<p><strong>ಬೆಳಗಾವಿ: </strong>ತಾಲ್ಲೂಕಿನ ದೇಸೂರು ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಐಟಿ ಪಾರ್ಕ್ ಅನ್ನು ಐಟಿ ಹಾಗೂ ಬಿಟಿ ಉದ್ಯಮಿಗಳಿಗೆ ಮೀಸಲಿಡಬೇಕು ಎಂದು ಗುರುವಾರ ಜಿಲ್ಲಾಧಿಕಾರಿಗಳನ್ನು ಮಾಹಿತಿ ತಂತ್ರಜ್ಞಾನ ಸಂಘದ ಸದಸ್ಯರು ಆಗ್ರಗಹಿಸಿದರು.<br /> <br /> ಐಟಿ ಪಾರ್ಕ್ನಲ್ಲಿ ಬೇರೆ ಕೆಲವು ಉದ್ಯಮಿಗಳಿಗೆ ಜಾಗ ನೀಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮುಂದಾಗಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬೇರೆ ಯಾವ ಉದ್ಯಮಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.<br /> <br /> `ಈಗ ಮೀಸಲಿಟ್ಟಿರುವ ಜಾಗದಲ್ಲಿ ಅರ್ಧದಷ್ಟನ್ನು ಐಟಿ ಕಂಪೆನಿಗಳಿಗೆ ಹಾಗೂ ಉಳಿದರ್ಧವನ್ನು ಬೇರೆ ಕಂಪೆನಿಗಳಿಗೆ ನೀಡಲು ಉದ್ದೇಶಿಸಿರುವುದು ಗೊತ್ತಾಗಿದೆ. ಹೀಗೆ ಮಾಡುವುದರಿಂದ ಐಟಿ ಉದ್ಯಮಿಗಳು ಇತ್ತ ಬರದಿರಬಹುದು ಎಂಬ ಆತಂಕವನ್ನು~ ಸದಸ್ಯರು ವ್ಯಕ್ತಪಡಿಸಿದ್ದಾರೆ.<br /> <br /> ಕೂಡಲೇ ಪಾರ್ಕ್ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಒದಗಿಸಿಕೊಡಬೇಕು ಎಂದು ಆರ್.ಕೆ. ಪಾಟೀಲ, ಸಂದೀಪ ಹೆಗಡೆ, ವಿಶಾಲ್ ಕುಲಕರ್ಣಿ, ತುಷಾರ ಪಾಟೀಲ ಆಗ್ರಹಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ತಾಲ್ಲೂಕಿನ ದೇಸೂರು ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಐಟಿ ಪಾರ್ಕ್ ಅನ್ನು ಐಟಿ ಹಾಗೂ ಬಿಟಿ ಉದ್ಯಮಿಗಳಿಗೆ ಮೀಸಲಿಡಬೇಕು ಎಂದು ಗುರುವಾರ ಜಿಲ್ಲಾಧಿಕಾರಿಗಳನ್ನು ಮಾಹಿತಿ ತಂತ್ರಜ್ಞಾನ ಸಂಘದ ಸದಸ್ಯರು ಆಗ್ರಗಹಿಸಿದರು.<br /> <br /> ಐಟಿ ಪಾರ್ಕ್ನಲ್ಲಿ ಬೇರೆ ಕೆಲವು ಉದ್ಯಮಿಗಳಿಗೆ ಜಾಗ ನೀಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮುಂದಾಗಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬೇರೆ ಯಾವ ಉದ್ಯಮಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.<br /> <br /> `ಈಗ ಮೀಸಲಿಟ್ಟಿರುವ ಜಾಗದಲ್ಲಿ ಅರ್ಧದಷ್ಟನ್ನು ಐಟಿ ಕಂಪೆನಿಗಳಿಗೆ ಹಾಗೂ ಉಳಿದರ್ಧವನ್ನು ಬೇರೆ ಕಂಪೆನಿಗಳಿಗೆ ನೀಡಲು ಉದ್ದೇಶಿಸಿರುವುದು ಗೊತ್ತಾಗಿದೆ. ಹೀಗೆ ಮಾಡುವುದರಿಂದ ಐಟಿ ಉದ್ಯಮಿಗಳು ಇತ್ತ ಬರದಿರಬಹುದು ಎಂಬ ಆತಂಕವನ್ನು~ ಸದಸ್ಯರು ವ್ಯಕ್ತಪಡಿಸಿದ್ದಾರೆ.<br /> <br /> ಕೂಡಲೇ ಪಾರ್ಕ್ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಒದಗಿಸಿಕೊಡಬೇಕು ಎಂದು ಆರ್.ಕೆ. ಪಾಟೀಲ, ಸಂದೀಪ ಹೆಗಡೆ, ವಿಶಾಲ್ ಕುಲಕರ್ಣಿ, ತುಷಾರ ಪಾಟೀಲ ಆಗ್ರಹಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>