<p>‘ತವರೂರು ಜಮೈಕಾದ ಬೀದಿಗಳಲ್ಲಿ ನಾನು ಸುಲಭವಾಗಿ ತಿರುಗಾಡಬಹುದು. ಆದರೆ ಬೆಂಗಳೂರಿನ ಎಂ.ಜಿ ರಸ್ತೆಗೆ ಇಳಿಯಲು ಕಷ್ಟಪಡ ಬೇಕಾಗುತ್ತದೆ. ಬ್ರಿಗೇಡ್ ರಸ್ತೆಯಲ್ಲಿ ಒಂದು ಅಂಗಡಿಗೆ ಭೇಟಿ ನೀಡಿದಾಗ ಅಭಿಮಾನಿಗಳಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಡಬೇಕಾಯಿತು. ಆಟೋಗ್ರಾಫ್ಗಾಗಿ ಮುತ್ತಿಕೊಳ್ಳುತ್ತಾರೆ.<br /> <br /> ವೆಸ್ಟ್ಇಂಡೀಸ್ಗಿಂತ ಇಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎನಿಸುತ್ತಿದೆ. ನಿಜ ಹೇಳಬೇಕೆಂದರೆ ಉದ್ಯಾನ ನಗರಿ ನನಗೆ ಎರಡನೇ ಮನೆ ಇದ್ದಂತೆ’<br /> -ವೆಸ್ಟ್ಇಂಡೀಸ್ನ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಒಮ್ಮೆ ಹೇಳಿದ ಮಾತಿದು.<br /> <br /> ಇರ್ಫಾನ್ ಪಠಾಣ್ ಎಸೆತವನ್ನು ಎಬಿ ಡಿವಿಲಿಯರ್ಸ್ ಸಿಕ್ಸರ್ಗೆ ಎತ್ತುತ್ತಿದ್ದಂತೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆ ಭೋರ್ಗರೆತ ನೋಡಬೇಕಿತ್ತು. ಮಿಷೆಲ್ ಜಾನ್ಸನ್ ಬೌಲಿಂಗ್ನಲ್ಲಿ ದೋನಿ ಔಟ್ ಆಗುತ್ತಿದ್ದಂತೆ ಗ್ಯಾಲರಿಯಲ್ಲಿ ಖುಷಿ ಅಲೆ. ಹೌದು, ಐಪಿಎಲ್ ಬಂದ ಮೇಲೆ ಕ್ರಿಕೆಟ್ ನೋಡುವ ರೀತಿಯೇ ಬದಲಾಗಿದೆ.<br /> <br /> ‘ಜಾಗತಿಕ ಕ್ರಿಕೆಟ್ ಕುಟುಂಬ’ ಎಂಬ ಪರಿಕಲ್ಪನೆ ಸೃಷ್ಟಿಯಾಗಿದೆ. ಗಡಿ, ಭಾಷೆ, ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ದೇಶದ ನಡುವಿನ ಗೆರೆಯನ್ನೇ ಅಳಿಸಿ ಹಾಕಿದಂತೆ ಭಾಸವಾಗುತ್ತಿದೆ.<br /> ವಿದೇಶಿ ಕಂಪೆನಿಗಳಾದ ನೋಕಿಯಾ, ಸ್ಯಾಮ್ಸಂಗ್ ಮೊಬೈಲ್ ಸೆಟ್ಗಳನ್ನು ಪ್ರೀತಿಸುವಂತೆ ಕ್ರಿಸ್ ಗೇಲ್, ಡಿವಿಲಿಯರ್ಸ್, ಲಸಿತ್ ಮಾಲಿಂಗ, ಸುನಿಲ್ ನಾರಾಯಣ್ ಅವರನ್ನು ಇಲ್ಲಿನ ಕ್ರಿಕೆಟ್ ಪ್ರೇಮಿಗಳು ನಮ್ಮವರು ಎಂದು ಒಪ್ಪಿಕೊಂಡು ಬಿಟ್ಟಿದ್ದಾರೆ.<br /> <br /> ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್ವೆಲ್ ಯಾವ ದೇಶದ ಆಟಗಾರರು ಎಂದು ಕೇಳಿನೋಡಿ. ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವರೆಲ್ಲಾ ಐಪಿಎಲ್ನಲ್ಲಿ ಯಾವ ತಂಡದಲ್ಲಿ ಆಡುತ್ತಾರೆ ಎಂಬುದು ಬಾಯಿಪಾಠವಾಗಿದೆ. ಅವರು ಪ್ರತಿ ಪಂದ್ಯದಲ್ಲಿ ಗಳಿಸಿರುವ ಸಿಕ್ಸರ್, ಬೌಂಡರಿಗಳ ಲೆಕ್ಕಾಚಾರ ನಾಲಿಗೆ ತುದಿಯಲ್ಲಿರುತ್ತದೆ.