<p>ದೂರಕ್ಕೆ ಪುಟ್ಟ ಪುಟ್ಟ ಗೂಡುಗಳಂತೆ ಕಾಣುವ ಈ ಗುಹಾಂತರ ದೇವಾಲಯ ಕೃಷ್ಣಾನದಿಯ ತಟದಲ್ಲಿದೆ. ಹಸಿರು ತುಂಬಿದ ಗುಡ್ಡದ ಮರೆಯಲ್ಲಿ ಅವಿತಂತೆ ಕಾಣುವ ಈ ಪರಿಸರ ಕಲಾಕೃತಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಗೆ ಸೇರಿದ ಉಂಡವಳ್ಳಿ ಗ್ರಾಮದಲ್ಲಿದೆ. ಈ ದೇಗುಲದ ಹೆಸರು ತ್ರಿಮೂರ್ತಿ ಗುಹಾಂತರ ದೇವಾಲಯ. <br /> <br /> ನಾಲ್ಕನೇ ಶತಮಾನದಲ್ಲಿ ನಿರ್ಮಾಣವಾಗಿರುವ ಇದು ಭಾರತೀಯ ಗುಹಾಂತರ ದೇವಾಲಯ ಶೈಲಿಯ ಬಗ್ಗೆ ಹೆಮ್ಮೆ ಹುಟ್ಟಿಸುವಂತಿದೆ. ಬಂಡೆಯನ್ನು ಕೊರೆದು ಸೃಷ್ಟಿಸಿಯಾಗಿದೆ ಈ ಶಿಲಾವೈಭವ.<br /> <br /> ಮರಳುಶಿಲೆಯಿಂದ ರಚಿತವಾಗಿರುವ ಈ ಗುಹೆಗಳಲ್ಲಿ ಸಾಕಷ್ಟು ದೇವಾಲಯಗಳಿವೆ.ಅವುಗಳಲ್ಲಿ ವಿಷ್ಣುವಿನ ಬೃಹತ್ ಮೂರ್ತಿ ಇರುವ ಗುಹೆಯೊಂದಿದೆ. ಅದು ನಾಲ್ಕು ಅಂತಸ್ತಿನದು. <br /> <br /> ಅದರಲ್ಲಿಯೇ ಶಿವ ಮತ್ತು ಬ್ರಹ್ಮನ ವಿಗ್ರಹಗಳೂ ಇವೆ. ಅದರಿಂದ ಅದನ್ನು ತ್ರಿಮೂರ್ತಿಗಳ ಗುಹಾಂತರ ದೇವಾಲಯ ಎಂದು ಕರೆಯಲಾಗಿದೆ. ಗುಹೆಯೊಳಗೆ ವಿಷ್ಣುವಿನ ಸುಂದರ ಮೂರ್ತಿ ಅಲ್ಲದೇ, ಗೋಡೆಗಳ ಮೇಲೆಲ್ಲಾ ಶಿಲ್ಪ ವೈಭವ ತುಂಬಿಕೊಂಡಿದೆ.<br /> <br /> ಇಲ್ಲಿನ ಮಂಟಪ, ಕಂಬ ಮತ್ತು ಗೋಡೆಗಳ ಮೇಲೆ ಸೂಕ್ಷ್ಮ ಕಲೆಗಳ ಚಿತ್ತಾರ ಇದೆ. ಕೊಂಚ ಬೌದ್ಧ ವಿಹಾರ ಮತ್ತು ಜೈನರ ಚೈತ್ಯವನ್ನು ಹೋಲುವಂಥ ಕಲೆ ಗೋಚರವಾಗುತ್ತದೆ. ಜೊತೆಗೆ ಗುಪ್ತರ ಕಾಲದ ಕಲಾ ಶೈಲಿಯನ್ನು ನೆನಪಿಸುವ ಕುರುಹುಗಳೂ ಕಾಣಸಿಗುತ್ತವೆ.<br /> <br /> ಕುಶಲ ಕರ್ಮಿಗಳ ಕೈಯ್ಯಿಂದ ಅರಳಿರುವ ಈ ಸುಂದರ ಗುಹಾಂತರ ದೇವಾಲಯಗಳ ಊರು ವಿಜಯವಾಡಾದಿಂದ 6 ಕಿ.ಮೀ, ಗುಂಟೂರಿನಿಂದ 22 ಕಿ.ಮೀ ಮತ್ತು ಹೈದರಾಬಾದ್ನಿಂದ 280 ಕಿ.