<p><strong>ಮಂಗಳೂರು:</strong> ಅಳಿವೆ ಬಾಗಿಲಿನಲ್ಲಿ ಮತ್ತೊಮ್ಮೆ ದೋಣಿ ದುರಂತ ಸಂಭವಿಸಿರುವಂತೆಯೇ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡತೊಡಗಿದ್ದು, ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಮೀನುಗಾರರು ಮಾತ್ರ ತಮ್ಮ ಜೀವಕ್ಕೆ ಬೆಲೆ ನೀಡದೆ ಇರುವುದಕ್ಕಾಗಿ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ, ಪ್ರತಿಭಟನೆಗೆ ಸಜ್ಜಾಗತೊಡಗಿದ್ದಾರೆ.<br /> <br /> `ಎನ್ಎಂಪಿಟಿಯವರು ನಮ್ಮನ್ನು ಭಯೋತ್ಪಾದಕರಿಗಿಂತಲೂ ಕಠಿಣವಾಗಿ ನಡೆಸಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರಿಗೇ ಇವರ ವರ್ತನೆ ಬಗ್ಗೆ ನಾವು ಬುಧವಾರ ದೂರು ನೀಡಿದ್ದೆವು. ಆದರೂ ಪರಿಸ್ಥಿತಿ ಬದಲಾಗಿಯೇ ಇಲ್ಲ~ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ದೂರಿದರು.<br /> <br /> `ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಈ ಎಲ್ಲ ತೊಂದರೆ ಎದುರಾಗಿದೆ. ಮೇಲಾಗಿ ಎನ್ಎಂಪಿಟಿಯವರೂ ನಮ್ಮನ್ನು ಪರಕೀಯರಂತೆ ಕಾಣುತ್ತಿದ್ದಾರೆ. ಅಧಿಕಾರಿಗಳ ವರ್ತನೆಯಲ್ಲಿ ಬದಲಾವಣೆ ಆಗಬೇಕು, ಇಲ್ಲವೇ ಶೀಘ್ರ ಅಳಿವೆ ಬಾಗಿಲಿನ ಹೂಳು ತೆಗೆಸುವ ಕ್ರಮ ಕೈಗೊಂಡು ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದರೆ ಮೀನುಗಾರಿಕೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ~ ಎಂದು ಅವರು ಎಚ್ಚರಿಸಿದರು.<br /> <strong><br /> ಡಿ.ಸಿ. ಹೇಳಿಕೆ:</strong> ದೋಣಿ ಅಪಾಯದಲ್ಲಿದೆ ಎಂಬುದನ್ನು ದೋಣಿಯಲ್ಲಿದ್ದವರು ಯಾವೊಂದು ಇಲಾಖೆ ಅಥವಾ ಯಾವೊಬ್ಬ ಅಧಿಕಾರಿಗೂ ತಿಳಿಸಿಲ್ಲ. ತುರ್ತು ಸ್ಥಿತಿಯಲ್ಲಿ ಕರೆ ಮಾಡಬೇಕಾದ 1077 ಸಂಖ್ಯೆಗೂ ಯಾವುದೇ ಕರೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಹೇಳಿದ್ದಾರೆ.<br /> <br /> ಆದರೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಸುರೇಶ್ ಕುಮಾರ್ ಅವರು ತಮಗೆ ಬೆಳಿಗ್ಗೆ 5 ಗಂಟೆಗೇ ದೋಣಿ ಸಂಕಷ್ಟದಲ್ಲಿ ಇರುವ ವಿಚಾರ ಗೊತ್ತಾಗಿದ್ದನ್ನು ಹಾಗೂ ತಾವು ಈ ಬಗ್ಗೆ ಹಲವು ಮೀನುಗಾರ ಮುಖಂಡರಿಗೆ ಮತ್ತು ಕರಾವಳಿ ರಕ್ಷಣಾ ಪಡೆಗೆ ತಿಳಿಸಿದ್ದನ್ನು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಕರಾವಳಿ ಭದ್ರತಾ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ಮುಕುಂದ ನಾಯಕ್ ಅವರು ಸಹ ಘಟನೆಯ ಬಗ್ಗೆ ತಮಗೆ ಬೆಳಿಗ್ಗೆ 5.15ರ ಹೊತ್ತಿಗೆ ಮಾಹಿತಿ ಸಿಕ್ಕಿದ್ದನ್ನು ಮತ್ತು ತಾವು ತಕ್ಷಣ ಈ ವಿಚಾರವನ್ನು ಕರಾವಳಿ ರಕ್ಷಣಾ ಪಡೆಗೆ ರವಾನಿಸಿದ್ದನ್ನು ತಿಳಿಸಿದ್ದಾರೆ. `ನಾವು 12 ನಾಟಿಕಲ್ ಮೈಲು ವರೆಗೆ ಶೋಧ ಕಾರ್ಯಾಚರಣೆ ನಡೆಸಿದೆವು. ಆದರೆ ಕಡಲು ಪ್ರಕ್ಷುಬ್ಧವಿದ್ದ ಕಾರಣ ಮತ್ತಷ್ಟು ಶೋಧ ಕಾರ್ಯಾಚರಣೆ ಸಾಧ್ಯವಾಗಲಿಲ್ಲ~ ಎಂದರು.<br /> <br /> ಎನ್ಎಂಪಿಟಿ ಅಧಿಕಾರಿಗಳು ಬದುಕಿ ಉಳಿದ ವಿನ್ಸೆಂಟ್ ಅವರ ಆರೋಪಗಳನ್ನು ಅಲ್ಲಗಳೆದಿದ್ದು, ತಮ್ಮನ್ನು ಮೀನುಗಾರ ನಾಯಕರಾಗಲಿ, ಮೀನುಗಾರಿಕಾ ಉಪನಿರ್ದೇಶಕರಾಗಿಲಿ ಸಂಪರ್ಕಿಸಿಲ್ಲ ಎಂದಿದ್ದಾರೆ. `ಯಾವುದೇ ಅಪರಿಚಿತ ದೋಣಿಯನ್ನು ಸೂಕ್ತ ತಪಾಸಣೆ ಇಲ್ಲದೆ ನಾವು ಒಳಗೆ ಬಿಡುವುದಾದರೂ ಹೇಗೆ~ ಎಂಬುದು ಎನ್ಎಂಪಿಟಿ ಅಧಿಕಾರಿಗಳ ಪ್ರಶ್ನೆ.ಆದರೆ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯನ್ನು ಸಂಪರ್ಕಿಸುವುದು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಅಳಿವೆ ಬಾಗಿಲಿನಲ್ಲಿ ಮತ್ತೊಮ್ಮೆ ದೋಣಿ ದುರಂತ ಸಂಭವಿಸಿರುವಂತೆಯೇ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡತೊಡಗಿದ್ದು, ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಮೀನುಗಾರರು ಮಾತ್ರ ತಮ್ಮ ಜೀವಕ್ಕೆ ಬೆಲೆ ನೀಡದೆ ಇರುವುದಕ್ಕಾಗಿ ತೀವ್ರವಾಗಿ ಆಕ್ರೋಶಗೊಂಡಿದ್ದಾರೆ, ಪ್ರತಿಭಟನೆಗೆ ಸಜ್ಜಾಗತೊಡಗಿದ್ದಾರೆ.<br /> <br /> `ಎನ್ಎಂಪಿಟಿಯವರು ನಮ್ಮನ್ನು ಭಯೋತ್ಪಾದಕರಿಗಿಂತಲೂ ಕಠಿಣವಾಗಿ ನಡೆಸಿಕೊಂಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಅವರಿಗೇ ಇವರ ವರ್ತನೆ ಬಗ್ಗೆ ನಾವು ಬುಧವಾರ ದೂರು ನೀಡಿದ್ದೆವು. ಆದರೂ ಪರಿಸ್ಥಿತಿ ಬದಲಾಗಿಯೇ ಇಲ್ಲ~ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ದೂರಿದರು.