<br /> <br /> ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಐಪಿಎಲ್ ಎಂಬ ‘ಮೋಹಕ ಕ್ರಿಕೆಟ್’ನೊಳಗೆ ಬಂದಿಯಾಗಿದ್ದಾರೆ. ಪ್ರಮುಖವಾಗಿ ಯುವ ಜನಾಂಗಕ್ಕೆ ಈ ಮಾದರಿಯ ಕ್ರಿಕೆಟ್ ತುಂಬಾ ಇಷ್ಟವಾಗುತ್ತಿದೆ. ರಾತ್ರಿ ಊಟ ಮುಗಿಸಿ ಅತ್ತೆ ಸೊಸೆ ಕಿತ್ತಾಟದ ಧಾರಾವಾಹಿಗಳನ್ನು ನೋಡುತ್ತಿದ್ದ ಮಹಿಳೆಯರ ಚಿತ್ತ ಕ್ರಿಕೆಟ್ನತ್ತ ಹರಿದಿದೆ.</p>.<p>ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ‘ಐಪಿಎಲ್ ನಿಂದಾಗಿ ಭಾರತದ ಕ್ರಿಕೆಟ್ ಬದಲಾಗಿದೆ’ ಎಂದು ಯುವರಾಜ್ ಸಿಂಗ್ ಹೇಳಿದ್ದು ಇದೇ ಕಾರಣಕ್ಕಾಗಿ ಇರಬಹುದು. ಅಷ್ಟೇ ಏಕೆ? ಐಪಿಎಲ್ ಟೂರ್ನಿಯು ‘ಬಡ’ ಕ್ರಿಕೆಟಿಗರ ಹೊಟ್ಟೆ ತುಂಬಿಸಿದ್ದು ಮಾತ್ರವಲ್ಲ; ಮರಳುಗಾಡಿನಲ್ಲಿ ಬಿದ್ದ ಸುವಾಸನೆ ಭರಿತ ಹೂವಿನಂತಾಗಿದ್ದ ಅದೆಷ್ಟೊ ಕ್ರಿಕೆಟಿಗರ ಪ್ರತಿಭೆಯನ್ನು ಹೊರ ಚೆಲ್ಲಿದೆ.<br /> <br /> ಸೋಲು-ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಯುವ ಕ್ರಿಕೆಟಿಗರಿಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಈ ಟೂರ್ನಿ ಅವಕಾಶ ಮಾಡಿಕೊಟ್ಟಿದೆ.<br /> <br /> ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ಮೋಹಿತ್ ಶರ್ಮ, ಜಸ್ಪ್ರಿತ್ ಬುಮ್ರಾ, ಪುಣೆಯ ಆಟೊ ಚಾಲಕನ ಪುತ್ರ ಯೋಗೇಶ್ ಟಕವಾಲೆ ಅವರ ಬಗ್ಗೆ ಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲವೇನೋ? ಗೂಗಲ್ ಸರ್ಚ್ ನಲ್ಲೂ ಅವರ ಒಂದೇಒಂದು ಫೋಟೊ ಸಿಗುತ್ತಿರಲಿಲ್ಲ. ಆದರೆ ಐಪಿಎಲ್ನಿಂದಾಗಿ ಅವರೀಗ ಮನೆಮಾತಾಗಿದ್ದಾರೆ.<br /> <br /> ಐಪಿಎಲ್ನಿಂದ ಕ್ರಿಕೆಟ್ ಗುಣಮಟ್ಟ ಕುಸಿದು ಹೋಗಿದೆ ಎಂದು ಕೆಲವರು ಟೀಕಿಸುತ್ತಾರೆ. ಆ ಸಾಧ್ಯತೆ ಕಡಿಮೆ ಎಂಬುದಕ್ಕೆ ಒಂದು ಉದಾಹರಣೆ ನೀಡಲೇಬೇಕು. ಮುಂಬೈ ಇಂಡಿಯನ್ಸ್ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲು ಕ್ರಿಕೆಟ್ ದಿಗ್ಗಜರಾದ ಸಚಿನ್, ರಿಕಿ ಪಾಂಟಿಂಗ್, ಕುಂಬ್ಳೆ ಇದ್ದಾರೆ. ಜಾನ್ ರೈಟ್ ಈ ತಂಡದ ಮುಖ್ಯ ಕೋಚ್. ವಿಶ್ವ ಶ್ರೇಷ್ಠ ಫೀಲ್ಡರ್ ಜಾಂಟಿ ರೋಡ್ಸ್ ಈ ತಂಡದ ಫೀಲ್ಡಿಂಗ್ ಕೋಚ್.