಿಳೆಯರು ಪಟ್ಟಣದ ಜೀವನದಿಂದ ಆಕರ್ಷಿತರಾಗುವುದರ ಜತೆಗೆ ಮಕ್ಕಳನ್ನೂ ಸಹ ಗ್ಲ್ಯಾಮರ್ ಜೀವನದತ್ತ ತಳ್ಳುತ್ತಿದ್ದಾರೆ. ಮೊದಲು ಇದನ್ನು ತಡೆಯಬೇಕು. ನಾವು ಮಕ್ಕಳನ್ನು ಬೆಳೆಸುವುದರಲ್ಲೇ ಎಡವುತ್ತಿದ್ದೇವೆ. ಬದಲಾವಣೆಗೆ ನಾವು ಸಹ ಸಿದ್ಧರಾಗಬೇಕು~ ಎಂದರು.<br /> <br /> ಮುಖ್ಯ ಅತಿಥಿಯಾಗಿದ್ದ ಪತ್ರಕರ್ತೆ ಕೆ.ಎಸ್. ನಿರುಪಮಾ, `ಮಹಿಳೆಯರು ಮೊದಲು ತಾವು ಚೆನ್ನಾಗಿರುವುದನ್ನು ಕಲಿಯಬೇಕು. ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸುವಾಗ ಸಮಾಜ ನಮ್ಮ ಚಾರಿತ್ರ್ಯದ ಮೇಲೆ ದಾಳಿ ಮಾಡುತ್ತದೆ. ನಾವು ಸರಿಯಾಗಿದ್ದರೆ ಇದಕ್ಕೆ ಅಂಜಬೇಕಾಗುವುದಿಲ್ಲ. `ಒಳ್ಳೆಯವರು~ ಎಂಬ ಲೇಬಲ್ ಅಂಟಿಸಿಕೊಳ್ಳುವ ಚಟದಿಂದ ಹೊರಬಂದು ಒಳ್ಳೆಯವರಾಗಿರೋಣ. ಗಟ್ಟಿಯಾದ ವ್ಯಕ್ತಿತ್ವ ರೂಪಿಸಿಕೊಂಡರೆ ಬೇಕಾದ ಎತ್ತರಕ್ಕೆ ಏರಬಹುದು~ ಎಂದರು.<br /> <br /> `ಮಹಿಳೆ ಕೀಳರಿಮೆ ಬಿಟ್ಟು ತಂತ್ರಜ್ಞಾನದ ಲಾಭ ಪಡೆಯಬೇಕು. ಅಗತ್ಯ ಇರಲಿ, ಇಲ್ಲದಿರಲಿ ಈಚಿನ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ~ ಎಂದರು.<br /> <br /> ಉಷಾ ಕೃಷ್ಣಮೂರ್ತಿ, ಲೇಖಕಿ ಬಾನು ಮುಷ್ತಾಕ್, ಆರ್ಎಫ್ಓ ರತ್ನಪ್ರಭಾ, ಡಾ. ಭಾರತಿ ರಾಜಶೇಖರ್ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡು ಮಹಿಳೆಯರ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಮಾತನಾಡಿದರು.<br /> <br /> ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: `ಅತಿಯಾದ ಭಾವನಾತ್ಮಕತೆಯೇ ಅನೇಕ ಬಾರಿ ಮಹಿಳೆಗೆ ಸಮಸ್ಯೆ ಉಂಟುಮಾಡುತ್ತದೆ. ಮನೆಯಿಂದ ಹೊರಗೆ ಬಂದು ದುಡಿಯುವ ಮಹಿಳೆ, ಮನೆಯೊಳಗೆ ಹೋಗುತ್ತಿದ್ದಂತೆ ಗೃಹಿಣಿಯಾಗಿ ಎಲ್ಲರ ಬೇಕು ಬೇಡಗಳನ್ನೂ ವಿಚಾರಿಸಿಕೊಳ್ಳಬೇಕು. ಈ ಒತ್ತಡದಲ್ಲಿ ತನ್ನ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಕೊರಗಬೇಕಾಗುತ್ತದೆ~ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ನುಡಿದರು.