<p>ಕೊಟ್ಟೂರು ದೇವಾಲಯಗಳ ಪಟ್ಟಣ. ಇಲ್ಲಿರುವ ತೊಟ್ಟಿಲಮಠ, ಹಿರೆಮಠ, ಗಚ್ಚಿನಮಠ, ಮೂರ್ಕಲ್ ಮಠಗಳು ವೈಶಿಷ್ಟ್ಯಪೂರ್ಣ ಶಿಲ್ಪಕಲೆಗಳಿಂದ ಕೂಡಿವೆ. ಇಲ್ಲಿನ ಉಬ್ಬು ಶಿಲ್ಪಗಳು ರೋಮಾಂಚಕ ಇತಿಹಾಸ ಸಾರುತ್ತ ನಿಂತಿವೆ.</p>.<p>ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜೀವಂತ ಸಮಾಧಿಯಾದ ಗಚ್ಚಿನ ಮಠದಲ್ಲಿನ ಕಲ್ಲುಕಂಬಗಳು ಏಳನೇ ಶತಮಾನದ ಇತಿಹಾಸ ಸಾರುತ್ತವೆ.</p>.<p>ಮಹೇಶ್ವರ ಕಾಳಾಮುಖ ಎಂಬ ಪದವು (ಏಳನೇ ಶತಮಾನ) ಆಂಧ್ರಪದೇಶ ರಾಜ್ಯದ ಕರ್ನೂಲು ಜಿಲ್ಲೆಯ ನಂದಿಕೊಟ್ಟೂರು ತಾಲ್ಲೂಕಿನ ಸಾತಾನಿಕೋಟದ ಶಾಸನದಲ್ಲಿ ಉಲ್ಲೇಖವಾಗಿದೆ.</p>.<p>ಕರ್ನಾಟಕದಲ್ಲಿ ಕಿ,ಶ. 810ರ ಗಂಗರ ಕಾಲದ ತಾಮ್ರಪಟವೊಂದರ ಉಲ್ಲೇಖವೇ ಕಾಳಾಮುಖರ ಪ್ರಾಚೀನ ಉಲ್ಲೇಖವಾಗಿದೆ.<br /> ಕಾಶ್ಮೀರ ಶೈವಮತದ ಕಾಳಾಮುಖರು ಮೊದಲು ಆಂಧ್ರಪ್ರದೇಶದ ಶ್ರೀಶೈಲವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು ಎಂಬುದು ಶಾಸನಗಳಿಂದ ತಿಳಿದು ಬರುವ ಸಂಗತಿ.</p>.<p>ಶ್ರೀಶೈಲವು ಕಾಳಾಮುಖರ ಕೇಂದ್ರವಾಗಿದ್ದು, ಇಲ್ಲಿನ ಒಂದು ಪಂಗಡದ ಶಾಖೆಯು ಕರ್ನಾಟಕದಲ್ಲಿ ಹರಡಿತ್ತು. ಕ್ರಿ.ಶ. 10-11ನೇ ಶತಮಾನದ ಅವಧಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕಾಳಾಮುಖರ ಯತಿಗಳ ಪ್ರಭಾವದಿಂದ ಸಾವಿರಾರು ಶಿವಾಲಯಗಳು ನಿರ್ಮಾಣಗೊಂಡವು.<br /> ಇಂತಹ ಶಿವಾಲಯಗಳು ಕಾಳಾಮುಖ ಮಠಗಳನ್ನು ಹೊಂದಿತ್ತಲ್ಲದೇ, ನಂತರದಲ್ಲಿ ವಿದ್ಯಾಕೇಂದ್ರಗಳಾಗಿ ರೂಪಾಂತರಗೊಂಡವು. ಈ ವಿದ್ಯಾಕೇಂದ್ರಗಳಲ್ಲಿ ಶ್ರೇಷ್ಠ ವಿದ್ವಾಂಸರಿಂದ ಹಿಂದೂ ಧರ್ಮಕುರಿತು ಚರ್ಚೆ, ಸಂವಾದಗಳು ಜರುಗುತ್ತಿದ್ದವು.</p>.<p>ನಿಶ್ಚಿತವಾದ ಪಠ್ಯಗಳನ್ನು ಬೋಧಿಸುತ್ತಿದ್ದ ‘ಘಟಿಕಾ ಸ್ಥಾನ’ಗಳಲ್ಲಿ ಕೊಟ್ಟೂರಿಗೆ ಹತ್ತಿರವಿರುವ ‘ಕೋಗಳಿ’ ಗ್ರಾಮವು ಕಾಳಾಮುಖ ಯತಿಗಳ ಒಂದು ವಿದ್ಯಾಕೇಂದ್ರವಾಗಿತ್ತು ಎಂಬುದು ತಿಳಿದುಬರುತ್ತದೆ.</p>.