<br /> <br /> ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಎಷ್ಟೊಂದು ಪುಣ್ಯವಂತರು ಅಲ್ಲವೇ? ಈ ತಂಡದಲ್ಲಿರುವ ಕರ್ನಾಟಕದ ಸಿ.ಎಂ.ಗೌತಮ್ ಭಾರತ ತಂಡದಲ್ಲಿ ಆಡಿದ್ದರೂ ರೀತಿ ಮಾರ್ಗದರ್ಶನ ಸಿಗುತ್ತಿರಲಿಲ್ಲವೇನೊ? ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿರುವ ಆರ್.ವಿನಯ್ ಕುಮಾರ್ ಅವರಿಗೆ ಮಾರ್ಗದರ್ಶನ ನೀಡಲು ವಾಸೀಂ ಅಕ್ರಂ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳಿಗೆ ಅಲನ್ ಡೊನಾಲ್ಡ್ ತರಬೇತಿ ನೀಡುತ್ತಿದ್ದಾರೆ.<br /> <br /> ರಾಜಸ್ತಾನ ರಾಯಲ್ಸ್ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಯುವ ಆಟಗಾರರಾದ ಸಂಜು ಸ್ಯಾಮ್ಸನ್, ಕರುಣ್ ನಾಯರ್ ಅವರಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡುತ್ತಿದ್ದಾರೆ. ಡೇಲ್ ಸ್ಟೇಯ್ನ್, ಡೇವಿಡ್ ವಾರ್ನರ್ ಅವರಂಥ ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುತ್ತಿರುವ ಕೆ.ಎಲ್.ರಾಹುಲ್ ಎಂಬ ಪ್ರತಿಭೆಗೆ ಎಂಥ ಅವಕಾಶ ಲಭಿಸಿದೆ ನೋಡಿ.<br /> <br /> ಹಣಕಾಸಿನ ವಿಷಯದಲ್ಲೂ ಆಟಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ರಣಜಿ ಆಟಗಾರರಿಗೂ ಲಕ್ಷಗಟ್ಟಲೇ ಹಣ ಸಿಗುತ್ತಿದೆ. ವಿದೇಶಿ ಆಟಗಾರರೂ ಐಪಿಎಲ್ ಆಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆ ದೇಶಗಳಲ್ಲಿ ವರ್ಷವಿಡೀ ಆಡಿದರೂ ಇಷ್ಟು ದುಡ್ಡು ಸಿಗುವುದಿಲ್ಲ.<br /> 1960ರಲ್ಲಿ ಒಬ್ಬ ಕ್ರಿಕೆಟಿಗ ಒಂದು ಟೆಸ್ಟ್ ಪಂದ್ಯ ಆಡಿದ್ರೆ ಅಬ್ಬಬ್ಬಾ ಎಂದರೆ 500 ರೂಪಾಯಿ ದುಡಿಯುತ್ತಿದ್ದರು.<br /> <br /> ಆದರೆ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡುತ್ತಿರುವ ದಿನೇಶ್ ಕಾರ್ತಿಕ್ ಐಪಿಎಲ್ ಟೂರ್ನಿಯ 14 ಪಂದ್ಯಗಳಿಂದ ₨ 12.5 ಕೋಟಿ ಸಂಪಾದಿಸಲಿದ್ದಾರೆ. ಒಟ್ಟು 98 ಗಂಟೆ ಆಟ ಅಷ್ಟೆ! ಬೌಲರ್ ವಿನಯ್ ಕುಮಾರ್ ಒಂದು ಎಸೆತ ಹಾಕಿ ಒಂದು ಲಕ್ಷ ದುಡಿಯುತ್ತಿದ್ದಾರೆ. ರಾಬಿನ್ ಉತ್ತಪ್ಪ ಫಾರ್ಮ್ ಕಂಡುಕೊಳ್ಳಲು ಈ ಟೂರ್ನಿ ಕಾರಣವಾಗಿದೆ. ಭಾರತ ತಂಡದಲ್ಲಿ ಆಡಲು ಅವರಿಗೆ ಮತ್ತೆ ಅವಕಾಶ ಸಿಗುವಂತಿದೆ.