<br /> <br /> ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ `ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ಹಿಂದಿನ ದಿನಗಳಿಗೆ ಹೋಲಿಸಿದರೆ ಮಹಿಳೆಯರ ಸ್ಥಿತಿ ಸುಧಾರಣೆಯಾಗಿದೆ. ಆದರೆ ಪೂರ್ತಿಯಾಗಿ ಬದಲಾಗಿಲ್ಲ. ಸಾಮಾನ್ಯ ಮಹಿಳೆ ಈಗಲೂ ಅತಿ ಕಷ್ಟದ ಬದುಕನ್ನೇ ನಡೆಸುತ್ತಿದ್ದಾಳೆ. ಹಲವು ಸಾಮಾಜಿಕ ಕಟ್ಟುಪಾಡುಗಳಿಗೆ ಆಕೆ ಒಳಗಾಗುತ್ತಿದ್ದಾಳೆ. ಅನೇಕ ಸಂದರ್ಭಗಳಲ್ಲಿ ಮಹಿಳೆಯ `ಅಹಂ~ನಿಂದಲೂ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಗಳನ್ನು ನಿವಾರಿಸಲು ಕೇವಲ ಮಹಿಳೆಯಿಂದ ಅಥವಾ ಪುರುಷರಿಂದ ಸಾಧ್ಯವಿಲ್ಲ. ಇಡೀ ಸಮುದಾಯ ಸೇರಿ ಪರಸ್ಪರರನ್ನು ಗೌರವಿಸಬೇಕು ಎಂದು ಮೋಟಮ್ಮ ನುಡಿದರು.<br /> <br /> ಗ್ರಾಮೀಣ ಮಹಿಳೆಯರೂ ಶೋಕಿ ಜೀವನಕ್ಕೆ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೋಟಮ್ಮ, `ಮಹಿಳೆಯರು ಪಟ್ಟಣದ ಜೀವನದಿಂದ ಆಕರ್ಷಿತರಾಗುವುದರ ಜತೆಗೆ ಮಕ್ಕಳನ್ನೂ ಸಹ ಗ್ಲ್ಯಾಮರ್ ಜೀವನದತ್ತ ತಳ್ಳುತ್ತಿದ್ದಾರೆ. ಮೊದಲು ಇದನ್ನು ತಡೆಯಬೇಕು. ನಾವು ಮಕ್ಕಳನ್ನು ಬೆಳೆಸುವುದರಲ್ಲೇ ಎಡವುತ್ತಿದ್ದೇವೆ. ಬದಲಾವಣೆಗೆ ನಾವು ಸಹ ಸಿದ್ಧರಾಗಬೇಕು~ ಎಂದರು.<br /> <br /> ಮುಖ್ಯ ಅತಿಥಿಯಾಗಿದ್ದ ಪತ್ರಕರ್ತೆ ಕೆ.ಎಸ್. ನಿರುಪಮಾ, `ಮಹಿಳೆಯರು ಮೊದಲು ತಾವು ಚೆನ್ನಾಗಿರುವುದನ್ನು ಕಲಿಯಬೇಕು. ಸಾಮಾಜಿಕ ಕಟ್ಟಳೆಗಳನ್ನು ಧಿಕ್ಕರಿಸುವಾಗ ಸಮಾಜ ನಮ್ಮ ಚಾರಿತ್ರ್ಯದ ಮೇಲೆ ದಾಳಿ ಮಾಡುತ್ತದೆ. ನಾವು ಸರಿಯಾಗಿದ್ದರೆ ಇದಕ್ಕೆ ಅಂಜಬೇಕಾಗುವುದಿಲ್ಲ. `ಒಳ್ಳೆಯವರು~ ಎಂಬ ಲೇಬಲ್ ಅಂಟಿಸಿಕೊಳ್ಳುವ ಚಟದಿಂದ ಹೊರಬಂದು ಒಳ್ಳೆಯವರಾಗಿರೋಣ. ಗಟ್ಟಿಯಾದ ವ್ಯಕ್ತಿತ್ವ ರೂಪಿಸಿಕೊಂಡರೆ ಬೇಕಾದ ಎತ್ತರಕ್ಕೆ ಏರಬಹುದು~ ಎಂದರು.<br /> <br /> `ಮಹಿಳೆ ಕೀಳರಿಮೆ ಬಿಟ್ಟು ತಂತ್ರಜ್ಞಾನದ ಲಾಭ ಪಡೆಯಬೇಕು. ಅಗತ್ಯ ಇರಲಿ, ಇಲ್ಲದಿರಲಿ ಈಚಿನ ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಹೊಂದಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ~ ಎಂದರು.<br /> <br /> ಉಷಾ ಕೃಷ್ಣಮೂರ್ತಿ, ಲೇಖಕಿ ಬಾನು ಮುಷ್ತಾಕ್, ಆರ್ಎಫ್ಓ ರತ್ನಪ್ರಭಾ, ಡಾ. ಭಾರತಿ ರಾಜಶೇಖರ್ ಮುಂತಾದವರು ಸಂವಾದದಲ್ಲಿ ಪಾಲ್ಗೊಂಡು ಮಹಿಳೆಯರ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಮಾತನಾಡಿದರು.<br /> <br /> ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು. ಉದಯಕುಮಾರ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>