<p> ತದನಂತರ ಕಾಳಾಮುಖ ಪಂಥವು ವೀರಶೈವ ಪಂಥದಲ್ಲಿ ಲೀನವಾಗಿ ವೀರಶೈವ ಮತವೆಂದು ಪ್ರಚಾರವಾಯಿತು. ಇಂತಹ ಸುದೀರ್ಘ ಇತಿಹಾಸವುಳ್ಳ ಕೆಲವು ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ಅವರ ವಾಸ್ತುಶಿಲ್ಪಗಳನ್ನು ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಇಂದಿಗೂ ಕಾಣಬಹುದು.</p>.<p>ಈ ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ವಾಸ್ತುಶಿಲ್ಪಗಳು ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿಯೇ (ಸಂಗಮ ವಂಶದ 1ನೇ ದೇವರಾಯ ಹಾಗೂ 2ನೇ ದೇವರಾಯ ಆಡಳಿತ ಕಾಲ) ಪ್ರಚಲಿತವಿದ್ದವೆಂಬುದು ಸ್ಪಷ್ಟವಾಗುತ್ತದೆ.</p>.<p>ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಕಂಡು ಬರುವ ಮಹೇಶ್ವರ ‘ಕಾಳಾಮುಖ’ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತುಶಿಲ್ಪ ಕೃತಿಗಳು ಈ ಕೆಳಗಿನಂತಿವೆ. ಈ ಕಾಳಾಮುಖ ಯತಿಗಳ ಹೆಸರುಗಳನ್ನು ತಿಳಿಯಲು ನಮಗೆ ಸರಿಯಾದ ಅಧಾರ ಗ್ರಂಥಗಳಾಗಿಲಿ, ಶಾಸನಗಳಾಗಲಿ ಲಭ್ಯವಾಗಿಲ್ಲ.</p>.<p>ಲಭ್ಯವಿರುವ ನೊಳಂಬರ ಕಾಲದ (ಕ್ರಿ.ಶ.8ನೇ ಶತಮಾನದಿಂದ 11ನೇ ಶತಮಾನದವರೆಗೆ ಆಡಳಿತ ನಡೆಸಿದ) ಕೆಲವು ಕಾಳಾಮುಖ ಯತಿಗಳ ಹೆಸರುಗಳುಳ್ಳ ಪಟ್ಟಿಯನ್ನು ಡಾ. ಎಚ್. ಜಯಮ್ಮ ಕರಿಯಣ್ಣ ಅವರು ರಚಿಸಿರುವ ‘ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.</p>.<p>ಇದರಲ್ಲಿ ಹೆಸರಿಸಿರುವ ಕೆಲವು ಕಾಳಾಮುಖ ಯತಿಗಳ ಚಿತ್ರಗಳು ಗಚ್ಚಿನಮಠದಲ್ಲಿ ಇವೆ. ನೊಂಳಬರ ಕಾಲದ ಅನೇಕ ಕಾಳಾಮುಖ ಯತಿಗಳ ಹೆಸರುಗಳಿರುವ ಶಾಸನಗಳು, ಬಾಗುಳಿ, ಉಚ್ಚಂಗಿದುರ್ಗ, ಕೋಗಳಿ, ಹಿರೇಹಡಗಲಿ, ಬಳ್ಳಾರಿ, ಸೋಗಿ, ಮೋರಿಗೇರಿ, ಚಿಮ್ಮನಹಳ್ಳಿ, ಸಿರಸ್ದಹಳ್ಳಿ, ಮಾನ್ಯರ ಮಸಲವಾಡ, ಹಿರೇಮ್ಯಾಗಳಗೇರಿ, ನಂದಿಬೇವೂರು ಗ್ರಾಮಗಳಲ್ಲಿ ಕಾಣಬಹುದು.</p>.<p>ಗಚ್ಚಿನಮಠದಲ್ಲಿ ಮಹೇಶ್ವರ ಕಾಳಾಮುಖ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತು ಶಿಲ್ಪಗಳನ್ನು ಮತ್ತು ವಿಜಯನಗರ ಸಾಮ್ರಾಜ್ಯ ಪೂರ್ವದ ಸ್ತಂಭಗಳನ್ನು ಶಿಲ್ಪಗಳಲ್ಲಿ ಚಿತ್ರಿಸಿರುವುದನ್ನು ಗಮನಿಸಬಹುದು. ಈ ದೇವಾಲಯ ನಿರ್ಮಾಣದ ಕಾಲವನ್ನು ನಿರ್ಧರಿಸಲು ಸಂಶೋಧಕರಿಗೆ ಸಹಾಯವಾಗಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಟ್ಟೂರು ದೇವಾಲಯಗಳ ಪಟ್ಟಣ. ಇಲ್ಲಿರುವ ತೊಟ್ಟಿಲಮಠ, ಹಿರೆಮಠ, ಗಚ್ಚಿನಮಠ, ಮೂರ್ಕಲ್ ಮಠಗಳು ವೈಶಿಷ್ಟ್ಯಪೂರ್ಣ ಶಿಲ್ಪಕಲೆಗಳಿಂದ ಕೂಡಿವೆ. ಇಲ್ಲಿನ ಉಬ್ಬು ಶಿಲ್ಪಗಳು ರೋಮಾಂಚಕ ಇತಿಹಾಸ ಸಾರುತ್ತ ನಿಂತಿವೆ.