<br /> <br /> ಬಿಸಿಸಿಐ ಲಾಭ ಕೂಡ ದುಪ್ಪಟ್ಟಾಗಿದೆ. 2007ರಲ್ಲಿ ಬಿಸಿಸಿಐನ ಒಟ್ಟು ಆದಾಯ ₨ 235 ಕೋಟಿ. ಆದರೆ ಐಪಿಎಲ್ನಿಂದಾಗಿ ಈಗ ಮಂಡಳಿಯ ಒಟ್ಟು ಆದಾಯ ₨ 1000 ಕೋಟಿ ದಾಟಿದೆ. ಉದಾಹರಣೆಗೆ 1993ರಲ್ಲಿ ಇಂಗ್ಲೆಂಡ್ ತಂಡದವರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದ್ದಿದರು. ಆ ಸರಣಿಯನ್ನು ಪ್ರಸಾರ ಮಾಡಲು ಪ್ರಸಾರದ ಹಕ್ಕನ್ನು ₨ 24 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈಗ ಒಂದು ಪಂದ್ಯದ ಪ್ರಸಾರಕ್ಕೆ ಬಿಸಿಸಿಐ ₨ 32 ಕೋಟಿ ಪಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ₨ 300 ಕೋಟಿ ತೆರಿಗೆ ಕಟ್ಟುತ್ತಿದೆ. <br /> <br /> ಅಂತಹ ವಾತಾವರಣ ಸೃಷ್ಟಿಸಿರುವ ಬಿಸಿಸಿಐ ಜಾಣ್ಮೆ ಮೆಚ್ಚುವಂಥದ್ದೆ. ಐಪಿಎಲ್ ಯಶಸ್ಸು ಈಗ ನಿಂತಿರುವುದು ಪ್ರೇಕ್ಷಕರಿಂದ. ಜನರು ಬಂದರೆ ಜಾಹೀರಾತುದಾರರು ಒಲವು ತೋರಿಸುತ್ತಾರೆ. ಚಾನೆಲ್ನ ಟಿಆರ್ಪಿ ಹೆಚ್ಚಾಗುತ್ತದೆ. ಬೆಟ್ಟಿಂಗ್, ಕಳ್ಳಾಟ, ಅವ್ಯವಹಾರ ಆರೋಪಗಳ ನಡುವೆಯೂ ಈ ರೀತಿ ಯಶಸ್ಸು ಲಭಿಸಿದೆ.<br /> <br /> ಐಪಿಎಲ್ ಸಂಘಟಕರು, ಆಟಗಾರರು, ಕಂಪೆನಿಗಳು ಮಾತ್ರ ಲಾಭ ಗಳಿಸುತ್ತಿಲ್ಲ. ಅದೆಷ್ಟೊ ಮಂದಿಗೆ ಉದ್ಯೋಗ ಲಭಿಸಿದೆ. ಪಂದ್ಯಗಳು ಕ್ರೀಡಾಂಗಣದೊಳಗೆ ನಡೆಯುವಾಗ ಹೊರಗೆ ಕ್ರಿಕೆಟ್ ಪ್ರೇಮಿಗಳ ಮುಖಕ್ಕೆ ಬಣ್ಣ ಬಳಿದು, ಬಣ್ಣ ಬಣ್ಣದ ವಿಗ್, ಟಿ-ಶರ್ಟ್ ಮಾರಿ ಜನರು ಬದುಕುತ್ತಿದ್ದಾರೆ. ಜನರ ಕ್ರಿಕೆಟ್ ಪ್ರೀತಿ ಇವರ ಊಟಕ್ಕೆ ದಾರಿ ಮಾಡಿಕೊಟ್ಟಿದೆ. ಇವರು ಮುಖದ ಮೇಲೆ ಬಿಡಿಸುವ ಚಿತ್ರ, ಬಣ್ಣಬಣ್ಣದ ತಲೆಕೂದಲಿನ ವಿಗ್, ಬಾವುಟ ಕ್ರಿಕೆಟ್ಗೆ ಭಾವನೆಗಳನ್ನು ತುಂಬುತ್ತಿವೆ.<br /> <br /> ಹಾಗಾಗಿ ಕ್ರಿಕೆಟ್ ಎಂದರೆ ಬರೀ ಆಟಗಾರ ಹಾಗೂ ಪ್ರೇಕ್ಷಕ ಮಾತ್ರವಲ್ಲ; ಇಲ್ಲಿ ತರಹೇವಾರಿ ಪಾತ್ರಧಾರಿಗಳೂ ಇದ್ದಾರೆ. ಇವರೆಲ್ಲಾ ಒಟ್ಟಿಗೆ ಸೇರಿದ ಕಾರಣ ಭಾರತದಲ್ಲಿ ಕ್ರಿಕೆಟ್ ಈ ಪರಿ ಯಶಸ್ಸು ಕಾಣಲು ಸಾಧ್ಯವಾಗಿದೆ. ಅದಕ್ಕೆ ಮುಖ್ಯ ಕಾರಣವಾಗಿರುವುದು ಐಪಿಎಲ್ ಪ್ರವೇಶ. ಯುವಿ ಮಾತನ್ನು ಒಪ್ಪಿಕೊಳ್ಳಲೇಬೇಕು. l</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ತವರೂರು ಜಮೈಕಾದ ಬೀದಿಗಳಲ್ಲಿ ನಾನು ಸುಲಭವಾಗಿ ತಿರುಗಾಡಬಹುದು. ಆದರೆ ಬೆಂಗಳೂರಿನ ಎಂ.