<p><strong>ಗದಗ: </strong> ಕುಳಿತುಕೊಳ್ಳಲು ಸುಸಜ್ಜಿತ ಆಸನದ ವ್ಯವಸ್ಥೆ ಇಲ್ಲ. ಬಾಯಾರಿಕೆ ತಣಿಸಲು ಕುಡಿಯುವ ನೀರಿಲ್ಲ. ಮಳೆ, ಬಿಸಿಲು ರಕ್ಷಣೆ ಪಡೆಯಲು ಮೇಲ್ಚಾವಣೆ ಇಲ್ಲ. ಇದು ಗದಗ-ಬೆಟಗೇರಿ ಅವಳಿ ನಗದಲ್ಲಿನ ಬಸ್ ತಂಗುದಾಣಗಳ ದುಃಸ್ಥಿತಿ. <br /> <br /> ಅವಳಿ ನಗರದಲ್ಲಿ ಬಸ್ ಸಂಚರಿಸುವ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ನಿರ್ಮಿ ಸಲಾದ ಬಸ್ ನಿಲ್ದಾಣಗಳು ಹಾಳು ಬಿದ್ದಿವೆ. ಅಲ್ಲಿ ಪ್ರಯಾಣಿಕರು ಕುಳಿತುಕೊಳ್ಳದೆ ಕೊಂಚ ದೂರದಲ್ಲಿ ಸರಿದು ಬಿಸಿಲಿನಲ್ಲಿಯೇ ಬಸ್ಗೆ ಕಾಯ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಕಳೆದ ವರ್ಷಕ್ಕಿಂತ ವರ್ಷ ಅವಳಿ ನಗರದಲ್ಲಿ ಭಾರಿ ಬಿಸಿಲು ಕಾಣಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ತಾಪಮಾನ ಬಹಳ ಹೆಚ್ಚಾಗಿದೆ. ಇದರಿಂದ ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. <br /> <br /> ಇಂತಹದರಲ್ಲಿ ಒಂದು ಬಡಾವ ಣೆಯಿಂದ ಮತ್ತೊಂದು ಕಾಲೊನಿ- ನಗರಕ್ಕೆ ತೆರಳಲು ಸಿಟಿ ಬಸ್ಗಳನ್ನು ಅವಲಂಬಿಸಿರುವ ಪ್ರಯಾಣಿಕರು ಉರಿ ಬಿಸಿಲಿನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. <br /> <br /> ನಗರದಲ್ಲಿನ ಕೆಲವೊಂದು ಬಸ್ ತಂಗುದಾಣಗಳ ಪಕ್ಕದಲ್ಲಿಯೇ ಚರಂಡಿ ಇದ್ದುದರಿಂದ ಪಾದಚಾರಿಗಳು ಅಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ನಿಲ್ದಾಣದಲ್ಲಿ ಕಾಂಪೌಂಡ್ಗಳನ್ನೇ ಈ ಕೆಲಸಕ್ಕೆ ಬಳಕೆ ಮಾಡಿ ಕೊಳ್ಳ ಲಾಗುತ್ತಿದೆ. <br /> <br /> ಇದರಿಂದ ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರು ನಿಲ್ದಾಣದ ಹತ್ತಿರ ಬರಲು ಹಿಂಜರಿಯುತ್ತಿದ್ದಾರೆ. <br /> ಪ್ರತಿನಿತ್ಯ ಪ್ರಯಾಣಿಸುವ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ತಂಗುದಾಣದ ಆಶ್ರಯ ಪಡೆ ಯುವುದು ಕನಸಿನ ಮಾತು. <br /> <br /> ಬೆಟಗೇರಿಯ ಹೆಲ್ತ್ಕ್ಯಾಂಪ್ನ ಬಸ್ ತಂಗುದಾಣ ಸಂಪೂರ್ಣ ಪಾಳು ಬಿದ್ದು ಎರಡು ವರ್ಷವೇ ಕಳೆದಿದೆ. ವಾಣಿಜ್ಯ ಮಹಾವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿನ ತಂಗುದಾಣದ ಸ್ಥಿತಿ ಅಷ್ಟಕಷ್ಟೇ. <br /> <br /> ಮುಳಗುಂದ ನಾಕಾ ಹತ್ತಿರದ ನಿಲ್ದಾಣ, ಹಳೇ ಡಿ.