</p>.<p>ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜೀವಂತ ಸಮಾಧಿಯಾದ ಗಚ್ಚಿನ ಮಠದಲ್ಲಿನ ಕಲ್ಲುಕಂಬಗಳು ಏಳನೇ ಶತಮಾನದ ಇತಿಹಾಸ ಸಾರುತ್ತವೆ.</p>.<p>ಮಹೇಶ್ವರ ಕಾಳಾಮುಖ ಎಂಬ ಪದವು (ಏಳನೇ ಶತಮಾನ) ಆಂಧ್ರಪದೇಶ ರಾಜ್ಯದ ಕರ್ನೂಲು ಜಿಲ್ಲೆಯ ನಂದಿಕೊಟ್ಟೂರು ತಾಲ್ಲೂಕಿನ ಸಾತಾನಿಕೋಟದ ಶಾಸನದಲ್ಲಿ ಉಲ್ಲೇಖವಾಗಿದೆ.</p>.<p>ಕರ್ನಾಟಕದಲ್ಲಿ ಕಿ,ಶ. 810ರ ಗಂಗರ ಕಾಲದ ತಾಮ್ರಪಟವೊಂದರ ಉಲ್ಲೇಖವೇ ಕಾಳಾಮುಖರ ಪ್ರಾಚೀನ ಉಲ್ಲೇಖವಾಗಿದೆ.<br /> ಕಾಶ್ಮೀರ ಶೈವಮತದ ಕಾಳಾಮುಖರು ಮೊದಲು ಆಂಧ್ರಪ್ರದೇಶದ ಶ್ರೀಶೈಲವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು ಎಂಬುದು ಶಾಸನಗಳಿಂದ ತಿಳಿದು ಬರುವ ಸಂಗತಿ.</p>.<p>ಶ್ರೀಶೈಲವು ಕಾಳಾಮುಖರ ಕೇಂದ್ರವಾಗಿದ್ದು, ಇಲ್ಲಿನ ಒಂದು ಪಂಗಡದ ಶಾಖೆಯು ಕರ್ನಾಟಕದಲ್ಲಿ ಹರಡಿತ್ತು. ಕ್ರಿ.ಶ. 10-11ನೇ ಶತಮಾನದ ಅವಧಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕಾಳಾಮುಖರ ಯತಿಗಳ ಪ್ರಭಾವದಿಂದ ಸಾವಿರಾರು ಶಿವಾಲಯಗಳು ನಿರ್ಮಾಣಗೊಂಡವು.<br /> ಇಂತಹ ಶಿವಾಲಯಗಳು ಕಾಳಾಮುಖ ಮಠಗಳನ್ನು ಹೊಂದಿತ್ತಲ್ಲದೇ, ನಂತರದಲ್ಲಿ ವಿದ್ಯಾಕೇಂದ್ರಗಳಾಗಿ ರೂಪಾಂತರಗೊಂಡವು. ಈ ವಿದ್ಯಾಕೇಂದ್ರಗಳಲ್ಲಿ ಶ್ರೇಷ್ಠ ವಿದ್ವಾಂಸರಿಂದ ಹಿಂದೂ ಧರ್ಮಕುರಿತು ಚರ್ಚೆ, ಸಂವಾದಗಳು ಜರುಗುತ್ತಿದ್ದವು.</p>.<p>ನಿಶ್ಚಿತವಾದ ಪಠ್ಯಗಳನ್ನು ಬೋಧಿಸುತ್ತಿದ್ದ ‘ಘಟಿಕಾ ಸ್ಥಾನ’ಗಳಲ್ಲಿ ಕೊಟ್ಟೂರಿಗೆ ಹತ್ತಿರವಿರುವ ‘ಕೋಗಳಿ’ ಗ್ರಾಮವು ಕಾಳಾಮುಖ ಯತಿಗಳ ಒಂದು ವಿದ್ಯಾಕೇಂದ್ರವಾಗಿತ್ತು ಎಂಬುದು ತಿಳಿದುಬರುತ್ತದೆ.</p>.