ಜಿ ರಸ್ತೆಗೆ ಇಳಿಯಲು ಕಷ್ಟಪಡ ಬೇಕಾಗುತ್ತದೆ. ಬ್ರಿಗೇಡ್ ರಸ್ತೆಯಲ್ಲಿ ಒಂದು ಅಂಗಡಿಗೆ ಭೇಟಿ ನೀಡಿದಾಗ ಅಭಿಮಾನಿಗಳಿಂದ ತಪ್ಪಿಸಿಕೊಂಡು ಬರಲು ಹರಸಾಹಸ ಪಡಬೇಕಾಯಿತು. ಆಟೋಗ್ರಾಫ್ಗಾಗಿ ಮುತ್ತಿಕೊಳ್ಳುತ್ತಾರೆ.<br /> <br /> ವೆಸ್ಟ್ಇಂಡೀಸ್ಗಿಂತ ಇಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ ಎನಿಸುತ್ತಿದೆ. ನಿಜ ಹೇಳಬೇಕೆಂದರೆ ಉದ್ಯಾನ ನಗರಿ ನನಗೆ ಎರಡನೇ ಮನೆ ಇದ್ದಂತೆ’<br /> -ವೆಸ್ಟ್ಇಂಡೀಸ್ನ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಒಮ್ಮೆ ಹೇಳಿದ ಮಾತಿದು.<br /> <br /> ಇರ್ಫಾನ್ ಪಠಾಣ್ ಎಸೆತವನ್ನು ಎಬಿ ಡಿವಿಲಿಯರ್ಸ್ ಸಿಕ್ಸರ್ಗೆ ಎತ್ತುತ್ತಿದ್ದಂತೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆ ಭೋರ್ಗರೆತ ನೋಡಬೇಕಿತ್ತು. ಮಿಷೆಲ್ ಜಾನ್ಸನ್ ಬೌಲಿಂಗ್ನಲ್ಲಿ ದೋನಿ ಔಟ್ ಆಗುತ್ತಿದ್ದಂತೆ ಗ್ಯಾಲರಿಯಲ್ಲಿ ಖುಷಿ ಅಲೆ. ಹೌದು, ಐಪಿಎಲ್ ಬಂದ ಮೇಲೆ ಕ್ರಿಕೆಟ್ ನೋಡುವ ರೀತಿಯೇ ಬದಲಾಗಿದೆ.<br /> <br /> ‘ಜಾಗತಿಕ ಕ್ರಿಕೆಟ್ ಕುಟುಂಬ’ ಎಂಬ ಪರಿಕಲ್ಪನೆ ಸೃಷ್ಟಿಯಾಗಿದೆ. ಗಡಿ, ಭಾಷೆ, ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ದೇಶದ ನಡುವಿನ ಗೆರೆಯನ್ನೇ ಅಳಿಸಿ ಹಾಕಿದಂತೆ ಭಾಸವಾಗುತ್ತಿದೆ.<br /> ವಿದೇಶಿ ಕಂಪೆನಿಗಳಾದ ನೋಕಿಯಾ, ಸ್ಯಾಮ್ಸಂಗ್ ಮೊಬೈಲ್ ಸೆಟ್ಗಳನ್ನು ಪ್ರೀತಿಸುವಂತೆ ಕ್ರಿಸ್ ಗೇಲ್, ಡಿವಿಲಿಯರ್ಸ್, ಲಸಿತ್ ಮಾಲಿಂಗ, ಸುನಿಲ್ ನಾರಾಯಣ್ ಅವರನ್ನು ಇಲ್ಲಿನ ಕ್ರಿಕೆಟ್ ಪ್ರೇಮಿಗಳು ನಮ್ಮವರು ಎಂದು ಒಪ್ಪಿಕೊಂಡು ಬಿಟ್ಟಿದ್ದಾರೆ.<br /> <br /> ಡೇವಿಡ್ ಮಿಲ್ಲರ್, ಗ್ಲೆನ್ ಮ್ಯಾಕ್ಸ್ವೆಲ್ ಯಾವ ದೇಶದ ಆಟಗಾರರು ಎಂದು ಕೇಳಿನೋಡಿ. ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವರೆಲ್ಲಾ ಐಪಿಎಲ್ನಲ್ಲಿ ಯಾವ ತಂಡದಲ್ಲಿ ಆಡುತ್ತಾರೆ ಎಂಬುದು ಬಾಯಿಪಾಠವಾಗಿದೆ. ಅವರು ಪ್ರತಿ ಪಂದ್ಯದಲ್ಲಿ ಗಳಿಸಿರುವ ಸಿಕ್ಸರ್, ಬೌಂಡರಿಗಳ ಲೆಕ್ಕಾಚಾರ ನಾಲಿಗೆ ತುದಿಯಲ್ಲಿರುತ್ತದೆ.<br /> <br /> ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಐಪಿಎಲ್ ಎಂಬ ‘ಮೋಹಕ ಕ್ರಿಕೆಟ್’ನೊಳಗೆ ಬಂದಿಯಾಗಿದ್ದಾರೆ. ಪ್ರಮುಖವಾಗಿ ಯುವ ಜನಾಂಗಕ್ಕೆ ಈ ಮಾದರಿಯ ಕ್ರಿಕೆಟ್ ತುಂಬಾ ಇಷ್ಟವಾಗುತ್ತಿದೆ. ರಾತ್ರಿ ಊಟ ಮುಗಿಸಿ ಅತ್ತೆ ಸೊಸೆ ಕಿತ್ತಾಟದ ಧಾರಾವಾಹಿಗಳನ್ನು ನೋಡುತ್ತಿದ್ದ ಮಹಿಳೆಯರ ಚಿತ್ತ ಕ್ರಿಕೆಟ್ನತ್ತ ಹರಿದಿದೆ.</p>.<p>ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ‘ಐಪಿಎಲ್ ನಿಂದಾಗಿ ಭಾರತದ ಕ್ರಿಕೆಟ್ ಬದಲಾಗಿದೆ’ ಎಂದು ಯುವರಾಜ್ ಸಿಂಗ್ ಹೇಳಿದ್ದು ಇದೇ ಕಾರಣಕ್ಕಾಗಿ ಇರಬಹುದು. ಅಷ್ಟೇ ಏಕೆ? ಐಪಿಎಲ್ ಟೂರ್ನಿಯು ‘ಬಡ’ ಕ್ರಿಕೆಟಿಗರ ಹೊಟ್ಟೆ ತುಂಬಿಸಿದ್ದು ಮಾತ್ರವಲ್ಲ; ಮರಳುಗಾಡಿನಲ್ಲಿ ಬಿದ್ದ ಸುವಾಸನೆ ಭರಿತ ಹೂವಿನಂತಾಗಿದ್ದ ಅದೆಷ್ಟೊ ಕ್ರಿಕೆಟಿಗರ ಪ್ರತಿಭೆಯನ್ನು ಹೊರ ಚೆಲ್ಲಿದೆ.<br /> <br /> ಸೋಲು-ಗೆಲುವುಗಳನ್ನು ಬದಿಗಿಟ್ಟು ನೋಡಿದರೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುವ ಯುವ ಕ್ರಿಕೆಟಿಗರಿಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಈ ಟೂರ್ನಿ ಅವಕಾಶ ಮಾಡಿಕೊಟ್ಟಿದೆ.<br /> <br /> ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ಮೋಹಿತ್ ಶರ್ಮ, ಜಸ್ಪ್ರಿತ್ ಬುಮ್ರಾ, ಪುಣೆಯ ಆಟೊ ಚಾಲಕನ ಪುತ್ರ ಯೋಗೇಶ್ ಟಕವಾಲೆ ಅವರ ಬಗ್ಗೆ ಪಕ್ಕದ ಮನೆಯವರಿಗೂ ಗೊತ್ತಿರಲಿಲ್ಲವೇನೋ? ಗೂಗಲ್ ಸರ್ಚ್ ನಲ್ಲೂ ಅವರ ಒಂದೇಒಂದು ಫೋಟೊ ಸಿಗುತ್ತಿರಲಿಲ್ಲ. ಆದರೆ ಐಪಿಎಲ್ನಿಂದಾಗಿ ಅವರೀಗ ಮನೆಮಾತಾಗಿದ್ದಾರೆ.<br /> <br /> ಐಪಿಎಲ್ನಿಂದ ಕ್ರಿಕೆಟ್ ಗುಣಮಟ್ಟ ಕುಸಿದು ಹೋಗಿದೆ ಎಂದು ಕೆಲವರು ಟೀಕಿಸುತ್ತಾರೆ. ಆ ಸಾಧ್ಯತೆ ಕಡಿಮೆ ಎಂಬುದಕ್ಕೆ ಒಂದು ಉದಾಹರಣೆ ನೀಡಲೇಬೇಕು. ಮುಂಬೈ ಇಂಡಿಯನ್ಸ್ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲು ಕ್ರಿಕೆಟ್ ದಿಗ್ಗಜರಾದ ಸಚಿನ್, ರಿಕಿ ಪಾಂಟಿಂಗ್, ಕುಂಬ್ಳೆ ಇದ್ದಾರೆ. ಜಾನ್ ರೈಟ್ ಈ ತಂಡದ ಮುಖ್ಯ ಕೋಚ್. ವಿಶ್ವ ಶ್ರೇಷ್ಠ ಫೀಲ್ಡರ್ ಜಾಂಟಿ ರೋಡ್ಸ್ ಈ ತಂಡದ ಫೀಲ್ಡಿಂಗ್ ಕೋಚ್.