<p><strong>ಶಿವಯೋಗಮಂದಿರ (ಬಾಗಲಕೋಟೆ):</strong> `ಕೋಟಿ ಮಂದಿಯ ಕತೆ ಬಿಟ್ಟು ಏಕವ್ಯಕ್ತಿ (ರಾಜರ) ಕೇಂದ್ರೀಕೃತವಾಗಿ ಬ್ರಿಟಿಷರು ತಿರುಚಿ ರಚಿಸಿರುವ ಭಾರತೀಯ ಇತಿಹಾಸದ ಪುಟಗಳನ್ನು ಮರು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ~ ಎಂದು ಕೋಲ್ಕತ್ತಾ ವಿ.ವಿ.ಯ ಮಾನವ ಶಾಸ್ತ್ರಜ್ಞ ಡಾ. ಸೋಮನಾಥ ಚಕ್ರವರ್ತಿ ಪ್ರತಿಪಾದಿಸಿದರು.<br /> <br /> ಬಾದಾಮಿ ಸಮೀಪದ ಶಿವಯೋಗ ಮಂದಿರದ ಅತಿಥಿ ಗೃಹದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ 17ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.<br /> <br /> ಆರ್ಯರು ಭಾರತಕ್ಕೆ ವಲಸೆ ಬಂದವರಲ್ಲ, ಆರ್ಯರು ಇಲ್ಲಿಯ ಮೂಲ ನಿವಾಸಿಗಳು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದರೆ, ಬ್ರಿಟಿಷರು `ಭಾರತ ಒಂದು ಧರ್ಮಶಾಲೆ ಇದ್ದಂತೆ~ ಎಂದು ವ್ಯಾಖ್ಯಾನಿಸಿದರು. <br /> <br /> `ಇಲ್ಲಿಗೆ ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ವಲಸೆ ಬಂದಂತೆ ಆರ್ಯರೂ ವಲಸೆ ಬಂದಿದ್ದಾರೆ. ಇಲ್ಲಿಗೆ ಯಾರಾದರೂ ಬರಬಹುದು, ಹೋಗಬಹುದು, ಭಾರತ ಯಾರೊಬ್ಬರ ಸ್ವತ್ತಲ್ಲ~ ಎಂದು ಸುಳ್ಳು ಕತೆ ಕಟ್ಟಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ್ದರು ಎಂದರು.<br /> <br /> ಭಾರತದ ಜನ ಸಮುದಾಯದ ನೈಜ ಇತಿಹಾಸವನ್ನು ಸಾರುವ ಗವಿ ವರ್ಣಚಿತ್ರಗಳು ಮತ್ತು ಕಲ್ಲಾಸರೆ ಚಿತ್ರಗಳು (ರಾಕ್ ಆರ್ಟ್) ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಯೋಗಮಂದಿರ (ಬಾಗಲಕೋಟೆ):</strong> `ಕೋಟಿ ಮಂದಿಯ ಕತೆ ಬಿಟ್ಟು ಏಕವ್ಯಕ್ತಿ (ರಾಜರ) ಕೇಂದ್ರೀಕೃತವಾಗಿ ಬ್ರಿಟಿಷರು ತಿರುಚಿ ರಚಿಸಿರುವ ಭಾರತೀಯ ಇತಿಹಾಸದ ಪುಟಗಳನ್ನು ಮರು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ~ ಎಂದು ಕೋಲ್ಕತ್ತಾ ವಿ.ವಿ.ಯ ಮಾನವ ಶಾಸ್ತ್ರಜ್ಞ ಡಾ. ಸೋಮನಾಥ ಚಕ್ರವರ್ತಿ ಪ್ರತಿಪಾದಿಸಿದರು.<br /> <br /> ಬಾದಾಮಿ ಸಮೀಪದ ಶಿವಯೋಗ ಮಂದಿರದ ಅತಿಥಿ ಗೃಹದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ 17ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.<br /> <br /> ಆರ್ಯರು ಭಾರತಕ್ಕೆ ವಲಸೆ ಬಂದವರಲ್ಲ, ಆರ್ಯರು ಇಲ್ಲಿಯ ಮೂಲ ನಿವಾಸಿಗಳು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದರೆ, ಬ್ರಿಟಿಷರು `ಭಾರತ ಒಂದು ಧರ್ಮಶಾಲೆ ಇದ್ದಂತೆ~ ಎಂದು ವ್ಯಾಖ್ಯಾನಿಸಿದರು. <br /> <br /> `ಇಲ್ಲಿಗೆ ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ವಲಸೆ ಬಂದಂತೆ ಆರ್ಯರೂ ವಲಸೆ ಬಂದಿದ್ದಾರೆ. ಇಲ್ಲಿಗೆ ಯಾರಾದರೂ ಬರಬಹುದು, ಹೋಗಬಹುದು, ಭಾರತ ಯಾರೊಬ್ಬರ ಸ್ವತ್ತಲ್ಲ~ ಎಂದು ಸುಳ್ಳು ಕತೆ ಕಟ್ಟಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ್ದರು ಎಂದರು.<br /> <br /> ಭಾರತದ ಜನ ಸಮುದಾಯದ ನೈಜ ಇತಿಹಾಸವನ್ನು ಸಾರುವ ಗವಿ ವರ್ಣಚಿತ್ರಗಳು ಮತ್ತು ಕಲ್ಲಾಸರೆ ಚಿತ್ರಗಳು (ರಾಕ್ ಆರ್ಟ್) ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಅಭಿಪ್ರಾಯಪಟ್ಟರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>