<p> ತದನಂತರ ಕಾಳಾಮುಖ ಪಂಥವು ವೀರಶೈವ ಪಂಥದಲ್ಲಿ ಲೀನವಾಗಿ ವೀರಶೈವ ಮತವೆಂದು ಪ್ರಚಾರವಾಯಿತು. ಇಂತಹ ಸುದೀರ್ಘ ಇತಿಹಾಸವುಳ್ಳ ಕೆಲವು ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ಅವರ ವಾಸ್ತುಶಿಲ್ಪಗಳನ್ನು ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಇಂದಿಗೂ ಕಾಣಬಹುದು.</p>.<p>ಈ ಕಾಳಾಮುಖ ಯತಿಗಳ ಶಿಲ್ಪಗಳು ಹಾಗೂ ವಾಸ್ತುಶಿಲ್ಪಗಳು ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿಯೇ (ಸಂಗಮ ವಂಶದ 1ನೇ ದೇವರಾಯ ಹಾಗೂ 2ನೇ ದೇವರಾಯ ಆಡಳಿತ ಕಾಲ) ಪ್ರಚಲಿತವಿದ್ದವೆಂಬುದು ಸ್ಪಷ್ಟವಾಗುತ್ತದೆ.</p>.<p>ಗಚ್ಚಿನಮಠದಲ್ಲಿರುವ ಶಿಲ್ಪಗಳಲ್ಲಿ ಕಂಡು ಬರುವ ಮಹೇಶ್ವರ ‘ಕಾಳಾಮುಖ’ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತುಶಿಲ್ಪ ಕೃತಿಗಳು ಈ ಕೆಳಗಿನಂತಿವೆ. ಈ ಕಾಳಾಮುಖ ಯತಿಗಳ ಹೆಸರುಗಳನ್ನು ತಿಳಿಯಲು ನಮಗೆ ಸರಿಯಾದ ಅಧಾರ ಗ್ರಂಥಗಳಾಗಿಲಿ, ಶಾಸನಗಳಾಗಲಿ ಲಭ್ಯವಾಗಿಲ್ಲ.</p>.<p>ಲಭ್ಯವಿರುವ ನೊಳಂಬರ ಕಾಲದ (ಕ್ರಿ.ಶ.8ನೇ ಶತಮಾನದಿಂದ 11ನೇ ಶತಮಾನದವರೆಗೆ ಆಡಳಿತ ನಡೆಸಿದ) ಕೆಲವು ಕಾಳಾಮುಖ ಯತಿಗಳ ಹೆಸರುಗಳುಳ್ಳ ಪಟ್ಟಿಯನ್ನು ಡಾ. ಎಚ್. ಜಯಮ್ಮ ಕರಿಯಣ್ಣ ಅವರು ರಚಿಸಿರುವ ‘ನೊಳಂಬರ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.</p>.<p>ಇದರಲ್ಲಿ ಹೆಸರಿಸಿರುವ ಕೆಲವು ಕಾಳಾಮುಖ ಯತಿಗಳ ಚಿತ್ರಗಳು ಗಚ್ಚಿನಮಠದಲ್ಲಿ ಇವೆ. ನೊಂಳಬರ ಕಾಲದ ಅನೇಕ ಕಾಳಾಮುಖ ಯತಿಗಳ ಹೆಸರುಗಳಿರುವ ಶಾಸನಗಳು, ಬಾಗುಳಿ, ಉಚ್ಚಂಗಿದುರ್ಗ, ಕೋಗಳಿ, ಹಿರೇಹಡಗಲಿ, ಬಳ್ಳಾರಿ, ಸೋಗಿ, ಮೋರಿಗೇರಿ, ಚಿಮ್ಮನಹಳ್ಳಿ, ಸಿರಸ್ದಹಳ್ಳಿ, ಮಾನ್ಯರ ಮಸಲವಾಡ, ಹಿರೇಮ್ಯಾಗಳಗೇರಿ, ನಂದಿಬೇವೂರು ಗ್ರಾಮಗಳಲ್ಲಿ ಕಾಣಬಹುದು.</p>.<p>ಗಚ್ಚಿನಮಠದಲ್ಲಿ ಮಹೇಶ್ವರ ಕಾಳಾಮುಖ ಯತಿಗಳ ಚಿತ್ರಗಳು ಹಾಗೂ ಅವರ ವಾಸ್ತು ಶಿಲ್ಪಗಳನ್ನು ಮತ್ತು ವಿಜಯನಗರ ಸಾಮ್ರಾಜ್ಯ ಪೂರ್ವದ ಸ್ತಂಭಗಳನ್ನು ಶಿಲ್ಪಗಳಲ್ಲಿ ಚಿತ್ರಿಸಿರುವುದನ್ನು ಗಮನಿಸಬಹುದು. ಈ ದೇವಾಲಯ ನಿರ್ಮಾಣದ ಕಾಲವನ್ನು ನಿರ್ಧರಿಸಲು ಸಂಶೋಧಕರಿಗೆ ಸಹಾಯವಾಗಬಹುದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>