<p>ಕನ್ನಡದಲ್ಲಿ ವಿದೇಶಿ ಧಾರಾವಾಹಿಗಳ ಟ್ರೆಂಡ್ ಹುಟ್ಟುಹಾಕಲು ನಿರ್ಮಾಪಕ ಸಿಹಿಕಹಿ ಚಂದ್ರು ಮುಂದಾಗಿದ್ದಾರೆ. ಕಾಲಮಿತಿಯ ಚೌಕಟ್ಟಿನಲ್ಲಿ ಪ್ರಸಾರವಾಗುವ ವಿದೇಶಿ ಕಿರು ಧಾರಾವಾಹಿಗಳ `ಸೀಸನ್ಸ್' ಮಾದರಿಯನ್ನು ಪ್ರಯೋಗಿಸುವ ಅವರ ಯತ್ನಕ್ಕೆ ಝೀ ಕನ್ನಡ ವಾಹಿನಿ ಭೂಮಿಕೆ ಒದಗಿಸಿದೆ. ಜೂನ್ 24ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ `ಭಲೆ ಬಸವ' ಹಾಸ್ಯ ಧಾರಾವಾಹಿಯ ಮೂಲಕ ಈ ಹೊಸ ಪ್ರಯೋಗ ಆರಂಭ. <br /> <br /> ಫೈನಲ್ ಕಟ್ ಪ್ರೊಡಕ್ಷನ್ನ `ಪಾರ್ವತಿ ಪರಮೇಶ್ವರ' ಒಂದು ಸಾವಿರ ಸಂಚಿಕೆ ದಾಟಿದ್ದರೆ, `ಪಾಂಡು ರಂಗ ವಿಠಲ' ಸಾವಿರದ ಗುರಿಮುಟ್ಟುವ ಹಾದಿಯಲ್ಲಿದೆ. ಹೀಗೆ ಸುದೀರ್ಘವಾದ ಹಾಸ್ಯ ಕಥನ ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡಿರುವ ಚಂದ್ರು, ಈ ಹೊಸ `ಸೀಸನ್ಸ್' ಮಾದರಿಯಲ್ಲಿ ಕಾಲಮಿತಿಯಲ್ಲಿಯೇ ಧಾರಾವಾಹಿ ಕಟ್ಟುತ್ತಾರೆ. 13 ವಾರಗಳ, 65 ಸಂಚಿಕೆಗಳಲ್ಲಿ ಮುಗಿಯುವ ತಲಾ ನಾಲ್ಕು ಮಿನಿ ಧಾರಾವಾಹಿಗಳನ್ನು ನಿರ್ಮಿಸಿಕೊಡುವುದು ಈ ಮಾದರಿಯ ಚೌಕಟ್ಟು.<br /> <br /> ಈ ಹಾಸ್ಯ ಧಾರಾವಾಹಿಗಳು ದಿನಕ್ಕೊಂದು ಕಚಗುಳಿಯ ಕಥೆ ಹೇಳುವುದಿಲ್ಲ. ಮೆಗಾ ಧಾರಾವಾಹಿಗಳ ರೀತಿ ಒಂದು ಸಂಚಿಕೆಗೂ ಮುಂದಿನ ಸಂಚಿಕೆಗೂ ಸಂಬಂಧ ಬೆಸೆಯುತ್ತವೆ. ಏಕತಾನತೆಗೆ ಪೂರ್ಣವಿರಾಮ.<br /> ಈ `ಸೀಸನ್ಸ್'ನ ಮೊದಲ ಅವತರಣಿಕೆ `ಭಲೆ ಬಸವ'ನ ಕಥೆ ಸಾಗುವುದು `ಎ.ಸಿ. ಲುಂಗಿ' ಕಂಪೆನಿಯ ಸುತ್ತ. ಲುಂಗಿ, ಎ.ಸಿ. ಆಗಿರುವಂತೆಯೇ ಪಾತ್ರಗಳೆಲ್ಲವೂ ಹಾಸ್ಯಕ್ಕೆ ಮುಕ್ತವಾಗಿವೆಯಂತೆ.<br /> <br /> ತುಳು ರಂಗಭೂಮಿಯ ನಟ ಶೋಭರಾಜ್ `ಬಸವ'ನ ಪಾತ್ರಧಾರಿ. ಬಸವ ಸಾಮಾನ್ಯ ಪ್ರಜೆಯ ಪ್ರತಿನಿಧಿ. `ನನ್ನ ನೋವು ಮತ್ತೊಬ್ಬರಿಗೆ ನೋವು ತರಬಹುದು. ಆದರೆ ನಗೆ ಮತ್ತೊಬ್ಬರಿಗೆ ನೋವು ತರಬಾರದು' ಎನ್ನುವ ಪಾತ್ರ. ಯಾವ ಯಾವ ಬಗೆಯಲ್ಲಿ ಲುಂಗಿ ಉಡಬಹುದೋ ಆ ವೈವಿಧ್ಯವೆಲ್ಲವೂ ಎ.