<br /> <br /> ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಎಷ್ಟೊಂದು ಪುಣ್ಯವಂತರು ಅಲ್ಲವೇ? ಈ ತಂಡದಲ್ಲಿರುವ ಕರ್ನಾಟಕದ ಸಿ.ಎಂ.ಗೌತಮ್ ಭಾರತ ತಂಡದಲ್ಲಿ ಆಡಿದ್ದರೂ ರೀತಿ ಮಾರ್ಗದರ್ಶನ ಸಿಗುತ್ತಿರಲಿಲ್ಲವೇನೊ? ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿರುವ ಆರ್.ವಿನಯ್ ಕುಮಾರ್ ಅವರಿಗೆ ಮಾರ್ಗದರ್ಶನ ನೀಡಲು ವಾಸೀಂ ಅಕ್ರಂ ಇದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳಿಗೆ ಅಲನ್ ಡೊನಾಲ್ಡ್ ತರಬೇತಿ ನೀಡುತ್ತಿದ್ದಾರೆ.<br /> <br /> ರಾಜಸ್ತಾನ ರಾಯಲ್ಸ್ ತಂಡವನ್ನೇ ತೆಗೆದುಕೊಳ್ಳಿ. ಈ ತಂಡದ ಯುವ ಆಟಗಾರರಾದ ಸಂಜು ಸ್ಯಾಮ್ಸನ್, ಕರುಣ್ ನಾಯರ್ ಅವರಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡುತ್ತಿದ್ದಾರೆ. ಡೇಲ್ ಸ್ಟೇಯ್ನ್, ಡೇವಿಡ್ ವಾರ್ನರ್ ಅವರಂಥ ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಳ್ಳುತ್ತಿರುವ ಕೆ.ಎಲ್.ರಾಹುಲ್ ಎಂಬ ಪ್ರತಿಭೆಗೆ ಎಂಥ ಅವಕಾಶ ಲಭಿಸಿದೆ ನೋಡಿ.<br /> <br /> ಹಣಕಾಸಿನ ವಿಷಯದಲ್ಲೂ ಆಟಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ರಣಜಿ ಆಟಗಾರರಿಗೂ ಲಕ್ಷಗಟ್ಟಲೇ ಹಣ ಸಿಗುತ್ತಿದೆ. ವಿದೇಶಿ ಆಟಗಾರರೂ ಐಪಿಎಲ್ ಆಡಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಆ ದೇಶಗಳಲ್ಲಿ ವರ್ಷವಿಡೀ ಆಡಿದರೂ ಇಷ್ಟು ದುಡ್ಡು ಸಿಗುವುದಿಲ್ಲ.<br /> 1960ರಲ್ಲಿ ಒಬ್ಬ ಕ್ರಿಕೆಟಿಗ ಒಂದು ಟೆಸ್ಟ್ ಪಂದ್ಯ ಆಡಿದ್ರೆ ಅಬ್ಬಬ್ಬಾ ಎಂದರೆ 500 ರೂಪಾಯಿ ದುಡಿಯುತ್ತಿದ್ದರು.<br /> <br /> ಆದರೆ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡುತ್ತಿರುವ ದಿನೇಶ್ ಕಾರ್ತಿಕ್ ಐಪಿಎಲ್ ಟೂರ್ನಿಯ 14 ಪಂದ್ಯಗಳಿಂದ ₨ 12.5 ಕೋಟಿ ಸಂಪಾದಿಸಲಿದ್ದಾರೆ. ಒಟ್ಟು 98 ಗಂಟೆ ಆಟ ಅಷ್ಟೆ! ಬೌಲರ್ ವಿನಯ್ ಕುಮಾರ್ ಒಂದು ಎಸೆತ ಹಾಕಿ ಒಂದು ಲಕ್ಷ ದುಡಿಯುತ್ತಿದ್ದಾರೆ. ರಾಬಿನ್ ಉತ್ತಪ್ಪ ಫಾರ್ಮ್ ಕಂಡುಕೊಳ್ಳಲು ಈ ಟೂರ್ನಿ ಕಾರಣವಾಗಿದೆ. ಭಾರತ ತಂಡದಲ್ಲಿ ಆಡಲು ಅವರಿಗೆ ಮತ್ತೆ ಅವಕಾಶ ಸಿಗುವಂತಿದೆ.