<p><strong>ಹುಬ್ಬಳ್ಳಿ:</strong> ನಗರದ ವಿಮಾನ ನಿಲ್ದಾಣ ಮತ್ತೆ ಸುದ್ದಿಯಲ್ಲಿದೆ. ಉಗ್ರರ ದಾಳಿಯ ವದಂತಿ ಹಿನ್ನೆಲೆಯಲ್ಲಿ ಸದ್ಯ ನಿಲ್ದಾಣದ ತುಂಬ ಖಾಕಿಧಾರಿಗಳೇ ಓಡಾಡುತ್ತಿದ್ದಾರೆ. ಸಾಮಾನ್ಯರಿಗೆ ಒಳಹೋಗಲು ಅವಕಾಶವಿಲ್ಲ. ಪ್ರಯಾಣಿಕರಿಗೂ ತಾಸಿನ ಮುಂಚೆಯಷ್ಟೇ ಪ್ರವೇಶಕ್ಕೆ ಅವಕಾಶ.<br /> <br /> ಸಣ್ಣ ವಿಮಾನ ನಿಲ್ದಾಣಗಳ ಪೈಕಿ ದೇಶದ ಅತ್ಯುತ್ತಮ ವಿಮಾನ ನಿಲ್ದಾಣವೆಂದು 2010ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ, ಭೂಸ್ವಾಧೀನ ಪೂರ್ಣಗೊಂಡು ವಿಸ್ತರಣೆಯ ಕನಸು ಕಾಣುತ್ತಿರುವ ವಿಮಾನ ನಿಲ್ದಾಣಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿರುವುದು ಇಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಮಾಡಿದೆ. <br /> <br /> ಕಳೆದೊಂದು ವಾರದಿಂದ ಇಲ್ಲಿನ ಚಿತ್ರಣ ಬದಲಾಗಿದ್ದು, ಪಹರೆ ಹೆಚ್ಚಿಸಲಾಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೂ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ!<br /> <br /> ಉಗ್ರರ ದಾಳಿಯ ಸಂಚು ನಿಜವಾಗಿರಬಹುದು ಅಥವಾ ವದಂತಿಯೂ ಆಗಿರಬಹುದು. ಆದರೆ ಪೊಲೀಸರ ಈ ಮುನ್ನೆಚ್ಚರಿಕೆಯ ಕ್ರಮಗಳಿಗೂ ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದು, ಅವಳಿ ನಗರಿಯೊಂದಿಗೆ ತಳುಕು ಹಾಕಿಕೊಂಡಿರುವ ಉಗ್ರರ ನಂಟು.<br /> <br /> ಉಗ್ರರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಅವಳಿನಗರದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜೊಂದರ ಎಂಬಿಬಿಎಸ್ ವಿದ್ಯಾರ್ಥಿ ಮೊಹಮ್ಮದ್ ಆಸಿಫ್ ಹಾಗೂ ಧಾರವಾಡದ ಎಲೆಕ್ಟ್ರಿಷಿಯನ್ ಶಕೀಲ್ ಎಂಬುವವರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಸೇರಿದಂತೆ ಒಟ್ಟು 12 ಮಂದಿ ಮೇಲೆ ಭಯೋತ್ಪಾದಕರ ಜೊತೆ ನಂಟು ಹೊಂದಿದ ಆರೋಪದ ಅಡಿ ಪೊಲೀಸರು ಚಾರ್ಜ್ಶೀಟ್ ದಾಖಲಿಸಿದ್ದರು.