ಸಿ ಕಚೇರಿ ಹತ್ತಿರ, ಹಾತಲಗೇರಿ ನಾಕಾದಲ್ಲಿನ ನಿಲ್ದಾಣ, ಗ್ರೇನ್ ಮಾರ್ಕೇಟ್ ಹತ್ತಿರದ ನಿಲ್ದಾಣಗಳು ಅಳಿವಿನ ಅಂಚಿನಲ್ಲಿವೆ. <br /> <br /> ನಗರದ ಒಳಗಿರುವ ಬಸ್ ನಿಲ್ದಾಣಗಳ ಕಥೆ ಹೀಗಾದರೆ ಪ್ರಮುಖವಾಗಿ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಮುಳಗುಂದ ನಾಕಾ ದಲ್ಲಿ ತಲೆ ಮೇಲೆ ಸೂರೇ ಇಲ್ಲ. ಬಿಸಿಲಾಗಲಿ, ಮಳೆಯಾಗಲಿ ಬಟ್ಟ ಬಯಲಿನ ರಸ್ತೆಯಲ್ಲಿಯೇ ನಿಂತು ಬಸ್ಗಾಗಿ ಕಾಯಬೇಕು. <br /> <br /> ದಿನಕ್ಕೆ ಸಾವಿರಾರು ಪ್ರಯಾಣಿಕರು ನಿಂತುಕೊಳ್ಳುವ ಈ ಜಾಗಾದಲ್ಲಿ ಉತ್ತಮ ಬಸ್ ತಂಗುದಾಣವಾಗಬೇಕು ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹ. <br /> <br /> ಕೆಲವೊಂದು ನಿಲ್ದಾಣಗಳಲ್ಲಿ ನಗರ ಬಸ್ ಅಲ್ಲದೇ ಬೇರೆ ಊರುಗಳಿಗೆ ಹೋಗುವ ಬಸ್ಗಳು ಸಹ ನಿಲ್ಲುತ್ತವೆ. ಬೇರೆ ಊರುಗಳಿಗೆ ಪ್ರಯಾಣಿಕರು ಈ ನಿಲ್ದಾಣಗಳಿಂದಲೇ ಪ್ರಯಾಣಿಸಬೇಕು. <br /> <br /> ಹೀಗಾಗಿ ಹೆಚ್ಚಾಗಿ ಬಳಕೆಯಾಗು ತ್ತಿರುವ ನಗರ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ ಅವುಳಿಗೆ ಹೊಸ ಮಾರ್ಪಾಡು ಮಾಡಬೇಕು. <br /> <br /> ಹೈಟೆಕ್ ನಿಲ್ದಾಣಗಳನ್ನಾಗಿ ಪರಿವರ್ತಿಸಬೇಕು. ಜನರಿಗೆ ಕುಳಿತು ಕೊಳ್ಳುವ ಸುಸಜ್ಜಿತ ಆಸನದ ವ್ಯವಸೆ ಯಾಗಬೇಕು.ಅವಸಾನದಲ್ಲಿರುವ ತಂಗು ದಾಣಗಳನ್ನು ಅಭಿವೃದ್ಧಿ ಪಡಿಸಲು ನಗರ ನಿವಾಸಿಗಳ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong> ಕುಳಿತುಕೊಳ್ಳಲು ಸುಸಜ್ಜಿತ ಆಸನದ ವ್ಯವಸ್ಥೆ ಇಲ್ಲ. ಬಾಯಾರಿಕೆ ತಣಿಸಲು ಕುಡಿಯುವ ನೀರಿಲ್ಲ. ಮಳೆ, ಬಿಸಿಲು ರಕ್ಷಣೆ ಪಡೆಯಲು ಮೇಲ್ಚಾವಣೆ ಇಲ್ಲ. ಇದು ಗದಗ-ಬೆಟಗೇರಿ ಅವಳಿ ನಗದಲ್ಲಿನ ಬಸ್ ತಂಗುದಾಣಗಳ ದುಃಸ್ಥಿತಿ. <br /> <br /> ಅವಳಿ ನಗರದಲ್ಲಿ ಬಸ್ ಸಂಚರಿಸುವ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ನಿರ್ಮಿ ಸಲಾದ ಬಸ್ ನಿಲ್ದಾಣಗಳು ಹಾಳು ಬಿದ್ದಿವೆ. ಅಲ್ಲಿ ಪ್ರಯಾಣಿಕರು ಕುಳಿತುಕೊಳ್ಳದೆ ಕೊಂಚ ದೂರದಲ್ಲಿ ಸರಿದು ಬಿಸಿಲಿನಲ್ಲಿಯೇ ಬಸ್ಗೆ ಕಾಯ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಕಳೆದ ವರ್ಷಕ್ಕಿಂತ ವರ್ಷ ಅವಳಿ ನಗರದಲ್ಲಿ ಭಾರಿ ಬಿಸಿಲು ಕಾಣಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ತಾಪಮಾನ ಬಹಳ ಹೆಚ್ಚಾಗಿದೆ. ಇದರಿಂದ ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. <br /> <br /> ಇಂತಹದರಲ್ಲಿ ಒಂದು ಬಡಾವ ಣೆಯಿಂದ ಮತ್ತೊಂದು ಕಾಲೊನಿ- ನಗರಕ್ಕೆ ತೆರಳಲು ಸಿಟಿ ಬಸ್ಗಳನ್ನು ಅವಲಂಬಿಸಿರುವ ಪ್ರಯಾಣಿಕರು ಉರಿ ಬಿಸಿಲಿನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. <br /> <br /> ನಗರದಲ್ಲಿನ ಕೆಲವೊಂದು ಬಸ್ ತಂಗುದಾಣಗಳ ಪಕ್ಕದಲ್ಲಿಯೇ ಚರಂಡಿ ಇದ್ದುದರಿಂದ ಪಾದಚಾರಿಗಳು ಅಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ನಿಲ್ದಾಣದಲ್ಲಿ ಕಾಂಪೌಂಡ್ಗಳನ್ನೇ ಈ ಕೆಲಸಕ್ಕೆ ಬಳಕೆ ಮಾಡಿ ಕೊಳ್ಳ ಲಾಗುತ್ತಿದೆ. <br /> <br /> ಇದರಿಂದ ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರು ನಿಲ್ದಾಣದ ಹತ್ತಿರ ಬರಲು ಹಿಂಜರಿಯುತ್ತಿದ್ದಾರೆ. <br /> ಪ್ರತಿನಿತ್ಯ ಪ್ರಯಾಣಿಸುವ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ತಂಗುದಾಣದ ಆಶ್ರಯ ಪಡೆ ಯುವುದು ಕನಸಿನ ಮಾತು. <br /> <br /> ಬೆಟಗೇರಿಯ ಹೆಲ್ತ್ಕ್ಯಾಂಪ್ನ ಬಸ್ ತಂಗುದಾಣ ಸಂಪೂರ್ಣ ಪಾಳು ಬಿದ್ದು ಎರಡು ವರ್ಷವೇ ಕಳೆದಿದೆ. ವಾಣಿಜ್ಯ ಮಹಾವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿನ ತಂಗುದಾಣದ ಸ್ಥಿತಿ ಅಷ್ಟಕಷ್ಟೇ. <br /> <br /> ಮುಳಗುಂದ ನಾಕಾ ಹತ್ತಿರದ ನಿಲ್ದಾಣ, ಹಳೇ ಡಿ.ಸಿ ಕಚೇರಿ ಹತ್ತಿರ, ಹಾತಲಗೇರಿ ನಾಕಾದಲ್ಲಿನ ನಿಲ್ದಾಣ, ಗ್ರೇನ್ ಮಾರ್ಕೇಟ್ ಹತ್ತಿರದ ನಿಲ್ದಾಣಗಳು ಅಳಿವಿನ ಅಂಚಿನಲ್ಲಿವೆ. <br /> <br /> ನಗರದ ಒಳಗಿರುವ ಬಸ್ ನಿಲ್ದಾಣಗಳ ಕಥೆ ಹೀಗಾದರೆ ಪ್ರಮುಖವಾಗಿ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಮುಳಗುಂದ ನಾಕಾ ದಲ್ಲಿ ತಲೆ ಮೇಲೆ ಸೂರೇ ಇಲ್ಲ. ಬಿಸಿಲಾಗಲಿ, ಮಳೆಯಾಗಲಿ ಬಟ್ಟ ಬಯಲಿನ ರಸ್ತೆಯಲ್ಲಿಯೇ ನಿಂತು ಬಸ್ಗಾಗಿ ಕಾಯಬೇಕು. <br /> <br /> ದಿನಕ್ಕೆ ಸಾವಿರಾರು ಪ್ರಯಾಣಿಕರು ನಿಂತುಕೊಳ್ಳುವ ಈ ಜಾಗಾದಲ್ಲಿ ಉತ್ತಮ ಬಸ್ ತಂಗುದಾಣವಾಗಬೇಕು ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹ. <br /> <br /> ಕೆಲವೊಂದು ನಿಲ್ದಾಣಗಳಲ್ಲಿ ನಗರ ಬಸ್ ಅಲ್ಲದೇ ಬೇರೆ ಊರುಗಳಿಗೆ ಹೋಗುವ ಬಸ್ಗಳು ಸಹ ನಿಲ್ಲುತ್ತವೆ. ಬೇರೆ ಊರುಗಳಿಗೆ ಪ್ರಯಾಣಿಕರು ಈ ನಿಲ್ದಾಣಗಳಿಂದಲೇ ಪ್ರಯಾಣಿಸಬೇಕು. <br /> <br /> ಹೀಗಾಗಿ ಹೆಚ್ಚಾಗಿ ಬಳಕೆಯಾಗು ತ್ತಿರುವ ನಗರ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ ಅವುಳಿಗೆ ಹೊಸ ಮಾರ್ಪಾಡು ಮಾಡಬೇಕು. <br /> <br /> ಹೈಟೆಕ್ ನಿಲ್ದಾಣಗಳನ್ನಾಗಿ ಪರಿವರ್ತಿಸಬೇಕು. ಜನರಿಗೆ ಕುಳಿತು ಕೊಳ್ಳುವ ಸುಸಜ್ಜಿತ ಆಸನದ ವ್ಯವಸೆ ಯಾಗಬೇಕು.ಅವಸಾನದಲ್ಲಿರುವ ತಂಗು ದಾಣಗಳನ್ನು ಅಭಿವೃದ್ಧಿ ಪಡಿಸಲು ನಗರ ನಿವಾಸಿಗಳ ಒತ್ತಾಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>