<br /> <br /> ಬಿಸಿಸಿಐ ಲಾಭ ಕೂಡ ದುಪ್ಪಟ್ಟಾಗಿದೆ. 2007ರಲ್ಲಿ ಬಿಸಿಸಿಐನ ಒಟ್ಟು ಆದಾಯ ₨ 235 ಕೋಟಿ. ಆದರೆ ಐಪಿಎಲ್ನಿಂದಾಗಿ ಈಗ ಮಂಡಳಿಯ ಒಟ್ಟು ಆದಾಯ ₨ 1000 ಕೋಟಿ ದಾಟಿದೆ. ಉದಾಹರಣೆಗೆ 1993ರಲ್ಲಿ ಇಂಗ್ಲೆಂಡ್ ತಂಡದವರು ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದ್ದಿದರು. ಆ ಸರಣಿಯನ್ನು ಪ್ರಸಾರ ಮಾಡಲು ಪ್ರಸಾರದ ಹಕ್ಕನ್ನು ₨ 24 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈಗ ಒಂದು ಪಂದ್ಯದ ಪ್ರಸಾರಕ್ಕೆ ಬಿಸಿಸಿಐ ₨ 32 ಕೋಟಿ ಪಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ₨ 300 ಕೋಟಿ ತೆರಿಗೆ ಕಟ್ಟುತ್ತಿದೆ. <br /> <br /> ಅಂತಹ ವಾತಾವರಣ ಸೃಷ್ಟಿಸಿರುವ ಬಿಸಿಸಿಐ ಜಾಣ್ಮೆ ಮೆಚ್ಚುವಂಥದ್ದೆ. ಐಪಿಎಲ್ ಯಶಸ್ಸು ಈಗ ನಿಂತಿರುವುದು ಪ್ರೇಕ್ಷಕರಿಂದ. ಜನರು ಬಂದರೆ ಜಾಹೀರಾತುದಾರರು ಒಲವು ತೋರಿಸುತ್ತಾರೆ. ಚಾನೆಲ್ನ ಟಿಆರ್ಪಿ ಹೆಚ್ಚಾಗುತ್ತದೆ. ಬೆಟ್ಟಿಂಗ್, ಕಳ್ಳಾಟ, ಅವ್ಯವಹಾರ ಆರೋಪಗಳ ನಡುವೆಯೂ ಈ ರೀತಿ ಯಶಸ್ಸು ಲಭಿಸಿದೆ.<br /> <br /> ಐಪಿಎಲ್ ಸಂಘಟಕರು, ಆಟಗಾರರು, ಕಂಪೆನಿಗಳು ಮಾತ್ರ ಲಾಭ ಗಳಿಸುತ್ತಿಲ್ಲ. ಅದೆಷ್ಟೊ ಮಂದಿಗೆ ಉದ್ಯೋಗ ಲಭಿಸಿದೆ. ಪಂದ್ಯಗಳು ಕ್ರೀಡಾಂಗಣದೊಳಗೆ ನಡೆಯುವಾಗ ಹೊರಗೆ ಕ್ರಿಕೆಟ್ ಪ್ರೇಮಿಗಳ ಮುಖಕ್ಕೆ ಬಣ್ಣ ಬಳಿದು, ಬಣ್ಣ ಬಣ್ಣದ ವಿಗ್, ಟಿ-ಶರ್ಟ್ ಮಾರಿ ಜನರು ಬದುಕುತ್ತಿದ್ದಾರೆ. ಜನರ ಕ್ರಿಕೆಟ್ ಪ್ರೀತಿ ಇವರ ಊಟಕ್ಕೆ ದಾರಿ ಮಾಡಿಕೊಟ್ಟಿದೆ. ಇವರು ಮುಖದ ಮೇಲೆ ಬಿಡಿಸುವ ಚಿತ್ರ, ಬಣ್ಣಬಣ್ಣದ ತಲೆಕೂದಲಿನ ವಿಗ್, ಬಾವುಟ ಕ್ರಿಕೆಟ್ಗೆ ಭಾವನೆಗಳನ್ನು ತುಂಬುತ್ತಿವೆ.<br /> <br /> ಹಾಗಾಗಿ ಕ್ರಿಕೆಟ್ ಎಂದರೆ ಬರೀ ಆಟಗಾರ ಹಾಗೂ ಪ್ರೇಕ್ಷಕ ಮಾತ್ರವಲ್ಲ; ಇಲ್ಲಿ ತರಹೇವಾರಿ ಪಾತ್ರಧಾರಿಗಳೂ ಇದ್ದಾರೆ. ಇವರೆಲ್ಲಾ ಒಟ್ಟಿಗೆ ಸೇರಿದ ಕಾರಣ ಭಾರತದಲ್ಲಿ ಕ್ರಿಕೆಟ್ ಈ ಪರಿ ಯಶಸ್ಸು ಕಾಣಲು ಸಾಧ್ಯವಾಗಿದೆ. ಅದಕ್ಕೆ ಮುಖ್ಯ ಕಾರಣವಾಗಿರುವುದು ಐಪಿಎಲ್ ಪ್ರವೇಶ. ಯುವಿ ಮಾತನ್ನು ಒಪ್ಪಿಕೊಳ್ಳಲೇಬೇಕು. l</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>