ಮೀ ದೂರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೂರಕ್ಕೆ ಪುಟ್ಟ ಪುಟ್ಟ ಗೂಡುಗಳಂತೆ ಕಾಣುವ ಈ ಗುಹಾಂತರ ದೇವಾಲಯ ಕೃಷ್ಣಾನದಿಯ ತಟದಲ್ಲಿದೆ. ಹಸಿರು ತುಂಬಿದ ಗುಡ್ಡದ ಮರೆಯಲ್ಲಿ ಅವಿತಂತೆ ಕಾಣುವ ಈ ಪರಿಸರ ಕಲಾಕೃತಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಗೆ ಸೇರಿದ ಉಂಡವಳ್ಳಿ ಗ್ರಾಮದಲ್ಲಿದೆ. ಈ ದೇಗುಲದ ಹೆಸರು ತ್ರಿಮೂರ್ತಿ ಗುಹಾಂತರ ದೇವಾಲಯ. <br /> <br /> ನಾಲ್ಕನೇ ಶತಮಾನದಲ್ಲಿ ನಿರ್ಮಾಣವಾಗಿರುವ ಇದು ಭಾರತೀಯ ಗುಹಾಂತರ ದೇವಾಲಯ ಶೈಲಿಯ ಬಗ್ಗೆ ಹೆಮ್ಮೆ ಹುಟ್ಟಿಸುವಂತಿದೆ. ಬಂಡೆಯನ್ನು ಕೊರೆದು ಸೃಷ್ಟಿಸಿಯಾಗಿದೆ ಈ ಶಿಲಾವೈಭವ.<br /> <br /> ಮರಳುಶಿಲೆಯಿಂದ ರಚಿತವಾಗಿರುವ ಈ ಗುಹೆಗಳಲ್ಲಿ ಸಾಕಷ್ಟು ದೇವಾಲಯಗಳಿವೆ.ಅವುಗಳಲ್ಲಿ ವಿಷ್ಣುವಿನ ಬೃಹತ್ ಮೂರ್ತಿ ಇರುವ ಗುಹೆಯೊಂದಿದೆ. ಅದು ನಾಲ್ಕು ಅಂತಸ್ತಿನದು. <br /> <br /> ಅದರಲ್ಲಿಯೇ ಶಿವ ಮತ್ತು ಬ್ರಹ್ಮನ ವಿಗ್ರಹಗಳೂ ಇವೆ. ಅದರಿಂದ ಅದನ್ನು ತ್ರಿಮೂರ್ತಿಗಳ ಗುಹಾಂತರ ದೇವಾಲಯ ಎಂದು ಕರೆಯಲಾಗಿದೆ. ಗುಹೆಯೊಳಗೆ ವಿಷ್ಣುವಿನ ಸುಂದರ ಮೂರ್ತಿ ಅಲ್ಲದೇ, ಗೋಡೆಗಳ ಮೇಲೆಲ್ಲಾ ಶಿಲ್ಪ ವೈಭವ ತುಂಬಿಕೊಂಡಿದೆ.<br /> <br /> ಇಲ್ಲಿನ ಮಂಟಪ, ಕಂಬ ಮತ್ತು ಗೋಡೆಗಳ ಮೇಲೆ ಸೂಕ್ಷ್ಮ ಕಲೆಗಳ ಚಿತ್ತಾರ ಇದೆ. ಕೊಂಚ ಬೌದ್ಧ ವಿಹಾರ ಮತ್ತು ಜೈನರ ಚೈತ್ಯವನ್ನು ಹೋಲುವಂಥ ಕಲೆ ಗೋಚರವಾಗುತ್ತದೆ. ಜೊತೆಗೆ ಗುಪ್ತರ ಕಾಲದ ಕಲಾ ಶೈಲಿಯನ್ನು ನೆನಪಿಸುವ ಕುರುಹುಗಳೂ ಕಾಣಸಿಗುತ್ತವೆ.<br /> <br /> ಕುಶಲ ಕರ್ಮಿಗಳ ಕೈಯ್ಯಿಂದ ಅರಳಿರುವ ಈ ಸುಂದರ ಗುಹಾಂತರ ದೇವಾಲಯಗಳ ಊರು ವಿಜಯವಾಡಾದಿಂದ 6 ಕಿ.ಮೀ, ಗುಂಟೂರಿನಿಂದ 22 ಕಿ.ಮೀ ಮತ್ತು ಹೈದರಾಬಾದ್ನಿಂದ 280 ಕಿ.ಮೀ ದೂರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>