<br /> <br /> `ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಈ ಎಲ್ಲ ತೊಂದರೆ ಎದುರಾಗಿದೆ. ಮೇಲಾಗಿ ಎನ್ಎಂಪಿಟಿಯವರೂ ನಮ್ಮನ್ನು ಪರಕೀಯರಂತೆ ಕಾಣುತ್ತಿದ್ದಾರೆ. ಅಧಿಕಾರಿಗಳ ವರ್ತನೆಯಲ್ಲಿ ಬದಲಾವಣೆ ಆಗಬೇಕು, ಇಲ್ಲವೇ ಶೀಘ್ರ ಅಳಿವೆ ಬಾಗಿಲಿನ ಹೂಳು ತೆಗೆಸುವ ಕ್ರಮ ಕೈಗೊಂಡು ಶಾಶ್ವತ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದರೆ ಮೀನುಗಾರಿಕೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ~ ಎಂದು ಅವರು ಎಚ್ಚರಿಸಿದರು.<br /> <strong><br /> ಡಿ.ಸಿ. ಹೇಳಿಕೆ:</strong> ದೋಣಿ ಅಪಾಯದಲ್ಲಿದೆ ಎಂಬುದನ್ನು ದೋಣಿಯಲ್ಲಿದ್ದವರು ಯಾವೊಂದು ಇಲಾಖೆ ಅಥವಾ ಯಾವೊಬ್ಬ ಅಧಿಕಾರಿಗೂ ತಿಳಿಸಿಲ್ಲ. ತುರ್ತು ಸ್ಥಿತಿಯಲ್ಲಿ ಕರೆ ಮಾಡಬೇಕಾದ 1077 ಸಂಖ್ಯೆಗೂ ಯಾವುದೇ ಕರೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಹೇಳಿದ್ದಾರೆ.<br /> <br /> ಆದರೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಸುರೇಶ್ ಕುಮಾರ್ ಅವರು ತಮಗೆ ಬೆಳಿಗ್ಗೆ 5 ಗಂಟೆಗೇ ದೋಣಿ ಸಂಕಷ್ಟದಲ್ಲಿ ಇರುವ ವಿಚಾರ ಗೊತ್ತಾಗಿದ್ದನ್ನು ಹಾಗೂ ತಾವು ಈ ಬಗ್ಗೆ ಹಲವು ಮೀನುಗಾರ ಮುಖಂಡರಿಗೆ ಮತ್ತು ಕರಾವಳಿ ರಕ್ಷಣಾ ಪಡೆಗೆ ತಿಳಿಸಿದ್ದನ್ನು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಕರಾವಳಿ ಭದ್ರತಾ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ ಮುಕುಂದ ನಾಯಕ್ ಅವರು ಸಹ ಘಟನೆಯ ಬಗ್ಗೆ ತಮಗೆ ಬೆಳಿಗ್ಗೆ 5.15ರ ಹೊತ್ತಿಗೆ ಮಾಹಿತಿ ಸಿಕ್ಕಿದ್ದನ್ನು ಮತ್ತು ತಾವು ತಕ್ಷಣ ಈ ವಿಚಾರವನ್ನು ಕರಾವಳಿ ರಕ್ಷಣಾ ಪಡೆಗೆ ರವಾನಿಸಿದ್ದನ್ನು ತಿಳಿಸಿದ್ದಾರೆ. `ನಾವು 12 ನಾಟಿಕಲ್ ಮೈಲು ವರೆಗೆ ಶೋಧ ಕಾರ್ಯಾಚರಣೆ ನಡೆಸಿದೆವು. ಆದರೆ ಕಡಲು ಪ್ರಕ್ಷುಬ್ಧವಿದ್ದ ಕಾರಣ ಮತ್ತಷ್ಟು ಶೋಧ ಕಾರ್ಯಾಚರಣೆ ಸಾಧ್ಯವಾಗಲಿಲ್ಲ~ ಎಂದರು.<br /> <br /> ಎನ್ಎಂಪಿಟಿ ಅಧಿಕಾರಿಗಳು ಬದುಕಿ ಉಳಿದ ವಿನ್ಸೆಂಟ್ ಅವರ ಆರೋಪಗಳನ್ನು ಅಲ್ಲಗಳೆದಿದ್ದು, ತಮ್ಮನ್ನು ಮೀನುಗಾರ ನಾಯಕರಾಗಲಿ, ಮೀನುಗಾರಿಕಾ ಉಪನಿರ್ದೇಶಕರಾಗಿಲಿ ಸಂಪರ್ಕಿಸಿಲ್ಲ ಎಂದಿದ್ದಾರೆ. `ಯಾವುದೇ ಅಪರಿಚಿತ ದೋಣಿಯನ್ನು ಸೂಕ್ತ ತಪಾಸಣೆ ಇಲ್ಲದೆ ನಾವು ಒಳಗೆ ಬಿಡುವುದಾದರೂ ಹೇಗೆ~ ಎಂಬುದು ಎನ್ಎಂಪಿಟಿ ಅಧಿಕಾರಿಗಳ ಪ್ರಶ್ನೆ.ಆದರೆ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಯನ್ನು ಸಂಪರ್ಕಿಸುವುದು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>