ಸಿ. ಲುಂಗಿ ಕಂಪೆನಿಯ ಪಾತ್ರಗಳ ಮೂಲಕ ಪರಿಚಿತವಾಗಿವೆ. `ಭಲೆ ಬಸವ'ನ ಕಲಾವಿದರಲ್ಲಿ ಬಹುಮಂದಿ ಹೊಸಬರು. <br /> <br /> ಧಾರಾವಾಹಿಯ ನಿರ್ದೇಶಕ ಪವನ್ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಂಭಾಷಣೆ ಬರೆಯುವ ಹೊಣೆ ಎಂ.ಎಸ್. ನರಸಿಂಹ ಮೂರ್ತಿ ಅವರದ್ದು. ಸತೀಶ್ಚಂದ್ರ, ರಾಜೇಶ್ ಡಾಲಿ, ರಾಜೇಶ್ವರಿ ತಲ್ವಾರ್ ಮತ್ತಿತರರು ಧಾರಾವಾಹಿಯ ಹಾಸ್ಯದ ಎಸಳುಗಳು.<br /> <br /> `ಟಿಆರ್ಪಿ ಚೆನ್ನಾಗಿದ್ದರೆ ಆ ಧಾರಾವಾಹಿ ಹರವನ್ನು ವಿಸ್ತರಿಸುತ್ತಲೇ ಸಾಗುತ್ತದೆ. ಆದರೆ ಜನರ ಮನಸ್ಸಿನಲ್ಲಿ ಅದು ಹೇಗೆ ನೆಲೆಯೂರುತ್ತಿದೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಕೆಲವು ಮೆಗಾ ಧಾರಾವಾಹಿಗಳು ವೀಕ್ಷಕರ ತಾಳ್ಮೆ ಪರೀಕ್ಷಿಸುವಂತೆ ಪ್ರಸಾರವಾಗುತ್ತಿವೆ. ಆದರೆ ಈ ಹೊಸ `ಸೀನಸ್ಸ್'ನಲ್ಲಿ ಕಥೆಗೆ ಕಾಲದ ಚೌಕಟ್ಟಿದೆ. ಕಥೆಯ ಅಂಶ ಮತ್ತು ಆಶಯ ಚಿಕ್ಕದಾಗಿ ಚೊಕ್ಕವಾಗಿ ಇರಬೇಕು. ಆಗ ಮಾತ್ರ ವೀಕ್ಷಕರಿಗೆ ಮುಟ್ಟುತ್ತದೆ' ಎನ್ನುವುದು ಸಿಹಿಕಹಿ ವಾದ.<br /> <br /> `ಭಲೆ ಬಸವ'ನ ಮೂಲಕ ಹೊಸ ಪ್ರಯೋಗಕ್ಕಿಳಿದಿರುವ ಚಂದ್ರು ಅವರಿಗೆ ಇಲ್ಲಿ ಎದುರಾಗುವ ಸಮಸ್ಯೆಗಳು ಮುಂದಿನ ಧಾರಾವಾಹಿ ಗಳಿಗೆ ಪಕ್ವವಾಗಲು ವೇದಿಕೆಯಂತೆ.<br /> <br /> ಆರೇಳು ತಿಂಗಳ ಪ್ರಯೋಗದ ಮೂಸೆಯಲ್ಲಿ ಕಥೆ ರೂಪು ತಳೆದಿದ್ದಾಗಿ ಹೇಳಿದ ಝೀ ಕನ್ನಡ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥ ಕಿಶೋರ್ ಆಚಾರ್ಯ, ಈ ಹೊಸ `ಸೀಸನ್ಸ್'ನ ಭವಿಷ್ಯದ ಕುರಿತು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದಲ್ಲಿ ವಿದೇಶಿ ಧಾರಾವಾಹಿಗಳ ಟ್ರೆಂಡ್ ಹುಟ್ಟುಹಾಕಲು ನಿರ್ಮಾಪಕ ಸಿಹಿಕಹಿ ಚಂದ್ರು ಮುಂದಾಗಿದ್ದಾರೆ. ಕಾಲಮಿತಿಯ ಚೌಕಟ್ಟಿನಲ್ಲಿ ಪ್ರಸಾರವಾಗುವ ವಿದೇಶಿ ಕಿರು ಧಾರಾವಾಹಿಗಳ `ಸೀಸನ್ಸ್' ಮಾದರಿಯನ್ನು ಪ್ರಯೋಗಿಸುವ ಅವರ ಯತ್ನಕ್ಕೆ ಝೀ ಕನ್ನಡ ವಾಹಿನಿ ಭೂಮಿಕೆ ಒದಗಿಸಿದೆ. ಜೂನ್ 24ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ `ಭಲೆ ಬಸವ' ಹಾಸ್ಯ ಧಾರಾವಾಹಿಯ ಮೂಲಕ ಈ ಹೊಸ ಪ್ರಯೋಗ ಆರಂಭ. <br /> <br /> ಫೈನಲ್ ಕಟ್ ಪ್ರೊಡಕ್ಷನ್ನ `ಪಾರ್ವತಿ ಪರಮೇಶ್ವರ' ಒಂದು ಸಾವಿರ ಸಂಚಿಕೆ ದಾಟಿದ್ದರೆ, `ಪಾಂಡು ರಂಗ ವಿಠಲ' ಸಾವಿರದ ಗುರಿಮುಟ್ಟುವ ಹಾದಿಯಲ್ಲಿದೆ. ಹೀಗೆ ಸುದೀರ್ಘವಾದ ಹಾಸ್ಯ ಕಥನ ನಿರ್ಮಾಣ ಕಲೆಯನ್ನು ಕರಗತ ಮಾಡಿಕೊಂಡಿರುವ ಚಂದ್ರು, ಈ ಹೊಸ `ಸೀಸನ್ಸ್' ಮಾದರಿಯಲ್ಲಿ ಕಾಲಮಿತಿಯಲ್ಲಿಯೇ ಧಾರಾವಾಹಿ ಕಟ್ಟುತ್ತಾರೆ. 13 ವಾರಗಳ, 65 ಸಂಚಿಕೆಗಳಲ್ಲಿ ಮುಗಿಯುವ ತಲಾ ನಾಲ್ಕು ಮಿನಿ ಧಾರಾವಾಹಿಗಳನ್ನು ನಿರ್ಮಿಸಿಕೊಡುವುದು ಈ ಮಾದರಿಯ ಚೌಕಟ್ಟು.<br /> <br /> ಈ ಹಾಸ್ಯ ಧಾರಾವಾಹಿಗಳು ದಿನಕ್ಕೊಂದು ಕಚಗುಳಿಯ ಕಥೆ ಹೇಳುವುದಿಲ್ಲ. ಮೆಗಾ ಧಾರಾವಾಹಿಗಳ ರೀತಿ ಒಂದು ಸಂಚಿಕೆಗೂ ಮುಂದಿನ ಸಂಚಿಕೆಗೂ ಸಂಬಂಧ ಬೆಸೆಯುತ್ತವೆ. ಏಕತಾನತೆಗೆ ಪೂರ್ಣವಿರಾಮ.<br /> ಈ `ಸೀಸನ್ಸ್'ನ ಮೊದಲ ಅವತರಣಿಕೆ `ಭಲೆ ಬಸವ'ನ ಕಥೆ ಸಾಗುವುದು `ಎ.ಸಿ. ಲುಂಗಿ' ಕಂಪೆನಿಯ ಸುತ್ತ. ಲುಂಗಿ, ಎ.ಸಿ. ಆಗಿರುವಂತೆಯೇ ಪಾತ್ರಗಳೆಲ್ಲವೂ ಹಾಸ್ಯಕ್ಕೆ ಮುಕ್ತವಾಗಿವೆಯಂತೆ.<br /> <br /> ತುಳು ರಂಗಭೂಮಿಯ ನಟ ಶೋಭರಾಜ್ `ಬಸವ'ನ ಪಾತ್ರಧಾರಿ. ಬಸವ ಸಾಮಾನ್ಯ ಪ್ರಜೆಯ ಪ್ರತಿನಿಧಿ. `ನನ್ನ ನೋವು ಮತ್ತೊಬ್ಬರಿಗೆ ನೋವು ತರಬಹುದು. ಆದರೆ ನಗೆ ಮತ್ತೊಬ್ಬರಿಗೆ ನೋವು ತರಬಾರದು' ಎನ್ನುವ ಪಾತ್ರ. ಯಾವ ಯಾವ ಬಗೆಯಲ್ಲಿ ಲುಂಗಿ ಉಡಬಹುದೋ ಆ ವೈವಿಧ್ಯವೆಲ್ಲವೂ ಎ.