<p><strong>ವಾಷಿಂಗ್ಟನ್(ಐಎಎನ್ಎಸ್):</strong> ವಿತ್ತೀಯ ಸೇರ್ಪಡೆ, ಆರ್ಥಿಕ ಬಲವರ್ಧನೆ, ಹಣದುಬ್ಬರ ನಿಯಂತ್ರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಭಾರತವು ಹಿಂದಿನ ಸುಸ್ಥಿರ ಪ್ರಗತಿಯ ಮಟ್ಟಕ್ಕೆ ಮರಳಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಲಹೆ ಮಾಡಿದೆ. <br /> <br /> ದೊಡ್ಡ ಮಟ್ಟದ ಹಣಕಾಸಿನ ವಹಿವಾಟಿನಲ್ಲಿ ಭಾರತ ಅನುಸರಿಸುತ್ತಿರುವ ನೀತಿ ಮತ್ತು ದೇಶದ ಮೂಲ ಅರ್ಥ ವ್ಯವಸ್ಥೆಯ ಉತ್ತಮವಾಗಿದೆ. ಇದರಿಂದಾಗಿಯೇ ಜಾಗತಿಕ ಆರ್ಥಿಕ ಸ್ಥಿತಿ ಅಸ್ಥಿರವಾಗಿದ್ದರೂ ಭಾರತ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ವಿಭಾಗದಲ್ಲಿನ ಲೋಪಗಳನ್ನು ಸರಿಪಡಿಸಿ, ಹಣದುಬ್ಬರ ನಿಯಂತ್ರಿಸಿದರೆ ಮತ್ತೆ ಹಿಂದಿನ ಪ್ರಗತಿಯ(ಜಿಡಿಪಿ) ಮಟ್ಟಕ್ಕೇ ಮರಳಬಹುದು ಎಂದು ಐಎಂಎಫ್ ವರದಿ ಹೇಳಿದೆ. <br /> <br /> ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ ಕ್ರಮ ಸೂಕ್ತವಾಗಿದೆ. ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿಯುತ್ತಿದ್ದಂತೆ ಬಡ್ಡಿ ದರ ತಗ್ಗಿಸಬಹುದು. ಜತೆಗೆ ಸಾರ್ವಜನಿಕ ಆಯವ್ಯಯ ನಿರ್ವಹಣೆಯನ್ನೂ ಸುಧಾರಿಸಬೇಕು. ಖಾಸಗಿ-ಸರ್ಕಾರಿ ಸಹಭಾಗಿತ್ವದ ಹೂಡಿಕೆಗಳೂ ಹೆಚ್ಚಬೇಕು. ಇಂಧನ ಮತ್ತು ರಸಗೊಬ್ಬರಕ್ಕೆ ನೀಡುವ ಸಹಾಯಧನವನ್ನೂ ಕಡಿಮೆ ಮಾಡಬೇಕು ಎಂದೂ `ಐಎಂಎಫ್~ ಹೇಳಿದೆ.ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) `ಐಎಂಎಫ್~ ಬೆಂಬಲ ವ್ಯಕ್ತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್(ಐಎಎನ್ಎಸ್):</strong> ವಿತ್ತೀಯ ಸೇರ್ಪಡೆ, ಆರ್ಥಿಕ ಬಲವರ್ಧನೆ, ಹಣದುಬ್ಬರ ನಿಯಂತ್ರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಭಾರತವು ಹಿಂದಿನ ಸುಸ್ಥಿರ ಪ್ರಗತಿಯ ಮಟ್ಟಕ್ಕೆ ಮರಳಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಲಹೆ ಮಾಡಿದೆ. <br /> <br /> ದೊಡ್ಡ ಮಟ್ಟದ ಹಣಕಾಸಿನ ವಹಿವಾಟಿನಲ್ಲಿ ಭಾರತ ಅನುಸರಿಸುತ್ತಿರುವ ನೀತಿ ಮತ್ತು ದೇಶದ ಮೂಲ ಅರ್ಥ ವ್ಯವಸ್ಥೆಯ ಉತ್ತಮವಾಗಿದೆ. ಇದರಿಂದಾಗಿಯೇ ಜಾಗತಿಕ ಆರ್ಥಿಕ ಸ್ಥಿತಿ ಅಸ್ಥಿರವಾಗಿದ್ದರೂ ಭಾರತ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ವಿಭಾಗದಲ್ಲಿನ ಲೋಪಗಳನ್ನು ಸರಿಪಡಿಸಿ, ಹಣದುಬ್ಬರ ನಿಯಂತ್ರಿಸಿದರೆ ಮತ್ತೆ ಹಿಂದಿನ ಪ್ರಗತಿಯ(ಜಿಡಿಪಿ) ಮಟ್ಟಕ್ಕೇ ಮರಳಬಹುದು ಎಂದು ಐಎಂಎಫ್ ವರದಿ ಹೇಳಿದೆ. <br /> <br /> ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ ಕ್ರಮ ಸೂಕ್ತವಾಗಿದೆ. ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿಯುತ್ತಿದ್ದಂತೆ ಬಡ್ಡಿ ದರ ತಗ್ಗಿಸಬಹುದು. ಜತೆಗೆ ಸಾರ್ವಜನಿಕ ಆಯವ್ಯಯ ನಿರ್ವಹಣೆಯನ್ನೂ ಸುಧಾರಿಸಬೇಕು. ಖಾಸಗಿ-ಸರ್ಕಾರಿ ಸಹಭಾಗಿತ್ವದ ಹೂಡಿಕೆಗಳೂ ಹೆಚ್ಚಬೇಕು. ಇಂಧನ ಮತ್ತು ರಸಗೊಬ್ಬರಕ್ಕೆ ನೀಡುವ ಸಹಾಯಧನವನ್ನೂ ಕಡಿಮೆ ಮಾಡಬೇಕು ಎಂದೂ `ಐಎಂಎಫ್~ ಹೇಳಿದೆ.ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) `ಐಎಂಎಫ್~ ಬೆಂಬಲ ವ್ಯಕ್ತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>