<br /> <br /> ಈಚಿನ ದಿನಗಳಲ್ಲಿ ಕೆಲವು ಉಗ್ರಗಾಮಿ ಸಂಘಟನೆಗಳು ಉತ್ತರ ಕರ್ನಾಟಕದಲ್ಲಿ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಿದ್ದು, ದಾಳಿ ನಡೆಯುವ ಸಾಧ್ಯತೆಗಳೂ ಇವೆ ಎಂಬ ಬೇಹುಗಾರಿಕಾ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. <br /> <br /> <strong>ಭಯದ ಅಗತ್ಯವಿಲ್ಲ:</strong> `ವಿಮಾನ ನಿಲ್ದಾಣದ ಭದ್ರತೆಗೆ ಸದ್ಯದ ಸವಾಲೆಂದರೆ ರಕ್ಷಣಾ ಗೋಡೆ. ನಿಲ್ದಾಣದ ಸುತ್ತ ತಂತಿಬೇಲಿಯಷ್ಟೇ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ನಿಲ್ದಾಣದ ಸುತ್ತ ಪೊಲೀಸರ ಕಣ್ಗಾವಲು ಇರಿಸಲಾಗಿದೆ. ಇನ್ನಿತರ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ~ ಎನ್ನುತ್ತಾರೆ ಪೊಲೀಸ್ ಆಯುಕ್ತ ರಾಮಚಂದ್ರ ರಾವ್.<br /> <br /> `ಭದ್ರತಾ ದೃಷ್ಟಿಯಿಂದ ದೇಶದ ಎಲ್ಲ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದ್ದು, ಹುಬ್ಬಳ್ಳಿ ನಿಲ್ದಾಣದಲ್ಲೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅಷ್ಟೇ. ಇಷ್ಟಕ್ಕೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸದ್ಯ ಏಕೈಕ ವಿಮಾನವಷ್ಟೇ ಸಂಚಾರ ನಡೆಸುತ್ತಿದೆ. <br /> <br /> ಖಾಸಗಿ ವಿಮಾನಗಳ ಹಾರಾಟವೂ ಕಡಿಮೆ. ಅದಕ್ಕೆ ತಕ್ಕ ಭದ್ರತೆಯನ್ನೂ ನಾವು ಕಲ್ಪಿಸುತ್ತಿದ್ದೇವೆ~ ಎಂದು ವಿಮಾನ ನಿಲ್ದಾಣದ ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ವಿಮಾನ ನಿಲ್ದಾಣ ಮತ್ತೆ ಸುದ್ದಿಯಲ್ಲಿದೆ. ಉಗ್ರರ ದಾಳಿಯ ವದಂತಿ ಹಿನ್ನೆಲೆಯಲ್ಲಿ ಸದ್ಯ ನಿಲ್ದಾಣದ ತುಂಬ ಖಾಕಿಧಾರಿಗಳೇ ಓಡಾಡುತ್ತಿದ್ದಾರೆ. ಸಾಮಾನ್ಯರಿಗೆ ಒಳಹೋಗಲು ಅವಕಾಶವಿಲ್ಲ. ಪ್ರಯಾಣಿಕರಿಗೂ ತಾಸಿನ ಮುಂಚೆಯಷ್ಟೇ ಪ್ರವೇಶಕ್ಕೆ ಅವಕಾಶ.<br /> <br /> ಸಣ್ಣ ವಿಮಾನ ನಿಲ್ದಾಣಗಳ ಪೈಕಿ ದೇಶದ ಅತ್ಯುತ್ತಮ ವಿಮಾನ ನಿಲ್ದಾಣವೆಂದು 2010ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ, ಭೂಸ್ವಾಧೀನ ಪೂರ್ಣಗೊಂಡು ವಿಸ್ತರಣೆಯ ಕನಸು ಕಾಣುತ್ತಿರುವ ವಿಮಾನ ನಿಲ್ದಾಣಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿರುವುದು ಇಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಮಾಡಿದೆ. <br /> <br /> ಕಳೆದೊಂದು ವಾರದಿಂದ ಇಲ್ಲಿನ ಚಿತ್ರಣ ಬದಲಾಗಿದ್ದು, ಪಹರೆ ಹೆಚ್ಚಿಸಲಾಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೂ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ!<br /> <br /> ಉಗ್ರರ ದಾಳಿಯ ಸಂಚು ನಿಜವಾಗಿರಬಹುದು ಅಥವಾ ವದಂತಿಯೂ ಆಗಿರಬಹುದು. ಆದರೆ ಪೊಲೀಸರ ಈ ಮುನ್ನೆಚ್ಚರಿಕೆಯ ಕ್ರಮಗಳಿಗೂ ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದು, ಅವಳಿ ನಗರಿಯೊಂದಿಗೆ ತಳುಕು ಹಾಕಿಕೊಂಡಿರುವ ಉಗ್ರರ ನಂಟು.<br /> <br /> ಉಗ್ರರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಅವಳಿನಗರದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜೊಂದರ ಎಂಬಿಬಿಎಸ್ ವಿದ್ಯಾರ್ಥಿ ಮೊಹಮ್ಮದ್ ಆಸಿಫ್ ಹಾಗೂ ಧಾರವಾಡದ ಎಲೆಕ್ಟ್ರಿಷಿಯನ್ ಶಕೀಲ್ ಎಂಬುವವರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಸೇರಿದಂತೆ ಒಟ್ಟು 12 ಮಂದಿ ಮೇಲೆ ಭಯೋತ್ಪಾದಕರ ಜೊತೆ ನಂಟು ಹೊಂದಿದ ಆರೋಪದ ಅಡಿ ಪೊಲೀಸರು ಚಾರ್ಜ್ಶೀಟ್ ದಾಖಲಿಸಿದ್ದರು.<br /> <br /> ಈಚಿನ ದಿನಗಳಲ್ಲಿ ಕೆಲವು ಉಗ್ರಗಾಮಿ ಸಂಘಟನೆಗಳು ಉತ್ತರ ಕರ್ನಾಟಕದಲ್ಲಿ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಿದ್ದು, ದಾಳಿ ನಡೆಯುವ ಸಾಧ್ಯತೆಗಳೂ ಇವೆ ಎಂಬ ಬೇಹುಗಾರಿಕಾ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. <br /> <br /> <strong>ಭಯದ ಅಗತ್ಯವಿಲ್ಲ:</strong> `ವಿಮಾನ ನಿಲ್ದಾಣದ ಭದ್ರತೆಗೆ ಸದ್ಯದ ಸವಾಲೆಂದರೆ ರಕ್ಷಣಾ ಗೋಡೆ. ನಿಲ್ದಾಣದ ಸುತ್ತ ತಂತಿಬೇಲಿಯಷ್ಟೇ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ನಿಲ್ದಾಣದ ಸುತ್ತ ಪೊಲೀಸರ ಕಣ್ಗಾವಲು ಇರಿಸಲಾಗಿದೆ. ಇನ್ನಿತರ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ~ ಎನ್ನುತ್ತಾರೆ ಪೊಲೀಸ್ ಆಯುಕ್ತ ರಾಮಚಂದ್ರ ರಾವ್.<br /> <br /> `ಭದ್ರತಾ ದೃಷ್ಟಿಯಿಂದ ದೇಶದ ಎಲ್ಲ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದ್ದು, ಹುಬ್ಬಳ್ಳಿ ನಿಲ್ದಾಣದಲ್ಲೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅಷ್ಟೇ. ಇಷ್ಟಕ್ಕೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸದ್ಯ ಏಕೈಕ ವಿಮಾನವಷ್ಟೇ ಸಂಚಾರ ನಡೆಸುತ್ತಿದೆ. <br /> <br /> ಖಾಸಗಿ ವಿಮಾನಗಳ ಹಾರಾಟವೂ ಕಡಿಮೆ. ಅದಕ್ಕೆ ತಕ್ಕ ಭದ್ರತೆಯನ್ನೂ ನಾವು ಕಲ್ಪಿಸುತ್ತಿದ್ದೇವೆ~ ಎಂದು ವಿಮಾನ ನಿಲ್ದಾಣದ ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>