ಸಿ. ಲುಂಗಿ ಕಂಪೆನಿಯ ಪಾತ್ರಗಳ ಮೂಲಕ ಪರಿಚಿತವಾಗಿವೆ. `ಭಲೆ ಬಸವ'ನ ಕಲಾವಿದರಲ್ಲಿ ಬಹುಮಂದಿ ಹೊಸಬರು. <br /> <br /> ಧಾರಾವಾಹಿಯ ನಿರ್ದೇಶಕ ಪವನ್ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸಂಭಾಷಣೆ ಬರೆಯುವ ಹೊಣೆ ಎಂ.ಎಸ್. ನರಸಿಂಹ ಮೂರ್ತಿ ಅವರದ್ದು. ಸತೀಶ್ಚಂದ್ರ, ರಾಜೇಶ್ ಡಾಲಿ, ರಾಜೇಶ್ವರಿ ತಲ್ವಾರ್ ಮತ್ತಿತರರು ಧಾರಾವಾಹಿಯ ಹಾಸ್ಯದ ಎಸಳುಗಳು.<br /> <br /> `ಟಿಆರ್ಪಿ ಚೆನ್ನಾಗಿದ್ದರೆ ಆ ಧಾರಾವಾಹಿ ಹರವನ್ನು ವಿಸ್ತರಿಸುತ್ತಲೇ ಸಾಗುತ್ತದೆ. ಆದರೆ ಜನರ ಮನಸ್ಸಿನಲ್ಲಿ ಅದು ಹೇಗೆ ನೆಲೆಯೂರುತ್ತಿದೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಕೆಲವು ಮೆಗಾ ಧಾರಾವಾಹಿಗಳು ವೀಕ್ಷಕರ ತಾಳ್ಮೆ ಪರೀಕ್ಷಿಸುವಂತೆ ಪ್ರಸಾರವಾಗುತ್ತಿವೆ. ಆದರೆ ಈ ಹೊಸ `ಸೀನಸ್ಸ್'ನಲ್ಲಿ ಕಥೆಗೆ ಕಾಲದ ಚೌಕಟ್ಟಿದೆ. ಕಥೆಯ ಅಂಶ ಮತ್ತು ಆಶಯ ಚಿಕ್ಕದಾಗಿ ಚೊಕ್ಕವಾಗಿ ಇರಬೇಕು. ಆಗ ಮಾತ್ರ ವೀಕ್ಷಕರಿಗೆ ಮುಟ್ಟುತ್ತದೆ' ಎನ್ನುವುದು ಸಿಹಿಕಹಿ ವಾದ.<br /> <br /> `ಭಲೆ ಬಸವ'ನ ಮೂಲಕ ಹೊಸ ಪ್ರಯೋಗಕ್ಕಿಳಿದಿರುವ ಚಂದ್ರು ಅವರಿಗೆ ಇಲ್ಲಿ ಎದುರಾಗುವ ಸಮಸ್ಯೆಗಳು ಮುಂದಿನ ಧಾರಾವಾಹಿ ಗಳಿಗೆ ಪಕ್ವವಾಗಲು ವೇದಿಕೆಯಂತೆ.<br /> <br /> ಆರೇಳು ತಿಂಗಳ ಪ್ರಯೋಗದ ಮೂಸೆಯಲ್ಲಿ ಕಥೆ ರೂಪು ತಳೆದಿದ್ದಾಗಿ ಹೇಳಿದ ಝೀ ಕನ್ನಡ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥ ಕಿಶೋರ್ ಆಚಾರ್ಯ, ಈ ಹೊಸ `ಸೀಸನ್ಸ್'ನ ಭವಿಷ್ಯದ ಕುರಿತು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>